AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳ ಹಠಕ್ಕೆ ಸೋಲಬೇಡಿ, ಈ ಆಹಾರಗಳಿಂದ ದೂರವಿಡಿ

ಮಕ್ಕಳು ಹಠ ಹಿಡಿಯುತ್ತಾರೆ ಎನ್ನುವ ಕಾರಣಕ್ಕೆ ಬಹಳಷ್ಟು ಪೋಷಕರು ಮಕ್ಕಳು ಕೇಳಿದ್ದೆವಲ್ಲವ್ನೂ ಕೊಟ್ಟುಬಿಡುತ್ತಾರೆ. ಅದರಲ್ಲೂ ಆಹಾರದ ವಿಚಾರದಲ್ಲಂತೂ ಕೇಳಲೇಬೇಡಿ.

ಮಕ್ಕಳ ಹಠಕ್ಕೆ ಸೋಲಬೇಡಿ, ಈ ಆಹಾರಗಳಿಂದ ದೂರವಿಡಿ
FoodImage Credit source: Medical.net
TV9 Web
| Edited By: |

Updated on: Jul 08, 2022 | 8:30 AM

Share

ಮಕ್ಕಳು ಹಠ ಹಿಡಿಯುತ್ತಾರೆ ಎನ್ನುವ ಕಾರಣಕ್ಕೆ ಬಹಳಷ್ಟು ಪೋಷಕರು ಮಕ್ಕಳು ಕೇಳಿದ್ದೆವಲ್ಲವ್ನೂ ಕೊಟ್ಟುಬಿಡುತ್ತಾರೆ. ಅದರಲ್ಲೂ ಆಹಾರದ ವಿಚಾರದಲ್ಲಂತೂ ಕೇಳಲೇಬೇಡಿ. ನಾವು ಕೊಡುವ ಆಹಾರ ಮಗುವಿಗೆ ಹಿಡಿಸುತ್ತಿಲ್ಲ, ಮಗು ಕೇಳಿದ್ದನ್ನೇ ಕೊಟ್ಟುಬಿಡೋಣ ಎಂದು ಸಾಕಷ್ಟು ಪೋಷಕರು ಯೋಚನೆ ಮಾಡುತ್ತಾರೆ.

ಆದರೆ ಆಹಾರದ ವಿಚಾರದಲ್ಲಿ ಎಂದೂ ರಾಜಿಮಾಡಿಕೊಳ್ಳಬೇಡಿ, ಮಕ್ಕಳು ಇಷ್ಟ ಪಡುವ ಆಹಾರಕ್ಕಿಂತ ದೇಹಕ್ಕೆ ಯಾವುದು ಒಳ್ಳೆಯದೋ ಅಂತಹ ಆಹಾರವನ್ನೇ ನೀಡಿ. ಸಕ್ಕರೆ ಪ್ರಮಾಣ ಹೆಚ್ಚಿರುವ ಆಹಾರಗಳು, ಜಂಕ್ ಫುಡ್​ಗಳು, ಅಥವಾ ಯಾವುದೇ ಪೋಷಕಾಂಶವಿಲ್ಲದ ಆಹಾರಗಳನ್ನು ನೀಡಬೇಡಿ. ಆರೋಗ್ಯಕರ ಆಹಾರವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

ಈ ಆಹಾರವನ್ನು ಮಕ್ಕಳಿಗೆ ಕೊಡಲೇಬೇಡಿ

ಹಸಿ ಹಾಲು ಹಾಗೂ ಸಾಫ್ಟ್​ ಚೀಸ್: ಹಸಿ ಹಾಲು ಅಥವಾ ಸಾಫ್ಟ್​ ಚೀಸ್​ ಅನ್ನು ಮಕ್ಕಳಿಗೆ ಕೊಡಬೇಡಿ,ಅದರ ಜತೆಗೆ ಸಾಶ್ಮಿ ಅಥವಾ ಸುಶಿ ರೀತಿಯ ಹಸಿ ಮಾಂಸವನ್ನೂ ನೀಡಬೇಡಿ. ಇದು ನಿಮ್ಮ ಮಕ್ಕಳ ಜೀರ್ಣಕ್ರಿಯೆ ಅಪಾಯವನ್ನುಂಟು ಮಾಡಿ ಆಯಾಸವನ್ನುಂಟು ಮಾಡುತ್ತದೆ.

ಚಿಪ್ಸ್​ ಹಾಗೂ ಕರಿದ ಪದಾರ್ಥಗಳು ಹೆಚ್ಚಿನ ಪ್ರಮಾಣದ ಉಪ್ಪಿನಾಂಶವು ಮಕ್ಕಳ ಕಿಡ್ನಿ ಮೇಲೆ ಪರಿಣಾಮ ಬೀರುತ್ತದೆ. ಚಿಪ್ಸ್​, ಉಪ್ಪಿನ ಕಾಯಿ ಸೇರಿದಂತೆ ಇತರೆ ಕರಿದ ತಿಂಡಿಗಳನ್ನು ಮಕ್ಕಳಿಗೆ ನೀಡಬೇಡಿ.

ಬಿಸ್ಕತ್ತು, ಚಾಕೊಲೇಟ್, ಕೇಕ್​: ಬಿಸ್ಕೇಟ್, ಚಾಕೊಲೇಟ್ ಅಥವಾ ಕೇಕ್​ಗಳನ್ನು ಮಕ್ಕಳಿಗೆ ನೀಡಬೇಡಿ, ಇದರಿಂದ ಮಲಬದ್ಧತೆ ಸಮಸ್ಯೆ ಉಂಟಾಗಬಹುದು, ಈ ಎಲ್ಲಾ ಆಹಾರ ಪದಾರ್ಥಗಳು ಬಹುಬೇಗ ಜೀರ್ಣವಾಗುವುದಿಲ್ಲ.

ಕಾಫಿ, ಟೀಯಿಂದ ದೂರವಿಡಿ: ಮಕ್ಕಳಿಗೆ ಕೆಫೀನ್ ಹೆಚ್ಚಿನ ಪ್ರಮಾಣದಲ್ಲಿರುವ ಆಹಾರವನ್ನು ನೀಡಬೇಡಿ, ಇದರಿಂದ ಮಕ್ಕಳಲ್ಲಿ ನಿದ್ರಾಹೀನತೆ , ಖಿನ್ನತೆ ಉಂಟಾಗುವ ಸಾಧ್ಯತೆ ಇರುತ್ತದೆ. ಮಕ್ಕಳು ಬೆಳೆಯುತ್ತಿದ್ದಂತೆ ಮೂಳೆಗಳಿಗೆ ಕ್ಯಾಲ್ಶಿಯಂ ಅಂಶದ ಅವಶ್ಯಕತೆಯಿರುತ್ತದೆ.

ಹಸಿ ತರಕಾರಿಗಳನ್ನು ನೀಡಬೇಡಿ: ಬೀನ್ಸ್, ಬೆಂಡೆಕಾಯಿ, ಹೂಕೋಸು, ಬ್ರೊಕೊಲಿಯಂತಹ ಹಸಿ ತರಕಾರಿಗಳನ್ನು ಮಕ್ಕಳಿಗೆ ನೀಡಬೇಡಿ, ಅದರಲ್ಲಿ ಹೆಚ್ಚಿನ ಪ್ರಮಾಣದ ನೈಟ್ರೇಟ್ಸ್​ಗಳು ಇರಲಿವೆ.

ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು