Kannada News Horoscope daily horoscope based on numerology predictions of June 8 according to number of birth dates as per numerology in kannada
Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜೂನ್ 8ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜೂನ್ 8ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜೂನ್ 8ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಬಳಿ ಇರುವ ಹಣ ಎಷ್ಟಿದೆ, ನಿಮ್ಮ ಗುರಿಗೆ ಎಷ್ಟು ಅಗತ್ಯ ಇದೆ ಎಂಬ ಬಗ್ಗೆ ಸರಿಯಾದ ಲೆಕ್ಕಾಚಾರ ಹಾಕಿಕೊಳ್ಳಿ. ಯಾರಿಗೆ ಮಾತು ನೀಡುತ್ತಿದ್ದೀರಿ, ಪೂರೈಸುವುದಕ್ಕೆ ಸಾಧ್ಯವಾಗುವಂಥ ಭರವಸೆಯಾ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ಪ್ರೀತಿ- ಪ್ರೇಮದ ವಿಚಾರಗಳನ್ನು ಹೇಳಿಕೊಳ್ಳಬೇಕು ಎಂದುಕೊಳ್ಳುತ್ತಾ ಇದ್ದಲ್ಲಿ ನಿಮ್ಮಲ್ಲಿ ಕೆಲವರಿಗೆ ಅದಕ್ಕೆ ಅವಕಾಶ ದೊರೆಯಲಿದೆ. ಆದರೆ ನಿರೀಕ್ಷೆ ದೊಡ್ಡ ಪ್ರಮಾಣದಲ್ಲಿ ಇಟ್ಟುಕೊಳ್ಳಬೇಡಿ. ತಾಯಿ- ತಂದೆಯ ಮಾತುಗಳನ್ನು ಸಮಾಧಾನವಾಗಿ ಕೇಳಿಸಿಕೊಳ್ಳಿ. ಯಾವುದಾದರೂ ಯೋಜನೆಗಳ ವಿಚಾರಗಳಲ್ಲಿ ಮನಸ್ಸಿಗೆ ಸಂದೇಹ ಇದ್ದಲ್ಲಿ ಅದನ್ನು ಕೈಗೆತ್ತಿಕೊಳ್ಳಬೇಡಿ. ಮನಸ್ಸಿಗೆ ವಿರುದ್ಧವಾಗಿ ನಡೆದುಕೊಳ್ಳಬೇಡಿ.
ಅಸಹಾಯಕ ಸ್ಥಿತಿಯಲ್ಲಿ ನಿಮ್ಮ ಹತ್ತಿರದ ಸಂಬಂಧಿಗಳು ಅಥವಾ ಆಪ್ತ ಸ್ನೇಹಿತರು ಸಹಾಯ ಕೇಳಿಕೊಂಡು ಬರಬಹುದು. ಸಾಧ್ಯವೇ ಇಲ್ಲ ಎಂದು ಹೇಳುವ ಮೊದಲು ಆಲೋಚಿಸುವುದು ಉತ್ತಮ. ಇನ್ನು ಬಿಪಿಐ ವಲಯದಲ್ಲಿ ಕಾರ್ಯ ನಿರ್ವಹಿಸುವವರು ಹಾಗೂ ಯಾರು ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ಇದ್ದಾರೋ ಅಂಥವರಿಗೆ ಕೆಲಸ ಬದಲಾವಣೆ ಮಾಡುವ ಬಗ್ಗೆ ಗಂಭೀರವಾದ ಆಲೋಚನೆ ಮೂಡಲಿದೆ. ಆಪ್ತರ ವಿವಾಹ ವಾರ್ಷಿಕೋತ್ಸವವೋ ಅಥವಾ ಜನ್ಮದಿನಕ್ಕಾಗಿ ಉಡುಗೊರೆಯನ್ನು ಕೊಡುವಂಥ ಯೋಗ ಇದೆ. ಸ್ನೇಹ- ಸಂಬಂಧದಲ್ಲಿ ಬಾಂಧವ್ಯ ವೃದ್ಧಿ ಆಗಲಿದೆ.
ಪೌರೋಹಿತ್ಯ, ಜ್ಯೋತಿಷ್ಯ, ಉಪನ್ಯಾಸಗಳಲ್ಲಿ ತೊಡಗಿಕೊಂಡಿರುವವರಿಗೆ ಆತ್ಮಗೌರವಕ್ಕೆ ಚ್ಯುತಿ ಬರುವಂಥ ಸಾಧ್ಯತೆಗಳಿವೆ. ಆದ್ದರಿಂದ ಈ ದಿನದ ಬೆಳವಣಿಗೆಯಿಂದ ಅಧೀರರಾಗಬೇಡಿ. ಹಣಕಾಸಿನ ವಿಚಾರದಲ್ಲಿ ಪ್ರಮುಖ ಬೆಳವಣಿಗೆಗಳು ಆಗಲಿವೆ. ವಿದೇಶ ಪ್ರವಾಸಕ್ಕೆ ತೆರಳಬೇಕು ಎಂದಿರುವವರಿಗೆ ಸಿದ್ಧತೆಗಳು ವೇಗ ಪಡೆದುಕೊಳ್ಳಲಿವೆ. ರಾಜಕಾರಣಿಗಳಿಂದ ಯಾವುದಾದರೂ ಅನುಕೂಲವನ್ನು ನಿರೀಕ್ಷೆ ಮಾಡುತ್ತಿರುವವರಿಗೆ ನಿರಾಸೆ ಆಗುವ ಅವಕಾಶಗಳಿವೆ. ಈ ಮೊದಲು ನೀವು ಬಹಳ ಶ್ರಮಪಟ್ಟು ರೂಢಿಸಿಕೊಂಡಿದ್ದ ಕಾಂಟ್ಯಾಕ್ಟ್ ಗಳು ಈಗ ಪ್ರಯೋಜನಕ್ಕೆ ಬರಲಿವೆ. ನಿಮಗಿಂತ ವಯಸ್ಸಿನಲ್ಲಿ ಚಿಕ್ಕವರ ಜತೆಗೆ ಮಾತುಕತೆ ನಡೆಸುವಾಗ ಪದಗಳ ಬಳಕೆಯಲ್ಲಿ ಎಚ್ಚರವಾಗಿರಿ.
ಶಿಕ್ಷಣ ಸಾಲಕ್ಕಾಗಿ ಪ್ರಯತ್ನ ಮಾಡುತ್ತಿರುವವರಿಗೆ ನಿರಾಶೆ ಆಗಬಹುದು. ಆದ್ದರಿಂದ ಯಾವುದಕ್ಕೂ ಪ್ಲ್ಯಾನ್ ಬಿ ಇಟ್ಟುಕೊಂಡಿರುವುದು ಉತ್ತಮ. ಸಂಬಂಧಿಕರ ಮನೆಯ ಸಮಾರಂಭಗಳಿಗೆ ತೆರಳಿದಾಗ ಆಗುವ ಪರಿಚಯಗಳಿಂದ ಭವಿಷ್ಯದಲ್ಲಿ ಅನುಕೂಲ ಆಗಲಿದೆ. ಕ್ರೆಡಿಟ್ ಕಾರ್ಡ್, ಸಾಲಗಳ ಇಎಂಐ ಡೆಡ್ ಲೈನ್ ಒಳಗೆ ಪಾವತಿ ಮಾಡಿದ್ದೀರಾ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ಇಲ್ಲದಿದ್ದಲ್ಲಿ ಅದಕ್ಕೆ ದಂಡ ಪಾವತಿ ಮಾಡಬೇಕಾದಂಥ ಸನ್ನಿವೇಶ ಎದುರಾಗುತ್ತದೆ. ಪಾರ್ಟನರ್ ಷಿಪ್ ವ್ಯವಹಾರಗಳನ್ನು ಮಾಡುತ್ತಿರುವವರು ವ್ಯವಹಾರ ವಿಸ್ತರಣೆ ಬಗ್ಗೆ ಆಲೋಚಿಸಲಿದ್ದೀರಿ. ಮಹಿಳೆಯರಿಗೆ ರಕ್ತಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಣಿಸಿಕೊಳ್ಳಬಹುದು, ಜಾಗ್ರತೆ.
ನಿಧಾನವಾಗಿ ಆರಂಭವಾಗಿದ್ದ ಕೆಲಸಗಳು ವೇಗ ಪಡೆದುಕೊಳ್ಳಲಿವೆ. ಹಣಕಾಸು ಹೊಂದಿಕೆ ಆಗದೆ ನಿಂತುಹೋಗಿದ್ದ ಕೆಲಸಗಳಿಗೆ ಅಗತ್ಯವಿರುವ ಹಣ ದೊರೆಯುವ ಮಾರ್ಗ ಗೋಚರಿಸಲಿದೆ. ನೀವು ಒಪ್ಪಿಕೊಂಡಿದ್ದ ಕೆಲಸಗಳನ್ನು ಗಡುವಿನೊಳಗೆ ಮುಗಿಸಿಕೊಡುವ ಕಡೆಗೂ ಗಮನ ನೀಡಿ. ಇನ್ನು ಬರಬೇಕಾದ ಹಣ ಇದ್ದಲ್ಲಿ ಗಟ್ಟಿಯಾಗಿ ಪ್ರಯತ್ನಿಸಿ, ಬರುವ ಸಾಧ್ಯತೆ ಇರುತ್ತದೆ ಅಥವಾ ಇಂಥ ಸಮಯದಲ್ಲಿ ಕೊಡುವುದಾಗಿ ಭರವಸೆ ಒಪ್ಪಿಕೊಳ್ಳಲಿದ್ದಾರೆ.
ಈ ಹಿಂದಿನ ನಿಮ್ಮ ಪ್ರಯತ್ನಗಳು ಫಲ ನೀಡುವ ಸೂಚನೆಗಳು ದೊರೆಯಲಿವೆ. ಆತ್ಮೀಯರು ನೀಡುವ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ. ಈ ದಿನ ಯಾರನ್ನಾದರೂ ಭೇಟಿ ಆಗಬೇಕು ಎಂದು ನಿರ್ಧಾರ ಆಗಿದ್ದಲ್ಲಿ ಸಮಯಕ್ಕೆ ಸರಿಯಾಗಿ ಆ ಸ್ಥಳದಲ್ಲಿ ಇರುವಂತೆ ನೋಡಿಕೊಳ್ಳಿ. ಕೆಲಸ ಬದಲಾವಣೆ ಮಾಡುವ ಬಗ್ಗೆ ಆಲೋಚನೆ ಮಾಡುತ್ತಿದ್ದಲ್ಲಿ ಸ್ನೇಹಿತರ ಮೂಲಕವಾಗಿ ರೆಫರೆನ್ಸ್ ಸಿಗುವಂಥ ಅವಕಾಶಗಳಿವೆ. ಇನ್ನು ಈ ದಿನ ನಿಮ್ಮ ಸೋಷಿಯಲ್ ಕಾಂಟ್ಯಾಕ್ಟ್ ಗಳನ್ನು ವಿಸ್ತರಿಸಿಕೊಳ್ಳುವ ಅವಕಾಶಗಳನ್ನು ಬಳಸಿಕೊಳ್ಳಿ.
ಅಚಾನಕ್ ಆಗಿ ಅಥವಾ ದಿಢೀರ್ ಎಂದು ತೀರ್ಮಾನ ಮಾಡಿ ಕೆಲವು ಖರೀದಿಗಳನ್ನು ಮಾಡಲಿದ್ದೀರಿ. ಇಎಂಐ ಸಿಗುತ್ತದೆ ಎಂಬ ಕಾರಣಕ್ಕೆ ಅಗತ್ಯ ಇಲ್ಲದನ್ನೂ ಖರೀದಿ ಮಾಡುವುದಕ್ಕೆ ಹೋಗದಿರಿ. ಇನ್ನು ತಂದೆ ಅಥವಾ ತಂದೆ ಸಮಾನರಾದವರಿಗೆ ಆರೋಗ್ಯ ತಪಾಸಣೆ ಮಾಡಬೇಕಾದಂಥ ಸನ್ನಿವೇಶ ಎದುರಾಗಲಿದೆ. ಭುಜ ಅಥವಾ ಬೆನ್ನಿನ ಸಮಸ್ಯೆ ಇರುವುದಾದಲ್ಲಿ ಅದು ಉಲ್ಬಣ ಆಗುವಂಥ ಸಾಧ್ಯತೆ ಇದೆ. ಆ ಬಗ್ಗೆ ಎಚ್ಚರಿಕೆಯನ್ನು ವಹಿಸಿ.
ವ್ಯಾಪಾರ- ವ್ಯವಹಾರ ಮಾಡುತ್ತಿರುವವರಿಗೆ ಹೊಸ ಹೂಡಿಕೆ ಮಾಡಬೇಕಾದ ಅಗತ್ಯ ಕಂಡುಬರಲಿದೆ. ಕುಟುಂಬ ವಿಚಾರಗಳಲ್ಲಿ ಹೆಚ್ಚು ಸಮಯ ಮೀಸಲಿಡಬೇಕಾದ ಅಗತ್ಯ ಕಂಡುಬರಲಿದೆ. ಹೊಸ ವಾಹನ ಖರೀದಿ ಮಾಡುವುದಕ್ಕೆ ಹಣ ಹೊಂದಿಸುವುದಕ್ಕೆ ಪ್ರಯತ್ನ ಮಾಡಲಿದ್ದೀರಿ. ಈ ದಿನ ಆಂಜನೇಯ ಸ್ವಾಮಿ ದೇವರ ಆರಾಧನೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ಔತಣ ಕೂಟಗಳಿಗೆ ಸಂಬಂಧಿಕರಿಂದ ಆಹ್ವಾನ ಬರಲಿದೆ.
ತುಂಬ ಗಹನವಾದ ವಿಚಾರವೊಂದು ಸಮಸ್ಯೆಯಾಗಿ ಪರಿಣಮಿಸಲಿದೆ. ಕೌಟುಂಬಿಕ ವಿಚಾರದಲ್ಲಿ ಮನಸ್ತಾಪ ಎದುರಾಗಲಿದೆ. ಕಾಲು ನೋವಿನ ಸಮಸ್ಯೆ ಇರುವವರಿಗೆ ಅದು ಉಲ್ಬಣ ಆಗುವ ಸಾಧ್ಯತೆ ಇದೆ. ಅಧ್ಯಾತ್ಮ ಚಿಂತಕರು, ವೇದ ಪಂಡಿತರು, ಪ್ರವಚನಕಾರರಿಗೆ ಬಹಳ ಮುಖ್ಯವಾದ ದಿನ ಇದು. ಏಕೆಂದರೆ ನಿಮ್ಮ ಸಾಮರ್ಥ್ಯವನ್ನು ಗುರುತಿಸಿ ಸನ್ಮಾನ ಮಾಡುವುದಕ್ಕೆ ಸಂಘ- ಸಂಸ್ಥೆಗಳು ನಿರ್ಧಾರ ಮಾಡಲಿವೆ.