Sign In

By signing in or creating an account, you agree with Associated Broadcasting Company's Terms & Conditions and Privacy Policy.

Bone Cancer: ಮೂಳೆಗಳ ಕ್ಯಾನ್ಸರ್​ನ ಲಕ್ಷಣಗಳೇನು ಗೊತ್ತಾ? ಇಲ್ಲಿದೆ ಮಾಹಿತಿ

ಮೂಳೆಯ ಕ್ಯಾನ್ಸರ್​ ನಿಮ್ಮ ದೇಹದಲ್ಲಿರುವ ಮೂಳೆಗಳನ್ನು ದುರ್ಬಲಗೊಳಿಸುತ್ತವೆ. ಹೀಗಾಗಿ ಆಗಾಗ ಮುರಿತ ಕಾಣಿಸಿಕೊಳ್ಳುತ್ತದೆ. ಜತೆಗೆ ವಿಪರೀತ ನೋವು ಕೂಡ ಉಂಟಾಗುತ್ತದೆ

Bone Cancer: ಮೂಳೆಗಳ ಕ್ಯಾನ್ಸರ್​ನ ಲಕ್ಷಣಗಳೇನು ಗೊತ್ತಾ? ಇಲ್ಲಿದೆ ಮಾಹಿತಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on:Feb 10, 2022 | 11:10 AM

ಮೂಳೆ, ಮಾಂಸಗಳ ಭಾಗವಾಗಿರುವ ನಮ್ಮ ದೇಹವು ಆಗಾಗ ಹಲವು ರೋಗಗಳಿಗೆ ತುತ್ತಾಗುತ್ತವೆ. ಕೆಲವು ದೀರ್ಘಕಾಲದ ಕಾಯಿಲೆಗಳಾದರೆ ಇನ್ನು ಕೆಲವು ಬೇಗನೆ ಗುಣಮುಖವಾಗುವ ಕಾಯಿಲೆಗಳು. ಇತ್ತೀಚಿನ ದಿನಗಳಲ್ಲಿ ಅತೀ ವೇಗವಾಗಿ ಹರಡುತ್ತಿರುವ ದೀರ್ಘಕಾಲದ ಕಾಯಿಲೆಯಲ್ಲಿ ಕ್ಯಾನ್ಸರ್ (Cancer)​ ಕೂಡ ಒಂದು. ಕ್ಯಾನ್ಸರ್​ಗಳಲ್ಲಿ ಹಲವು ವಿಧ. ಮೂಳೆ ಕ್ಯಾನ್ಸರ್​, ಸ್ತನ ಕ್ಯಾನ್ಸರ್​, ಶ್ವಾಸಕೋಶದ ಕ್ಯಾನ್ಸರ್, ಅನ್ನ ನಾಳದ ಕ್ಯಾನ್ಸರ್​, ಬ್ಲಡ್​ ಕ್ಯಾನ್ಸರ್​ ಇತ್ಯಾದಿ. ಬದಲಾದ ಜೀವನ ಶೈಲಿ, ಒತ್ತಡ, ಅಸಮಂಜಸ ಆಹಾರ ಪದ್ಧತಿಗಳಿಂದ ದೇಹಕ್ಕೆ ಕ್ಯಾನ್ಸರ್​ ತಗುಲುತ್ತದೆ. ಇದು ಒಮ್ಮೆ ಬಂದ ಮೇಲೆ ಶಾಶ್ವತ ಪರಿಹಾರವಿಲ್ಲ. ಆದರೆ ಅದನ್ನು ದೈನಂದಿನ ಅಭ್ಯಾಸಗಳಿಂದ ನಿಯಂತ್ರಿಸಬಹುದಾಗಿದೆ. ಕ್ಯಾನ್ಸರ್​ ಎಂದರೆ ಎಲ್ಲವೂ ಅಪಾಯಕಾರಿಯೇ, ಅವುಗಳಲ್ಲಿ ಒಂದು ಮೂಳೆಗಳ ಕ್ಯಾನ್ಸರ್ (Bone Cancer)​. ಮೂಳೆಗಳ ಕ್ಯಾನ್ಸರ್​ನಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆ ಎಂದರೆ ಸಂಧಿವಾತ, ಆಸ್ಟಿಯೊಪೊರೋಸಿಸ್, ಮೂಳೆಯ ಪ್ಯಾಗೆಟ್ಸ್ ಕಾಯಿಲೆ, ಸ್ಕೋಲಿಯೋಸಿಸ್, ಗೌಟ್.

ನಾರಿನ ಅಂಗಾಂಶ, ಕಾರ್ಟಿಲೇಜ್​ ಮತ್ತು ಕ್ಯಾಲ್ಸಿಯಂನಿಂದ ಮೂಳೆಗಳು ರಚನೆಯಾಗುತ್ತವೆ. ಈ ಮೂಳೆಗಳಿಗೆ ಕ್ಯಾನ್ಸರ್​ ಕೋಶಗಳು ಹರಡಿ ಮೂಳೆಗಳ ಕ್ಯಾನ್ಸರ್​​ ಕಾಯಿಲೆಗೆ ಕಾರಣವಾಗುತ್ತದೆ. ಒಮ್ಮೆ ಮೂಳೆಗಳ ಕ್ಯಾನ್ಸರ್​ ಬಂದ ಮೇಲೆ ಮೂಳೆಗಳು ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಇದರಿಂದ ಮೂಳೆಗಳ ಮುರಿತ ಅಥವಾ ಮೂಳೆಗಳಿಗೆ ಹಾನಿಯಾಗಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ಆದರೆ ಆರಂಭದ ಹಂತಗಳಲ್ಲಿ ಇದು ಅಷ್ಟಾಗಿ ಗೊತ್ತಾಗುವುದಿಲ್ಲ. ಹೀಗಾಗಿ ಮೂಳೆಗಳಲ್ಲಿ ನೋವು ಕಾಣಿಸಿಕೊಂಡು  ಕ್ರಮೇಣ ಹೆಚ್ಚಾಗುತ್ತದೆ. ಹೀಗೆ ನೋವು ತೀವ್ರವಾದರೆ ವೈದ್ಯರನ್ನು ಸಂಪರ್ಕಿಸುವುದು ಒಳಿತು. ಹಾಗಾದರೆ ಮೂಳೆಗಳ ಕ್ಯಾನ್ಸರ್​ನ ಲಕ್ಷಣಗಳೇನು? ಇಲ್ಲಿದೆ ನೋಡಿ ಮಾಹಿತಿ

ಆಗಾಗ ಮುರಿತ ಕಾಣಿಸಿಕೊಳ್ಳವುದು: ಮೂಳೆಯ ಕ್ಯಾನ್ಸರ್​ ನಿಮ್ಮ ದೇಹದಲ್ಲಿರುವ ಮೂಳೆಗಳನ್ನು ದುರ್ಬಲಗೊಳಿಸುತ್ತವೆ. ಹೀಗಾಗಿ ಆಗಾಗ ಮುರಿತ ಕಾಣಿಸಿಕೊಳ್ಳುತ್ತದೆ. ಜತೆಗೆ ವಿಪರೀತ ನೋವು ಕೂಡ ಉಂಟಾಗುತ್ತದೆ. ಇದರಿಂದ ನಿಮಗೆ ಮೂಳೆಯ ಕ್ಯಾನ್ಸರ್​ನ ಲಕ್ಷಣ ಎಂದು ಗೊತ್ತಾಗುತ್ತದೆ.

ನಿರಂತರ ನೋವು: ನಿಮ್ಮ  ಮೊಣಕೈ, ಗಂಟುಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿದ್ದರೆ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಂಡರೆ ಸರಿಹೋಗುತ್ತದೆ. ಆದರೆ ಮೂಳೆಯ ಕ್ಯಾನ್ಸರ್​ ಆಗಿದ್ದರೆ ಮೊಣಕೈ ಸೇರಿದಂತೆ ದೇಹದ ಗಂಟುಗಳಲ್ಲಿ ವಿಪರೀತ ಮತ್ತು ನಿರಂತರ ನೋವು ಕಾಣಿಸಿಕೊಳ್ಳುತ್ತದೆ. ಈ ರೀತಿ ನೋವು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಒಳಿತಾಗಿದೆ.

ಮೂಳೆಗಳಲ್ಲಿ ಊತ: ದೇಹದ ವಿವಿಧ ಭಾಗಗಳಲ್ಲಿ ಆಗಾಗ ಊತ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಗಾಯಗಳಾಗಿದ್ದರೆ ಮಾತ್ರ ಊತ ಕಂಡುಬರುತ್ತದೆ. ಮೂಳೆಗಳ ಕ್ಯಾನ್ಸರ್​ನ ಲಕ್ಷಣವಾಗಿದ್ದರೆ ದೇಹದಲ್ಲಿ ಅನಗತ್ಯ ಊತಗಳು, ಗಡ್ಡೆಯಂತಹ ರಚನೆಗಳು ಮೂಡುತ್ತವೆ. ಇಂತಹ ಸಂದರ್ಭದಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

ಮರಗಟ್ಟುವಿಕೆ: ಕೆಲವೊಮ್ಮೆ ನಿಶ್ಯಕ್ತಿಯಿಂದಲೂ ದೇಹದ ಭಾಗಗಳಲ್ಲಿ ಮರಗಟ್ಟುವಿಕೆ ಕಾಣಿಸಿಕೊಳ್ಳುತ್ತದೆ. ಇದು ಅತಿಯಾದರೆ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳುವುದು ಉತ್ತಮ. ಏಕೆಂದರೆ ಈ ರೀತಿ ದೇಹದ ವಿವಿಧ ಭಾಗಗಳಲ್ಲಿ ಆಗಾಗ ಮರಗಟ್ಟುವಿಕೆ ಕಾಣಿಸಿಕೊಳ್ಳುವುದೂ ಕೂಡ ಮೂಳೆಗಳ ಕ್ಯಾನ್ಸರ್​ನ ಒಂದು ಲಕ್ಷಣವಾಗಿದೆ. ಹೀಗಾಗಿ ಆರೊಗ್ಯ, ದೈನಂದಿನ ಚಲನವಲದಲ್ಲಿ ಸ್ವಲ್ಪ ಬದಲಾವಣೆಯಾಗುತ್ತಿದ್ದರೂ ಹೆಚ್ಚು ಗಮನಹರಿಸಿ.

ಬಿಗಿತದ ಅನುಭವ: ಮೂಳೆಗಳಲ್ಲಿ ಆಗಾಗ ಬಿಗಿದ ಅನುಭವವಾಗುತ್ತದೆ. ಅಂದರೆ ಸಂಧಿಗಳಲ್ಲಿ ನೋವು ಕಾಣಿಸಿಕೊಂಡು ದೇಹದ ಭಾಗಗಳನ್ನು ಅಲುಗಾಡಿಸಲೂ ಕಷ್ಟ ಎನ್ನಿಸುವ ಸ್ಥಿತಿ ಎದುರಾಗುತ್ತದೆ. ಈ ರೀತಿಯ ಲಕ್ಷಣಗಳನ್ನು ನಿರ್ಲಕ್ಷಿಸಿವುದು ಒಳಿತಲ್ಲ. ಹೀಗಾಗಿ ಅಂತಹ ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಲೇಬೇಕು.

ಇದನ್ನೂ ಓದಿ:

Air Pollution ವಾಯುಮಾಲಿನ್ಯದಿಂದ ಆರೋಗ್ಯ ಕಾಪಾಡಿಕೊಳ್ಳಲು ಹೀಗೆ ಮಾಡಿ

Published On - 11:10 am, Thu, 10 February 22

ಮಾರಿಗುಡಿ ದೇವಾಲಯಕ್ಕೆ ಬಂದ ಸುನಿಲ್ ಶೆಟ್ಟಿಗೆ ಸಿಕ್ಕ ಉಡುಗೊರೆ ಏನು?
ಮಾರಿಗುಡಿ ದೇವಾಲಯಕ್ಕೆ ಬಂದ ಸುನಿಲ್ ಶೆಟ್ಟಿಗೆ ಸಿಕ್ಕ ಉಡುಗೊರೆ ಏನು?
ಓಂ ಪ್ರಕಾಶ್ ಕೊಲೆ: ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಳಿಕೆ
ಓಂ ಪ್ರಕಾಶ್ ಕೊಲೆ: ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಳಿಕೆ
ವಿರಾಟ್ ಕೊಹ್ಲಿಯ ಅಪರೂಪದ ಸಂಭ್ರಮಾಚರಣೆ
ವಿರಾಟ್ ಕೊಹ್ಲಿಯ ಅಪರೂಪದ ಸಂಭ್ರಮಾಚರಣೆ
ಕೃನಾಲ್ ಪಾಂಡ್ಯ ಅದ್ಭುತ ರನ್ನಿಂಗ್ ಕ್ಯಾಚ್; ವಿಡಿಯೋ
ಕೃನಾಲ್ ಪಾಂಡ್ಯ ಅದ್ಭುತ ರನ್ನಿಂಗ್ ಕ್ಯಾಚ್; ವಿಡಿಯೋ
ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ
ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ
ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು
ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು
ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ
ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ
ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಬಗ್ಗೆ ಗೃಹ ಸಚಿವ ಹೇಳಿದ್ದಿಷ್ಟು
ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಬಗ್ಗೆ ಗೃಹ ಸಚಿವ ಹೇಳಿದ್ದಿಷ್ಟು