Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜೂನ್ 29ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜೂನ್ 29ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜೂನ್ 29ರ ದಿನಭವಿಷ್ಯ
ಸಂಖ್ಯಾಶಾಸ್ತ್ರ
Follow us
| Updated By: ರಮೇಶ್ ಬಿ. ಜವಳಗೇರಾ

Updated on: Jun 28, 2024 | 9:51 PM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜೂನ್ 29ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ನೀವು ನೀಡುವ ಸಲಹೆ- ಎಚ್ಚರಿಕೆಗಳನ್ನು ಕಣ್ಣಿಗೆ ಕಾಣುವಂತೆಯೇ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಕಂಡುಬರಲಿದೆ. ಈ ಕಾರಣಕ್ಕಾಗಿಯೇ ನಿಮಗೆ ಸುಮ್ಮನಿರಬೇಕಿತ್ತು, ಮಾತನಾಡಿ ಯಾಕೆ ಕೆಟ್ಟವರಾಗಬೇಕು ಎಂದು ಈ ದಿನ ಬಹಳ ನಿಮಗೆ ಅನಿಸಲಿದೆ. ಇತರರ ವೈಯಕ್ತಿಕ ವಿಚಾರಗಳಲ್ಲಿ ಅವರದೇ ಆದ ದೃಷ್ಟಿಕೋನ ಇರುತ್ತದೆ. ಅದು ನಿಮ್ಮ ಕಣ್ಣಿಗೆ ಹೇಗೆ ಕಾಣಿಸುತ್ತದೆ ಎಂಬುದು ಮುಖ್ಯವಲ್ಲ ಅನ್ನೋದನ್ನು ಒಪ್ಪಿಕೊಳ್ಳಿ. ಇನ್ನೊಬ್ಬರಿಗಾಗಿ ಖರ್ಚು ಮಾಡಿದ ಕೂಡಲೇ ನಿಮ್ಮ ಎಲ್ಲ ವಿಚಾರವನ್ನು ಮೆಚ್ಚಿಕೊಳ್ಳಲೇಬೇಕು ಅಂತೇನಿಲ್ಲ. ಒಟ್ಟಿನಲ್ಲಿ ಇತರರಿಂದ ಯಾವುದೇ ನಿರೀಕ್ಷೆ ಮಾಡದಿರುವುದು ಒಳ್ಳೆಯದು. ಯಾವುದೇ ಮುಖ್ಯ ವಿಚಾರಕ್ಕೆ ಮನೆಯಿಂದ ಹೊರಡಬೇಕಿದ್ದಲ್ಲಿ ದುರ್ಗಾ ದೇವಿಯನ್ನು ಮನಸ್ಸಿನಲ್ಲಿ ಸ್ಮರಿಸಿ, ಆ ಮೇಲೆ ಮುಂದುವರಿಯಿರಿ. ಅನುಕೂಲ ಆಗಲಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಆಸೆ ದೊಡ್ಡದಾಗಿದ್ದರಷ್ಟೇ ಸಾಲದು. ಅದನ್ನು ಪೂರೈಸಿಕೊಳ್ಳುವುದಕ್ಕೆ ಬೇಕಾದಂಥ ಅಗತ್ಯವಾದ ಹಣಕಾಸಿನ ಹೊಂದಾಣಿಕೆಯನ್ನು ಸರಿಯಾಗಿ ಮಾಡಿಕೊಳ್ಳುವುದು ಬಹಳ ಮುಖ್ಯ. ಈ ದಿನ ಪ್ರಯಾಣ ಹೊರಟಿದ್ದೀರಿ ಅಂತಾದಲ್ಲಿ ಸಿದ್ಧತೆ ಸರಿಯಾಗಿ ಮಾಡಿಕೊಳ್ಳಿ.ಹೊಸ ಬಟ್ಟೆ, ಆಭರಣಗಳನ್ನು ಖರೀದಿಸುವುದಕ್ಕೆ ಹಣ ಮೀಸಲಿಡಬೇಕಾಗುತ್ತದೆ. ಇನ್ನು ಕುಟುಂಬ ಸದಸ್ಯರ ಸಲುವಾಗಿ ಒಂದಿಷ್ಟು ಹೆಚ್ಚಿನ ಖರ್ಚಾಗುವಂಥ ಸಾಧ್ಯತೆಗಳಿವೆ. ಮಾಧ್ಯಮ ಕ್ಷೇತ್ರದಲ್ಲಿ ಇರುವವರಿಗೆ ಹೊಸ ಜವಾಬ್ದಾರಿಯನ್ನು ಹೊರಬೇಕಾಗಬಹುದು. ಈಗ ತಾನೇ ಕೆಲಸಕ್ಕೆ ಸೇರಿದವರಿಗೆ ಕೆಲಸ ತೆಗೆಸಬೇಕಾದ ಹೊಣೆ ನಿಮಗೆ ನೀಡಬಹುದು. ಹೊಸದಾಗಿ ಹೂಡಿಕೆ ಮಾಡುವ ಬಗ್ಗೆ ಕುಟುಂಬ ಸದಸ್ಯರು, ಸ್ನೇಹಿತರ ಜತೆಗೆ ಚರ್ಚೆ ನಡೆಸಲಿದ್ದೀರಿ. ಈ ದಿನ ಮನೆಯಿಂದ ಹೊರಡುವಾಗ ಗಣೇಶನ ಸ್ಮರಣೆಯನ್ನು ಮಾಡಿಕೊಂಡು ಹೊರಡಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಹಣಕಾಸಿನ ಹರಿವು ಉತ್ತಮವಾಗಲಿದೆ ಎಂಬ ಸೂಚನೆ ನಿಮಗೆ ದೊರೆಯಲಿದೆ. ವಿವಾಹ ವಯಸ್ಕರಿಗೆ ಮನಸ್ಸಿಗೆ ಒಪ್ಪುವಂಥ ವ್ಯಕ್ತಿಯ ಪರಿಚಯ ಆಗುವಂಥ ಯೋಗ ಕಂಡುಬರುತ್ತದೆ. ನಿಮ್ಮಲ್ಲಿ ಕೆಲವರು ಚಿನ್ನಾಭರಣಗಳನ್ನು ಖರೀದಿಸುವ ಯೋಗ ಇದೆ. ಇನ್ನು ಫಾರ್ಮ್ ಹೌಸ್ ಖರೀದಿ ಮಾಡುವುದಕ್ಕೆ ಪ್ರಯತ್ನಿಸುತ್ತಿದ್ದಲ್ಲಿ ಇಷ್ಟವಾಗುವಂಥದ್ದು ದೊರೆಯಲಿದೆ. ಖುಷಿಖುಷಿಯಾಗಿ ದಿನವನ್ನು ಕಳೆಯುವುದಕ್ಕೆ ಬೇಕಾದಂಥ ವಾತಾವರಣ ಇರುತ್ತದೆ. ಪುಷ್ಕಳವಾದ- ರುಚಿಕಟ್ಟಾದ ಊಟ, ತಿಂಡಿಗಳನ್ನು ಮಾಡಲಿದ್ದೀರಿ. ನಿಮ್ಮ ಮನಸ್ಸಿಗೆ ಹತ್ತಿರವಾದ ಬಂಧುಗಳೋ ಸ್ನೇಹಿತರೋ ಮನೆಗೆ ಭೇಟಿ ನೀಡಲಿದ್ದಾರೆ. ವಿದೇಶಗಳಲ್ಲಿ ವ್ಯಾಸಂಗ ಮಾಡಬೇಕು ಎಂದು ಪ್ರಯತ್ನ ಮಾಡುತ್ತಿರುವವರಿಗೆ ಹಿರಿಯರ, ಅನುಭವಿಗಳು ನೆರವು- ಮಾರ್ಗದರ್ಶನ ದೊರೆಯಲಿದೆ. ಮನೆಗೆ ಅಗತ್ಯ ಇರುವಂಥ ವಸ್ತುಗಳನ್ನು ಖರೀದಿಸಲಿದ್ದೀರಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ರಾಜಕೀಯದಲ್ಲಿ ಇರುವಂಥವರಿಗೆ ಬಹಳ ಕೆಲಸಗಳು ಮೈ ಮೇಲೆ ಬರಲಿವೆ. ಒತ್ತಡದ ಮಧ್ಯೆಯೂ ಬಹಳ ಉತ್ತಮವಾದಂಥ ಕೆಲಸಗಳನ್ನು ಮಾಡಲಿದ್ದೀರಿ. ನಿಮ್ಮ ಬಗ್ಗೆ ಇತರರಿಗೆ ಗೌರವಾದರ ಹೆಚ್ಚಾಗಲಿದೆ. ಸಂಬಂಧಿಕರಿಗೆ ನಿಮ್ಮ ಸಹಾಯದ ಅಗತ್ಯ ಕಂಡುಬರಲಿದೆ. ಇದೇ ವೇಳೆ ನೀವು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗೀ ಆಗಲಿದ್ದೀರಿ. ಅಶಕ್ತರಿಗೆ ಹಾಗೂ ಆರ್ಥಿಕವಾಗಿ ಸಬಲರಲ್ಲದವರಿಗೆ ಅಗತ್ಯವಿರುವಂಥ ವಸ್ತುಗಳನ್ನು ಉಚಿತವಾಗಿ ನೀಡುವಂಥ ಕಾರ್ಯಕ್ರಮಗಳಲ್ಲಿ ಭಾಗೀ ಆಗುವಂಥ ಯೋಗ ಇದೆ. ಹೊಸ ಮೊಬೈಲ್ ಫೋನ್ ಅಥವಾ ಐಪ್ಯಾಡ್ ಇಂಥದ್ದನ್ನು ಕೊಳ್ಳುವುದಕ್ಕಾಗಿ ಕ್ರೆಡಿಟ್ ಕಾರ್ಡ್ ಬಳಸುವಂಥ ಯೋಗ ಇದೆ. ದೈಹಿಕವಾಗಿ ದಣಿವು ಹಾಗೂ ಆಯಾಸ ಕಾಣಿಸಿಕೊಳ್ಳುವುದರಿಂದ ದಿನದ ದ್ವಿತೀಯಾರ್ಧದಲ್ಲಿ ಆರಾಮವಾಗಿ ಕಳೆಯುವುದಕ್ಕೆ ಆದ್ಯತೆ ನೀಡಲಿದ್ದೀರಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಅತಿಯಾದ ವಿಶ್ವಾಸದಿಂದ ನೀವು ಬೇಸರ ಪಡಬೇಕಾಗುತ್ತದೆ. ಆದ್ದರಿಂದ ನಿಮಗೆ ಇಲ್ಲ ಎನ್ನಲಾರರು ಎಂದುಕೊಂಡು, ನೀವು ಬೇರೆಯವರಿಗೆ ನೀಡಿದ್ದ ಮಾತನ್ನು ಈ ದಿನ ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗದೇ ಹೋಗಬಹುದು. ಇತರರನ್ನು ನೆಚ್ಚಿಕೊಂಡು, ಕೆಲಸ ಮಾಡಿಕೊಡುವುದಾಗಿ ಹೇಳದಿರಿ. ಹೀಗೊಂದು ವೇಳೆ ಮಾಡಿದಲ್ಲಿ ಅವಮಾನದ ಪಾಲಾಗಬೇಕಾಗುತ್ತದೆ. ನಿಮ್ಮಲ್ಲಿ ಕೆಲವರಿಗೆ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುವಂಥ ಸಾಧ್ಯತೆ ಇದೆ. ಯಾರು ಬಾಡಿಗೆ ಮನೆಯ ಹುಡುಕಾಟದಲ್ಲಿ ಇದ್ದೀರಿ ಅಂಥವರಿಗೆ ಮನಸ್ಸಿಗೆ ಒಪ್ಪುವಂಥ ಹಾಗೂ ನೀವು ಅಂದುಕೊಂಡಷ್ಟೇ ಬಾಡಿಗೆಗೆ ದೊರೆಯುವ ಅವಕಾಶಗಳು ಹೆಚ್ಚಿವೆ. ನವ ವಿವಾಹಿತರು ಪ್ರವಾಸಕ್ಕೆ ತೆರಳುವ ಸಾಧ್ಯತೆಗಳಿವೆ. ಒಂದೇ ವಸ್ತುವನ್ನು ಮನೆಯಲ್ಲಿ ಇಬ್ಬರು ತಂದು, ಆ ನಂತರ ಪೇಚಾಡಿಕೊಳ್ಳುವಂತೆ ಆಗುತ್ತದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ತಮಾಷೆಗೆ ಮಾತನಾಡುವುದು ತಪ್ಪಲ್ಲ. ಆದರೆ ಅದರಿಂದ ಎದುರಿನಲ್ಲಿ ಇರುವವರಿಗೆ ಎಂಥ ಅಭಿಪ್ರಾಯ ಮೂಡುತ್ತದೆ ಎಂಬ ಆಲೋಚನೆ ಮಾಡುವುದು ಸಹ ಅಷ್ಟೇ ಮುಖ್ಯವಾಗುತ್ತದೆ. ಆದ್ದರಿಂದ ನೀವೇನಾದರೂ ನಿಮಗಿಂತ ಚಿಕ್ಕ ವಯಸ್ಸಿನವರ ಜತೆಗೆ ಮಾತುಕತೆ ಆಡುವಾಗ ಪದಗಳ ಬಳಕೆ ಮೇಲೆ ಹಿಡಿತ ಇರಲಿ. ದೊಡ್ಡ ಮಟ್ಟದ ಪ್ರಭಾವ ಬೀರಬಲ್ಲಂಥವರು ಹಾಗೂ ಸಾರ್ವಜನಿಕ ಬದುಕಿನಲ್ಲಿ ಇರುವವರಿಗೆ ಮುಜುಗರದ ಸನ್ನಿವೇಶಗಳು ಎದುರಾಗಬಹುದು. ಮುಖ್ಯವಾಗಿ ನೀವು ಧರಿಸುವ ಬಟ್ಟೆ ಹಾಗೂ ವಸ್ತುಗಳ ಗುಣಮಟ್ಟ ಮತ್ತು ಫ್ಯಾಷನ್ ವಿಚಾರದಲ್ಲಿ ಮಾಮೂಲಿಗಿಂತ ಜಾಸ್ತಿ ನಿಗಾ ಇರಲಿ. ಇಲ್ಲದಿದ್ದಲ್ಲಿ ಟ್ರೋಲ್ ಆಗುವಂಥ ಸಾಧ್ಯತೆಗಳಿವೆ. ಸೋಷಿಯಲ್ ಮೀಡಿಯಾದಲ್ಲಿ ನಿಮ್ಮ ಫೋಟೋ ಅಥವಾ ವಿಡಿಯೋ ಅಪ್ ಲೋಡ್ ಮಾಡುವಾಗ ಜಾಗ್ರತೆ ಅಗತ್ಯ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಈ ಹಿಂದೆ ಯಾವಾಗಲೋ ನೀವು ಸಹಾಯ ಮಾಡಿದ್ದಿರಿ, ಅನುಕೂಲ ಮಾಡಿಕೊಟ್ಟಿದ್ದಿರಿ ಎಂಬ ಕಾರಣಕ್ಕೆ ನೀವು ಈ ದಿನ ನೆರವು ಕೇಳಿಕೊಂಡು ಹೋದಲ್ಲಿ ಬಹಳ ಬೇಸರ ಪಟ್ಟುಕೊಳ್ಳುವಂತೆ ಆಗುತ್ತದೆ. ಏನೂ ನಿರೀಕ್ಷೆ ಮಾಡದೆ, ನೀವಾಗಿಯೇ ಯಾರ ಬಳಿಯೂ ಏನನ್ನೂ ಕೇಳದೆ ಇದ್ದಲ್ಲಿ ಈ ದಿನ ನೆಮ್ಮದಿಯಾಗಿ ಇರಲಿಕ್ಕೆ ಸಾಧ್ಯ. ನಿಮಗೆ ನಿಜಕ್ಕೂ ಏನಾದರೂ ಬೇಕೇ ಬೇಕು ಎಂದೆನಿಸಿದಲ್ಲಿ ಶ್ರದ್ಧಾ- ಭಕ್ತಿಯಿಂದ ಮನೆ ದೇವರ ಆರಾಧನೆಯನ್ನು ಮಾಡುವುದರಿಂದ ನೆರವು ಒದಗಿ ಬರಲಿದೆ ಹಾಗೂ ಅದೇ ರೀತಿ ನಿಮ್ಮ ಕೆಲಸಗಳು ತುಂಬ ಸಲೀಸಾಗಿ ಆಗುತ್ತವೆ. ಇತರರು ತಮ್ಮಿಂದ ಆಗಲ್ಲ ಎಂದು ಕೈ ಬಿಟ್ಟ ಕೆಲಸವನ್ನು ನೀವು ಯಶಸ್ವಿಯಾಗಿ ಮಾಡಿ ಮುಗಿಸಲಿದ್ದೀರಿ. ಮನೆಗೆ ಸೋಫಾ, ಛೇರ್ ಇಂಥವುಗಳನ್ನು ಖರೀದಿಸಿ ತರುವಂಥ ಯೋಗ ನಿಮ್ಮ ಪಾಲಿಗಿದೆ. ಇದಕ್ಕಾಗಿ ಸಾಲವನ್ನು ಸಹ ಮಾಡಿಕೊಳ್ಳಲಿದ್ದೀರಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನಿಮ್ಮ ಮನಸ್ಸು ಒಂದು ರೀತಿಯಲ್ಲಿ ನೀರಿನಲ್ಲಿ ತೋಯ್ದ ವಸ್ತುವಿನಂತೆ ಆಗಿರುತ್ತದೆ. ಭಾವನಾತ್ಮಕವಾಗಿಯೂ ತುಸು ಮೆತ್ತಗೆ ಆಗಿರುತ್ತದೆ. ಎಲ್ಲೋ ದೂರದಲ್ಲಿ ಇರುವಂಥ ಸಂಬಂಧಿಕರೋ ಅಥವಾ ಸ್ನೇಹಿತರು ತಮ್ಮ ಪಾಲಿನ ಕೆಲಸವನ್ನು ನೀವು ಮಾಡಿ ಮುಗಿಸುವಂತೆ ಕೇಳಿಕೊಳ್ಳಬಹುದು. ತುಂಬ ಜವಾಬ್ದಾರಿಯದ್ದಾದಲ್ಲಿ ಒಂದಕ್ಕೆ ನಾಲ್ಕು ಬಾರಿ ಆಲೋಚನೆ ಮಾಡಿ, ಆ ನಂತರ ಒಪ್ಪಿಕೊಳ್ಳಿ. ಬೇಡ ಎಂದೆನಿಸಿದರೆ ನಯವಾಗಿ ಅದರಿಂದ ತಪ್ಪಿಸಿಕೊಳ್ಳುವ ಬಗ್ಗೆ ಚಿಂತಿಸಿ. ಏಕೆಂದರೆ ಒಂದು ವೇಳೆ ಅನಿವಾರ್ಯವಾಗಿ ಒಪ್ಪಿಕೊಂಡಲ್ಲಿ ಆ ನಂತರ ಬೇಸರ ಮಾಡಿಕೊಳ್ಳಬೇಕಾಗುತ್ತದೆ. ನಿಮಗೇ ಗೊತ್ತಾಗದಂತೆ ಒಂದೇ ವಿಷಯಕ್ಕೆ ಸೋದರ ಸಂಬಂಧಿಗಳ ಜತೆಗೆ ಸ್ಪರ್ಧೆ ಏರ್ಪಡುವಂಥ ಸಾಧ್ಯತೆ ಇದೆ. ಅಂಥ ಸನ್ನಿವೇಶ ಎದುರಾದಲ್ಲಿ ಇದರಿಂದ ಸಂಬಂಧದಲ್ಲಿ ಸಮಸ್ಯೆ ಆಗದಂತೆ ನೋಡಿಕೊಳ್ಳಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಸಂಬಂಧದಲ್ಲಿ ನೀವು ಅಪೇಕ್ಷೆ ಮಾಡದಂಥ ಕೆಲವು ಬೆಳವಣಿಗೆಗಳು ಆಗಲಿವೆ. ನಿಮಗೆ ಮೇಲುನೋಟಕ್ಕೆ ಕಾಣುವಂತೆ ಸಂಗಾತಿಯಿಂದ ನಿಮ್ಮ ಬಗ್ಗೆ ನಿರೀಕ್ಷೆ ತುಂಬ ಜಾಸ್ತಿ ಆಗುತ್ತದೆ. ಇದರಿಂದ ಒಂದು ಕಡೆ ಬೇಸರವಾದರೆ, ಮತ್ತೊಂದು ಕಡೆಗೆ ಒತ್ತಡವಾಗುತ್ತದೆ. ಅದನ್ನು ಜೋರು ಮಾತಿನ ಮೂಲಕವೋ ಅಥವಾ ಅವರನ್ನು ಮೂದಲಿಸುವ ಮೂಲಕವೋ ತೀರಿಸಿಕೊಳ್ಳುವುದಕ್ಕೆ ಮುಂದಾದರೆ ಮುಂದಿನ ಕೆಲ ದಿನಗಳು ನಿಮ್ಮ ನೆಮ್ಮದಿ ಹಾಳಾಗಬಹುದು. ದೂಳಿನ ಅಲರ್ಜಿ ಇರುವಂಥವರು ಸಾಮಾನ್ಯಕ್ಕಿಂತ ಹೆಚ್ಚಿನ ಎಚ್ಚರಿಕೆಯನ್ನು ತೆಗೆದುಕೊಳ್ಳಿ. ಸಾರ್ವಜನಿಕ ಸಾರಿಗೆಯಲ್ಲಿ ಸಂಚಾರ ಮಾಡುವಂಥವರು ಬೆಲೆಬಾಳುವ ವಸ್ತುಗಳನ್ನು ಜೋಪಾನವಾಗಿ ನೋಡಿಕೊಳ್ಳಿ. ಪರ್ಸ್, ವ್ಯಾಲೆಟ್ ಇಂಥವುಗಳಲ್ಲಿ ಸರ್ಕಾರಿ ದಾಖಲಾತಿಗಳನ್ನು ಇಟ್ಟಿದ್ದಲ್ಲಿ ಎಚ್ಚರಿಕೆಯಿಂದ ನೋಡಿಕೊಳ್ಳಿ.

ಲೇಖನ- ಎನ್‌.ಕೆ.ಸ್ವಾತಿ

ತಾಜಾ ಸುದ್ದಿ
‘ನಿಜ ಜೀವನದಲ್ಲಿ ಆ ರೀತಿ ಪಾತ್ರ ಆಗಬಾರದು’: ದರ್ಶನ್​ ಬಗ್ಗೆ ಹಂಸಲೇಖ ಮಾತು
‘ನಿಜ ಜೀವನದಲ್ಲಿ ಆ ರೀತಿ ಪಾತ್ರ ಆಗಬಾರದು’: ದರ್ಶನ್​ ಬಗ್ಗೆ ಹಂಸಲೇಖ ಮಾತು
‘ದರ್ಶನ್ ನೋಡಿದ್ರೆ ಧರ್ಮಸ್ಥಳ ಮಂಜುನಾಥ ಸ್ವಾಮಿ ನೋಡಿದಂತೆ’: ಅಭಿಮಾನಿ
‘ದರ್ಶನ್ ನೋಡಿದ್ರೆ ಧರ್ಮಸ್ಥಳ ಮಂಜುನಾಥ ಸ್ವಾಮಿ ನೋಡಿದಂತೆ’: ಅಭಿಮಾನಿ
ಬಿಜೆಪಿಯವರು ಇದನ್ನ ಪ್ರೂವ್​ ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್‌
ಬಿಜೆಪಿಯವರು ಇದನ್ನ ಪ್ರೂವ್​ ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್‌
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ
ಆಗಾಗ ಸಿಎಂ ಸಿದ್ದರಾಮಯ್ಯರ ತಲೆ ತಿನ್ನುತ್ತಿರಬೇಕು: ಜಗ್ಗೇಶ್
ಆಗಾಗ ಸಿಎಂ ಸಿದ್ದರಾಮಯ್ಯರ ತಲೆ ತಿನ್ನುತ್ತಿರಬೇಕು: ಜಗ್ಗೇಶ್
ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ
ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ
ಅಶೋಕ್​ ನಮ್ಮ ಪಕ್ಷದ ಆಂತರಿಕದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್​ ಈಶ್ವರ್
ಅಶೋಕ್​ ನಮ್ಮ ಪಕ್ಷದ ಆಂತರಿಕದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್​ ಈಶ್ವರ್
ಬಸ್​ ಪಲ್ಟಿ.. 20ಕ್ಕೂ ಹೆಚ್ಚು ಜನರಿಗೆ ಗಾಯ: ಆಕ್ಸಿಡೆಂಟ್ ಆಗಿದ್ದೇಗೆ?
ಬಸ್​ ಪಲ್ಟಿ.. 20ಕ್ಕೂ ಹೆಚ್ಚು ಜನರಿಗೆ ಗಾಯ: ಆಕ್ಸಿಡೆಂಟ್ ಆಗಿದ್ದೇಗೆ?
ಭೋರ್ಗರೆಯುತ್ತಿದೆ ಚುಂಚನಕಟ್ಟೆ ಜಲಪಾತ, ವೈಭವ ನೋಡಲು ಪ್ರವಾಸಿಗರ ದಂಡು
ಭೋರ್ಗರೆಯುತ್ತಿದೆ ಚುಂಚನಕಟ್ಟೆ ಜಲಪಾತ, ವೈಭವ ನೋಡಲು ಪ್ರವಾಸಿಗರ ದಂಡು