Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಟ್ಟೆಯಲ್ಲಿ ಸಮಸ್ಯೆಗಳಿದ್ದರೆ.. ಮುಖದಲ್ಲಿ ಇಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ, ನಿರ್ಲಕ್ಷ್ಯ ಮಾಡಬೇಡಿ

ಈ ರೀತಿಯ ಸಮಸ್ಯೆಗಳನ್ನು ತಪ್ಪಿಸಲು, ಹೊಟ್ಟೆಯ ಆರೋಗ್ಯವನ್ನು ಸುಧಾರಿಸುವುದು ಅವಶ್ಯಕ. ಮೊದಲು ನೀವು ಒತ್ತಡವನ್ನು ನಿಭಾಯಿಸಬೇಕು. ಒತ್ತಡವು ಹೊಟ್ಟೆಗೆ ಹಾನಿ ಮಾಡುವ ಪ್ರಮುಖ ಅಂಶವಾಗಿದೆ. ನೀವು ಸರಿಯಾದ ಪೋಷಣೆಯತ್ತ ಗಮನ ಹರಿಸಬೇಕು. ಸಮಯಕ್ಕೆ ಸಮತೋಲಿತ, ಪೌಷ್ಟಿಕಾಂಶದ ಊಟವನ್ನು ಸೇವಿಸಿ. ಅತಿಯಾಗಿ ತಿನ್ನುವುದಲ್ಲ

ಹೊಟ್ಟೆಯಲ್ಲಿ ಸಮಸ್ಯೆಗಳಿದ್ದರೆ.. ಮುಖದಲ್ಲಿ ಇಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ, ನಿರ್ಲಕ್ಷ್ಯ ಮಾಡಬೇಡಿ
ಹೊಟ್ಟೆಯಲ್ಲಿ ಸಮಸ್ಯೆಗಳಿದ್ದರೆ.. ಮುಖದಲ್ಲಿ ಇಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ
Follow us
ಸಾಧು ಶ್ರೀನಾಥ್​
|

Updated on:Oct 30, 2023 | 12:56 PM

ಹೊಟ್ಟೆಯ ಸಮಸ್ಯೆಗಳು ಚರ್ಮದ ಮೇಲೂ ಪರಿಣಾಮ ಬೀರುತ್ತವೆ. ಆದರೆ ಈ ವಿಷಯ ಹಲವರಿಗೆ ತಿಳಿದಿಲ್ಲ. ಆರೋಗ್ಯ ತಜ್ಞರ ಪ್ರಕಾರ ಇದು ನಿಜ. ಕರುಳಿನ (ಗಟ್) ಆರೋಗ್ಯವು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಅನೇಕ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಚರ್ಮದ ತುರಿಕೆ, ಗುಳ್ಳೆ, ದದ್ದುಗಳ ಬಗ್ಗೆ ಕೇಳಿದ್ದೀರಾ? ಇನ್ನು ಗಜಕರ್ಣ/ಹುಳುಕಡ್ಡಿ (Ringworm) ಬಗ್ಗೆ ಕೇಳಿದ್ದೀರಾ? ಇದು ಅನೇಕ ಕಾರಣಗಳಿಂದ ಸಂಭವಿಸಬಹುದು. ಆದರೆ ಹೊಟ್ಟೆಯ ಆರೋಗ್ಯ ಸಮಸ್ಯೆಗಳಲ್ಲಿ ಗಜಕರ್ಣ/ಹುಳುಕಡ್ಡಿ ಕೂಡ ಒಂದು ಭಾಗವಾಗಿದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಕರುಳಿನಲ್ಲಿನ ಉತ್ತಮ ಬ್ಯಾಕ್ಟೀರಿಯಾದ ಸಮತೋಲನವು ನಿಯಂತ್ರಣದಲ್ಲಿಲ್ಲದಿದ್ದಾಗ ಗಜಕರ್ಣ/ಹುಳುಕಡ್ಡಿ ಸಹ ಸಂಭವಿಸಬಹುದು. ಗಜಕರ್ಣ/ಹುಳುಕಡ್ಡಿ ರೋಗಲಕ್ಷಣಗಳು ಅಸಹಜವಾಗಿ ಒಣ ಚರ್ಮ, ತುರಿಕೆ, ಗುಳ್ಳೆಗಳು ಮತ್ತು ಚರ್ಮದ ಫ್ಲೇಕಿಂಗ್ ಸೇರಿವೆ. ಇದು ದೇಹದಲ್ಲಿ ಎಲ್ಲಿಯಾದರೂ ಸಂಭವಿಸಬಹುದು

ಹೊಟ್ಟೆ ನೋವಿನಿಂದ ಉಂಟಾಗುವ ಮತ್ತೊಂದು ಚರ್ಮದ ಸಮಸ್ಯೆ ಮೊಡವೆ. ಮೇಲೆ ಹೇಳಿದಂತೆ, ಮೊಡವೆಗಳು ಅನೇಕ ಕಾರಣಗಳಿಂದ ಉಂಟಾಗುತ್ತವೆ. ಅವುಗಳಲ್ಲಿ ಒಂದು ಹೊಟ್ಟೆ ಕಟ್ಟುವುದು/ಕೆಡುವುದು. ದೇಹಕ್ಕೆ ಅಗತ್ಯವಿಲ್ಲದ ವಸ್ತುಗಳು, ಹಾಗೆಯೇ ವಿಷವನ್ನು ಹೊಟ್ಟೆಯು ಜೀರ್ಣಿಸಿಕೊಳ್ಳಲು ಮತ್ತು ಹೊರಹಾಕಲು ಸಾಧ್ಯವಾಗದಿದ್ದರೆ ಚರ್ಮದ ಮೂಲಕ ಹೊರಹಾಕಲ್ಪಡುತ್ತದೆ. ಇದು ಮೊಡವೆಗಳಿಗೆ ಕಾರಣವಾಗಬಹುದು.

ಸೋರಿಯಾಸಿಸ್ ಎಂಬ ಚರ್ಮದ ಕಾಯಿಲೆಯ ಬಗ್ಗೆ ನೀವೆಲ್ಲರೂ ಕೇಳಿದ್ದೀರಿ. ಸೋರಿಯಾಸಿಸ್ ಒಂದು ದಪ್ಪ, ಶುಷ್ಕ, ತುರಿಕೆ ಚರ್ಮದ ಸ್ಥಿತಿಯಾಗಿದೆ. ಈ ಕಾರಣದಿಂದಾಗಿ ಚರ್ಮವು ಫ್ಲಾಕಿ ಆಗುತ್ತದೆ. ಸೋರಿಯಾಸಿಸ್‌ಗೆ ಕಾರಣವೇನು ಎಂಬುದಕ್ಕೆ ನಿಶ್ಚಿತ ಪುರಾವೆಗಳಿಲ್ಲ. ಆದರೆ ಹೊಟ್ಟೆಯಲ್ಲಿ ಹಾನಿಯಾದಾಗ ಕೆಲವರಿಗೆ ಸೋರಿಯಾಸಿಸ್ ಬರುತ್ತದೆ ಎಂಬ ವರದಿಗಳಿವೆ.

Also Read: Empty Stomach Tips -ಖಾಲಿ ಹೊಟ್ಟೆಯಲ್ಲಿ ಅಪ್ಪಿತಪ್ಪಿಯೂ ಈ ಆಹಾರವನ್ನು ಸೇವಿಸಬೇಡಿ

ಈ ರೀತಿಯ ಸಮಸ್ಯೆಗಳನ್ನು ತಪ್ಪಿಸಲು, ಹೊಟ್ಟೆಯ ಆರೋಗ್ಯವನ್ನು ಸುಧಾರಿಸುವುದು ಅವಶ್ಯಕ. ಮೊದಲು ನೀವು ಒತ್ತಡವನ್ನು ನಿಭಾಯಿಸಬೇಕು. ಒತ್ತಡವು ಹೊಟ್ಟೆಗೆ ಹಾನಿ ಮಾಡುವ ಪ್ರಮುಖ ಅಂಶವಾಗಿದೆ. ನೀವು ಸರಿಯಾದ ಪೋಷಣೆಯತ್ತ ಗಮನ ಹರಿಸಬೇಕು. ಸಮಯಕ್ಕೆ ಸಮತೋಲಿತ, ಪೌಷ್ಟಿಕಾಂಶದ ಊಟವನ್ನು ಸೇವಿಸಿ. ಅತಿಯಾಗಿ ತಿನ್ನುವುದಲ್ಲ – ಆರೋಗ್ಯಕರ ಆಹಾರವನ್ನು ಮಿತವಾಗಿ ತಿನ್ನಲು ಅಭ್ಯಾಸ ಮಾಡಿ. ನೀವು ಸೇವಿಸುವ ಆಹಾರ ಸರಿಯಾಗಿದ್ದರೆ ಅದು ಚರ್ಮಕ್ಕೆ ಬೇಕಾದ ಪೋಷಣೆಯನ್ನು ನೀಡುತ್ತದೆ.

ಅಲ್ಲದೆ, ಸಕ್ಕರೆ ಮತ್ತು ಸಂಸ್ಕರಿಸಿದ ಪ್ಯಾಕ್ ಮಾಡಿದ ಆಹಾರಗಳನ್ನು ತಪ್ಪಿಸಬೇಕು. ಫೈಬರ್ ಭರಿತ ತರಕಾರಿಗಳು ಮತ್ತು ಹಣ್ಣುಗಳನ್ನು ನಿಯಮಿತವಾಗಿ ಸೇವಿಸಿ. ಧಾನ್ಯಗಳು (ಸಂಪೂರ್ಣ), ಬೀಜಗಳು, ದ್ವಿದಳ ಧಾನ್ಯಗಳನ್ನು ಹೆಚ್ಚು ಸೇವಿಸಬೇಕು. ಹೆಚ್ಚು ನೀರು ಕುಡಿಯಬೇಕು. ಧೂಮಪಾನ ಮತ್ತು ಮದ್ಯಪಾನವನ್ನು ಬಿಡಬೇಕು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:06 am, Sun, 29 October 23

ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ