AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಈ ಆಯುರ್ವೇದ ಪದಾರ್ಥಗಳು ಸದಾ ನಿಮ್ಮನ್ನು ಆರೋಗ್ಯವಾಗಿಡುತ್ತದೆ

ಈ ಕೆಲವು ಆಹಾರ ಪದಾರ್ಥ ಸೇವನೆಯು ಆರೋಗ್ಯದ ಮೇಲೆ ಅಮೃತದಂತಿದೆ. ಇವುಗಳನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸುವುದರಿಂದ ರೋಗಗಳು ದೂರವಾಗುತ್ತವೆ ಮತ್ತು ದೇಹವೂ ಆರೋಗ್ಯಕರವಾಗಿರುತ್ತದೆ.

Health Tips: ಈ ಆಯುರ್ವೇದ ಪದಾರ್ಥಗಳು ಸದಾ ನಿಮ್ಮನ್ನು ಆರೋಗ್ಯವಾಗಿಡುತ್ತದೆ
ಅಕ್ಷತಾ ವರ್ಕಾಡಿ
|

Updated on: Jun 02, 2024 | 8:10 PM

Share

ಅನಾರೋಗ್ಯಕರ ಆಹಾರಕ್ರಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಆರೋಗ್ಯವಾಗಿರಲು ಆಯುರ್ವೇದ ಆಹಾರವನ್ನು ಅನುಸರಿಸಬಹುದು. ಇದಕ್ಕಾಗಿ ಆಯುರ್ವೇದವೂ ಕೆಲವು ವಿಷಯಗಳನ್ನು ಉಲ್ಲೇಖಿಸುತ್ತದೆ. ಈ ಕೆಲವು ಆಹಾರ ಪದಾರ್ಥ ಸೇವನೆಯು ಆರೋಗ್ಯದ ಮೇಲೆ ಅಮೃತದಂತಿದೆ. ಇವುಗಳನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸುವುದರಿಂದ ರೋಗಗಳು ದೂರವಾಗುತ್ತವೆ ಮತ್ತು ದೇಹವೂ ಆರೋಗ್ಯಕರವಾಗಿರುತ್ತದೆ.

ಅರಿಶಿನ:

ಅರಿಶಿನವು ಅದರ ಉತ್ಕರ್ಷಣ ನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಗೆ ಬಹಳ ಪ್ರಯೋಜನಕಾರಿಯಾಗಿದೆ. ಇದರ ಅನೇಕ ಪ್ರಯೋಜನಗಳನ್ನು ಆಯುರ್ವೇದದಲ್ಲಿ ವಿವರಿಸಲಾಗಿದೆ. ಪ್ರತಿದಿನ ಅರಿಶಿನವನ್ನು ಸೇವಿಸುವುದರಿಂದ ಗಂಟಲು ನೋವು ಮತ್ತು ಜ್ವರದಂತಹ ಕಾಯಿಲೆಗಳಿಂದ ಪರಿಹಾರವನ್ನು ಪಡೆಯಬಹುದು. ರಾತ್ರಿಯಲ್ಲಿ ಅರಿಶಿನದ ಹಾಲನ್ನು ಕುಡಿಯುವುದು ಒಳ್ಳೆಯದು.

ಜೇನುತುಪ್ಪ:

ಆಯುರ್ವೇದದಲ್ಲಿ ಜೇನುತುಪ್ಪವನ್ನು ದೇಹಕ್ಕೆ ಅಮೃತವೆಂದು ವಿವರಿಸಲಾಗಿದೆ. ಇದರಲ್ಲಿ ಹಲವು ಬಗೆಯ ಆ್ಯಂಟಿಆಕ್ಸಿಡೆಂಟ್‌ಗಳಿವೆ. ಇವು ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಲು ಕೆಲಸ ಮಾಡುತ್ತವೆ. ಜೇನುತುಪ್ಪವನ್ನು ತಿನ್ನುವುದರಿಂದ ದೇಹದಲ್ಲಿರುವ ಕೊಳೆ ನಿವಾರಣೆಯಾಗಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

ಇದನ್ನೂ ಓದಿ: ಸ್ಮೈಲಿಂಗ್ ಡಿಪ್ರೆಶನ್ ಎಂದರೇನು? ಯಾರು ಅಪಾಯದಲ್ಲಿದ್ದಾರೆ ತಿಳಿದುಕೊಳ್ಳಿ

ತುಪ್ಪ:

ದೇಸಿ ತುಪ್ಪ ತಿನ್ನುವುದು ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯದು. ಇದನ್ನು ತಿನ್ನುವುದರಿಂದ, ಆರೋಗ್ಯಕರ ಕೊಬ್ಬನ್ನು ಹೊರತುಪಡಿಸಿ, ದೇಹವು ವಿಟಮಿನ್ಗಳು, ಒಮೆಗಾ 3 ಮತ್ತು ಉತ್ಕರ್ಷಣ ನಿರೋಧಕಗಳಂತಹ ಅನೇಕ ವಸ್ತುಗಳನ್ನು ಪಡೆಯುತ್ತದೆ. ತುಪ್ಪವನ್ನು ತಿನ್ನುವುದರಿಂದ ಮೆದುಳು, ಕಣ್ಣುಗಳು, ಮೂಳೆಗಳು ಮತ್ತು ತೂಕ ನಿರ್ವಹಣೆ ಸುಧಾರಿಸುತ್ತದೆ. ಇದು ಗಂಭೀರ ಕಾಯಿಲೆಗಳನ್ನು ತಡೆಯಲು ಸಹ ಸಹಾಯ ಮಾಡುತ್ತದೆ.

ಶುಂಠಿ:

ಶುಂಠಿ ಸೇವನೆಯು ತುಂಬಾ ಪ್ರಯೋಜನಕಾರಿ ಎಂದು ಆಯುರ್ವೇದ ವಿವರಿಸುತ್ತದೆ. ಇದು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದಾಗಿ ದೇಹವನ್ನು ಸೋಂಕುಗಳಿಂದ ರಕ್ಷಿಸುತ್ತದೆ. ಶುಂಠಿಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ..ಮತ್ತು ಜೀರ್ಣಕ್ರಿಯೆಯನ್ನು ಆರೋಗ್ಯವಾಗಿರಿಸುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: