AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Green Grass: ಹಸಿರು ಹುಲ್ಲಿನ ಮೇಲೆ ಪ್ರತಿದಿನ ಬರಿಗಾಲಿನಲ್ಲಿ ನಡೆಯಿರಿ, ಈ ಅದ್ಭುತ ಪ್ರಯೋಜನಗಳ ಪಡೆಯಿರಿ

ನಿಮ್ಮ ಮನೆಯ ಹಿರಿಯರು ಸಾಮಾನ್ಯವಾಗಿ ಬರಿಗಾಲಿನಲ್ಲಿ ನಡೆಯಲು ನಿಮಗೆ ಸಲಹೆ ನೀಡಿರಬಹುದು. ಹಾಗೆಯೇ ನಿತ್ಯ ಹಸಿರು ಹುಲ್ಲಿನ ಮೇಲೆ 20 ನಿಮಿಷ ನಡೆದರೆ ಸಾಕು, ಸಾಕಷ್ಟು ಆರೋಗ್ಯ ಪ್ರಯೋಜನಗಳು ನಿಮ್ಮದಾಗಲಿವೆ.

Green Grass: ಹಸಿರು ಹುಲ್ಲಿನ ಮೇಲೆ ಪ್ರತಿದಿನ ಬರಿಗಾಲಿನಲ್ಲಿ ನಡೆಯಿರಿ, ಈ ಅದ್ಭುತ ಪ್ರಯೋಜನಗಳ ಪಡೆಯಿರಿ
Green GrassImage Credit source: ZeeNews
TV9 Web
| Updated By: ನಯನಾ ರಾಜೀವ್|

Updated on: Oct 24, 2022 | 3:21 PM

Share

ನಿಮ್ಮ ಮನೆಯ ಹಿರಿಯರು ಸಾಮಾನ್ಯವಾಗಿ ಬರಿಗಾಲಿನಲ್ಲಿ ನಡೆಯಲು ನಿಮಗೆ ಸಲಹೆ ನೀಡಿರಬಹುದು. ಹಾಗೆಯೇ ನಿತ್ಯ ಹಸಿರು ಹುಲ್ಲಿನ ಮೇಲೆ 20 ನಿಮಿಷ ನಡೆದರೆ ಸಾಕು, ಸಾಕಷ್ಟು ಆರೋಗ್ಯ ಪ್ರಯೋಜನಗಳು ನಿಮ್ಮದಾಗಲಿವೆ. ಈ ದಿನಗಳಲ್ಲಿ ಚಪ್ಪಲಿ, ಬೂಟುಗಳಿಲ್ಲದೆ ಹೊರಗೆ ಹೋಗಲು ಸಾಧ್ಯವಾಗುತ್ತಿಲ್ಲ, ಹಾಗಾಗಿ ಬರಿಗಾಲಿನಲ್ಲಿ ನಡೆಯುವ ಟ್ರೆಂಡ್ ಬಹುತೇಕ ಮುಗಿದಿದೆ.

ಅನೇಕ ಆರೋಗ್ಯ ತಜ್ಞರು ಸಹ ನಾವು ಪ್ರತಿದಿನ ಬೆಳಿಗ್ಗೆ ಎದ್ದು ಕನಿಷ್ಠ 20 ನಿಮಿಷಗಳ ಕಾಲ ಒದ್ದೆಯಾದ ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯಬೇಕು ಎಂದು ಹೇಳುತ್ತಾರೆ, ಇದರ ಪ್ರಯೋಜನಗಳನ್ನು ಕೇಳಿದರೆ ನೀವು ಆಶ್ಚರ್ಯಪಡುತ್ತೀರಿ.

ಹುಲ್ಲಿನಲ್ಲಿ ಬರಿಗಾಲಿನಲ್ಲಿ ನಡೆಯುವುದರಿಂದ ಆಗುವ ಪ್ರಯೋಜನಗಳು 1. ಕಣ್ಣಿಗೆ ಆಗುವ ಪ್ರಯೋಜನಗಳು ನೀವು ಬೆಳಿಗ್ಗೆ ಎದ್ದು ಹಸಿರು ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆದರೆ, ಅದು ಪಾದದ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ವಾಸ್ತವವಾಗಿ, ನಮ್ಮ ದೇಹದ ಅನೇಕ ಭಾಗಗಳ ಒತ್ತಡದ ಬಿಂದುವು ನಮ್ಮ ಪಾದದಲ್ಲಿದೆ. ಇದರಲ್ಲಿ ಕಣ್ಣುಗಳೂ ಸೇರಿಕೊಂಡಿವೆ, ಸರಿಯಾದ ಬಿಂದುವಿನ ಮೇಲೆ ಒತ್ತಡವಿದ್ದರೆ, ನಮ್ಮ ದೃಷ್ಟಿ ಖಂಡಿತವಾಗಿಯೂ ಹೆಚ್ಚಾಗುತ್ತದೆ.

2. ಅಲರ್ಜಿಗೆ ಚಿಕಿತ್ಸೆ ಮುಂಜಾನೆ ಇಬ್ಬನಿ ಹುಲ್ಲಿನ ಮೇಲೆ ನಡೆಯುವುದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ, ಏಕೆಂದರೆ ಇದು ನಮಗೆ ಹಸಿರು ಚಿಕಿತ್ಸೆಯನ್ನು ನೀಡುತ್ತದೆ. ಇದು ಪಾದಗಳ ಕೆಳಗಿರುವ ಮೃದು ಕೋಶಗಳಿಗೆ ಸಂಬಂಧಿಸಿದ ನರಗಳನ್ನು ಸಕ್ರಿಯಗೊಳಿಸುತ್ತದೆ ಮತ್ತು ಮೆದುಳಿಗೆ ಸಂಕೇತವನ್ನು ರವಾನಿಸುತ್ತದೆ, ಇದು ಅಲರ್ಜಿಯಂತಹ ಸಮಸ್ಯೆಗಳನ್ನು ತೆಗೆದುಹಾಕುತ್ತದೆ.

3. ಪಾದಗಳಿಗೆ ವಿಶ್ರಾಂತಿ ನಾವು ಒದ್ದೆಯಾದ ಹುಲ್ಲಿನ ಮೇಲೆ ಸ್ವಲ್ಪ ಕಾಲ ನಡೆದಾಗ, ಅದು ಉತ್ತಮ ಕಾಲು ಮಸಾಜ್ ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಕಾಲುಗಳ ಸ್ನಾಯುಗಳು ಸಾಕಷ್ಟು ವಿಶ್ರಾಂತಿ ಪಡೆಯುತ್ತವೆ, ಇದರಿಂದಾಗಿ ಸೌಮ್ಯವಾದ ನೋವು ದೂರ ಹೋಗುತ್ತದೆ.

4. ಉದ್ವೇಗದಿಂದ ಪರಿಹಾರ ಬೆಳಗ್ಗೆ ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯುವುದು ನಮ್ಮ ಮಾನಸಿಕ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿರುವುದಿಲ್ಲ. ಇದರಿಂದ ಮನಸ್ಸು ರಿಲ್ಯಾಕ್ಸ್ ಆಗುತ್ತದೆ ಮತ್ತು ಟೆನ್ಶನ್ ದೂರವಾಗುತ್ತದೆ.

ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!