AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ನಿಮ್ಮದು ವೃಷಭ ರಾಶಿಯಾ? ನೀವು ಎಂಥವರು ಅಂತ ನಿಮಗೆ ಗೊತ್ತಿದೆಯಾ?

ವೃಷಭ ರಾಶಿಯಲ್ಲಿ ಜನಿಸಿದವರು ಸುಂದರವಾದ ಆಕರ್ಷಕ ರೂಪವನ್ನು ಹೊಂದಿರುವರು. ನಿಮ್ಮಲ್ಲಿ ಇರುವುದನ್ನು ತ್ಯಾಗ ಮಾಡುವ ಬುದ್ಧಿಯು ಹೆಚ್ಚಾಗಿ ಇರುವುದು. ಶಾರೀರಿಕ ಹಾಗೂ ಮಾನಸಿಕ ನೋವನ್ನು ಸಹಿಸುವ ಸ್ವಭಾವವನ್ನು ಉಳ್ಳವರಾಗಿದ್ದಾರೆ.

Horoscope: ನಿಮ್ಮದು ವೃಷಭ ರಾಶಿಯಾ? ನೀವು ಎಂಥವರು ಅಂತ ನಿಮಗೆ ಗೊತ್ತಿದೆಯಾ?
ವೃಷಭ ರಾಶಿ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Aug 21, 2023 | 6:02 AM

Share

ಚಂದ್ರನು ವೃಷಭ ರಾಶಿಯಲ್ಲಿ (Taurus) ಇದ್ದಾಗ ಜನಿಸಿದವರದು ವೃಷಭ ರಾಶಿ ಆಗುವುದು. ಈ ರಾಶಿಯಲ್ಲಿ ಜನಿಸಿದವರು ಸುಂದರವಾದ ಆಕರ್ಷಕ ರೂಪವನ್ನು ಹೊಂದಿರುವರು. ವಿಲಾಸೀ ಅಥವಾ ಐಷಾರಾಮೀ ಜೀವನವನ್ನು ಹೆಚ್ಚು ಇಷ್ಟಪಡುವಿರಿ. ಅಗಲವಾದ ಮುಖ ಹಾಗೂ ತೊಡೆಯನ್ನು ಉಳ್ಳವರಾಗಿರುವಿರಿ. ನಿಮ್ಮ ಎಡ ಮತ್ತು ಬಲ ಭಾಗಗಳಲ್ಲಿ ಮಚ್ಚೆಯು ಇರುವುದು.

ನಿಮ್ಮಲ್ಲಿ ಇರುವುದನ್ನು ತ್ಯಾಗ ಮಾಡುವ ಬುದ್ಧಿಯು ಹೆಚ್ಚಾಗಿ ಇರುವುದು. ಶಾರೀರಿಕ ಹಾಗೂ ಮಾನಸಿಕ ನೋವನ್ನು ಸಹಿಸುವ ಸ್ವಭಾವವನ್ನು ಉಳ್ಳವರು. ಕೊಟ್ಟ ಜವಾಬ್ದಾರಿಯನ್ನು ನಡೆಸಿಕೊಂಡು ಹೋಗುವರು ಮತ್ರು ನಾಯಕನ ಗುಣವುಳ್ಳವರು ಆಗುವರು. ವಿಶಾಲವಾದ ವಕ್ಷಸ್ಥಳವು ಇರುವುದು. ಇವರಿಗೆ ಕನ್ಯಾ ಸಂತಾನವು ಅಧಿಕವಾಗಿ ಇರುವುದು. ಕಫ ಪ್ರಕೃತಿಯವರು ನೀವಾಗಿರುವಿರಿ.

ಇದನ್ನೂ ಓದಿ: Nag Panchami 2023: ನಾಗರ ಪಂಚಮಿ ದಿನದಂದು ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳಾವವು? ಇಲ್ಲಿದೆ ನೋಡಿ

ನೀವು ಸಂಬಂಧಗಳಿಂದ, ಸಂಪತ್ತಿನಿಂದ ಹಾಗೂ ಮಕ್ಕಳಿಂದಲೂ ದೂರವಿರಬೇಕಾದ ಸ್ಥಿತಿಯು ಬರುವುದು. ಇವರು ಅದೃಷ್ಟವಂತರು ಹಾಗೂ ಸೌಭಾಗ್ಯವುಳ್ಳವರಾಗಿರುವಿರಿ. ನಿಮ್ಮಲ್ಲಿ ಎಲ್ಲವನ್ನೂ ಸ್ವೀಕರಿಸುವ ಕ್ಷಮಾಗುಣವಿದೆ.

ವೃಷಭ ರಾಶಿಯವರಿಗೆ ಹಸಿವು ಹೆಚ್ಚಿರುವುದು. ಸ್ತ್ರೀಯಾದರೆ ಪುರುಷರಿಗೆ, ಪುರುಷನಾದರೆ ಸ್ತ್ರೀಯರಿಗೆ ಹೆಚ್ಚು ಪ್ರಿಯನಾಗುವನು. ನಿಮ್ಮ ಮಿತ್ರರು ಎಲ್ಲ ಸಂದರ್ಭದಲ್ಲಿಯೂ ನಿಮ್ಮನ್ನು ಬಿಟ್ಟು ಹೋಗಲಾರರು. ಅಂತಹ ಮಿತ್ರರನ್ನು ಸಂಪಾದಿಸಿಕೊಳ್ಳುವಿರಿ. ಜೀವನದ ಮಧ್ಯ ಹಾಗೂ ಅಂತ್ಯಭಾಗದಲ್ಲಿ ನೀವು ಹೆಚ್ಚು ಸಂತೋಷವಾಗಿ ಇರುವಿರಿ.

ತೆಳ್ಳಗಿನ ವೃತ್ತಾಕರದ ಶರೀರವುಳ್ಳವರು, ಇವರ ಮಾತು ಮೃದುವಾಗಿ ಇರುವುದು, ಆಕರ್ಷಕ ಕಣ್ಣುಗಳು ಇವರದಾಗಿರಲಿದೆ. ಚಂದ್ರನು ವೃಷಭ ರಾಶಿಯ ಅಧಿಪತಿಯೇ ಆದ ಕಾರಣ ಚಂದ್ರನಿಂದ ಆಗಬಹುದಾದ ಲಕ್ಷಣಗಳನ್ನು ಹೇಳಬಹುದು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ