Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗರ್ಭವಾಸ್ಥೆಯಲ್ಲಿ ಪ್ಯಾರಾಸಿಟಮಾಲ್ ಸೇವನೆ ಅಪಾಯಕಾರಿ! ಅಧ್ಯಯನದಿಂದ ಬಹಿರಂಗ

ವಿಜ್ಞಾನಿಗಳು ಗರ್ಭಾವಸ್ಥೆಯ ಸಮಯದಲ್ಲಿ ಪ್ಯಾರಾಸಿಟಮಾಲ್ ಬಳಸುವ ಕುರಿತು ಅಧ್ಯಯನ ನಡೆಸಿದ್ದು, ಇದರ ಅತಿಯಾದ ಸೇವನೆ ಗರ್ಭಿಣಿಗೆ ಮತ್ತು ಆಕೆಗೆ ಹುಟ್ಟುವ ಮಗುವಿನ ಆರೋಗ್ಯಕ್ಕೂ ಒಳ್ಳೆಯದಲ್ಲ ಎಂದಿದೆ. ಹಾಗಾದರೆ ಇದರಿಂದ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತದೆ? ಗರ್ಭಿಣಿಯರು ಹೆಚ್ಚಾಗಿ ಪ್ಯಾರಾಸಿಟಮಾಲ್ ಸೇವನೆ ಮಾಡಬಾರದು ಎನ್ನಲು ಕಾರಣವೇನು ಎಂಬುದನ್ನು ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಇಲ್ಲಿದೆ.

ಗರ್ಭವಾಸ್ಥೆಯಲ್ಲಿ ಪ್ಯಾರಾಸಿಟಮಾಲ್ ಸೇವನೆ ಅಪಾಯಕಾರಿ! ಅಧ್ಯಯನದಿಂದ ಬಹಿರಂಗ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 20, 2025 | 8:14 AM

ಗರ್ಭವಾಸ್ಥೆಯ (pregnancy) ಸಮಯದಲ್ಲಿ ಆರೋಗ್ಯ (Health) ಸಮಸ್ಯೆಗಳು ಕಂಡು ಬರುವುದು ಸಾಮಾನ್ಯ. ಅದರಲ್ಲಿಯೂ ಕೆಲವರಿಗೆ ಶೀತ, ಜ್ವರ, ದೇಹದ ನಾನಾ ಕಡೆಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಆ ಸಮಯದಲ್ಲಿ ಮಹಿಳೆಯರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ವೇಗವಾಗಿ ಗುಣಮುಖರಾಗಲು ಪ್ಯಾರಾಸಿಟಮಾಲ್ ಗಳನ್ನು ಸೇವನೆ ಮಾಡುತ್ತಾರೆ. ಇವು ಗರ್ಭಿಣಿಯರು ಸೇವನೆ ಮಾಡಲು ಸುರಕ್ಷಿತ ಎಂದು ನಾವು ಭಾವಿಸಿಕೊಂಡಿದ್ದೇವೆ. ಆದರೆ ಅಧ್ಯಯನವೊಂದು ಇದಕ್ಕೆ ಹೊಸ ತಿರುವು ನೀಡಿದ್ದು ಪ್ಯಾರಾಸಿಟಮಾಲ್ (Paracetamol) ಗಂಭೀರ ಪರಿಣಾಮಗಳನ್ನು ಉಂಟು ಮಾಡಬಹುದು ಎಂದಿದೆ. ವಿಜ್ಞಾನಿಗಳು ಗರ್ಭಾವಸ್ಥೆಯ ಸಮಯದಲ್ಲಿ ಪ್ಯಾರಾಸಿಟಮಾಲ್ ಬಳಸುವ ಕುರಿತು ಅಧ್ಯಯನ ನಡೆಸಿದ್ದು, ಇದರ ಅತಿಯಾದ ಸೇವನೆ ಗರ್ಭಿಣಿಗೆ ಮತ್ತು ಆಕೆಗೆ ಹುಟ್ಟುವ ಮಗುವಿನ ಆರೋಗ್ಯಕ್ಕೂ ಒಳ್ಳೆಯದಲ್ಲ ಎಂದಿದೆ. ಹಾಗಾದರೆ ಇದರಿಂದ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತದೆ? ಗರ್ಭಿಣಿಯರು ಹೆಚ್ಚಾಗಿ ಪ್ಯಾರಾಸಿಟಮಾಲ್ ಸೇವನೆ ಮಾಡಬಾರದು ಎನ್ನಲು ಕಾರಣವೇನು ಎಂಬುದನ್ನು ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಇಲ್ಲಿದೆ.

ಗರ್ಭವಾಸ್ಥೆಯಲ್ಲಿ ಪ್ಯಾರಾಸಿಟಮಾಲ್ ಬಳಕೆ ಒಳ್ಳೆಯದಲ್ಲ ಎನ್ನಲಾಗಿದೆ. ಅಧ್ಯಯನ ಹೇಳುವ ಪ್ರಕಾರ, ಗರ್ಭಿಣಿಯರಿಗೆ ಮಾತ್ರವಲ್ಲ ಇದರಿಂದ ಶಿಶುಗಳಲ್ಲಿ ಎಡಿಎಚ್​ಡಿ ( Attention deficit hyperactivity disorder) ಉಲ್ಬಣವಾಗುವ ಅಪಾಯ ಹೆಚ್ಚಾಗಬಹುದು ಎಂದು ಹೇಳಿದೆ. ಸಾಮಾನ್ಯವಾಗಿ ಗರ್ಭವಾಸ್ಥೆಯ ಸಮಯದಲ್ಲಿ ಮಹಿಳೆಯರ ದೇಹ ಪ್ರಕೃತಿ ಬಹಳ ನಾಜೂಕಾಗಿರುತ್ತದೆ ಹಾಗಾಗಿ ಬೇಗ ಜ್ವರ, ಶೀತ ಸೇರಿದಂತೆ ಸಣ್ಣ ಸಣ್ಣ ರೋಗಗಳು ಪದೇ ಪದೇ ಕಾಡುತ್ತದೆ. ಆ ಸಮಯದಲ್ಲಿ ತ್ವರಿತವಾಗಿ ನೋವು, ಕಿರಿಕಿರಿ ಕಡಿಮೆ ಮಾಡಿಕೊಳ್ಳಲು ಗರ್ಭಿಣಿಯರು ಪ್ಯಾರಾಸಿಟಮಾಲ್ ಮೊರೆ ಹೋಗುತ್ತಾರೆ. ಇದೊಂದು ಸಾಮಾನ್ಯ ಔಷಧಿಯಾಗಿದ್ದು, ಇದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಇರುವುದಿಲ್ಲ ಎಂದು ಪದೇ ಪದೇ ಸೇವನೆ ಮಾಡುತ್ತಾರೆ. ಆದರೆ ಇದು ಹಾನಿಕರ ಎಂದು ಸಾಬೀತಾಗಿದೆ. ಅದಲ್ಲದೆ ಈ ಟ್ಯಾಬ್ಲೆಟ್ ಹುಟ್ಟುವ ಮಕ್ಕಳ ಮಾನಸಿಕ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.

ಇದನ್ನೂ ಓದಿ:ಬಾಹ್ಯಾಕಾಶದಲ್ಲಿ ಸುನೀತಾ ವಿಲಿಯಮ್ಸ್ ಏನು ತಿನ್ನುತ್ತಿದ್ದರು? ಹೇಗಿತ್ತು ಆಹಾರ ಶೈಲಿ ತಿಳಿದುಕೊಳ್ಳಿ

ಇದನ್ನೂ ಓದಿ
Image
ತುಂಬಾ ಆಯಾಸ, ನಿಶ್ಯಕ್ತಿಯಾಗಿ ದೇಹದಲ್ಲಿ ಹುಮ್ಮಸ್ಸು ಇಲ್ಲದೆ ಇದ್ದರೆ ಈ ಸಲಹೆ
Image
ಕಾಮಾಲೆ ರೋಗಕ್ಕೆ ಈ ತರಕಾರಿಯ ಬೀಜದಲ್ಲಿದೆ ಮದ್ದು
Image
ಎಡಗೈ ಹೆಚ್ಚಾಗಿ ಬಳಸುವವರಿಗೆ ರೋಗಗಳ ಅಪಾಯ ತಪ್ಪಿದ್ದಲ್ಲ
Image
ಯುವಕರೇ ...9 ಗಂಟೆಗಳ ನಿದ್ರೆ ಮಾಡಲೇಬೇಕು

ಅಧ್ಯಯನ ಹೇಳುವುದೇನು ?

ಗರ್ಭವಾಸ್ಥೆಯಲ್ಲಿ ಪ್ಯಾರಾಸಿಟಮಾಲ್ ಹೆಚ್ಚು ಬಳಕೆ ಮಾಡುವುದರಿಂದ ಹುಟ್ಟುವ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ವಿಶೇಷವಾಗಿ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಹೆಚ್ಚು ಪರಿಣಾಮವನ್ನು ಉಂಟುಮಾಡಬಹುದು. ಪ್ಯಾರಾಸಿಟಮಾಲ್ ಗಳನ್ನು ಹೆಚ್ಚು ಬಳಕೆ ಮಾಡುವವರಲ್ಲಿ ಎಡಿಎಚ್​ಡಿ ಅಂದರೆ ಚಂಚಲತೆ ಮತ್ತು ಅತಿ ಚಟುವಟಿಕೆಯ ಕಾಯಿಲೆ, ಹೆಚ್ಚಾಗಿ ಕಂಡು ಬರುತ್ತದೆ. ಇದೊಂದು ವಿಚಿತ್ರ ಕಾಯಿಲೆಯಾಗಿದ್ದು. ಈ ಕಾಯಿಲೆ ಇರುವ ವ್ಯಕ್ತಿಗಳು ಕೂತಲ್ಲಿ ಕೂರುವುದಿಲ್ಲ, ನಿಂತಲ್ಲಿ ನಿಲ್ಲುವುದಿಲ್ಲ ತುಂಬಾ ಆಕ್ಟೀವ್ ಆಗಿರುವಂತೆ ಕಾಣಿಸುತ್ತಾರೆ. ಹಾಗಾಗಿ ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುವುದಕ್ಕಾಗಿ ಕೆನಡಾದ ಪ್ರಸೂತಿ ಮತ್ತು ಮಹಿಳಾ ಆರೋಗ್ಯ ವಿಜ್ಞಾನಿಗಳ ಸಂಘ ಮತ್ತು ಮಾಧು- ಭ್ರೂಣ ವೈದ್ಯಕೀಯ ಸಂಘಗಳಂತಹ ಏಜೆನ್ಸಿ ಗಳು ಪ್ಯಾರಾಸಿಟಮಾಲ್ ಗಳನ್ನು ಹೆಚ್ಚು ಬಳಕೆ ಮಾಡುವ ಗರ್ಭಿಣಿಯರ ಮೇಲೆ ಅಧ್ಯಯನ ನಡೆಸಿದ್ದು, ಅವರು ನೀಡುವ ಮಾಹಿತಿ ಪ್ರಕಾರ, ಈ ಟ್ಯಾಬ್ಲೆಟ್ ಅತಿಯಾದ ಸೇವನೆಯು, ಮುಂದೆ ಹುಟ್ಟುವ ಮಕ್ಕಳ ಮಾನಸಿಕ ಅಭಿವೃದ್ಧಿ ಕುಂಠಿತಗೊಳ್ಳುವಂತೆ ಮಾಡಬಹುದು. ಇನ್ನು ಅಲ್ಲಿನ ವೈದ್ಯರ ಅಭಿಪ್ರಾಯದ ಪ್ರಕಾರ, ಪ್ಯಾರಾಸಿಟಮಾಲ್ ಶರೀರದಲ್ಲಿ ಕೆಲವು ಬದಲಾವಣೆಗಳನ್ನು ಉಂಟುಮಾಡಬಹುದು, ಇದು ಮಗುವಿನ ಮೆದುಳಿನ ಅಭಿವೃದ್ಧಿಯ ಮೇಲೆ ಪರಿಣಾಮ ಬೀರುತ್ತದೆ ಹಾಗಾಗಿ ವೈದ್ಯರ ಸಲಹೆಯ ಅನುಸಾರ ಔಷಧಿಗಳ ಸೇವನೆ ಮಾಡಬೇಕು, ಅದರ ಹೊರತಾಗಿ ಯಾವುದೇ ರೀತಿಯ ಟ್ಯಾಬ್ಲೆಟ್ ಗಳ ಸೇವನೆ ಮಾಡಬಾರದು ಎಂದಿದ್ದಾರೆ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ
ಕಾಂಗ್ರೆಸ್ 2009ರಲ್ಲಿ ಸ್ಪೀಕರ್ ಜೊತೆ ನಡೆದುಕೊಂಡ ರೀತಿ ಗೊತ್ತಿದೆ: ಶಾಸಕ
ಕಾಂಗ್ರೆಸ್ 2009ರಲ್ಲಿ ಸ್ಪೀಕರ್ ಜೊತೆ ನಡೆದುಕೊಂಡ ರೀತಿ ಗೊತ್ತಿದೆ: ಶಾಸಕ