AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿದ್ರೆ ಮಾಡಲು ಪರದಾಡುತ್ತೀರಾ?; ನಿದ್ರಾಹೀನತೆ ಕ್ಯಾನ್ಸರ್​ಗೂ ಕಾರಣವಾದೀತು ಎಚ್ಚರ!

ಈ ಮೊದಲು ನಿದ್ರಾಹೀನತೆ ಅಪಾಯಕಾರಿ ಅಲ್ಲ ಎಂದು ನಂಬಲಾಗಿತ್ತು. ತಜ್ಞರು ಈಗ ದೀರ್ಘಾವಧಿಯ ನಿದ್ರಾ ಭಂಗಗಳು ಕೆಲವು ಕ್ಯಾನ್ಸರ್‌ಗಳ ಅಪಾಯವನ್ನು ಹೆಚ್ಚಿಸಬಹುದು ಎಂದು ಹೇಳುವ ಮೂಲಕ ಆತಂಕ ಮೂಡಿಸಿದ್ದಾರೆ. ಹಾಗಾದರೆ, ನಿದ್ರೆ ಯಾವ ರೀತಿ ಕ್ಯಾನ್ಸರ್​ಗೆ ಕಾರಣವಾಗುತ್ತದೆ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ನಿದ್ರೆ ಮಾಡಲು ಪರದಾಡುತ್ತೀರಾ?; ನಿದ್ರಾಹೀನತೆ ಕ್ಯಾನ್ಸರ್​ಗೂ ಕಾರಣವಾದೀತು ಎಚ್ಚರ!
ಸುಷ್ಮಾ ಚಕ್ರೆ
|

Updated on: Dec 18, 2023 | 5:29 PM

Share

ನಿದ್ರೆ ನಮ್ಮ ದೇಹಕ್ಕೆ ಅತ್ಯಗತ್ಯವಾದ ಒಂದು ಅಂಶ. ನಿದ್ರೆಯಲ್ಲಿದ್ದಾಗ ನಮ್ಮ ಇಡೀ ದೇಹಕ್ಕೆ ವಿಶ್ರಾಂತಿ ಸಿಗುತ್ತದೆ. ಇದರಿಂದ ಮರುದಿನ ನಾವು ಆ್ಯಕ್ಟಿವ್ ಆಗಿರಲು ಸಾಧ್ಯವಾಗುತ್ತದೆ. ಆದರೆ, ವಿಶ್ವದಾದ್ಯಂತ ಶೇ. 10ಕ್ಕಿಂತ ಹೆಚ್ಚು ಜನರು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ಅವರಲ್ಲಿ ಕೆಲವು ಮಂದಿ ಮಾತ್ರ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡು, ಚಿಕಿತ್ಸೆ ಪಡೆದಿದ್ದಾರೆ. ಇನ್ನು ಉಳಿದವರು ನಿದ್ರೆಯ ಸಮಸ್ಯೆಯನ್ನು ಆರೋಗ್ಯ ಸಮಸ್ಯೆಯೆಂದು ಪರಿಗಣಿಸಿಯೇ ಇಲ್ಲ. ಆದರೆ, ನಿದ್ರಾಹೀನತೆಯು ಕ್ಯಾನ್ಸರ್​ಗೂ ಕಾರಣವಾಗಬಹುದು ಎಂಬುದು ನಿಮಗೆ ಗೊತ್ತಾ?

ಈ ಮೊದಲು ನಿದ್ರಾಹೀನತೆ ಅಪಾಯಕಾರಿ ಅಲ್ಲ ಎಂದು ನಂಬಲಾಗಿತ್ತು. ತಜ್ಞರು ಈಗ ದೀರ್ಘಾವಧಿಯ ನಿದ್ರಾ ಭಂಗಗಳು ಕೆಲವು ಕ್ಯಾನ್ಸರ್‌ಗಳ ಅಪಾಯವನ್ನು ಹೆಚ್ಚಿಸಬಹುದು ಎಂದು ಹೇಳುವ ಮೂಲಕ ಆತಂಕ ಮೂಡಿಸಿದ್ದಾರೆ. ಅಧ್ಯಯನಗಳ ಪ್ರಕಾರ, ನಿದ್ರೆ ಮತ್ತು ಕ್ಯಾನ್ಸರ್ ಹಲವು ವಿಧಗಳಲ್ಲಿ ಒಂದಕ್ಕೊಂದು ಹೆಣೆದುಕೊಂಡಿದೆ. ಕ್ಯಾನ್ಸರ್ ಚಿಕಿತ್ಸೆಯ ಸಮಯದಲ್ಲಿ ರಾತ್ರಿಯ ನಿದ್ರೆಯನ್ನು ಪಡೆಯುವುದು ಕಷ್ಟವಾಗುತ್ತದೆ.

ಕಳೆದ ಹಲವಾರು ದಶಕಗಳಲ್ಲಿ ಆರಂಭಿಕ ಕ್ಯಾನ್ಸರ್​ನ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡುಬಂದಿದೆ ಎಂದು ತಜ್ಞರು ಹೇಳುತ್ತಾರೆ, ಅವುಗಳೆಂದರೆ:

– ಸ್ತನ ಕ್ಯಾನ್ಸರ್

– ಕೊಲೊರೆಕ್ಟಲ್ ಕ್ಯಾನ್ಸರ್

– ಎಂಡೊಮೆಟ್ರಿಯಲ್ ಕ್ಯಾನ್ಸರ್

– ಅನ್ನನಾಳದ ಕ್ಯಾನ್ಸರ್

– ಪಿತ್ತಕೋಶದ ಕ್ಯಾನ್ಸರ್

– ತಲೆ ಮತ್ತು ಕುತ್ತಿಗೆ ಕ್ಯಾನ್ಸರ್

– ಮೂತ್ರಪಿಂಡದ ಕ್ಯಾನ್ಸರ್

ಇದನ್ನೂ ಓದಿ: Sleeping Tips: ಮಲಗಿದ ಕೂಡಲೆ ನಿದ್ರೆ ಬರಲು ಏನು ಮಾಡಬೇಕು?

ಅನೇಕ ಅಧ್ಯಯನಗಳ ಆತಂಕಕಾರಿ ಆವಿಷ್ಕಾರಗಳು ವಿಜ್ಞಾನಿಗಳು ಈ ಕ್ಯಾನ್ಸರ್ ಏಕೆ ಸಂಭವಿಸಬಹುದು ಎಂದು ತಿಳಿಯಲು ಬಯಸುತ್ತಾರೆ. ವಿಚಿತ್ರವೆಂದರೆ, ಜನರಲ್ಲಿ ನಿದ್ರೆಯ ಗುಣಮಟ್ಟ ಮತ್ತು ನಿದ್ರೆಯ ಅವಧಿ ಕಡಿಮೆಯಾಗುವುದು ಕೂಡ ನಿದ್ರಾಹೀನತೆಗೆ ಒಂದು ಕಾರಣವಾಗಿದೆ.

ನಿದ್ರೆಯ ಕೊರತೆಯು ಕ್ಯಾನ್ಸರ್​ಗೆ ಏಕೆ ಕಾರಣವಾಗುತ್ತದೆ?:

ತಜ್ಞರ ಪ್ರಕಾರ, ನಿಮ್ಮ ನಿದ್ರೆಯಲ್ಲಿ ನಿರಂತರ ಅಡಚಣೆಗಳು ಇದ್ದಾಗ ನಿಮ್ಮ ದೇಹದ “ಜೈವಿಕ ಗಡಿಯಾರ” ನಿದ್ರೆ ಮತ್ತು ಸಾವಿರಾರು ಇತರ ಕಾರ್ಯಗಳನ್ನು ನಿಯಂತ್ರಿಸುತ್ತದೆ. ಇದು ಕ್ಯಾನ್ಸರ್​ನ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಅಲ್ಲದೆ, ರಾತ್ರಿಯ ಪಾಳಿಯಲ್ಲಿ ಕೆಲಸ ಮಾಡುವಾಗ ಬೆಳಕಿಗೆ ದೀರ್ಘಕಾಲ ಒಡ್ಡಿಕೊಳ್ಳುವುದರಿಂದ ಅದು ಮೆಲಟೋನಿನ್ ಮಟ್ಟವನ್ನು ಕಡಿಮೆ ಮಾಡಬಹುದು. ಇದು ಕ್ಯಾನ್ಸರ್ ಬೆಳೆಯಲು ಕಾರಣವಾಗುತ್ತದೆ. ಹೀಗಾಗಿ, ನೈಟ್ ಶಿಫ್ಟ್​ನಲ್ಲಿ ಕೆಲಸ ಮಾಡುವವರಲ್ಲಿ ಕ್ಯಾನ್ಸರ್ ಅಪಾಯ ಹೆಚ್ಚಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ.

ಪ್ರತಿ ರಾತ್ರಿ 6 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ನಿದ್ರೆ ಮಾಡುವುದರಿಂದ ಕೊಲೊನ್ ಪಾಲಿಪ್ಸ್ ಬೆಳವಣಿಗೆಯ ಅಪಾಯ ಹೆಚ್ಚುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ. ಇದು ಅಂತಿಮವಾಗಿ ಕ್ಯಾನ್ಸರ್ ಆಗಿ ಬದಲಾಗುತ್ತದೆ.

ಇದನ್ನೂ ಓದಿ: ನಿದ್ರೆ ಕೂಡ ನಿಮ್ಮ ಫರ್ಟಿಲಿಟಿ ಮೇಲೆ ಪರಿಣಾಮ ಬೀರಬಹುದು ಎಚ್ಚರ!

ಹಾರ್ಮೋನುಗಳ ಕ್ಷೇತ್ರಗಳು ಮತ್ತು ಎಚ್ಚರಗೊಳ್ಳುವ ಮತ್ತು ಮಲಗುವ ರೊಟೀನ್​ನ ಜೊತೆಗೆ ಟಿ-ಕೋಶಗಳ ಪುನರುತ್ಪಾದನೆಯಲ್ಲಿ ನಿದ್ರೆಯ ಪಾತ್ರ ಮಹತ್ವದ್ದಾಗಿರುತ್ತದೆ. ಇದು ನಿಮ್ಮ ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ನಿದ್ರಾಹೀನತೆಯು ಟಿ-ಕೋಶಗಳ ಸಾಮಾನ್ಯ ಕಾರ್ಯನಿರ್ವಹಣೆಯನ್ನು ಅಡ್ಡಿಪಡಿಸುತ್ತದೆ. ಇದು ಕ್ಯಾನ್ಸರ್ ಕೋಶಗಳ ವ್ಯಾಪಕ ರಚನೆಗೆ ಕಾರಣವಾಗುತ್ತದೆ.

ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗಳು ಮಾತ್ರವಲ್ಲದೆ ನಿದ್ರಾಹೀನತೆಯು ಅರಿವಿನ ದುರ್ಬಲತೆ, ಬುದ್ಧಿಮಾಂದ್ಯತೆ ಮತ್ತು ಪಾರ್ಕಿನ್ಸನ್ ಕಾಯಿಲೆಯಂತಹ ನ್ಯೂರೋ ಡಿಜೆನೆರೆಟಿವ್ ಕಾಯಿಲೆಗಳಿಗೆ ಕೂಡ ಕಾರಣವಾಗಬಹುದು. ಹೀಗಾಗಿ, ದಿನವೂ ಒಂದೇ ಸಮಯಕ್ಕೆ ಮಲಗಲು ಅಭ್ಯಾಸ ಮಾಡಿಕೊಳ್ಳಿ. ಏಳುವ ಸಮಯವೂ ಒಂದೇ ರೀತಿಯಾಗಿರಲಿ. ಮಲಗುವ ಮುನ್ನ ಮದ್ಯಪಾನ, ಸಿಗರೇಟ್, ಕೆಫೀನ್ ಸೇವನೆ ಮಾಡಬೇಡಿ. ಸಂಜೆ ಹೆಚ್ಚು ಊಟವನ್ನು ಮಾಡಬೇಡಿ. ಮಲಗುವ ಮುನ್ನ ನಿಮ್ಮ ಎಲೆಕ್ಟ್ರಾನಿಕ್ ಸಾಧನಗಳ ಬಳಕೆಯನ್ನು ಕಡಿಮೆ ಮಾಡಿ. ಮಲಗುವಾಗ ಮೊಬೈಲ್ ನೋಡುತ್ತಾ ಮಲಗಬೇಡಿ. ಪ್ರತಿದಿನ ದೈಹಿಕವಾಗಿ ಸಕ್ರಿಯರಾಗಿರಿ. ಆರಾಮದಾಯಕವಾದ ಹಾಸಿಗೆ, ದಿಂಬುಗಳು, ಹೊದಿಕೆಗಳನ್ನು ಬಳಸಿ. ಮಲಗುವ ಕೋಣೆ ಸಂಪೂರ್ಣವಾಗಿ ಕತ್ತಲೆಯಾಗಿರುವಂತೆ ನೋಡಿಕೊಳ್ಳಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sushma Chakre
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ