AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today 08 May: ಈ ರಾಶಿಯವರು ಪರರ ಬಲವನ್ನು ನೋಡಿ, ತಮ್ಮ ಯೋಜನೆಯನ್ನು ಸಿದ್ಧಪಡಿಸುವರು

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸ ಶುಕ್ಲ ಪಕ್ಷದ ಏಕಾದಶೀ ತಿಥಿ, ಗುರುವಾರ ಸ್ಪಷ್ಟ ನಿಲುವು, ಪರರಿಂದ ಒಲವು, ಸ್ಪರ್ಧೆಯಲ್ಲಿ ಗೆಲವು ಇವೆಲ್ಲ ಈ ದಿನಸ ಭವಿಷ್ಯ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

Horoscope Today 08 May: ಈ ರಾಶಿಯವರು ಪರರ ಬಲವನ್ನು ನೋಡಿ, ತಮ್ಮ ಯೋಜನೆಯನ್ನು ಸಿದ್ಧಪಡಿಸುವರು
ಜ್ಯೋತಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ವಿವೇಕ ಬಿರಾದಾರ

Updated on: May 08, 2025 | 1:44 AM

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ವಸಂತ, ಸೌರ ಮಾಸ: ಮೇಷ ಮಾಸ, ಮಹಾನಕ್ಷತ್ರ: ಭರಣೀ, ಮಾಸ: ವೈಶಾಖ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಏಕಾದಶೀ ನಿತ್ಯನಕ್ಷತ್ರ: ಉತ್ತರಾಫಲ್ಗುಣೀ, ಯೋಗ: ವ್ಯಾಘಾತ, ಕರಣ: ಗರಜ, ಸೂರ್ಯೋದಯ – 06 : 08 am, ಸೂರ್ಯಾಸ್ತ – 06 : 50 pm, ಇಂದಿನ ಶುಭಾಶುಭಕಾಲ: ರಾಹು ಕಾಲ 14:04 – 15:40, ಯಮಘಂಡ ಕಾಲ 06:08 – 07:44, ಗುಳಿಕ ಕಾಲ 09:19 – 10:54

ಮೇಷ ರಾಶಿ: ನೀವು ನೀಡಿದ ನೆರವು ನಿಮಗೆ ಸಿಗುವುದು. ಇಂದು ಯಾರಿಗೂ ಹೇಳದ ಮರೆಯಲಾಗದ ಕೆಲವು ಘಟನೆಯಿಂದ ಮಾನಸಿಕ ಹಿಂಸೆಯನ್ನು ಅನುಭವಿಸುವಿರಿ. ಸವಾಲುಗಳು ಬೇಡವೆಂದರೂ ಬರುತ್ತವೆ. ಅನ್ಯರ ವರ್ತನೆಯನ್ನು ಮೂದಲಿಸಿ ಏನೂ ಪ್ರಯೋಜನವಾಗದು. ವೃತ್ತಿ ಜೀವನದಲ್ಲಿ ಹೊಸ ಒತ್ತಡ ಎದುರಿಸಬಹುದು. ಆರ್ಥಿಕ ನಿರ್ವಹಣೆಯಲ್ಲಿ ಸಮರ್ಪಕ ವ್ಯವಸ್ಥೆ ಅಗತ್ಯ. ಹೊಸ ಸಂಬಂಧಗಳನ್ನೊಳಗೊಂಡ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ. ಸ್ನೇಹಿತರ ಬೆಂಬಲದಿಂದ ಸಂಕಷ್ಟ ನಿವಾರಣೆಯಾಗುತ್ತದೆ. ಉದ್ಯೋಗದಲ್ಲಿ ಸ್ಥಿರತೆ‌ಯು ಕಾಣದ ಕಾರಣ ಬದಲಿಸುವಿರಿ. ನಿರಂತರ ಅಸ್ತಿತ್ವದಲ್ಲಿ ಇರುವಂತೆ ನಿಮ್ಮನ್ನು ಇರಿಸಿಕೊಳ್ಳಿ. ಯಾವುದೇ ದಾಖಲೆಗಳಿಲ್ಲದೇ ವ್ಯವಹಾರ ಬೇಡ. ಅನಂತರ ಅದೇ ತಿರುಗು ಬಾಣವಾಗಿ ಚುಚ್ಚುವುದು. ಕುಟುಂಬದವರ ಬಗೆಗಿನ ನಿಂದನೆಯನ್ನು ಸಹಿಸಲಾರಿರಿ. ನಿಮ್ಮ ಆದಾಯಸ ಮೂಲವನ್ನು ಎಲ್ಲರ ಜೊತೆ ಹಂಚಿಕೊಳ್ಳ ಬೇಡಿ.

ವೃಷಭ ರಾಶಿ: ಇನ್ನೊಬ್ಬರನ್ನು ನಿಂದಿಸುವ ಮನೋಭಾವ ಬೇಡ. ಕೂಡಲೇ ನಿಮಗೆ ವಾಪಾಸ್ ಬರಬಹುದು. ಇಂದು ನೀವು ಅಕಾರಣವಾಗಿ ಉದ್ವೇಗ ಒಳಗಾಗುವಿರಿ. ಸಂಪತ್ತು ಬರುವುದು ಮಾತ್ರ ಕಾಣಿಸುತ್ತದೆ. ನೋಡು ನೋಡುತ್ತಿದ್ದಂತೆ ಎಲ್ಲವೂ ಖಾಲಿಯಾಗುವುದು. ಆರ್ಥಿಕ ಸ್ಥಿರತೆ ಹೆಚ್ಚಿಸಲು ಹೊಸ ಮಾರ್ಗಗಳ ಅನ್ವೇಷಣೆ ಅಗತ್ಯ. ವೃತ್ತಿಯಲ್ಲಿ ಹೊಸ ಜವಾಬ್ದಾರಿಗಳು ಬರಬಹುದು. ದೈಹಿಕ ಶ್ರಮಕ್ಕೆ ಮಾನಸಿಕ ಸಮಾಧಾನ ನೀಡುವ ಕೆಲಸದಲ್ಲಿ ತೊಡಗಿರಿ. ಮನಶ್ಶಾಂತಿಗೆ ಮನಸ್ಸನ್ನು ಸಿದ್ಧಗೊಳಿಸಬೇಕು. ಸಂಬಂಧಗಳಲ್ಲಿ ತೆರೆಮರೆಯ ಅನಗತ್ಯ. ಆಗಿಹೋದವರನ್ನು ಪುನಃ ಸ್ಮರಣೆ ಮಾಡಲಾರಿರಿ. ನಿಮ್ಮ ಹಣವನ್ನು ದುಂದುವೆಚ್ಚ ಮಾಡದೇ ಸತ್ಕಾರ್ಯಕ್ಕೆ ಕೊಡಿ. ಮಾತನಾಡುವಾಗ ಎಚ್ಚರವಿರಲಿ. ಅಪವಾದವನ್ನು ಸರಿ ಮಾಡಿಕೊಳ್ಳಲು ಬಹಳ ಪ್ರಯತ್ನಿಸುವಿರಿ. ಚಂಚಲ‌ವಾದ ಮನಸ್ಸಿನಿಂದ ನಿಮ್ಮ ನಿರ್ಧಾರವು ಪೂರ್ಣವಾಗದು. ವ್ಯವಹಾರದಲ್ಲಿ ವಂಚನೆಯಾಗುವುದು ಗೊತ್ತಾಗಿ ಸರಿ ಮಾಡಿಕೊಳ್ಳುವಿರಿ. ವಿಶ್ವಾಸಘಾತದಿಂದ ನಿಮಗೆ ಬೇಸರವಾಗಬಹುದು.

ಮಿಥುನ ರಾಶಿ: ಮಹತ್ತ್ವದ ಕಾರ್ಯಕ್ಕೆ ನೀವು ಆಯ್ಕೆಯಾಗದೇ ಇರುವುದು ನಿಮಗೆ ಸಂಕಟವಾದೀತು. ಇಂದು ಆಹಾರದ ಸಮಯದಲ್ಲಿ ವ್ಯತ್ಯಾಸವಾಗಿ ತೊಂದರೆ ಅನುಭವಿಸುವಿರಿ. ಒಳ್ಳೆಯ ಕಾಲವನ್ನು ಎದುರುನೋಡುತ್ತ ಕುಳಿತಿರುವಿರಿ. ವೃತ್ತಿ ಕ್ಷೇತ್ರದಲ್ಲಿ ಸಾಧನೆಗೆ ಅವಕಾಶಗಳು ಬರುವುದು. ಕೊಟ್ಟಿದ್ದನ್ನು ಹಿಂದಿರುಗಿಸಲು ಕಾಯುವಿರಿ. ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. ಆತ್ಮವಿಶ್ವಾಸದಿಂದ ಕಾರ್ಯ ನಡೆಸಿ. ಸಂಬಂಧಗಳಲ್ಲಿ ಸ್ವಚ್ಚತೆ ಬೇಡಿಕೆಯಾಗಿದೆ. ಶಾಂತ ಮನಃಸ್ಥಿತಿಯಿಂದ ಸಮಸ್ಯೆ ಪರಿಹರಿಸಿ. ಸ್ತ್ರೀಮೂಲದಿಂದ ಧನಸಹಾಯವು ಸಿಗಲಿದೆ.‌ ಅಲ್ಪ ಭೋಜನವನ್ನು ಮಾಡುವ ಸಂದರ್ಭ ಬದಲಿದೆ. ವೃತ್ತಿಯನ್ನು ಬಿಟ್ಟು ಹೆಚ್ಚಿನ ಆದಾಯದ ಕಡೆಗೆ ಗಮನಹರಿಸುವಿರಿ. ಇನ್ನೊಬ್ಬರ ಮೇಲಿನ‌ ಆರೋಪವನ್ನು ಸತ್ಯ ಮಾಡಲು ನೀವು ಸುಳ್ಳು ಹೇಳುವಿರಿ. ನಿಮ್ಮ ಸಮಸ್ಯೆಯು ಗಂಭೀರ ರೂಪವನ್ನು ಪಡೆಯಬಹುದು. ಸಂಗಾತಿಗೆ ಸಮಯವನ್ನು ಕೊಡುತ್ತೇನೆಂದರೂ ಆಗದು. ಇಂದು ನಿಮ್ಮ ಅಗತ್ಯ ಕಾರ್ಯಗಳಿಗೆ ಸಮಯವನ್ನು ಕೊಡುವುದು ಕಷ್ಟವಾದೀತು.

ಕರ್ಕಾಟಕ ರಾಶಿ: ಆರ್ಥಿಕತೆಯನ್ನು ಬಲ ಮಾಡಿಕೊಳ್ಳಲು ಸಂಬಂಧವನ್ನು ದೂರವಿಡಬೇಕಾಗುವುದು. ನಿಮ್ಮ ಆಸೆಗಳು ಕೈಗೂಡುವ ಹಂತದಲ್ಲಿ ಇದ್ದು ಇನ್ನಷ್ಟು ಪ್ರಯತ್ನದಿಂದ ಗುರಿಯನ್ನು ಮುಟ್ಟಬಹುದು. ಅತಿಯಾದ ಪ್ರವಾಸಕ್ಕೆ ಮನಸ್ಸು ಮಾಡುವಿರಿ. ಮನಸ್ಸಿಗೆ ಹಿತವಾದ ಸಂಗತಿಗಳು ನಡೆಯಲಿದೆ. ತರ್ಕಬದ್ಧವಾದ ವಾದಕ್ಕೆ ಪ್ರಶಂಸೆ. ಅನುಭವದಿಂದ ಹೊಸ ಅವಕಾಶಗಳು ಲಭ್ಯ. ಸಂಬಂಧಗಳಲ್ಲಿ ಸಮತೋಲನ ಕಾಯ್ದುಕೊಳ್ಳಿ. ಹಣಕಾಸಿನ ವಿಷಯದಲ್ಲಿ ಹೆಚ್ಚು ವೆಚ್ಚ ತಪ್ಪಿಸಿ. ವೃತ್ತಿ ಜೀವನದಲ್ಲಿ ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಮನೋಬಲ ಉಳಿಸಿಕೊಳ್ಳಿ. ವಿದೇಶ ಪ್ರಯಾಣದ ಸಂದರ್ಭವೂ ಬರಬಹುದು. ಆರೋಗ್ಯ ಉತ್ತಮವಾಗಿರಲಿದೆ. ದುಂದುವೆಚ್ಚದ ಕಡೆ ಗಮನವಿರಲಿ. ಇಷ್ಟವಸದ ಸಂಗತಿಯ ಕಡೆ ತೆರಕಳಿದರೆ ಅಹಿತಕರ ಸಂಗತಿಯನ್ನು ಮರೆಯಬಹುದು. ಅವಿವಾಹಿತರಿಗೆ ವಿವಾಹದಿಂದ ಮನೆಯಲ್ಲಿ ನೆಮ್ಮದಿಯು ಇರುವುದು. ಆಸ್ತಿಯ‌ ಖರೀದಿಗೆ ಬೇಕಾದ ಹಣವನ್ನು ನೀವು ಇನ್ನೊಬ್ಬರಿಂದ ಸಾಲವಾಗಿ ಪಡೆಯುವಿರಿ. ಭೌತಿಕ ವಸ್ತುಗಳು ನಿಮಗೆ ಅಲ್ಪಸಂತೋಷವನ್ನು ಕೊಟ್ಟೀತು.

ಸಿಂಹ ರಾಶಿ: ಮುಟ್ಟಿದ ಕೆಲಸವೆಲ್ಲ ಅರ್ಧಕ್ಕೆ ನಿಂತಿರುವುದರಿಂದ ಬೇಸರ. ನಿಮ್ಮ ವಸ್ತುವೇ ಆಗಿದ್ದರೂ ನೀವು ಅದನ್ನು ಪಡೆಯಲು ಮುಜುಗರ ಮಾಡಿಕೊಳ್ಳುವಿರಿ. ವೃತ್ತಿಯಲ್ಲಿ ಹೊಸ ಜವಾಬ್ದಾರಿಗಳು ಇರಲಿವೆ. ಮೇಲಧಿಕಾರಿಗಳು ನಿಮ್ಮನ್ನು ಪ್ರಶಂಸಿಸುವರು. ಆತ್ಮವಿಶ್ವಾಸ ಕಡಿಮೆಯಾಗುವ ಸಂದರ್ಭ ಎದುರಿಸಬಹುದು. ಹಣಕಾಸಿನ ವಿಚಾರದಲ್ಲಿ ಸಮಾಲೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಿ. ಪ್ರೀತಿಯ ಸಂಬಂಧಗಳಲ್ಲಿ ಚರ್ಚೆಯಿಂದ ಸಮಸ್ಯೆ ನಿವಾರಣೆ. ಸಂಗಾತಿಯಿಂದ ಪೂರ್ಣ ತೃಪ್ತಿ ಸಿಗದು. ಹಳೆಯ ಸಂಬಂಧಗಳಲ್ಲಿ ಸಮನ್ವಯ ಅಗತ್ಯವಿದೆ. ಅಪರಿಚಿತರು ನಿಮ್ಮ ಹಾದಿ ತಪ್ಪಿಸಬಹುದು. ಪಾಲುದಾರಿಕೆಯಲ್ಲಿ ಅಸಹಜ ಮಾತುಕತೆಗಳು ಬರಬಹುದು. ಆರ್ಥಿಕ ವಿಚಾರಕ್ಮೆ ದಾಂಪತ್ಯದಲ್ಲಿ ಮನಸ್ತಾಪ‌ಬರಬಹುದು. ಸಂಪೂರ್ಣವಾದ ಮನಸ್ಸಿನಿಂದ ಕಾರ್ಯವನ್ನು ಮಾಡಲಾಗದು‌. ಪ್ರಸಿದ್ಧ ಸಂಸ್ಥೆಯ ಉನ್ನತ ಅಧಿಕಾರದ ಪ್ರಾಪ್ತಿಯ ಅವಕಾಶವು ಬರಬಹುದು. ಲಾಭವಿಲ್ಲದ ಕಾರ್ಯದಲ್ಲಿ ಆಸಕ್ತಿಯು ಇರದು. ಕೆಲವು ವಿಚಾರದಲ್ಲಿ ನಿಮ್ಮ ಊಹೆಯು ತಪ್ಪಾಗುವುದು.

ಕನ್ಯಾ ರಾಶಿ: ಅಪರಿಚಿತರಿಗೆ ನಿಮ್ಮಿಂದ ಉಪಕಾರವಾಗಲಿದೆ. ಒತ್ತಡಗಳಿಂದ ದೂರವಾಗಲು ಕಷ್ಡವಾಗುವುದು. ಇಂದು ನಿಮ್ಮವರ ಬಗ್ಗೆ ಅನುಮಾನ ಕಾಡಬಹುದು. ಪರೀಕ್ಷಿಸದೇ ಯಾವ ತೀರ್ಮಾನಕ್ಕೂ ಬರುವುದು ಬೇಡ. ಉದ್ವೇಗಕ್ಕೆ ಒಳಗಾಗಲು ಅನೇಕ ಸಂದರ್ಭಗಳು ಬರಬಹುದು. ವೃತ್ತಿಯಲ್ಲಿ ಜಾಗರೂಕತೆಯಿಂದ ನಿರ್ಧಾರ ತೆಗೆದುಕೊಳ್ಳಿ. ಹಣಕಾಸಿನ ವಿಚಾರದಲ್ಲಿ ದುಡುಕಿನಿಂದ ಮುನ್ನಡೆ ಬೇಡ. ಮನೆಗೆ ಬಂದ ಅತಿಥಿಗಳಿಂದ ಭವಿಷ್ಯಕ್ಕೆ ಸಹಾಯ ಸಿಗುವುದು. ಪ್ರೀತಿಪಾತ್ರರೊಂದಿಗೆ ಮನಸ್ತಾಪ ಪರಿಹರಿಸಿ. ಆತ್ಮವಿಶ್ವಾಸದಿಂದ ಯಶಸ್ಸು ಸಾಧಿಸಲು ಯತ್ನಿಸಿ. ಯಾವುದೇ ಅಹಿತಕರ ಭಾವವನ್ನು ತೋರಿಸಬೇಡಿ. ಇನ್ನೊಬ್ಬರ ಸಮಸ್ಯೆಯನ್ನು ಪರಿಹರಿಸಲು ಹೋಗಿ ನೀವೇ ಸಿಕ್ಕಿಕೊಳ್ಳಬೇಕಾಗುವುದು. ಬೇಕಾದಷ್ಟು ಅನುಕೂಲತೆಗಳಿದ್ದರೂ ಬೇಕೆಂಬ ಆಸೆಯು ನಿಮ್ಮನ್ನು ಬಿಡದು. ಸಂಗಾರಿಯ ಮೇಲಿನ ಪ್ರೀತಿಯು ಕಡಿಮೆಯಾದಂತೆ ತೋರುವುದು. ಕೆಲವರಿಗೆ ಸೌಕರ್ಯಗಳು ಕಡಿಮೆಯಾದಂತೆ ಅನ್ನಿಸುವುದು.

ತುಲಾ ರಾಶಿ: ಭೂಸ್ವಾಧೀನವನ್ನು ಅರಗಿಸಿಕೊಳ್ಳಲಾಗದು. ಗೌರವ ಸಿಗಲೆಂದೇ ಇಂದು ಕಾರ್ಯವನ್ನು ಮಾಡುವಿರಿ. ಅವಿವಾಹಿತರಿಗೆ ವಿವಾಹವಾಗುವ ಸೂಚನೆಯು ಗೊತ್ತಾಗಬಹುದು. ಬಂಧುಗಳ ಭೇಟಿಯಾಗಲಿದ್ದೀರಿ. ಸಂವಾದಿ ಕಡೆಯವರಿಂದ ಮಾನಸಿಕ ಕಿರಿಕಿರಿ ಹೆಚ್ಚಾಗಲಿದೆ. ಇಂದು ನಿಮ್ಮ ‌ಮುಂದಿನ ಕಾರ್ಯಕ್ಕೆ ಅನುಕೂಲಕರವಾಗಿರಲಿದೆ. ಸರ್ಜನಾತ್ಮಕ ಕಾರ್ಯಗಳಲ್ಲಿ ಯಶಸ್ಸು ಸಾಧಿಸುವಿರಿ. ವೃತ್ತಿ ಜೀವನದಲ್ಲಿ ಅಡಚಣೆಗಳು ಪರಿಹಾರವಾಗುತ್ತವೆ. ಸಂಬಂಧಗಳಲ್ಲಿ ಸಹಕಾರ ಮತ್ತು ಮನವಿ ಮುಖ್ಯ. ಆರ್ಥಿಕ ಪರಿಸ್ಥಿತಿ ಸ್ಥಿರವಾಗಿರುತ್ತದೆ. ವ್ಯಕ್ತಿ ಅವನ ಯೋಗ್ಯತೆಗೆ ಅನುಸಾರವಾಗಿ ಅಭಿವೃದ್ಧಿಯನ್ನು ಹೊಂದುವನು. ಕಛೇರಿಯಲ್ಲಿ ನಿಮ್ಮ ವರ್ತನೆಯ ಬಗ್ಗೆ ಸಂದೇಹ ಬರಬಹುದು. ನಿಮ್ಮ ಮೇಲೆ ಯಾರಾದರೂ ಕಣ್ಣಿಟ್ಟಾರು. ಬಾಂಧವರ ನಡುವೆ ಕಾರ್ಯದಲ್ಲಿ ಜಯವಿದ್ದರೂ ಆರ್ಥಿಕ ನಷ್ಟವು ಆಗಬಹುದು. ಹಿತಶತ್ರುಗಳ ಕಾರಣದಿಂದ ಇಂದಿನ ವ್ಯವಹಾರವು ಹಿಂದೆ ಸಾಗಲಿದೆ. ನಿಮ್ಮ ವರ್ತನೆಗಳು ಯಾರ ಮೇಲಾದರೂ ಪ್ರಭಾವ ಬೀರಬಹುದು. ಮೇಲಧಿಕಾರಿಗಳ ಜೊತೆ ಸಭ್ಯತೆಯಿಂದ ವರ್ತಿಸಿ.

ವೃಶ್ಚಿಕ ರಾಶಿ: ನಿಮ್ಮ ಏಕಾಗ್ರತೆಗೆ ಜೊತೆಗಾರರು ಭಂಗ ತರಬಹುದು. ಇಂದು ನೀವು ಬಹಳ ನಿಧಾನವಾಗಲಿದೆ. ನಿಮ್ಮ‌ಮೇಲೆ ಅಪವಾದವನ್ನು ತರಲಿದ್ದಾರೆ. ನಿಃಸ್ವಾರ್ಥವಾಗಿ ಇಚಮಷ್ಟಪಡುವವರನ್ನು ಸಂಶಯಿಸಬೇಡಿ.‌ ನಿಮ್ಮ ಜೊತೆಗಿರುವವರು ಯಾರು ಯಾವ ರೀತಿಯವರು ಎಂಬುದು ಗೊತ್ತಾಗುತ್ತದೆ. ಸಹನೆ ಮೀರದಂತೆ ನೀವೇ ನೋಡಿಕೊಳ್ಳಬೇಕು. ವ್ಯಾಪಾರದಲ್ಲಿ ಲಾಭದಾಯಕ ಹೊಣೆಗಾರಿಕೆ ಬರುತ್ತದೆ. ಸ್ನೇಹಿತರಿಂದ ಉತ್ತಮ ಸಹಕಾರ ಲಭ್ಯ. ತೀವ್ರ ಪರಿಶ್ರಮದಿಂದ ನಿರೀಕ್ಷಿತ ಫಲ ಪಡೆಯುವಿರಿ. ಹಣಕಾಸಿನ ವಿಷಯಗಳಲ್ಲಿ ಜಾಗೃತವಾಗಿರಿ. ಆರೋಗ್ಯಕ್ಕೆ ಸಂಬಂಧಿಸಿದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಅನಿರೀಕ್ಷಿತ ಗೆಲುವಿನಿಂದ ಖುಷಿ ಸಿಗುವುದು. ಇಂದು ನಿಮ್ಮ ಪ್ರೀತಿಪಾತ್ರರ ಭೇಟಿಯಾಗಲಿದೆ. ಶುಭ ಕಾರ್ಯದಲ್ಲಿ ನಿಮಗೆ ಹೆಚ್ಚು ಆಸಕ್ತಿಯು ಇರಲಿದೆ. ಮಕ್ಕಳ ನಿರೀಕ್ಷೆಯಲ್ಲಿ ಇರುವವರಿಗೆ ಶುಭಸುದ್ದಿಯು ಸಿಗಬಹುದು. ಆಸ್ತಿಯ ಮಾರಾಟದಿಂದ ನಿಮಗೆ ಹೆಚ್ಚಿನ ಲಾಭವು ಸಿಗಲಿದೆ. ಸಾರ್ವಜನಿಕ ಕ್ಷೇತ್ರದಲ್ಲಿ ನಿಮ್ಮ ಅಸ್ತಿತ್ವವು ಹೆಚ್ಚಾಗಿ ತೋರುವುಸು.

ಧನು ರಾಶಿ: ದಾಂಪತ್ಯಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಸರಿಯಾಗಿ ತೆಗೆದುಕೊಳ್ಳಲು ಸೋಲುವಿರಿ. ಇನ್ನೊಬ್ಬರ ನಡತೆ ಇಷ್ಟವಾಗದೇ ಇದ್ದರೆ ಅದನ್ನು ಹೇಳುವ ಕ್ರಮದಲ್ಲಿ ಹೇಳಿ. ಇಲ್ಲವಾದರೆ ಕಲಹವಾಗುವುದು. ವಿದೇಶಿ ವಸ್ತುಗಳ ವ್ಯವಹಾರ ಮಾಡುವವರಿಗೆ ಸ್ವಲ್ಪ ಹಿನ್ನಡೆ ಆಗಬಹುದು. ವಿವೇಕದಿಂದ ಸಂಕಷ್ಟಗಳನ್ನು ಪರಿಹರಿಸುವಿರಿ. ಆರ್ಥಿಕ ವ್ಯವಹಾರವನ್ನು ಅರ್ಥಮಾಡಿಕೊಂಡು ನಡೆಸಲಾಗದು. ಉದ್ಯೋಗದಲ್ಲಿ ಅಲ್ಪ ಸಮಸ್ಯೆ ಎದುರಾಗಬಹುದು, ಧೈರ್ಯದಿಂದ ಮುನ್ನಡೆಯಿರಿ. ಹಣಕಾಸಿನ ನಿರ್ವಹಣೆಯಲ್ಲಿ ಎಚ್ಚರಿಕೆಯಿಂದಿರಬೇಕು. ಕುಟುಂಬದವರು ಬೆಂಬಲ ನೀಡುತ್ತಾರೆ. ಸಂಗಾತಿಯೇ ನಿಮ್ಮ ಕೆಲಸಗಳಿಗೆ ಮುನ್ನುಗ್ಗಿ ಸಹಾಯ ಮಾಡುವರು. ಸರ್ಕಾರಿ ಕಚೇರಿಯ ಕೆಲಸಗಳಲ್ಲಿ ಸ್ವಲ್ಪ ಚುರುಕುತನ ಕಾಣಬಹುದು. ಧಾರ್ಮಿಕ ಕೆಲಸವನ್ನು ಮಾಡುವವರಿಗೆ ಸಮಾಜದಿಂದ ಸಾಕಷ್ಟು ಸಹಾಯ ದೊರೆಯುತ್ತದೆ. ಯಾರದ್ದಾದರೂ ಮನವೊಲಿಸುವ ಕೆಲಸವು ನಿಮಗೆ ಬರಬಹುದು. ಇದರಿಂದ‌ ನಿಮ್ಮ ಅಳಿದುಳಿದ ಶತ್ರುಗಳು ನಾಶವಾಗುವರು. ಸಾಲವನ್ನು ಸ್ವಲ್ಪವೂ ಉಳಿಯದಂತೆ ಮುಗಿಸಿ. ನಿಮ್ಮದೇ ಶ್ರಮದಿಂದ ಭೂಲಾಭವನ್ನು ಮಾಡಿಕೊಂಡರೂ ನಿಮಗೆ ಸಲ್ಲದ ಮಾತುಗಳನ್ನು ಕೇಳಬೇಕಾದೀತು.

ಮಕರ ರಾಶಿ: ಒಮ್ಮೆಲೆ ಬರುವ ಹೊಣೆಗಾರಿಕೆಯನ್ನು ನಿರ್ವಹಿಸಲು ಸೋಲಬಹುದು. ನಿಮ್ಮನ್ನು ವಿರೋಧಿಸುವವರು ನಿಮ್ಮ ಬಗ್ಗೆ ಬೇಡದ ಸಂಗತಿಗಳನ್ನು ಹರಿದುಬಿಡುವರು. ಸಂಗಾತಿಯೊಂದಿಗೆ ಸ್ನೇಹದಿಂದ ವರ್ತಿಸಿ. ಇಲ್ಲವಾದರೆ ಭಿನ್ನಾಭಿಪ್ರಾಯಗಳು ಸವಕಾಶ ಸಿಗುತ್ತದೆ. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಶ್ರಮ ಫಲ ನೀಡಲಿದೆ. ಅನಾರೋಗ್ಯದಿಂದ ಮಾಡುವ ಕಾರ್ಯ ಅರ್ಧಕ್ಕೆ ಸ್ಥಗಿತ. ಸಹೋದ್ಯೋಗಿಗಳ ಸಹಕಾರ ದೊರೆಯಬಹುದು. ಹಣಕಾಸಿನ ವ್ಯವಹಾರಗಳಲ್ಲಿ ಸಂಯಮ ಇರಲಿ. ಬಹುಜನರ ಅಭಿಪ್ರಾಯವನ್ನು ಹೆಚ್ಚಿಗೆ ಗೌರವಿಸುವುದು ಒಳ್ಳೆಯದು. ಮಾತಿನಲ್ಲಿ ಹೆಚ್ಚಿನ ಎಚ್ಚರವಿರಲಿ, ಯಾರ ವಿರುದ್ಧವೂ ಕುಹುಕ ಮಾಡುವುದು ಬೇಡ. ವಿವಾಹದ ಬಗ್ಗೆ ಬೇಸರವುಂಟಾಗುವುದು. ಹಣದ ಹರಿವು‌ ಕಡಿಮೆ ಇರುವುದರಿಂದ ಖರ್ಚನ್ನು ಸರಿಯಾಗಿ ನಿಭಾಯಿಸುವುದು ಒಳ್ಳೆಯದು. ಸಾಲದಿಂದ ಬಿಡುಗಡೆ ಹೊಂದಲು ಆದಾಯದ ಮೂಲವನ್ನು ಹೆಚ್ಚಿಸಿಕೊಳ್ಳುವಿರಿ. ಸ್ಥಿರಾಸ್ತಿಯ ಸಂಪಾದನೆಗೆ ಆಪ್ತರ ಮಾರ್ಗದರ್ಶನವನ್ನು ಪಡೆದುಕೊಳ್ಳುವುದು ಉತ್ತಮ. ಕೊಡುಕೊಳ್ಳುವ ವ್ಯವಹಾರದಲ್ಲಿ ದಾಖಲೆಗಳು ಸರಿಯಾಗಿರಲಿ.

ಕುಂಭ ರಾಶಿ: ಕಠಿಣ ಸವಾಲನ್ನು ಜಯಿಸುವ ನಿಮ್ಮ ನಿರ್ಧಾರಕ್ಕೆ ಮೆಚ್ಚುಗೆ ಸಿಗಲಿದೆ. ವಿದ್ಯಾರ್ಥಿಗಳಿಗೆ ಎಲ್ಲರಿಂದ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತದೆ. ವ್ಯವಹಾರಗಳ ಬಗ್ಗೆ ಪಾಲುದಾರರ ಜೊತೆ ತಕ್ಷಣದಲ್ಲಿ ಮಾತನಾಡಬೇಕಾದ ಹಾಗೂ ತೀರ್ಮಾನ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಸಹೋದ್ಯೋಗಿಗಳ ಬೆಂಬಲ ನಿಮ್ಮ ಮನೋಬಲ ಹೆಚ್ಚಿಸುತ್ತದೆ. ಆರ್ಥಿಕ ವಿಷಯಗಳಲ್ಲಿ ವ್ಯರ್ಥ ವೆಚ್ಚ ತಪ್ಪಿಸಿ. ಆರೋಗ್ಯದತ್ತ ಗಮನ ಹರಿಸುವುದು ಸೂಕ್ತ. ಸಂಬಂಧಗಳಲ್ಲಿ ಸಮಾಲೋಚನೆ ಮಾಡಿ ನಿರ್ಧಾರ ಕೈಗೊಳ್ಳಿ. ಹೊಸ ಆಲೋಚನೆಗಳನ್ನು ಅನುಷ್ಠಾನಗೊಳಿಸುವ ಮೊದಲು ಚೆನ್ನಾಗಿ ಪರಿಶೀಲಿಸಿ. ಗೃಹ ನಿರ್ಮಾಣದ ಕೆಲಸದಲ್ಲಿ ಅತಿ ಆತುರ ಬೇಡ. ಆರೋಪ ಪ್ರತ್ಯಾರೋಪವೇ ಹೆಚ್ಚಾಗಿತ್ತದೆ. ಮನಸ್ಸಿಗೆ ನಿಮ್ಮವರು ಆಡಿದ ಮಾತುಗಳು ಹಿಂಸೆಯನ್ನು ಕೊಡಬಹುದು. ಇಂದಿನ ವ್ಯರ್ಥ ಓಡಾಟದಿಂದ ನಿಮಗೆ ಆಯಾಸವಾಗುವುದು. ಇಷ್ಟರೊಳಗೆ ಆಗಬೇಕಾದ ಸರ್ಕಾರಿ ಕೆಲಸವು ಮತ್ತೂ ಮುಂದಕ್ಕೆ ಹೋಗುವುದು. ಯಂತ್ರಗಳಿಂದ ದೇಹಕ್ಕೆ ಆಕಸ್ಮಿಕವಾಗಿ ತೊಂದರೆ ಆಗಬಹುದು.

ಮೀನ ರಾಶಿ:  ಇಂದು ಕರ್ತವ್ಯದ ಲೋಪದಕ್ಮೆ ತಕ್ಕ ಶಿಕ್ಷೆಯನ್ನು ಅನುಭವಿಸಬೇಕಾಗುವುದು. ಇಂದು ಕೆಲವು ವಿಷಯಗಳಲ್ಲಿ ಕಠಿಣ ನಿರ್ಧಾರ ಬೇಕಾಗುತ್ತದೆ. ನೀವು ಅಪೇಕ್ಷಿಸಿದ್ದ ಯಾತ್ರೆಗೆ ಸಿದ್ಧತೆ ಮಾಡಿಕೊಳ್ಳುವಿರಿ. ವೃತ್ತಿರಂಗದಲ್ಲಿ ನಿಮ್ಮ ಸ್ಥಾನವು ಹೆಚ್ಚಾಗುವುದಿಲ್ಲ. ಆತ್ಮವಿಶ್ವಾಸ ಮತ್ತು ದೃಢ ನಿರ್ಧಾರಗಳಿಂದ ಯಶಸ್ಸು. ಹೊಸ ಕಾರ್ಯಗಳ ಯೋಜನೆ ಸಕಾರಾತ್ಮಕ ಫಲ ನೀಡುವುದು. ಕುಟುಂಬದಲ್ಲಿ ಸಂಧಾನ ಮತ್ತು ಸಮರ್ಪಣೆ ಮುಖ್ಯ. ಹಣಕಾಸಿನ ವಿಷಯದಲ್ಲಿ ಜಾಗ್ರತೆ ಅಗತ್ಯ. ಪ್ರೀತಿಯ ಸಂಬಂಧಗಳಲ್ಲಿ ನಿಷ್ಠೆ ಮತ್ತು ನಿಷ್ಠುರತೆಯ ಮಧ್ಯೆ ಸಮತೋಲನ ಕಾಯ್ದುಕೊಳ್ಳಿ. ಎಲ್ಲದಕ್ಕೂ ನಿಮ್ಮನ್ನು ಕೇಳಬೇಕು ಎನ್ನುವುದು ಅಸಾಧ್ಯವಾದುದು. ಸ್ಥಿರಾಸ್ತಿ ವಿಚಾರಗಳನ್ನು ತೀರ್ಮಾನ ಮಾಡಲು ಹೋದ ನಮಗೆ ನಮ್ಮ ಗೋಜಲುಗಳನ್ನು ಕಂಡು ಗಾಬರಿಯಾಗುವುದು ಬೇಡ. ಇಂದಿನ ಕಾರ್ಯಗಳಲ್ಲಿ ಪ್ರಗತಿ ಇರಲಿದ್ದು ಸಂತೋಷವಾಗುವುದು. ಉದ್ಯೋಗದಲ್ಲಿ ಭಡ್ತಿಗಾಗಿ ಪ್ರಯತ್ನಿಸುವಿರಿ. ಬೆರೆಯುವುದು ಕಷ್ಟವಾದೀತು. ಗೊಂದಲದಿಂದ ಇರುವ ಮನಸ್ಸು ಇಂದು ಪ್ರಶಾಂತವಾಗಲಿದೆ.

-ಲೋಹಿತ ಹೆಬ್ಬಾರ್ – 8762924271 (what’s app only)