AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾದಿಂದ ಉಸಿರಾಟದ ಸಮಸ್ಯೆಗೆ ಸಿಲುಕಿದವರಿಗೆ ರೆಮ್​​ಡೆಸಿವರ್​ ನೀಡುವುದೇಕೆ? ಯಾರಿಗೆ ಇದು ಅತ್ಯವಶ್ಯಕ?

ರೆಮ್​ಡೆಸಿವರ್ ಚುಚ್ಚುಮದ್ದನ್ನು 2014ರ ವೇಳೆಯಲ್ಲಿ ಎಬೊಲಾ ರೋಗ ಆವರಿಸಿದಾಗ ಕಂಡುಹಿಡಿಯಲಾಯ್ತು. ನಂತರ ಮರ್ಸ್​ ಖಾಯಿಲೆಗೂ ಇದನ್ನು ಬಳಸಲಾಯ್ತು. ಅದಾದ ನಂತರ ಈಗ ಕೊರೊನಾ ಸೋಂಕಿಗೆ ತುತ್ತಾಗಿ ಉಸಿರಾಟದ ಸಮಸ್ಯೆಗೆ ಸಿಲುಕುತ್ತಿರುವವರಿಗೆ ಈ ಆ್ಯಂಟಿ ವೈರಲ್ ಚುಚ್ಚುಮದ್ದನ್ನು ನೀಡಿ ಗುಣಪಡಿಸಲಾಗುತ್ತಿದೆ.

ಕೊರೊನಾದಿಂದ ಉಸಿರಾಟದ ಸಮಸ್ಯೆಗೆ ಸಿಲುಕಿದವರಿಗೆ ರೆಮ್​​ಡೆಸಿವರ್​ ನೀಡುವುದೇಕೆ? ಯಾರಿಗೆ ಇದು ಅತ್ಯವಶ್ಯಕ?
ರೆಮ್​​ಡೆಸಿವಿರ್​ ಚುಚ್ಚುಮದ್ದು
Skanda
| Updated By: ಆಯೇಷಾ ಬಾನು

Updated on: Apr 15, 2021 | 7:01 AM

Share

ಬೆಂಗಳೂರು: ದೇಶದೆಲ್ಲೆಡೆ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರುತ್ತಿದೆ, ರಾಜ್ಯದಲ್ಲಿಯೂ ಕೊರೊನಾ ಎರಡನೇ ಅಲೆ ಕಾವು ಜೋರಾಗಿದ್ದು ಸೋಂಕು ಹಬ್ಬದಂತೆ ತಡೆಯಲು ರಾಜ್ಯ ಸರ್ಕಾರ ಹರಸಾಹಸಪಡುತ್ತಿದೆ. ಇದೇ ಸಂದರ್ಭದಲ್ಲಿ ಕೊರೊನಾ ಲಸಿಕೆಯ ಜೊತೆಗೆ ರೆಮ್​ಡೆಸಿವರ್ ಚುಚ್ಚುಮದ್ದು ಸಹ ಸುದ್ದಿಯಲ್ಲಿದ್ದು, ಕೊರೊನಾ ಸೋಂಕಿತರಿಗೆ ರೆಮ್​ಡೆಸಿವರ್​ ಕೊಡುವ ಬಗ್ಗೆ ಬಗೆ ಬಗೆಯ ಅಭಿಪ್ರಾಯಗಳು ಹೊರಬೀಳುತ್ತಿವೆ. ಏತನ್ಮಧ್ಯೆ ಈ ಬಗ್ಗೆ ಎಚ್ಚರಿಕೆ ನೀಡಿರುವ ನೀತಿ‌ ಆಯೋಗದ ಸದಸ್ಯ ಡಾಕ್ಟರ್ ವಿ.ಕೆ.ಪೌಲ್, ರೆಮ್‌ಡೆಸಿವಿರ್ ಔಷಧವನ್ನು ಮನೆಯಲ್ಲೇ ತೆಗೆದುಕೊಳ್ಳಬಾರದು ಅದೇನಿದ್ದರೂ ಐಸಿಯುಗೆ ದಾಖಲಾದ ರೋಗಿಗಳಿಗೆ ಸೂಕ್ತ ಎಂದು ಹೇಳಿದ್ದಾರೆ. ಹಾಗಾದರೆ, ರೆಮ್​ಡೆಸಿವರ್​ ಏನು? ಅದನ್ನು ಕೊರೊನಾ ಸೋಂಕಿತರಿಗೆ ನೀಡುವುದಕ್ಕೆ ಕಾರಣಗಳೇನು? ಮನೆಯಲ್ಲೇ ಇದ್ದು ಈ ಚುಚ್ಚುಮದ್ದು ಪಡೆಯುವುದು ಏಕೆ ಉಚಿತವಲ್ಲ ಎಂಬಿತ್ಯಾದಿ ವಿಚಾರಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ರೆಮ್​ಡೆಸಿವರ್ ಚುಚ್ಚುಮದ್ದನ್ನು 2014ರ ವೇಳೆಯಲ್ಲಿ ಎಬೊಲಾ ರೋಗ ಆವರಿಸಿದಾಗ ಕಂಡುಹಿಡಿಯಲಾಯ್ತು. ನಂತರ ಮರ್ಸ್​ ಖಾಯಿಲೆಗೂ ಇದನ್ನು ಬಳಸಲಾಯ್ತು. ಅದಾದ ನಂತರ ಈಗ ಕೊರೊನಾ ಸೋಂಕಿಗೆ ತುತ್ತಾಗಿ ಉಸಿರಾಟದ ಸಮಸ್ಯೆಗೆ ಸಿಲುಕುತ್ತಿರುವವರಿಗೆ ಈ ಆ್ಯಂಟಿ ವೈರಲ್ ಚುಚ್ಚುಮದ್ದನ್ನು ನೀಡಿ ಗುಣಪಡಿಸಲಾಗುತ್ತಿದೆ. ಪ್ರಸ್ತುತ ಸಂದರ್ಭದಲ್ಲಿ ವಿಶ್ವಾದ್ಯಂತ ರೆಮ್​ಡೆಸಿವರ್ ಬಳಕೆ ಆಗುತ್ತಿದ್ದು, ಆಮ್ಲಜನಕದ ಸಮಸ್ಯೆ ಉಂಟಾಗಿ ಗಂಭೀರ ಸ್ಥಿತಿ ತಲುಪುತ್ತಿರುವ ಕೊರೊನಾ ಸೋಂಕಿತರನ್ನು ರೆಮ್​ಡೆಸಿವರ್​ ಮೂಲಕ ಬಚಾವು ಮಾಡುವ ಪ್ರಯತ್ನ ನಡೆಯುತ್ತಿದೆ.

ಒಂದು ವಯಲ್​ನಲ್ಲಿ 100ಎಂಜಿಯಷ್ಟಿರುವ ರೆಮ್​ಡೆಸಿವರ್​ ಅನ್ನು ಐದು ದಿನಗಳ ಕಾಲ ದಿನಕ್ಕೊಂದರಂತೆ ನೀಡಬೇಕಾಗುತ್ತದೆ. ಒಂದು ಚುಚ್ಚು ನೀಡಲು ಏನಿಲ್ಲವೆಂದರೂ ಅರ್ಧ ಗಂಟೆ ಬೇಕಾಗುತ್ತದೆ ಎನ್ನುವುದು ತಜ್ಞರ ಅಭಿಮತ. ಅಲ್ಲದೇ, ಚುಚ್ಚುಮದ್ದನ್ನು ನೀಡಿದ ನಂತರವೂ ಅದನ್ನು ಸ್ವೀಕರಿಸಿದ ವ್ಯಕ್ತಿಯ ಮೇಲೆ ನಿಗಾ ಇಡಬೇಕಾಗಿದ್ದು, ಅದೇ ಕಾರಣದಿಂದ ಇದು ಆಸ್ಪತ್ರೆಯಲ್ಲಿ ಮಾತ್ರ ಬಳಕೆಗೆ ಸೂಕ್ತ ಎಂದು ನೀತಿ‌ ಆಯೋಗದ ಸದಸ್ಯ ಡಾಕ್ಟರ್ ವಿ.ಕೆ.ಪೌಲ್ ಅಭಿಪ್ರಾಯಪಟ್ಟಿದ್ದಾರೆ.

ಬಹುಮುಖ್ಯವಾಗಿ ರೆಮ್​ಡೆಸಿವರ್​ ಚುಚ್ಚುಮದ್ದಿಗೆ ಭಾರೀ ಬೇಡಿಕೆ ಇದ್ದು, ಬೇಡಿಕೆಗೆ ಅನುಗುಣವಾಗಿ ಪೂರೈಕೆಯೇ ಕಷ್ಟವಾಗಿರುವ ಸಂದರ್ಭದಲ್ಲಿ ಹೋಂ ಐಸೋಲೇಶನ್​ನಲ್ಲಿ ಇರುವವರಿಗೆ, ಸೋಂಕಿನ ಲಕ್ಷಣ ಇಲ್ಲದವರಿಗೆ ಅಥವಾ ಸೋಂಕಿನ ಲಕ್ಷಣವಿದ್ದೂ ಉಸಿರಾಟದ ಸಮಸ್ಯೆಯನ್ನು ಎದುರಿಸದವರಿಗೆ ನೀಡುತ್ತಾ ಹೋದಲ್ಲಿ ನಿಜವಾಗಿಯೂ ಗಂಭೀರಾವಸ್ಥೆಗೆ ತಲುಪಿದವರಿಗೆ ನೀಡಲು ಚುಚ್ಚುಮದ್ದಿನ ಕೊರತೆ ಉಂಟಾಗುತ್ತದೆ. ಅದೆಲ್ಲದರ ಜೊತೆಗೆ, ರೆಮ್​ಡೆಸಿವರ್ ಪಡೆದ ವ್ಯಕ್ತಿಯು ವೈದ್ಯರ ನಿಗಾದಲ್ಲಿರಬೇಕಾದ ಕಾರಣ ಮನೆಯಲ್ಲೇ ಇದ್ದು ಈ ಚುಚ್ಚುಮದ್ದು ಪಡೆಯುವುದು ಸರ್ವಥಾ ಸಾಧುವಲ್ಲ ಎನ್ನುತ್ತಾರೆ ತಜ್ಞ ವೈದ್ಯರು.

ಇದನ್ನೂ ಓದಿ: ರೆಮ್​ಡೆಸಿವಿರ್ ಚುಚ್ಚುಮದ್ದಿನ ಉತ್ಪಾದನೆ ಹೆಚ್ಚಳ; ಬೆಲೆ ಇಳಿಕೆಗೆ ಅನುಮತಿ ನೀಡಿದ ಕೇಂದ್ರ ಸರ್ಕಾರ 

ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ದಾಖಲೆ ಬರೆದ ದೆಹಲಿ: ಒಂದೇ ದಿನ 17,000 ಮಂದಿಗೆ ಕೊವಿಡ್-19

(What is Remdesivir Injection why it is using to treat Covid 19 Patients)

2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ
2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು