Jupiter Transit 2026: ಉಚ್ಚಸ್ಥಾನದಲ್ಲಿ ಗುರು; 12 ರಾಶಿಗಳಲ್ಲಿ ಯಾರಿಗೆಲ್ಲ ಗುರು ಬಲ?

ಕರ್ಕಾಟಕ ರಾಶಿಯಲ್ಲಿ ಉಚ್ಛನಾಗಿರುವ ಗುರು ಗೋಚಾರದ ವಿಶಿಷ್ಟ ಫಲಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ. ವರ್ಗಕುಂಡಲಿಗಳಲ್ಲಿ ಮಿಶ್ರಫಲ ಹೊಂದಿದ್ದರೂ, ಇದು 12 ರಾಶಿಗಳ ಮೇಲೆ ಆರ್ಥಿಕ, ಆರೋಗ್ಯ, ವೃತ್ತಿ ಮತ್ತು ಸಂಬಂಧಗಳ ಮೇಲೆ ಹೇಗೆ ಪ್ರಭಾವ ಬೀರಲಿದೆ ಎಂದು ವಿವರವಾಗಿ ತಿಳಿಸಲಾಗಿದೆ. ಈ ಬಲಶಾಲಿ ಗ್ರಹದ ಸಂಚಾರ ನಿಮ್ಮ ಜೀವನದ ಮೇಲೆ ಬೀರುವ ಪರಿಣಾಮಗಳನ್ನು ತಿಳಿಯಿರಿ.

Jupiter Transit 2026: ಉಚ್ಚಸ್ಥಾನದಲ್ಲಿ ಗುರು; 12 ರಾಶಿಗಳಲ್ಲಿ ಯಾರಿಗೆಲ್ಲ ಗುರು ಬಲ?
ಉಚ್ಚಸ್ಥಾನದಲ್ಲಿ ಗುರು
Image Credit source: Pinterest
Edited By:

Updated on: Jun 04, 2026 | 12:35 PM

ಕಾಲವನ್ನು ತಿಳಿಯುವ ಶಾಸ್ತ್ರದ ಪ್ರಕಾರ ಗುರುವು ಅತ್ಯಂತ ಶುಭ ಗ್ರಹ. ಗುರುವು ತನ್ನ ಉಚ್ಛ ರಾಶಿಯಾದ ಕರ್ಕಾಟಕದಲ್ಲಿದ್ದಾನೆ. ಇದು ಅತ್ಯಂತ ಬಲವಾದ ಸ್ಥಿತಿ. ಜೊತೆಗೆ ಚಂದ್ರನ ದ್ರೇಕ್ಕಾಣ ಮತ್ತು ಹೋರೆಯಲ್ಲಿ ಸ್ನೇಹಿತನ ವರ್ಗ, ರವಿಯ ನವಾಂಶಯಲ್ಲಿ ಮಿತ್ರನ ವರ್ಗದಲ್ಲಿದ್ದಾನೆ. ಆದರೆ ಬುಧನ ತ್ರಿಂಶಾಂಶ ಮತ್ತು ದ್ವಾದಶಾಂಶದಲ್ಲಿದ್ದಾನೆ. ಬುಧನು ಗುರುವಿಗೆ ಶತ್ರು/ಸಮ ಭಾವ ಹೊಂದಿದ್ದಾನೆ. ಒಟ್ಟಾರೆಯಾಗಿ ಹೇಳುವುದಾದರೆ, ಗುರುವು ಉಚ್ಛ ಸ್ಥಾನದಲ್ಲಿದ್ದರೂ ವರ್ಗಕುಂಡಲಿಗಳಲ್ಲಿ ಮಿಶ್ರಫಲ ಹೊಂದಿದ್ದಾನೆ. ಈ ವಿಶಿಷ್ಟ ಸ್ಥಿತಿಯ 12 ರಾಶಿಗಳ ಫಲ ಇದು.

ಮೇಷ ರಾಶಿ:

​ನಿಮ್ಮ ರಾಶಿಗೆ ಗುರುವು ೪ನೇ ಮನೆಯಲ್ಲಿ ಸಂಚರಿಸುತ್ತಾನೆ. ಭೂಮಿ, ವಾಹನ ಮತ್ತು ಆಸ್ತಿ ಖರೀದಿ ಯೋಗವಿದೆ. ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ. ಆದರೆ ಬುಧನ ತ್ರಿಂಶಾಂಶದ ಪ್ರಭಾವದಿಂದ ಅನಾವಶ್ಯಕ ಕೌಟುಂಬಿಕ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬರಬಹುದು, ಜಾಗ್ರತೆ ವಹಿಸಿ.

​ವೃಷಭ ರಾಶಿ:

​ನಿಮ್ಮ ರಾಶಿಗೆ ಗುರುವು ಮೂರನೇ ರಾಶಿಯಲ್ಲಿದ್ದರೆ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಸಣ್ಣ ಪ್ರವಾಸಗಳು ಲಾಭದಾಯಕವಾಗಿರುತ್ತವೆ. ಸಹೋದರ-ಸಹೋದರಿಯರಿಂದ ಸಹಕಾರ ಸಿಗಲಿದೆ. ರವಿಯ ನವಾಂಶದ ಪ್ರಭಾವದಿಂದ ಸರ್ಕಾರಿ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ.

ಮಿಥುನ ರಾಶಿ:

​ನಿಮ್ಮ ರಾಶಿಗೆ ಗುರುವು ದ್ವಿತೀಯದಲ್ಲಿದ್ದರೆ, ಧನ ಲಾಭ ಮತ್ತು ಕುಟುಂಬದಲ್ಲಿ ಸಂತೋಷ ಹೆಚ್ಚಾಗಲಿದೆ. ನಿಮ್ಮ ಮಾತಿನ ಪ್ರಭಾವದಿಂದ ನೆನೆಗುದಿಗೆ ಬಿದ್ದ ಕೆಲಸಗಳು ಯಶಸ್ವಿಯಾಗುತ್ತವೆ. ಬುಧನ ದ್ವಾದಶಾಂಶವಿರುವುದರಿಂದ ವ್ಯಾಪಾರದಲ್ಲಿ ಹೂಡಿಕೆ ಮಾಡುವಾಗ ಕೊಂಚ ಯೋಚಿಸಿ ನಿರ್ಧಾರ ತಗೊಳ್ಳಿ.

ಕರ್ಕಾಟಕ ರಾಶಿ:

​ಗುರುವು ನಿಮ್ಮ ರಾಶಿಯಲ್ಲೇ ಸಂಚರಿಸುತ್ತಾನೆ ಮತ್ತು ಉಚ್ಛನಾಗಿರುತ್ತಾನೆ. ಅತ್ಯಂತ ಶುಭ ಕಾಲ. ಬುದ್ಧಿಶಕ್ತಿ, ಗೌರವ, ಕೀರ್ತಿ ಹೆಚ್ಚಾಗಲಿದೆ. ಆರೋಗ್ಯ ಸುಧಾರಿಸುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಮೂಡುತ್ತದೆ. ಚಂದ್ರನ ಹೋರೆಯ ಪ್ರಭಾವದಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.

ಸಿಂಹ ರಾಶಿ:

ನಿಮ್ಮ ರಾಶಿಗೆ ಗುರುವು ದ್ವಾದಶದಲ್ಲಿ ಶುಭ ಕಾರ್ಯಗಳಿಗಾಗಿ ವೆಚ್ಚಗಳು ಹೆಚ್ಚಾಗಿಸುವನು. ವಿದೇಶ ಪ್ರಯಾಣದ ಯೋಗವಿದೆ. ರವಿಯ ನವಾಂಶವಿರುವುದರಿಂದ ಆಧ್ಯಾತ್ಮಿಕವಾಗಿ ದೊಡ್ಡ ಪ್ರಗತಿ ಕಾಣುವಿರಿ. ಆದರೆ ಕೋರ್ಟ್ ಕಚೇರಿ ವಿಚಾರಗಳಲ್ಲಿ ಜಾಗರೂಕರಾಗಿರಿ.

ಕನ್ಯಾ ರಾಶಿ:

ಈ ತಿಂಗಳಲ್ಲಿ ರಾಶಿಗೆ ಗುರುವು ಹನ್ನೊಂದನೇ ಮನೆಯಲ್ಲಿದ್ದು, ಲಾಭ ಸ್ಥಾನದಲ್ಲಿ ಗುರುವಿರುವುದರಿಂದ ಆದಾಯದ ಮೂಲಗಳು ಹೆಚ್ಚಾಗಲಿವೆ. ಹಿರಿಯ ಅಧಿಕಾರಿಗಳು ಮತ್ತು ಸ್ನೇಹಿತರಿಂದ ಬೆಂಬಲ ಸಿಗಲಿದೆ. ಬುಧನ ತ್ರಿಂಶಾಂಶದ ಪ್ರಭಾವದಿಂದ ಹಳೆಯ ಬಾಕಿ ವಸೂಲಾಗಲಿದೆ. ಪ್ರೇಮ ಜೀವನದಲ್ಲಿ ಯಶಸ್ಸು ಸಿಗಲಿದೆ.

​ತುಲಾ ರಾಶಿ:

​ಈ ರಾಶಿಗೆ ಗುರುವು ಹತ್ತನೇ ಮನೆಯಲ್ಲಿ ಇರಲಿದ್ದಾನೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ. ಹೊಸ ಜವಾಬ್ದಾರಿಗಳು ಹೆಗಲೇರಬಹುದು. ಆದರೆ ಕೆಲಸದ ಸ್ಥಳದಲ್ಲಿ ಶತ್ರುಗಳ ಕಾಟ ಇರಬಹುದು. ಚಂದ್ರನ ದ್ರೇಕ್ಕಾಣದ ಪ್ರಭಾವದಿಂದ ಕಲಾ ಮತ್ತು ಕ್ರಿಯೇಟಿವ್ ರಂಗದಲ್ಲಿರುವವರಿಗೆ ಒಳ್ಳೆಯ ಯಶಸ್ಸು ಸಿಗುತ್ತದೆ.

ವೃಶ್ಚಿಕ ರಾಶಿ:

ಈ ರಾಶಿಗೆ ಗುರುವು ನವಮ ಸ್ಥಾನದಲದಲಿರುವ ಕಾರಣ ಭಾಗ್ಯೋದಯವಾಗುವ ಸಮಯ. ಅದೃಷ್ಟ ನಿಮ್ಮ ಕೈಹಿಡಿಯಲಿದೆ. ತಂದೆಯ ಆರೋಗ್ಯ ಸುಧಾರಿಸುತ್ತದೆ ಮತ್ತು ಅವರಿಂದ ಲಾಭವಾಗಲಿದೆ. ದೀರ್ಘಾವಧಿ ಪ್ರಯಾಣಗಳು ಯಶಸ್ವಿಯಾಗುತ್ತವೆ. ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗಲಿದೆ.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

​ಧನು ರಾಶಿ:

​ನಿಮ್ಮ ರಾಶಿಗೆ ಗುರುವಿರುವುದು ಎಂಟನೇ ರಾಶಿಯಲ್ಲಿ. ಮಿಶ್ರ ಫಲಗಳು ಕಂಡುಬರುತ್ತವೆ. ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು. ಅನಿರೀಕ್ಷಿತ ಧನಲಾಭ ವಿಮೆ ಅಥವಾ ಪಿತ್ರಾರ್ಜಿತ ಆಸ್ತಿಯಿಂದ ಆಗುವ ಸಂಭವವಿದೆ. ಬುಧನ ನಕಾರಾತ್ಮಕ ತ್ರಿಂಶಾಂಶ ಪ್ರಭಾವದಿಂದಾಗಿ ಸಂಗಾತಿಯೊಂದಿಗೆ ಸಣ್ಣಪುಟ್ಟ ಜಗಳಗಳಾಗಬಹುದು, ತಾಳ್ಮೆ ಇರಲಿ.

ಮಕರ ರಾಶಿ:

​ನಿಮ್ಮ ರಾಶಿಗೆ ಗುರುವು ಏಳನೇ ರಾಶಿಯಲ್ಲಿರುವುದು. ವಿವಾಹ ಆಕಾಂಕ್ಷಿಗಳಿಗೆ ಕಲ್ಯಾಣ ಯೋಗ ಕೂಡಿಬರಲಿದೆ. ಜಂಟಿ ಉದ್ಯೋಗ ಮಾಡುವವರಿಗೆ ಭರಪೂರ ಲಾಭ ಸಿಗಲಿದೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದ್ದು, ಎಲ್ಲ ಕಡೆಯಿಂದ ಪೂರ್ಣ ಸಹಕಾರ ಸಿಗಲಿದೆ.

ಕುಂಭ ರಾಶಿ:

​ನಿಮ್ಮ ರಾಶಿಗೆ ಗುರುವು ಆರನೇ ರಾಶಿಯಲ್ಲಿ ಇದ್ದ ಕಾರಣ ಸಾಲ ಮತ್ತು ರೋಗಗಳಿಂದ ಮುಕ್ತಿ ಸಿಗುವ ಸಮಯ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗುತ್ತದೆ. ಆದರೆ ರವಿ ಮತ್ತು ಬುಧನ ಸೂಕ್ಷ್ಮ ದೃಷ್ಟಿಯಿಂದಾಗಿ ಗುಪ್ತ ಶತ್ರುಗಳ ಭಯವಿರಬಹುದು. ಯಾರನ್ನೂ ಅತಿಯಾಗಿ ನಂಬಬೇಡಿ ಮತ್ತು ಕಾನೂನು ಬಾಹಿರ ಕೆಲಸಗಳಿಂದ ದೂರವಿರಿ.

ಮೀನ ರಾಶಿ:

ನಿಮ್ಮ ರಾಶಿಗೆ ಗುರುವು ಐದನೇ ಮನೆಯಲ್ಲಿರುತ್ತಾನೆ. ಸಂತಾನ ಯೋಗವಿಲ್ಲದವರಿಗೆ ಸಂತಾನ ಪ್ರಾಪ್ತಿಯಾಗಲಿದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಹೆಚ್ಚಿನ ಆಸಕ್ತಿ ಮತ್ತು ಯಶಸ್ಸು ಸಿಗುತ್ತದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಇದು ಸೂಕ್ತ ಸಮಯ. ನಿಮ್ಮ ಕ್ರಿಯೇಟಿವಿಟಿಗೆ ತಕ್ಕ ಮನ್ನಣೆ ಸಿಗಲಿದೆ.

-ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Lohitha Hebbar

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
Follow Us