
ವೆಂಕಟೇಶ್ವರ ದೇವಸ್ಥಾನಕ್ಕೆ ತೆರಳಿ, ದರ್ಶನ ಪಡೆದುಕೊಳ್ಳಿ. ಸಾಧ್ಯವಿದ್ದಲ್ಲಿ ಮಾರನೇ ದಿನಕ್ಕೆ ಪಂಚಾಮೃತ ಅಭಿಷೇಕಕ್ಕೆ ಕೊಟ್ಟು ಬನ್ನಿ. ಹೊಸ ಹೊಸ ಪ್ರಾಜೆಕ್ಟ್ ಗಳು ಹುಡುಕಿಕೊಂಡು ಬರಲಿದ್ದು, ಆದಾಯಕ್ಕೆ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ.
ದೂರ ಪ್ರಯಾಣಕ್ಕೆ ಹೊರಡಲು ಎಲ್ಲ ಸಿದ್ಧತೆ ಮಾಡಿಕೊಂಡು, ಕೊನೆ ಕ್ಷಣದಲ್ಲಿ ಅದನ್ನು ರದ್ದು ಮಾಡಬೇಕಾದ ಪರಿಸ್ಥಿತಿ ಉದ್ಭವಿಸಲಿದೆ. ಹೊಸ ಸ್ನೇಹಿತರ ಜತೆಗೆ ಸಲುಗೆ ಬೇಡ. ಪಾರಂಪರಿಕ ವೈದ್ಯ ವೃತ್ತಿ ಮಾಡಿಕೊಂಡು ಬಂದಿರುವವರು ಕೆಲವು ಸಮಯ ಬಿಡುವು ತೆಗೆದುಕೊಳ್ಳುವ ತೀರ್ಮಾನ ಮಾಡುವಂತೆ ಆಗಲಿದೆ. ಇತರರ ತಪ್ಪುಗಳು ಕಂಡುಬಂದಲ್ಲಿ ಸಿಟ್ಟಿನಿಂದ ಕೂಗಾಡುವುದು- ಕಿರುಚಾಡುವುದು ಮಾಡಬೇಡಿ. ಸಾಧ್ಯವಾದಷ್ಟೂ ಸಮಾಧಾನದಿಂದ ತಿಳಿಹೇಳಿ.
ಇಂದು ನಿಮ್ಮಲ್ಲಿ ಮೂಡುವಂಥ ಹೊಸ ಆಶಯಗಳು ಮನಸ್ಸನ್ನು ಉತ್ಸಾಹದಿಂದ ಪ್ರೇರೇಪಿಸುತ್ತವೆ. ಪೊಲೀಸರು ಅಥವಾ ಸೇನೆಯಲ್ಲಿ ಕಾರ್ಯ ನಿರ್ವಹಿಸುವವರಿಗೆ ಇಲ್ಲಿಯ ತನಕ ಸಿಗದೇ ಇದ್ದ ಕೆಲವು ಸವಲತ್ತುಗಳು ದೊರೆಯಲಿವೆ. ಶಾಲಾ ಶಿಕ್ಷಕರು ಮಕ್ಕಳಿಗೆ ಹೊಸ ವಿಧಾನದಲ್ಲಿ ಹೇಳಿಕೊಡುವ ಮೂಲಕ ಕಲಿಕೆ ಸುಗಮಗೊಳಿಸುತ್ತೀರಿ. ಲೇಖಕರು, ಕವಿ, ನಾಟಕ ಕಲಾವಿದರು ಹೊಸ ಸೃಜನಾತ್ಮಕ ಕಾರ್ಯಗಳಿಗೆ ಗುರುಗಳ ಸಮಾನರಾದ ವ್ಯಕ್ತಿಗಳಿಂದ ಪ್ರೇರಣೆ ಪಡೆಯುತ್ತೀರಿ.
ಕ್ರೀಡಾಪಟುಗಳು ಸ್ಪರ್ಧಾ ತಯಾರಿ ತೀವ್ರವಾಗಿ ಮುಂದುವರಿಸುತ್ತೀರಿ. ದಿನಸಿ ಅಂಗಡಿ, ಸಲೂನ್ ಮಾಲೀಕರು ಗ್ರಾಹಕರು ನೀಡುವ ಫೀಡ್ ಬ್ಯಾಕ್ ನಿಂದ ಸೇವಾ ವಿಧಾನದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲಿದ್ದೀರಿ. ಹಣಕಾಸು ವಿಚಾರದಲ್ಲಿ ಯೋಜಿತವಾದ ಖರ್ಚು, ಉಳಿತಾಯವನ್ನು ಮಾಡುವ ಕಡೆಗೆ ಲಕ್ಷ್ಯವನ್ನು ನೀಡಿ. ಕುಟುಂಬ ಸದಸ್ಯರ ಬೆಂಬಲದಿಂದ ನಿಮ್ಮ ಮೇಲಿನ ಒತ್ತಡದಲ್ಲಿ ಬಹಳ ಕಡಿಮೆಯಾಗುತ್ತದೆ.
ಲೇಖನ- ಸ್ವಾತಿ ಎನ್.ಕೆ.