AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳ ಹಠಕ್ಕೆ ಸೋಲಬೇಡಿ, ಈ ಆಹಾರಗಳಿಂದ ದೂರವಿಡಿ

ಮಕ್ಕಳು ಹಠ ಹಿಡಿಯುತ್ತಾರೆ ಎನ್ನುವ ಕಾರಣಕ್ಕೆ ಬಹಳಷ್ಟು ಪೋಷಕರು ಮಕ್ಕಳು ಕೇಳಿದ್ದೆವಲ್ಲವ್ನೂ ಕೊಟ್ಟುಬಿಡುತ್ತಾರೆ. ಅದರಲ್ಲೂ ಆಹಾರದ ವಿಚಾರದಲ್ಲಂತೂ ಕೇಳಲೇಬೇಡಿ.

ಮಕ್ಕಳ ಹಠಕ್ಕೆ ಸೋಲಬೇಡಿ, ಈ ಆಹಾರಗಳಿಂದ ದೂರವಿಡಿ
FoodImage Credit source: Medical.net
TV9 Web
| Edited By: |

Updated on: Jul 08, 2022 | 8:30 AM

Share

ಮಕ್ಕಳು ಹಠ ಹಿಡಿಯುತ್ತಾರೆ ಎನ್ನುವ ಕಾರಣಕ್ಕೆ ಬಹಳಷ್ಟು ಪೋಷಕರು ಮಕ್ಕಳು ಕೇಳಿದ್ದೆವಲ್ಲವ್ನೂ ಕೊಟ್ಟುಬಿಡುತ್ತಾರೆ. ಅದರಲ್ಲೂ ಆಹಾರದ ವಿಚಾರದಲ್ಲಂತೂ ಕೇಳಲೇಬೇಡಿ. ನಾವು ಕೊಡುವ ಆಹಾರ ಮಗುವಿಗೆ ಹಿಡಿಸುತ್ತಿಲ್ಲ, ಮಗು ಕೇಳಿದ್ದನ್ನೇ ಕೊಟ್ಟುಬಿಡೋಣ ಎಂದು ಸಾಕಷ್ಟು ಪೋಷಕರು ಯೋಚನೆ ಮಾಡುತ್ತಾರೆ.

ಆದರೆ ಆಹಾರದ ವಿಚಾರದಲ್ಲಿ ಎಂದೂ ರಾಜಿಮಾಡಿಕೊಳ್ಳಬೇಡಿ, ಮಕ್ಕಳು ಇಷ್ಟ ಪಡುವ ಆಹಾರಕ್ಕಿಂತ ದೇಹಕ್ಕೆ ಯಾವುದು ಒಳ್ಳೆಯದೋ ಅಂತಹ ಆಹಾರವನ್ನೇ ನೀಡಿ. ಸಕ್ಕರೆ ಪ್ರಮಾಣ ಹೆಚ್ಚಿರುವ ಆಹಾರಗಳು, ಜಂಕ್ ಫುಡ್​ಗಳು, ಅಥವಾ ಯಾವುದೇ ಪೋಷಕಾಂಶವಿಲ್ಲದ ಆಹಾರಗಳನ್ನು ನೀಡಬೇಡಿ. ಆರೋಗ್ಯಕರ ಆಹಾರವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

ಈ ಆಹಾರವನ್ನು ಮಕ್ಕಳಿಗೆ ಕೊಡಲೇಬೇಡಿ

ಹಸಿ ಹಾಲು ಹಾಗೂ ಸಾಫ್ಟ್​ ಚೀಸ್: ಹಸಿ ಹಾಲು ಅಥವಾ ಸಾಫ್ಟ್​ ಚೀಸ್​ ಅನ್ನು ಮಕ್ಕಳಿಗೆ ಕೊಡಬೇಡಿ,ಅದರ ಜತೆಗೆ ಸಾಶ್ಮಿ ಅಥವಾ ಸುಶಿ ರೀತಿಯ ಹಸಿ ಮಾಂಸವನ್ನೂ ನೀಡಬೇಡಿ. ಇದು ನಿಮ್ಮ ಮಕ್ಕಳ ಜೀರ್ಣಕ್ರಿಯೆ ಅಪಾಯವನ್ನುಂಟು ಮಾಡಿ ಆಯಾಸವನ್ನುಂಟು ಮಾಡುತ್ತದೆ.

ಚಿಪ್ಸ್​ ಹಾಗೂ ಕರಿದ ಪದಾರ್ಥಗಳು ಹೆಚ್ಚಿನ ಪ್ರಮಾಣದ ಉಪ್ಪಿನಾಂಶವು ಮಕ್ಕಳ ಕಿಡ್ನಿ ಮೇಲೆ ಪರಿಣಾಮ ಬೀರುತ್ತದೆ. ಚಿಪ್ಸ್​, ಉಪ್ಪಿನ ಕಾಯಿ ಸೇರಿದಂತೆ ಇತರೆ ಕರಿದ ತಿಂಡಿಗಳನ್ನು ಮಕ್ಕಳಿಗೆ ನೀಡಬೇಡಿ.

ಬಿಸ್ಕತ್ತು, ಚಾಕೊಲೇಟ್, ಕೇಕ್​: ಬಿಸ್ಕೇಟ್, ಚಾಕೊಲೇಟ್ ಅಥವಾ ಕೇಕ್​ಗಳನ್ನು ಮಕ್ಕಳಿಗೆ ನೀಡಬೇಡಿ, ಇದರಿಂದ ಮಲಬದ್ಧತೆ ಸಮಸ್ಯೆ ಉಂಟಾಗಬಹುದು, ಈ ಎಲ್ಲಾ ಆಹಾರ ಪದಾರ್ಥಗಳು ಬಹುಬೇಗ ಜೀರ್ಣವಾಗುವುದಿಲ್ಲ.

ಕಾಫಿ, ಟೀಯಿಂದ ದೂರವಿಡಿ: ಮಕ್ಕಳಿಗೆ ಕೆಫೀನ್ ಹೆಚ್ಚಿನ ಪ್ರಮಾಣದಲ್ಲಿರುವ ಆಹಾರವನ್ನು ನೀಡಬೇಡಿ, ಇದರಿಂದ ಮಕ್ಕಳಲ್ಲಿ ನಿದ್ರಾಹೀನತೆ , ಖಿನ್ನತೆ ಉಂಟಾಗುವ ಸಾಧ್ಯತೆ ಇರುತ್ತದೆ. ಮಕ್ಕಳು ಬೆಳೆಯುತ್ತಿದ್ದಂತೆ ಮೂಳೆಗಳಿಗೆ ಕ್ಯಾಲ್ಶಿಯಂ ಅಂಶದ ಅವಶ್ಯಕತೆಯಿರುತ್ತದೆ.

ಹಸಿ ತರಕಾರಿಗಳನ್ನು ನೀಡಬೇಡಿ: ಬೀನ್ಸ್, ಬೆಂಡೆಕಾಯಿ, ಹೂಕೋಸು, ಬ್ರೊಕೊಲಿಯಂತಹ ಹಸಿ ತರಕಾರಿಗಳನ್ನು ಮಕ್ಕಳಿಗೆ ನೀಡಬೇಡಿ, ಅದರಲ್ಲಿ ಹೆಚ್ಚಿನ ಪ್ರಮಾಣದ ನೈಟ್ರೇಟ್ಸ್​ಗಳು ಇರಲಿವೆ.

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ