AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾತ್ರಿ ನಿಮ್ಮ ಈ ಅಭ್ಯಾಸಗಳು ಬೆಳಿಗ್ಗೆ ಬೇಗನೆ ಏಳಲು ಸಹಾಯ ಮಾಡುತ್ತೆ

ಸಾಮಾನ್ಯವಾಗಿ ಬೆಳಿಗ್ಗೆ ಹಾಸಿಗೆಯಿಂದ ಎದ್ದೇಳಲು ಕಾರಣವಿದ್ದರೂ ನಿಮ್ಮ ದೇಹ ಅದಕ್ಕೆ ಒಪ್ಪಿಗೆ ನೀಡುವುದಿಲ್ಲ. ಹಾಗಾಗಿ ಕೆಲವರು ಸಂಜೆ ಬೇಗನೆ ಮಲಗುತ್ತಾರೆ. ಈ ಅಭ್ಯಾಸದಿಂದ ಬೆಳಿಗ್ಗೆ ಬೇಗ ಎಚ್ಚರವಾಗುತ್ತದೆ. ಆದರೆ ಇದು ಎಲ್ಲರಿಗೂ ಸಾಧ್ಯವಿಲ್ಲ. ಇಂತಹ ಸಂದರ್ಭಗಳಲ್ಲಿ ರಾತ್ರಿ ಕೆಲವು ಸರಳ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಬಹಳ ಒಳ್ಳೆಯದು. ಇದರಿಂದ ನೀವು ಯಾವುದೇ ರೀತಿಯ ಆಲಸ್ಯವಿಲ್ಲದೆಯೇ ಬೆಳಿಗ್ಗೆ ಬೇಗ ಏಳಬಹುದು.

ರಾತ್ರಿ ನಿಮ್ಮ ಈ ಅಭ್ಯಾಸಗಳು ಬೆಳಿಗ್ಗೆ ಬೇಗನೆ ಏಳಲು ಸಹಾಯ ಮಾಡುತ್ತೆ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Feb 04, 2025 | 11:38 AM

Share

ರಾತ್ರಿ ಬೇಗ ಮಲಗಿ ಬೆಳಿಗ್ಗೆ ಬೇಗ ಏಳುವ ಅಭ್ಯಾಸ ಬಹಳ ಒಳ್ಳೆಯದು. ಆದರೆ ಚಳಿ ಮತ್ತೆ ನಿದ್ರೆಯ ಮಂಪರಿನಿಂದಾಗಿ ಹಾಸಿಗೆ ಬಿಟ್ಟು ಏಳಲು ಮನಸ್ಸಾಗುವುದಿಲ್ಲ. ಅಲಾರಂ ಆಗುತ್ತಿದ್ದರೂ ಯಾವುದೋ ನೆಪ ಹೇಳಿ ಮತ್ತೆ ಮಲಗುವುದಕ್ಕೆ ಮನಸ್ಸು ಹಂಬಲಿಸುತ್ತದೆ. ಬೆಳಿಗ್ಗೆ ಹಾಸಿಗೆಯಿಂದ ಎದ್ದೇಳಲು ಮುಖ್ಯ ಉದ್ದೇಶವಿದ್ದರೂ ನಿಮ್ಮ ದೇಹ ಅದಕ್ಕೆ ಒಪ್ಪಿಗೆ ನೀಡುವುದಿಲ್ಲ. ಹಾಗಾಗಿ ಕೆಲವರು ಸಂಜೆ ಬೇಗನೆ ಮಲಗುತ್ತಾರೆ. ಈ ಅಭ್ಯಾಸದಿಂದ ಬೆಳಿಗ್ಗೆ ಬೇಗ ಎಚ್ಚರವಾಗುತ್ತದೆ. ಆದರೆ ಇದು ಎಲ್ಲರಿಗೂ ಸಾಧ್ಯವಿಲ್ಲ. ಇಂತಹ ಸಂದರ್ಭಗಳಲ್ಲಿ ರಾತ್ರಿ ಕೆಲವು ಸರಳ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಬಹಳ ಒಳ್ಳೆಯದು. ಇದರಿಂದ ನೀವು ಯಾವುದೇ ರೀತಿಯ ಆಲಸ್ಯವಿಲ್ಲದೆಯೇ ಬೆಳಿಗ್ಗೆ ಬೇಗ ಏಳಬಹುದು.

ಮನಸ್ಸನ್ನು ಶಾಂತಗೊಳಿಸುವ ಪಾನೀಯಗಳನ್ನು ಸೇವನೆ ಮಾಡಿ:

ರಾತ್ರಿ ಸಮಯದಲ್ಲಿ ಮನಸ್ಸನ್ನು ಶಾಂತಗೊಳಿಸಲು ನಿಮಗೆ ತೊಂದರೆಯಾಗುತ್ತಿದ್ದರೆ, ನಿದ್ರೆಯನ್ನು ಪ್ರಚೋದಿಸುವ ಕೆಲವು ರೀತಿಯ ಪಾನೀಯಗಳನ್ನು ಕುಡಿಯಿರಿ. ಸಾಮಾನ್ಯವಾಗಿ ಕ್ಯಾಮೊಮೈಲ್ ಚಹಾವು ನಿಮ್ಮ ಮನಸ್ಸನ್ನು ಶಾಂತವಾಗಿಸುವುದಲ್ಲದೆ , ನಿದ್ರೆ ಚೆನ್ನಾಗಿ ಬರುವುದಕ್ಕೆ ಸಹಾಯ ಮಾಡುತ್ತದೆ. ಆದರೆ ಇದನ್ನು ಮುಂಜಾನೆ ಮಾತ್ರ ಸೇವಿಸಬೇಕು. ಇದರ ಹೊರತಾಗಿ ಕಾಶ್ಮೀರಿ ಕಹ್ವಾ, ಜೀರಾ ಮತ್ತು ಅಜ್ವೈನ್ ನೀರು ಅಥವಾ ಗುಲಾಬಿ ಚಹಾವನ್ನು ಕೂಡ ಸೇವಿಸಲು ಪ್ರಯತ್ನಿಸಬಹುದು. ಈ ಸಣ್ಣ ಅಭ್ಯಾಸವು ನಿಮ್ಮ ಮಲಗುವ ದಿನಚರಿಯನ್ನು ಹೆಚ್ಚು ಆನಂದದಾಯಕವಾಗಿಸುತ್ತದೆ.

ಸ್ವಲ್ಪ ಓದುವ ಅಭ್ಯಾಸವನ್ನು ರೂಢಿಸಿಕೊಳ್ಳಿ:

ಶಾಲಾ ದಿನಗಳಲ್ಲಿ ಓದುವ ಅಭ್ಯಾಸ ನಿದ್ರೆ ಬರುವಂತೆ ಮಾಡುತ್ತಿತ್ತು ಎಂಬುದು ನೆನಪಿದೆಯೇ? ಹಾಗೆಯೇ ಮಲಗುವ ಮೊದಲು ಈ ಅಭ್ಯಾಸ ರೂಢಿಸಿಕೊಂಡರೆ ಚೆನ್ನಾಗಿ ನಿದ್ರೆ ಮಾಡಬಹುದು. ಈ ತಂತ್ರ ಖಂಡಿತವಾಗಿಯೂ ನಿಮಗೆ ಸಹಾಯ ಮಾಡುತ್ತದೆ. ಎನ್ಐಎಚ್ ಅಧ್ಯಯನದ ಪ್ರಕಾರ, ಮಲಗುವ ಮೊದಲು ಹಾಸಿಗೆಯ ಮೇಲೆ ಕುಳಿತು ಯಾವುದಾದರೂ ಪುಸ್ತಕ ಓದುವ ಅಭ್ಯಾಸವು ನಿಮ್ಮ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ಪುಸ್ತಕ ಓದಬೇಕು ಎಂದು ಫೋನ್ ಗಳಲ್ಲಿ ಕಥೆ, ಕಾದಂಬರಿಗಳನ್ನು ಓದಬಾರದು. ಬದಲಾಗಿ, ಹಳೆಯ ಓದುವ ವಿಧಾನವನ್ನು ಅನುಸರಿಸುವುದು ಬಹಳ ಸೂಕ್ತ.

ನಿಮ್ಮ ಅಲಾರಂ ಅನ್ನು 6- 8 ಹೆಜ್ಜೆ ದೂರವಿಡಿ:

ಸಾಮಾನ್ಯವಾಗಿ ಗಾಢ ನಿದ್ರೆಯಲ್ಲಿದ್ದಾಗ ಅಲಾರಂ ಆಫ್ ಮಾಡಿ ಮಲಗುತ್ತೇವೆ. ಬಳಿಕ, ಎಚ್ಚರವಾದ ಮೇಲೆ ವಿಷಾದಿಸುತ್ತೇವೆ. ಈ ರೀತಿಯ ಅಭ್ಯಾಸ ನಿಮಗೂ ಇದ್ದರೆ ಹಾಸಿಗೆಯಲ್ಲಿದ್ದಾಗ ಅಲಾರಂ ಆಫ್ ಮಾಡದಂತೆ ಕೆಲವು ಅಡಿ ದೂರದಲ್ಲಿ ಇರಿಸಿ. ಈ ರೀತಿ ನಿಮ್ಮ ಅಲಾರಂ ಅನ್ನು ದೂರ ಇಡುವ ಅಭ್ಯಾಸವು ನಿಮ್ಮ ಕಾಲನ್ನು ನೆಲದ ಮೇಲೆ ಇರಿಸುವಂತೆ ಮಾಡುತ್ತದೆ. ಏಕೆಂದರೆ ಅದನ್ನು ಆಫ್ ಮಾಡಲು ನೀವು ಎದ್ದು ಹೋಗಬೇಕಾಗುತ್ತದೆ. ಆಗ ಗಾಢ ನಿದ್ರೆಯಿಂದ ಎಚ್ಚರವಾಗಿ ಬೇಗ ಏಳುವುದಕ್ಕೆ ಸಹಾಯ ಮಾಡುತ್ತದೆ.

ಇದನ್ನೂ ಓದಿ: ರಕ್ತ ಕ್ಯಾನ್ಸರ್‌ಗೆ ಕಾರಣವೇನು? ನಿಮ್ಮಲ್ಲಿ ಕ್ಯಾನ್ಸರ್‌ ಸೂಚನೆ ಕಂಡರೆ ಏನು ಮಾಡಬೇಕು?

ಆಲ್ಕೋಹಾಲ್ ಮತ್ತು ಕೆಫೀನ್ ಬಳಕೆಯನ್ನು ಮಿತಿಗೊಳಿಸಿ:

ಮಲಗುವ ಆರು ಗಂಟೆಗಳ ಮೊದಲು ಕೆಫೀನ್ ಸೇವನೆ ಮಾಡುವುದು ನಿದ್ರೆಗೆ ಅಡ್ಡಿಯಾಗಬಹುದು. ಅಂತೆಯೇ, ಮಲಗುವ ಮೊದಲು ಮದ್ಯಪಾನ ಮಾಡುವುದರಿಂದ ನಿದ್ರೆಗೆ ತೊಂದರೆಯಾಗುತ್ತದೆ ಎಂಬುದು ಅಧ್ಯಯನಗಳಿಂದಲೂ ಸಾಬೀತಾಗಿದೆ. ಬೆಳಿಗ್ಗಿನ ಆಲಸ್ಯ ಕಡಿಮೆ ಮಾಡಲು ಆಲ್ಕೋಹಾಲ್ ಮತ್ತು ಕೆಫೀನ್ ಸೇವನೆಯಿಂದ ದೂರವಿರಬೇಕು. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಅಧ್ಯಯನದಲ್ಲಿ ತಿಳಿಸಿರುವಂತೆ ಕೆಫೀನ್ ಸೇವನೆಯನ್ನು ಮಧ್ಯಾಹ್ನ 2 ಗಂಟೆಯ ಮೊದಲು ಸೀಮಿತಗೊಳಿಸುವುದರಿಂದ ನಿದ್ರೆ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು. ಜೊತೆಗೆ ಆಲಸ್ಯವನ್ನು ಕಡಿಮೆ ಮಾಡಬಹುದಾಗಿದೆ.

ಮಲಗುವ ಮೊದಲು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ:

ಸಾಮಾಜಿಕ ಮಾಧ್ಯಮವನ್ನು ರಾತ್ರಿ ಸಮಯದಲ್ಲಿ ಬಳಕೆ ಮಾಡುವುದು ಒಳ್ಳೆಯದಲ್ಲ. ಇದರಿಂದ ಸಮಯ ಕಳೆದದ್ದು ತಿಳಿಯುವುದಿಲ್ಲ. ಮಲಗುವ ಮೊದಲು ಸ್ಕ್ರಾಲ್ ಮಾಡುವುದರಿಂದ ನಮ್ಮ ಮಿದುಳಿಗೆ ಸರಿಯಾದ ವಿಶ್ರಾಂತಿ ಸಿಗುವುದಿಲ್ಲ. ಅದಲ್ಲದೆ ರಾತ್ರಿಯ ಸಮಯದಲ್ಲಿ ಅತಿಯಾದ ಕೃತಕ ಬೆಳಕು ಮೆಲಟೋನಿನ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಅಹಮದಾಬಾದ್‌ನಲ್ಲೂ ಆರ್‌ಸಿಬಿ ಅಲೆ!
ಅಹಮದಾಬಾದ್‌ನಲ್ಲೂ ಆರ್‌ಸಿಬಿ ಅಲೆ!
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ವಿಜಯೇಂದ್ರ ಮತ್ತು ಅಶೋಕ್​ಗೆ ಹುಷಾರ್​​ ಆಗಿರಿ ಎಂದಿದ್ದೇಕೆ ಯತ್ನಾಳ್​
ವಿಜಯೇಂದ್ರ ಮತ್ತು ಅಶೋಕ್​ಗೆ ಹುಷಾರ್​​ ಆಗಿರಿ ಎಂದಿದ್ದೇಕೆ ಯತ್ನಾಳ್​