AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ರಾಶಿಯವರಿಗೆ ಇರುವಷ್ಟು ತಾಪತ್ರೆ ಯಾವ ರಾಶಿಗೂ ಇಲ್ಲ: ಅದರೂ ಇದರ ನಡುವೆ ಒಂದು ಯೋಗವಿದೆ

ಮಿಥುನ ರಾಶಿಯವರಿಗೆ ಈ ತಿಂಗಳು ಗ್ರಹಗಳ ಸಂಚಾರದಿಂದ ಮಿಶ್ರ ಫಲಗಳಿವೆ. ಬುಧನ ಚಲನೆ ಮತ್ತು ಶುಭ ಗ್ರಹಗಳ ದೃಷ್ಟಿಯಿಂದ ವೃತ್ತಿ, ಆರ್ಥಿಕ ಮತ್ತು ಸಾಮಾಜಿಕವಾಗಿ ಉತ್ತಮ ಪ್ರಗತಿ ನಿರೀಕ್ಷಿಸಬಹುದು. ಆದರೆ, ಆರೋಗ್ಯ, ಸಂವಹನ ಮತ್ತು ಪ್ರಯಾಣದಲ್ಲಿ ಜಾಗರೂಕತೆ ಅಗತ್ಯ. ಗಣಪತಿ ಪೂಜೆ ಮತ್ತು ಹಸಿರು ಬಟ್ಟೆ ದಾನದಿಂದ ಶುಭಫಲ ಹೆಚ್ಚಿಸಿಕೊಳ್ಳಬಹುದು, ನಿಮ್ಮ ಪ್ರಯತ್ನವೇ ಯಶಸ್ಸಿಗೆ ಮುಖ್ಯ.

ಈ ರಾಶಿಯವರಿಗೆ ಇರುವಷ್ಟು ತಾಪತ್ರೆ ಯಾವ ರಾಶಿಗೂ ಇಲ್ಲ: ಅದರೂ ಇದರ ನಡುವೆ ಒಂದು ಯೋಗವಿದೆ
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on:Apr 21, 2026 | 10:57 PM

Share

ಮಿಥುನ ರಾಶಿಯವರಿಗೆ ಈ ತಿಂಗಳು ಗ್ರಹಗಳ ಸಂಚಾರದಲ್ಲಿ ಆಗುವ ಬದಲಾವಣೆಯಿಂದ ಮಿಶ್ರ ಫಲಗಳಿಂದ ಕೂಡಿದೆ. ಬುಧನ ಚಲನೆ ಮತ್ತು ಗಾಳಿಯ ತತ್ವದ ಈ ರಾಶಿಯವರು ಈ ತಿಂಗಳು ಹೆಚ್ಚು ಜಾಗರೂಕರಾಗಿ ಮತ್ತು ಸೃಜನಶೀಲವಾಗಿ ಇರಬೇಕಾದ ಅನಿವಾರ್ಯತೆ ಇದೆ. ಶುಭ ಗ್ರಹದ ದೃಷ್ಟಿ ಮತ್ತು ಸಂಯೋಗದಿಂದ ಶುಭಾಶುಭ ಫಲಗಳು ನಿಮ್ಮ ಪಾಲಿಗೆ ಇರಲಿದೆ.

ಯಾವ ದಶೆ ಉತ್ತಮ?

ಹತ್ತನೇ ಮನೆಯ ಮೇಲಿರುವ ಶುಭ ಗ್ರಹಗಳ ದೃಷ್ಟಿಯಿಂದಾಗಿ ಉದ್ಯೋಗದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಮನ್ನಣೆ ದೊರೆಯಲಿದೆ. ನೀವು ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ ಬಡ್ತಿ ಅಥವಾ ಹೊಸ ಜವಾಬ್ದಾರಿಗಳು ಈ ತಿಂಗಳು ನಿಮ್ಮ ಕೈಸೇರಬಹುದು.

​ಆರ್ಥಿಕ ಲಾಭ :

ಹನ್ನೊಂದನೇ ಮನೆಯಲ್ಲಿರುವ ಲಾಭಾಧಿಪತಿಯ ಬಲದಿಂದಾಗಿ ಹಳೆಯ ಸಾಲಗಳು ತೀರುವ ಸಾಧ್ಯತೆ ಇದೆ. ಹಠಾತ್ ಧನಲಾಭ ಅಥವಾ ಪೂರ್ವಜರ ಆಸ್ತಿಯಿಂದ ಲಾಭ ಪಡೆಯುವ ಯೋಗವಿದೆ.

​ಸಾಮಾಜಿಕ ಗೌರವ:

ಸಮಾಜದಲ್ಲಿ ನಿಮ್ಮ ವ್ಯಕ್ತಿತ್ವಕ್ಕೆ ಹೆಚ್ಚಿನ ಮನ್ನಣೆ ಸಿಗಲಿದೆ. ಸಾರ್ವಜನಿಕ ರಂಗದಲ್ಲಿ ಗುರುತಿಸಿಕೊಂಡವರಿಗೆ ಇದು ಸುವರ್ಣ ಕಾಲ.

​ಯಾವ ದಶೆ ಅಧಮ?

​ಆರನೇ ಮನೆಯ ಅಧಿಪತಿಯ ಸಂಚಾರದಿಂದಾಗಿ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಡಬಹುದು. ವಿಶೇಷವಾಗಿ ಜೀರ್ಣಕ್ರಿಯೆ ಅಥವಾ ಶ್ವಾಸಕೋಶಕ್ಕೆ ಸಂಬಂಧಿಸಿದ ತೊಂದರೆಗಳ ಬಗ್ಗೆ ಎಚ್ಚರವಿರಲಿ.

​ಸಂವಹನದಲ್ಲಿ ಅಡೆತಡೆ :

ರಾಶ್ಯಾಧಿಪತಿ ಬುಧನು ವಕ್ರಿಯಾಗಿದ್ದಲ್ಲಿ ಅಥವಾ ನೀಚ ಸ್ಥಿತಿಯಲ್ಲಿದ್ದಲ್ಲಿ ಮಾತು ಕೆಡುವ ಸಾಧ್ಯತೆ ಇರುತ್ತದೆ. ಪ್ರೀತಿಪಾತ್ರರ ಜೊತೆ ಅನಗತ್ಯ ವಾಗ್ವಾದಗಳು ಮಾನಸಿಕ ಶಾಂತಿ ಕದಡಬಹುದು.

​ಪ್ರವಾಸದಲ್ಲಿ ಜಾಗ್ರತೆ:

ಈ ತಿಂಗಳು ದೂರದ ಪ್ರಯಾಣ ಮಾಡುವಾಗ ನಿಮ್ಮ ವಸ್ತುಗಳ ಬಗ್ಗೆ ಮತ್ತು ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಉತ್ತಮ.

​ಬುಧವಾರ ಗಣಪತಿಗೆ ಅರಿಶಿನ ಅಥವಾ ಗರಿಕೆ ಸಮರ್ಪಿಸಿ. ​ಹಸಿರು ಬಣ್ಣದ ಬಟ್ಟೆಗಳನ್ನು ಧರಿಸುವುದು ಅಥವಾ ಹಸಿರು ಬೇಳೆಯನ್ನು ದಾನ ಮಾಡುವುದು ಉತ್ತಮ. ಗ್ರಹಗತಿಗಳು ದಾರಿಯನ್ನು ತೋರಿಸುತ್ತವೆ, ಆದರೆ ನಿಮ್ಮ ಪರಿಶ್ರಮ ಮತ್ತು ಸಕಾರಾತ್ಮಕ ಆಲೋಚನೆಗಳು ಮಾತ್ರ ಯಶಸ್ಸನ್ನು ತಂದುಕೊಡುತ್ತವೆ.

– ಲೋಹಿತ ಹೆಬ್ಬಾರ್

Published On - 10:55 pm, Tue, 21 April 26

Follow Us