AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ನಿಮ್ಮದು ವೃಷಭ ರಾಶಿಯಾ? ನೀವು ಎಂಥವರು ಅಂತ ನಿಮಗೆ ಗೊತ್ತಿದೆಯಾ?

ವೃಷಭ ರಾಶಿಯಲ್ಲಿ ಜನಿಸಿದವರು ಸುಂದರವಾದ ಆಕರ್ಷಕ ರೂಪವನ್ನು ಹೊಂದಿರುವರು. ನಿಮ್ಮಲ್ಲಿ ಇರುವುದನ್ನು ತ್ಯಾಗ ಮಾಡುವ ಬುದ್ಧಿಯು ಹೆಚ್ಚಾಗಿ ಇರುವುದು. ಶಾರೀರಿಕ ಹಾಗೂ ಮಾನಸಿಕ ನೋವನ್ನು ಸಹಿಸುವ ಸ್ವಭಾವವನ್ನು ಉಳ್ಳವರಾಗಿದ್ದಾರೆ.

Horoscope: ನಿಮ್ಮದು ವೃಷಭ ರಾಶಿಯಾ? ನೀವು ಎಂಥವರು ಅಂತ ನಿಮಗೆ ಗೊತ್ತಿದೆಯಾ?
ವೃಷಭ ರಾಶಿ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Aug 21, 2023 | 6:02 AM

Share

ಚಂದ್ರನು ವೃಷಭ ರಾಶಿಯಲ್ಲಿ (Taurus) ಇದ್ದಾಗ ಜನಿಸಿದವರದು ವೃಷಭ ರಾಶಿ ಆಗುವುದು. ಈ ರಾಶಿಯಲ್ಲಿ ಜನಿಸಿದವರು ಸುಂದರವಾದ ಆಕರ್ಷಕ ರೂಪವನ್ನು ಹೊಂದಿರುವರು. ವಿಲಾಸೀ ಅಥವಾ ಐಷಾರಾಮೀ ಜೀವನವನ್ನು ಹೆಚ್ಚು ಇಷ್ಟಪಡುವಿರಿ. ಅಗಲವಾದ ಮುಖ ಹಾಗೂ ತೊಡೆಯನ್ನು ಉಳ್ಳವರಾಗಿರುವಿರಿ. ನಿಮ್ಮ ಎಡ ಮತ್ತು ಬಲ ಭಾಗಗಳಲ್ಲಿ ಮಚ್ಚೆಯು ಇರುವುದು.

ನಿಮ್ಮಲ್ಲಿ ಇರುವುದನ್ನು ತ್ಯಾಗ ಮಾಡುವ ಬುದ್ಧಿಯು ಹೆಚ್ಚಾಗಿ ಇರುವುದು. ಶಾರೀರಿಕ ಹಾಗೂ ಮಾನಸಿಕ ನೋವನ್ನು ಸಹಿಸುವ ಸ್ವಭಾವವನ್ನು ಉಳ್ಳವರು. ಕೊಟ್ಟ ಜವಾಬ್ದಾರಿಯನ್ನು ನಡೆಸಿಕೊಂಡು ಹೋಗುವರು ಮತ್ರು ನಾಯಕನ ಗುಣವುಳ್ಳವರು ಆಗುವರು. ವಿಶಾಲವಾದ ವಕ್ಷಸ್ಥಳವು ಇರುವುದು. ಇವರಿಗೆ ಕನ್ಯಾ ಸಂತಾನವು ಅಧಿಕವಾಗಿ ಇರುವುದು. ಕಫ ಪ್ರಕೃತಿಯವರು ನೀವಾಗಿರುವಿರಿ.

ಇದನ್ನೂ ಓದಿ: Nag Panchami 2023: ನಾಗರ ಪಂಚಮಿ ದಿನದಂದು ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳಾವವು? ಇಲ್ಲಿದೆ ನೋಡಿ

ನೀವು ಸಂಬಂಧಗಳಿಂದ, ಸಂಪತ್ತಿನಿಂದ ಹಾಗೂ ಮಕ್ಕಳಿಂದಲೂ ದೂರವಿರಬೇಕಾದ ಸ್ಥಿತಿಯು ಬರುವುದು. ಇವರು ಅದೃಷ್ಟವಂತರು ಹಾಗೂ ಸೌಭಾಗ್ಯವುಳ್ಳವರಾಗಿರುವಿರಿ. ನಿಮ್ಮಲ್ಲಿ ಎಲ್ಲವನ್ನೂ ಸ್ವೀಕರಿಸುವ ಕ್ಷಮಾಗುಣವಿದೆ.

ವೃಷಭ ರಾಶಿಯವರಿಗೆ ಹಸಿವು ಹೆಚ್ಚಿರುವುದು. ಸ್ತ್ರೀಯಾದರೆ ಪುರುಷರಿಗೆ, ಪುರುಷನಾದರೆ ಸ್ತ್ರೀಯರಿಗೆ ಹೆಚ್ಚು ಪ್ರಿಯನಾಗುವನು. ನಿಮ್ಮ ಮಿತ್ರರು ಎಲ್ಲ ಸಂದರ್ಭದಲ್ಲಿಯೂ ನಿಮ್ಮನ್ನು ಬಿಟ್ಟು ಹೋಗಲಾರರು. ಅಂತಹ ಮಿತ್ರರನ್ನು ಸಂಪಾದಿಸಿಕೊಳ್ಳುವಿರಿ. ಜೀವನದ ಮಧ್ಯ ಹಾಗೂ ಅಂತ್ಯಭಾಗದಲ್ಲಿ ನೀವು ಹೆಚ್ಚು ಸಂತೋಷವಾಗಿ ಇರುವಿರಿ.

ತೆಳ್ಳಗಿನ ವೃತ್ತಾಕರದ ಶರೀರವುಳ್ಳವರು, ಇವರ ಮಾತು ಮೃದುವಾಗಿ ಇರುವುದು, ಆಕರ್ಷಕ ಕಣ್ಣುಗಳು ಇವರದಾಗಿರಲಿದೆ. ಚಂದ್ರನು ವೃಷಭ ರಾಶಿಯ ಅಧಿಪತಿಯೇ ಆದ ಕಾರಣ ಚಂದ್ರನಿಂದ ಆಗಬಹುದಾದ ಲಕ್ಷಣಗಳನ್ನು ಹೇಳಬಹುದು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Lohitha Hebbar
Lohitha Hebbar

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
ಹರಿಹರ ಪಂಚಮಸಾಲಿ ಪೀಠ ವಿವಾದ ಬಗ್ಗೆ ಯತ್ನಾಳ್ ಸ್ಫೋಟಕ ಹೇಳಿಕೆ
ಹರಿಹರ ಪಂಚಮಸಾಲಿ ಪೀಠ ವಿವಾದ ಬಗ್ಗೆ ಯತ್ನಾಳ್ ಸ್ಫೋಟಕ ಹೇಳಿಕೆ
ಕಾರು ಗುದ್ದಿದ ರಭಸಕ್ಕೆ ಆಟೋ ಅಪ್ಪಚ್ಚಿ: 10 ಮಂದಿಗೆ ಗಾಯ
ಕಾರು ಗುದ್ದಿದ ರಭಸಕ್ಕೆ ಆಟೋ ಅಪ್ಪಚ್ಚಿ: 10 ಮಂದಿಗೆ ಗಾಯ
ನಮ್ಮ ಮೆಟ್ರೋ ನೀಲಿ ಮಾರ್ಗಕ್ಕೆ  ಸೌರಶಕ್ತಿ ಬಳಕೆಗೆ ಶಿಫಾರಸು: ಲಾಭ ಏನು?
ನಮ್ಮ ಮೆಟ್ರೋ ನೀಲಿ ಮಾರ್ಗಕ್ಕೆ  ಸೌರಶಕ್ತಿ ಬಳಕೆಗೆ ಶಿಫಾರಸು: ಲಾಭ ಏನು?
ರೀಷ್ಮಾ ನಾಣಯ್ಯಗಿಂತ ಒಳ್ಳೆ ಡ್ಯಾನ್ಸರ್ ಇಲ್ಲ ಬಿಡಿ, ವಿಡಿಯೋ ನೋಡಿ
ರೀಷ್ಮಾ ನಾಣಯ್ಯಗಿಂತ ಒಳ್ಳೆ ಡ್ಯಾನ್ಸರ್ ಇಲ್ಲ ಬಿಡಿ, ವಿಡಿಯೋ ನೋಡಿ
1.85 ಕೆಜಿ ಚಿನ್ನ ಬ್ಯಾಗ್​​​​​ನಲ್ಲಿ ತುಂಬಿಕೊಂಡು ಹೋದ ದೃಶ್ಯ ಇಲ್ಲಿದೆ
1.85 ಕೆಜಿ ಚಿನ್ನ ಬ್ಯಾಗ್​​​​​ನಲ್ಲಿ ತುಂಬಿಕೊಂಡು ಹೋದ ದೃಶ್ಯ ಇಲ್ಲಿದೆ
ವಿಶ್ವನಾಥ ವಿರುದ್ಧ ಎಫ್‌ಐಆರ್: ಸಿದ್ದರಾಮಯ್ಯ ಪುತ್ರನ ವಿರುದ್ಧ ಸ್ಫೋಟಕ ಆರೋಪ
ವಿಶ್ವನಾಥ ವಿರುದ್ಧ ಎಫ್‌ಐಆರ್: ಸಿದ್ದರಾಮಯ್ಯ ಪುತ್ರನ ವಿರುದ್ಧ ಸ್ಫೋಟಕ ಆರೋಪ
ರೈಲ್ವೆ ಕ್ರಾಸಿಂಗ್‌ನಲ್ಲಿ ಬಸ್‌ ಹಾಗೂ ಕಾರಿಗೆ ರೈಲು ಡಿಕ್ಕಿ
ರೈಲ್ವೆ ಕ್ರಾಸಿಂಗ್‌ನಲ್ಲಿ ಬಸ್‌ ಹಾಗೂ ಕಾರಿಗೆ ರೈಲು ಡಿಕ್ಕಿ
ಬೀದರ್​ನಲ್ಲಿ ಬಿರುಗಾಳಿ ಮಳೆ ಆರ್ಭಟಕ್ಕೆ ಒಂದು ಎಕರೆ ಪಪ್ಪಾಯಿ ಬೆಳೆ ನಾಶ
ಬೀದರ್​ನಲ್ಲಿ ಬಿರುಗಾಳಿ ಮಳೆ ಆರ್ಭಟಕ್ಕೆ ಒಂದು ಎಕರೆ ಪಪ್ಪಾಯಿ ಬೆಳೆ ನಾಶ
ಬಾದಾಮಿ ಐತಿಹಾಸಿಕ ದೇಗುಲದಲ್ಲಿ ಚಪ್ಪಲಿ ಧರಿಸಿ ಕೂತ ಮುಸ್ಲಿಂ ಯುವತಿ!
ಬಾದಾಮಿ ಐತಿಹಾಸಿಕ ದೇಗುಲದಲ್ಲಿ ಚಪ್ಪಲಿ ಧರಿಸಿ ಕೂತ ಮುಸ್ಲಿಂ ಯುವತಿ!
ಇಟಲಿ ಪ್ರಧಾನಿಗೆ ಮೆಲೋಡಿ ಗಿಫ್ಟ್​ ಕೊಟ್ಟ ಪ್ರಧಾನಿ ಮೋದಿ
ಇಟಲಿ ಪ್ರಧಾನಿಗೆ ಮೆಲೋಡಿ ಗಿಫ್ಟ್​ ಕೊಟ್ಟ ಪ್ರಧಾನಿ ಮೋದಿ