AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಯಾಬಿಟಿಸ್​ನಲ್ಲಿ ಪಾಕಿಸ್ತಾನ ನಂ.1; ಅಲ್ಲಿ ಯಾಕಿಷ್ಟು ಮಧುಮೇಹಿಗಳು? ಭಾರತೀಯರ ಕಥೆ ಏನು? ಇಲ್ಲಿದೆ ನೋಡಿ ಪಟ್ಟಿ

ಆರ್ಥಿಕವಾಗಿ ಮುಂದುವರೆದ ದೇಶಗಳಲ್ಲಿ ಮಧುಮೇಹದ ಸಮಸ್ಯೆಯನ್ನ ಒಂದು ಕಾಯಿಲೆಯೆಂದು ಪರಿಗಣಿಸಲಾಗಿತ್ತು. ಆದರೆ ನಗರೀಕರಣ, ಆಹಾರ ಪದ್ದತಿ ಬದಲಾವಣೆ ಮತ್ತು ಚಟುವಟಿಕೆ ರಹಿತ ಜೀವನ ಶೈಲಿಯನ್ನ ಅಳವಡಿಸಿಕೊಂಡ ಪರಿಣಾಮದಿಂದ ಇಂದು ಪಾಕಿಸ್ತಾನದಲ್ಲಿ ಮಧುಮೇಹ ರೋಗಿಗಳು ಹೆಚ್ಚಾಗಿದ್ದಾರೆ.

ಡಯಾಬಿಟಿಸ್​ನಲ್ಲಿ ಪಾಕಿಸ್ತಾನ ನಂ.1; ಅಲ್ಲಿ ಯಾಕಿಷ್ಟು ಮಧುಮೇಹಿಗಳು? ಭಾರತೀಯರ ಕಥೆ ಏನು? ಇಲ್ಲಿದೆ ನೋಡಿ ಪಟ್ಟಿ
ಸಾಂದರ್ಭಿಕ ಚಿತ್ರ
ಕಿರಣ್ ಹನುಮಂತ್​ ಮಾದಾರ್
|

Updated on: May 17, 2023 | 3:27 PM

Share

ಆರ್ಥಿಕವಾಗಿ ಮುಂದುವರೆದ ದೇಶಗಳಲ್ಲಿ ಮಧುಮೇಹ(diabetes) ದ ಸಮಸ್ಯೆಯನ್ನ ಒಂದು ಕಾಯಿಲೆಯೆಂದು ಪರಿಗಣಿಸಲಾಗಿತ್ತು. ಆದರೆ ನಗರೀಕರಣ, ಆಹಾರ ಪದ್ದತಿ ಬದಲಾವಣೆ ಮತ್ತು ಚಟುವಟಿಕೆ ರಹಿತ ಜೀವನ ಶೈಲಿಯನ್ನ ಅಳವಡಿಸಿಕೊಂಡ ಪರಿಣಾಮದಿಂದ ಇಂದು ಪಾಕಿಸ್ತಾನದಲ್ಲಿ ಮಧುಮೇಹ ರೋಗಿಗಳು ಹೆಚ್ಚಾಗಿದ್ದಾರೆ. ಪಾಕಿಸ್ತಾನದಲ್ಲಿ, ಮಧುಮೇಹ ಹೊಂದಿರುವ ವಯಸ್ಕರಲ್ಲಿ ಕಾಲು ಭಾಗಕ್ಕಿಂತ ಹೆಚ್ಚು ಜನರು ರೋಗನಿರ್ಣಯ ಮಾಡಲಾಗಿಲ್ಲ. ಹೌದು ಮಧುಮೇಹವನ್ನು ಪತ್ತೆಹಚ್ಚದಿದ್ದರೆ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸದಿದ್ದರೆ, ಇದು ಹೃದಯಾಘಾತ, ಪಾರ್ಶ್ವವಾಯು, ಮೂತ್ರಪಿಂಡ ವೈಫಲ್ಯ, ಕುರುಡುತನ ಮತ್ತು ಗಂಭೀರ, ಮಾರಣಾಂತೀಕ ತೊಡಕುಗಳಾಗಿ ಪರಿಣಮಿಸಬಹುದು. ಈ ಕಾರಣದಿಂದ ಮುಂದಿನ ಜೀವನದಲ್ಲಿ ಆರೋಗ್ಯ ವೆಚ್ಚಗಳನ್ನ ಭರಿಸಬೇಕಾದ ಪರಿಸ್ಥಿತಿ ಹೆಚ್ಚಾಗುತ್ತವೆ. ಅದರಂತೆ ಪಾಕಿಸ್ತಾನವು ಮಧುಮೇಹಿಗಳನ್ನ ಹೊಂದಿದವರ ಪಟ್ಟಿಯಲ್ಲಿ 30.8 ಪ್ರತಿಶತದಿಂದ ಮೊದಲ ಸ್ಥಾನದಲ್ಲಿದೆ. ಇನ್ನು ಎರಡನೇ ಸ್ಥಾನವನ್ನ 24.9 ಪ್ರತಿಶತದಿಂದ ಕುವೈತ್ ಪಡೆದುಕೊಂಡಿದೆ.

ಭಾರತೀಯರ ಕಥೆ ಏನು?

ಭಾರತವು ಮಧುಮೇಹಿಗಳ ಪಟ್ಟಿಯಲ್ಲಿ 9.6 ಪ್ರತಿಶತದಿಂದ 62 ನೇ ಸ್ಥಾನದಲ್ಲಿದೆ. ಈ ಮೂಲಕ ಪ್ರತಿ 11 ಜನರಲ್ಲಿ ಒಬ್ಬರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇನ್ನು 2020 ರಲ್ಲಿ ಮಧುಮೇಹ, ಮೂತ್ರಪಿಂಡ ಕಾಯಿಲೆಯಿಂದ ಬರೊಬ್ಬರಿ 7 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಇನ್ನು 2004 ರ ಅಧ್ಯಯನದ ಪ್ರಕಾರ ಮಧುಮೇಹವು ಜೀವನ ಶೈಲಿಯ ಪರಿಣಾಮದಿಂದ ಬಂದಿದೆ. ಮಧುಮೇಹ ಹೊಂದಿದವರಲ್ಲಿ ಪಾರ್ಶ್ವವಾಯು, ಹೃದಯಾಘಾತ, ಮೂತ್ರಪಿಂಡ, ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆ ಪ್ರಮಾಣ ಹೆಚ್ಚಾಗಿದೆ. 2016 ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಹೈ ಬಾಡಿ ಮಾಸ್ ಇಂಡೆಕ್ಸ್ (BMI) 36% ಮಧುಮೇಹಗಳಿಗೆ ಪ್ರಮುಖ ಅಪಾಯಕಾರಿ ಅಂಶವಾಗಿದೆ. ಇದಲ್ಲದೆ, ಆಹಾರದ, ತಂಬಾಕು ಸೇವನೆ, ನಿಷ್ಕ್ರಿಯ ಹೊಗೆಗೆ ಔದ್ಯೋಗಿಕ ಒಡ್ಡುವಿಕೆ, ಕಡಿಮೆ ದೈಹಿಕ ಚಟುವಟಿಕೆ ಮತ್ತು ಮದ್ಯಪಾನದಂತಹ ಇತರ ಅಪಾಯಕಾರಿ ಅಂಶಗಳು ಮಧುಮೇಹಿಗಳ ಮೇಲೆ ಮಹತ್ವದ ಪಾತ್ರವನ್ನು ವಹಿಸಿವೆ.

ಇದನ್ನೂ ಓದಿ:ಮಧುಮೇಹಕ್ಕೆ ಮೆಂತ್ಯ ಬೀಜಗಳು: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಯಾವ ಪ್ರಮಾಣದಲ್ಲಿ ಮೆಂತ್ಯ ಬೀಜ ಸೇವಿಸಬೇಕು?

ಮಧುಮೇಹ ತಡೆತಟ್ಟುವಿಕೆ, ಸರ್ಕಾರದ ಕಾರ್ಯಕ್ರಮಗಳು

ಭಾರತದಲ್ಲಿ ಮಧುಮೇಹವನ್ನು ನಿಯಂತ್ರಿಸುವ ಸಲುವಾಗಿ, ಭಾರತ ಸರ್ಕಾರವು ಕ್ಯಾನ್ಸರ್, ಮಧುಮೇಹ, ಹೃದಯರಕ್ತನಾಳದ ಕಾಯಿಲೆಗಳು ಮತ್ತು ಪಾರ್ಶ್ವವಾಯು (NPCDCS) ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮವನ್ನು 2010 ರಲ್ಲಿ ಪ್ರಾರಂಭಿಸಿತು. ಇದು ಔಟ್ರೀಚ್ ಶಿಬಿರಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಇತರ ಕಾಯಿಲೆಗಳ ಜೊತೆಗೆ ಮಧುಮೇಹವನ್ನು ಮೊದಲೇ ಪತ್ತೆ ಹಚ್ಚಲು ಸ್ಕ್ರೀನಿಂಗ್ ಮಾಡಿಸಲಾಗುತ್ತಿದೆ. ರಾಷ್ಟ್ರೀಯ ಮಧುಮೇಹ ನಿಯಂತ್ರಣ ಕಾರ್ಯಕ್ರಮವನ್ನು 1987 ರಲ್ಲಿ ತಮಿಳುನಾಡು , ಜಮ್ಮು ಮತ್ತು ಕಾಶ್ಮೀರ , ಮತ್ತು ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಪ್ರಾರಂಭಿಸಲಾಯಿತು.

ಇನ್ನು ಈ ಕಾರ್ಯಕ್ರಮದ ಮೂಲಕ ಹೆಚ್ಚಿನ ಅಪಾಯದ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ನೀಡುವುದು. ಈ ಮೂಲಕ ಹೆಚ್ಚಿನ ಅನಾರೋಗ್ಯ ಮತ್ತು ಮರಣವನ್ನು ಕಡಿಮೆ ಮಾಡುವುದು. ಜೊತೆಗ ರೋಗದಿಂದ ಉಂಟಾಗುವ ತೀವ್ರ ಮತ್ತು ದೀರ್ಘಕಾಲದ ಚಯಾಪಚಯ, ಹೃದಯರಕ್ತನಾಳದ, ಮೂತ್ರಪಿಂಡ ಮತ್ತು ಕಣ್ಣಿನ ತೊಡಕುಗಳನ್ನು ತಡೆಗಟ್ಟುವುದು. ರೋಗದಿಂದ ಅಂಗವಿಕಲರಾದವರಿಗೆ ಪುನರ್ವಸತಿ ಕಲ್ಪಿಸುವುದು ಆದರೆ, ಹಣದ ಕೊರತೆಯಿಂದಾಗಿ ಕಾರ್ಯಕ್ರಮವನ್ನು ಬೇರೆ ರಾಜ್ಯಗಳಿಗೆ ವಿಸ್ತರಿಸಲಾಗಿಲ್ಲ.

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್