AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mental Health: ನಿಮ್ಮ ಮಾನಸಿಕ ಆರೋಗ್ಯವನ್ನು ನೀವೇ ಸುಧಾರಿಸಿಕೊಳ್ಳಬಹುದು, ಇಲ್ಲಿವೆ ಟಿಪ್ಸ್​

ನೀವು ಮಾನಸಿಕವಾಗಿ ನೊಂದಿದ್ದೀರಾ?, ನಿಮ್ಮ ಮನಸ್ಸಿನ ಗೊಂದಲಗಳನ್ನು ಯಾರೊಂದಿಗೂ ಹಂಚಿಕೊಳ್ಳುವ ಮನಸ್ಸಿಲ್ಲವೇ, ಒಳಗೊಳಗೇ ನೋವು ಅನುಭವಿಸುತ್ತಿದ್ದೀರಾ ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸುವ ಕೀ ನಿಮ್ಮ ಬಳಿಯೇ ಇದೆ.

Mental Health: ನಿಮ್ಮ ಮಾನಸಿಕ ಆರೋಗ್ಯವನ್ನು ನೀವೇ ಸುಧಾರಿಸಿಕೊಳ್ಳಬಹುದು, ಇಲ್ಲಿವೆ ಟಿಪ್ಸ್​
Mental Health
TV9 Web
| Updated By: ನಯನಾ ರಾಜೀವ್|

Updated on: Jun 27, 2022 | 9:59 AM

Share

ನೀವು ಮಾನಸಿಕವಾಗಿ ನೊಂದಿದ್ದೀರಾ?, ನಿಮ್ಮ ಮನಸ್ಸಿನ ಗೊಂದಲಗಳನ್ನು ಯಾರೊಂದಿಗೂ ಹಂಚಿಕೊಳ್ಳುವ ಮನಸ್ಸಿಲ್ಲವೇ, ಒಳಗೊಳಗೇ ನೋವು ಅನುಭವಿಸುತ್ತಿದ್ದೀರಾ ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸುವ ಕೀ ನಿಮ್ಮ ಬಳಿಯೇ ಇದೆ. ಹೌದು, ಮಾನಸಿಕ ಆರೋಗ್ಯ ಎಂಬುದು ಮನುಷ್ಯನಿಗೆ ಬಹುಮುಖ್ಯವಾಗಿ ಬೇಕಾಗಿದ್ದು, ಮನಸ್ಸೊಂದು ಸರಿ ಇದ್ದರೆ ಆತ ಏನನ್ನು ಬೇಕಾದರೂ ಸಾಧಿಸಬಲ್ಲ, ಎಷ್ಟೇ ತೊಂದರೆಗಳನ್ನು ಬೇಕಾದರೂ ಎದುರಿಸಬಲ್ಲ.

ನಿಮ್ಮ ಮಾನಸಿಕ ಆರೋಗ್ಯ ಸರಿ ಇಲ್ಲದಿದ್ದರೆ ವೈದ್ಯರ ಬಳಿಯೇ ಹೋಗಬೇಕೆಂದೇನಿಲ್ಲ, ಆರಂಭದಲ್ಲಿ ನೀವೇ ಸರಿಪಡಿಸಿಕೊಳ್ಳಬಹುದು.

ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಇಲ್ಲಿವೆ ಸಲಹೆಗಳು

ವ್ಯಾಯಾಮ ಮಾಡಿ: ನಿತ್ಯ 30 ರಿಂದ 40 ನಿಮಿಷಗಳ ಕಾಲ ವ್ಯಾಯಾಮ ಮಾಡಿ, ಪ್ರತಿ ನಿತ್ಯವೂ ನೀವು ಮಾಡುವ ವ್ಯಾಯಾಮವು ಅಷ್ಟಷ್ಟಾಗಿ ನಿಮ್ಮ ಖಿನ್ನತೆಯನ್ನು ದೂರ ಮಾಡುತ್ತದೆ. ಮೊದಲು ಕೆಲವೇ ನಿಮಿಷಗಳಿಂದ ಶುರುಮಾಡಿ ಕ್ರಮೇಣವಾಗಿ ದೀರ್ಘಕಾಲದವರೆಗೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಪಾರ್ಕ್​ನಲ್ಲಿ ವಾಕಿಂಗ್ ಮಾಡಿ ಅಥವಾ ಇನ್ಯಾವುದೇ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ.

ಇದನ್ನೂ ಓದಿ

ಎಂಜಾಯ್ ಮಾಡಿ

ದಿನದ 24 ಗಂಟೆಯೂ ಕೆಲಸದಲ್ಲಿ ತೊಡಗಿಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ, ಮನಸ್ಸನ್ನು ಸ್ವಲ್ಪ ಶಾಂತವಾಗಿರಲು ಬಿಡಬೇಕು, ಮನಸ್ಸನ್ನು ಖುಷಿಪಡಿಸುವ ಕೆಲಸವನ್ನು ನೀವು ಮಾಡಬೇಕು. ಇಡೀ ದಿನ ಬಿಜಿ ಇದ್ದರೆ ಎಂಜಾಯ್ ಮಾಡುವುದು ಯಾವಾಗ?, ನಿಮಗೆ ಯಾವ ರೀತಿಯ ಚಟುವಟಿಕೆಗಳು ಇಷ್ಟ ಅದನ್ನೇ ಮಾಡಿ ಒಟ್ಟಿನಲ್ಲಿ ಕೆಲಸವನ್ನು ಬದಿಗಿರಿಸಿ ನಿಮಗಾಗಿ ನೀವು ಬದುಕಿ.

ಸಣ್ಣ ಗುರಿಗಳಿರಲಿ ನೀವು ಸುಲಭವಾಗಿ ಸಾಧಿಸಬಲ್ಲ ಸಣ್ಣ ಗುರಿಗಳನ್ನು ಹಾಕಿಕೊಳ್ಳಿ, ಅದನ್ನು ಅಚೀವ್​ ಮಾಡಲು ಏನು ಮಾಡಬೇಕು ಅದರ ಬಗ್ಗೆ ಆಲೋಚಿಸಿ, ನೀವು ಗುರಿ ಸಾಧಿಸಿ ಬಳಿಕ ಅದನ್ನು ಸೆಲೆಬ್ರೇಟ್ ಮಾಡಿ.

ಸರಿಯಾಗಿ ನಿದ್ರೆ ಮಾಡಿ ನೀವು ಎಷ್ಟು ಚೆನ್ನಾಗಿ ನಿದ್ರೆ ಮಾಡುತ್ತೀರ, ನಿಮ್ಮ ದಿನ ಅಷ್ಟು ಚೆನ್ನಾಗಿರಲಿದೆ, ಹಾಗೆಯೇ ಮಲಗಿದ ತಕ್ಷಣವೇ ನಿದ್ರೆ ಬಂದು ಬೆಳಗ್ಗೆಯವರೆಗೂ ಎಚ್ಚರವಾಗದೆ ಮಾಡುವ ನಿದ್ರೆ ದೇಹಕ್ಕೆ ಹಿತವೆನಿಸುತ್ತದೆ. ಮಲಗುವುದೇ ತಡ, ಅದರಲ್ಲೂ ಮಧ್ಯ ಹತ್ತಾರು ಬಾರಿ ಎಚ್ಚರವಾದರೆ ಅದು ಒಳ್ಳೆಯ ನಿದ್ರೆ ಆಗಿರುವುದಿಲ್ಲ. ನಿಮ್ಮ ಮಾನಸಿಕ ಸ್ಥಿತಿಯನ್ನು ಉತ್ತಮವಾಗಿರಿಸಿಕೊಳ್ಳಲು ನಿದ್ರೆ ಕೂಡ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಆಹಾರ ಸೇವನೆ ಮಾನಸಿಕ ಆರೋಗ್ಯ ಎನ್ನುವ ಮಾತು ಬಂದರೆ ಮೊದಲು ಕಣ್ಣೆದುರು ಬರುವುದೇ ನಿದ್ರೆ, ನಿಮ್ಮ ಮನಸ್ಥಿತಿ ಹಾಗೂ ಹಸಿವು, ಇವುಗಳ ಬಗ್ಗೆ ಹೆಚ್ಚು ಗಮನವಹಿಸದರೆ ನಿಮ್ಮ ಮಾನಸಿಕ ಆರೋಗ್ಯ ಸುಧಾರಿಸಲಿದೆ. ನಿಮ್ಮ ಆಹಾರ ಪದ್ಧತಿ ಉತ್ತಮವಾಗಿರಬೇಕು, ಸಮತೋಲಿತ ಡಯೆಟ್ ಇರಬೇಕು, ಫ್ಯಾಟಿ ಆಹಾರವನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು, ಸದಾ ದೇಹವನ್ನು ಹೈಡ್ರೇಟ್​ ಆಗಿರಿಸಬೇಕು.

ವಿಶ್ರಾಂತಿ ಪಡೆಯಿರಿ ನಿಮ್ಮ ಕೆಲಸವನ್ನು ಕೆಲವು ನಿಮಿಷಗಳ ಕಾಲ ಬದಿಗಿಟ್ಟು ಸ್ವಲ್ಪ ವಿಶ್ರಾಂತಿ ಪಡೆಯಿರಿ, ಮನಸ್ಸನ್ನು ಶಾಂತವಾಗಿರಿಸಿಕೊಳ್ಳಿ, ಬೇಡದ ಯೋಚನೆ ಮಾಡಬೇಡಿ. ಪ್ರಾಣಾಯಾಮ ಮಾಡಿ, ಧ್ಯಾನ ಮಾಡಿ ಮನಸ್ಸನ್ನು ಆಹ್ಲಾದಕರವಾಗಿಟ್ಟುಕೊಳ್ಳಿ.

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?