ಈ ತರಕಾರಿಗಳನ್ನು ಬೇಯಿಸುವುದು ಬೇಕಾಗಿಲ್ಲ ಹಸಿಯಾಗಿ ತಿನ್ನುವುದೇ ಪ್ರಯೋಜನಕಾರಿ

ಪ್ರತಿನಿತ್ಯ ಹಣ್ಣು, ಸೊಪ್ಪು ತರಕಾರಿಗಳ ಸೇವನೆ ಮಾಡಬೇಕು. ಇದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಅವುಗಳಲ್ಲಿರುವ ಪೋಷಕಾಂಶಗಳು ನಮ್ಮ ದೇಹಕ್ಕೆ ಹಲವಾರು ರೀತಿಯ ಪ್ರಯೋಜನಗಳನ್ನು ಒದಗಿಸುತ್ತವೆ. ಇನ್ನು, ತರಕಾರಿಗಳನ್ನು ಬೇಯಿಸುವುದರಿಂದ ಅವುಗಳಲ್ಲಿರುವ ಹಾನಿಕಾರಕ ಪದಾರ್ಥಗಳು ನಾಶವಾಗುತ್ತವೆ, ಅವು ತಿನ್ನುವುದಕ್ಕೆ ಸುರಕ್ಷಿತವಾಗಿರುತ್ತವೆ. ಅವು ಬೇಗನೆ ಜೀರ್ಣವಾಗುತ್ತವೆ. ಆದರೆ ನಿಮಗೆ ಗೊತ್ತಾ, ಕೆಲವು ತರಕಾರಿಗಳನ್ನು, ಬೇಯಿಸುವ ಬದಲು ಹಸಿಯಾಗಿಯೇ ತಿನ್ನುವುದು ಬಹಳ ಪ್ರಯೋಜನಕಾರಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಆ ತರಕಾರಿಗಳು ಯಾವವು, ಯಾಕೆ ಸೇವನೆ ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಈ ತರಕಾರಿಗಳನ್ನು ಬೇಯಿಸುವುದು ಬೇಕಾಗಿಲ್ಲ ಹಸಿಯಾಗಿ ತಿನ್ನುವುದೇ ಪ್ರಯೋಜನಕಾರಿ
Raw Veggies

Updated on: Dec 15, 2025 | 4:30 PM

ಆರೋಗ್ಯವಾಗಿರಲು ಸೊಪ್ಪು, ತರಕಾರಿಗಳ (Vegetables) ಸೇವನೆ ಅತ್ಯಂತ ಪ್ರಯೋಜನಕಾರಿ. ಅವುಗಳಲ್ಲಿರುವ ಪೋಷಕಾಂಶಗಳು ನಮ್ಮ ದೇಹಕ್ಕೆ ಹಲವಾರು ರೀತಿಯ ಪ್ರಯೋಜನಗಳನ್ನು ಒದಗಿಸುತ್ತವೆ. ತರಕಾರಿಗಳನ್ನು ಬೇಯಿಸುವುದರಿಂದ ಅವುಗಳಲ್ಲಿರುವ ಹಾನಿಕಾರಕ ಪದಾರ್ಥಗಳು ನಾಶವಾಗಿ, ಅವು ತಿನ್ನುವುದಕ್ಕೆ ಸುರಕ್ಷಿತವಾಗಿರುತ್ತವೆ. ಅಷ್ಟೇ ಅಲ್ಲ, ಬೇಗನೆ ಜೀರ್ಣವಾಗುತ್ತವೆ. ಆದರೆ ಕೆಲವು ತರಕಾರಿಗಳನ್ನು ಬೇಯಿಸುವ ಬದಲು ಹಸಿಯಾಗಿಯೇ (Raw Vegetables) ತಿನ್ನುವುದರಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಆ ತರಕಾರಿಗಳು ಯಾವವು, ಈ ರೀತಿ ಸೇವನೆ ಮಾಡುವುದರಿಂದ ಸಿಗುವ ಪ್ರಯೋಜನಗಳೇನು ತಿಳಿದುಕೊಳ್ಳಿ.

ಕೆಂಪು ಕ್ಯಾಪ್ಸಿಕಂ:

ದೊಡ್ಡ ಮೆಣಸಿನಕಾಯಿ ಅಥವಾ ಬೆಲ್ ಪೆಪ್ಪರ್ ಪೌಷ್ಟಿಕಾಂಶದ ಶಕ್ತಿ ಕೇಂದ್ರವಾಗಿದೆ. ಇದರಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು ಇದನ್ನು ಬೇಯಿಸುವುದು ಅಥವಾ ಹುರಿಯುವುದರಿಂದ ಇದರಲ್ಲಿರುವ ವಿಟಮಿನ್ ಸಿ ಅಂಶ ಕಡಿಮೆಯಾಗುತ್ತದೆ. ಆದ್ದರಿಂದ, ಇದನ್ನು ಹಸಿಯಾಗಿಯೇ ತಿನ್ನುವುದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

ಬ್ರೊಕೊಲಿ:

ಇದು ಗ್ಲುಕೋರಫನಿನ್ ಅನ್ನು ಹೊಂದಿದ್ದು ಉರಿಯೂತ ಮತ್ತು ಕೀಮೋಪ್ರೊಟೆಕ್ಟಿವ್ ಪರಿಣಾಮಗಳಿಗಾಗಿ ಅಧ್ಯಯನ ಮಾಡಲಾದ ಸಂಯುಕ್ತವಾಗಿದೆ. ಇದನ್ನು ಸಲ್ಫೊರಾಫೇನ್ ಆಗಿ ಪರಿವರ್ತಿಸಲು ಮೈರೋಸಿನೇಸ್ ಎಂಬ ಕಿಣ್ವದ ಅಗತ್ಯವಿರುತ್ತದೆ, ಇದು ಕಚ್ಚಾ ಬ್ರೊಕೊಲಿಯಲ್ಲಿದೆ. ಹಾಗಾಗಿ ಇದನ್ನು ಬೇಯಿಸುವುದಕ್ಕಿಂತ ಹಸಿಯಾಗಿ ಸೇವಿಸುವುದು ಒಳ್ಳೆಯದು.

ಇದನ್ನೂ ಓದಿ: ಚಳಿಗಾಲದಲ್ಲಿ ಈ ತರಕಾರಿಗಳನ್ನು ಫ್ರಿಡ್ಜ್‌ನಲ್ಲಿ ಇಡುವ ತಪ್ಪನ್ನು ಮಾಡಲೇಬೇಡಿ

ಬೆಳ್ಳುಳ್ಳಿ:

ಹಸಿ ಬೆಳ್ಳುಳ್ಳಿಯನ್ನು ಪುಡಿಮಾಡಿದಾಗ ಅಥವಾ ಕತ್ತರಿಸಿದಾಗ, ಅದರಲ್ಲಿರುವ ಅಲೈನೇಸ್ ಎಂಬ ಕಿಣ್ವವು ಅದನ್ನು ಆಂಟಿಮೈಕ್ರೊಬಿಯಲ್ ಮತ್ತು ಹೃದಯರಕ್ತನಾಳದ ಪ್ರಯೋಜನಗಳಿಗೆ ಸಂಬಂಧಿಸಿದ ಸಂಯುಕ್ತವಾದ ಅಲಿಸಿನ್ ಆಗಿ ಪರಿವರ್ತಿಸುತ್ತದೆ. ಆದ್ದರಿಂದ, ಇದನ್ನು ಕಚ್ಚಾ ಸೇವಿಸುವುದು ಪ್ರಯೋಜನಕಾರಿ. ಇದನ್ನು ನೇರವಾಗಿ ತಿನ್ನುವುದು ಸ್ವಲ್ಪ ಕಷ್ಟಕರವಾಗಿದ್ದರೂ, ಜೇನುತುಪ್ಪದೊಂದಿಗೆ ತೆಗೆದುಕೊಳ್ಳಬಹುದು ಉತ್ತಮ. ಆದರೆ ಕೆಲವರಿಗೆ, ಇದನ್ನು ಹಸಿಯಾಗಿ ತಿನ್ನುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತದೆ. ಆದ್ದರಿಂದ, ಇದನ್ನು ಸೇವಿಸುವ ಮೊದಲು ತಜ್ಞರನ್ನು ಸಂಪರ್ಕಿಸಿ.

ಈರುಳ್ಳಿ:

ಸಾಮಾನ್ಯವಾಗಿ ಇದರಲ್ಲಿ ಕ್ವೆರ್ಸೆಟಿನ್ ಮತ್ತು ಸಲ್ಫರ್ ಹೊಂದಿರುವ ಸಂಯುಕ್ತಗಳು ಸಮೃದ್ಧವಾಗಿದ್ದು, ಅವು ಉರಿಯೂತ ನಿವಾರಕ ಮತ್ತು ಹೃದಯ ಸಂಬಂಧಿ ಪ್ರಯೋಜನಗಳನ್ನು ನೀಡುತ್ತದೆ. ಆದರೆ ಇದನ್ನು ಬೇಯಿಸುವುದರಿಂದ ಈ ಸಂಯುಕ್ತಗಳಿಗೆ ಹಾನಿಯಾಗುತ್ತದೆ. ಅಷ್ಟೇ ಅಲ್ಲ, ಹೆಚ್ಚು ಹೊತ್ತು ಬೇಯಿಸುವುದರಿಂದ ಅವುಗಳಲ್ಲಿರುವ ಕೆಲವು ಫ್ಲೇವನಾಯ್ಡ್‌ಗಳು ಮತ್ತು ಸಲ್ಫರ್ ಸಂಯುಕ್ತಗಳು ಕಡಿಮೆಯಾಗುತ್ತವೆ ಹಾಗಾಗಿ ಇವುಗಳನ್ನು ಹಸಿಯಾಗಿ ತಿನ್ನುವುದು ಒಳ್ಳೆಯದು.-

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ