Horoscope Today 18 July : ಇಂದು ಈ ರಾಶಿಯವರು ಸಂಗಾತಿಯ ಸಂತೋಷಕ್ಕಾಗಿ ಏನನ್ನಾದರೂ ಮಾಡುವರು

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಗ್ರೀಷ್ಮ ಋತುವಿನ ಆಷಾಢ ಮಾಸ ಕೃಷ್ಣ ಪಕ್ಷದ ಅಷ್ಟಮೀ ತಿಥಿ ಶುಕ್ರವಾರ ಮಾತಿನ ಮೇಲೆ ಹಿಡಿತ, ವ್ಯವಹಾರದಿಂದ ಬಿಡುಗಡೆ, ವೃತ್ತಿಯಿಂದ ನಿವೃತ್ತಿ, ಒತ್ತಡ ನಿವಾರಣೆಗೆ ಸಮಾನಮನಸ್ಕರ ಸಹವಾಸ, ಕೂಡಿಟ್ಟ ಹಣದ ಹಿಂಪಡೆಯುವಿಕೆ ಇವೆಲ್ಲ ಇಂದಿನ ಭವಿಷ್ಯ

Horoscope Today 18 July : ಇಂದು ಈ ರಾಶಿಯವರು ಸಂಗಾತಿಯ ಸಂತೋಷಕ್ಕಾಗಿ ಏನನ್ನಾದರೂ ಮಾಡುವರು
ದಿನ ಭವಿಷ್ಯ
Edited By:

Updated on: Jul 18, 2025 | 1:03 AM

.ಶಾಲಿವಾಹನ ಶಕೆ 1948 ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಗ್ರೀಷ್ಮ, ಸೌರ ಮಾಸ : ಕರ್ಕಾಟಕ, ಮಹಾನಕ್ಷತ್ರ : ಪುನರ್ವಸು, ವಾರ : ಶುಕ್ರ, ತಿಥಿ : ಅಷ್ಟಮೀ, ನಿತ್ಯನಕ್ಷತ್ರ : ಅಶ್ವಿನೀ, ಯೋಗ : ಸುಕರ್ಮ, ಕರಣ : ಬಾಲವ, ಸೂರ್ಯೋದಯ – 06 – 12 am, ಸೂರ್ಯಾಸ್ತ – 07 – 04 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 02:04 – 03:48, ಗುಳಿಕ ಕಾಲ 08:54 – 10:38, ಯಮಗಂಡ ಕಾಲ 05:28 – 07:11

ಮೇಷ ರಾಶಿ: :ಕೊಟ್ಟಿದ್ದನ್ನು ಜೋಪಾನ ಮಾಡುವುದು ಒಳ್ಳೆಯದು. ಇಂದು ಬೋಧಕವರ್ಗದವರಲ್ಲಿ ಹೆಚ್ಚು ಒತ್ತಡ ಕಾಣಿಸುವುದು. ಹೊಸ ಉತ್ಸಾಹವು ನಿಮ್ಮ ಕೆಲಸಗಳಿಗೆ ಪೂರವಾಗಿ ಇರಲಿದೆ. ಹಣದ ಹರಿವು ತಕ್ಕಮಟ್ಟಿಗೆ ಇರಲಿದೆ. ಕೆಟ್ಟ ಆರೋಗ್ಯವನ್ನು ಸರಿ ಮಾಡಿಕೊಳ್ಳಿ. ಯಾರ ಸಹಾಯವನ್ನೂ ಅತಿಯಾಗಿ ನಿರೀಕ್ಷಿಸಲಾರಿರಿ. ಪ್ರೀತಿಪಾತ್ರರ ವರ್ತನೆಯು ನಿಮಗೆ ಹಿಂಸೆಯನ್ನು ಕೊಟ್ಟೀತು. ನಿಮ್ಮ ಬಗ್ಗೆ ಯಾರೋ ಹೇಳುವ ಬದಲು, ನೀವೇ ನೋಡಿಕೊಳ್ಳುವುದು ಸೂಕ್ತ. ಸಾಮರ್ಥ್ಯವನ್ನು ಸದ್ವಿನಿಯೋಗ ಮಾಡಿರಿ. ಟೀಕೆಗಳಿಗೆ ಕಿವಿಗೊಡದೇ ನಿಮ್ಮ ಕೆಲಸದಲ್ಲಿ ಮುನ್ನಡೆಯಿರಿ. ಯಶಸ್ಸಿನ‌ ಹಿಂದೆ ಎಲ್ಲರೂ ಬರುವರು. ಯಾರ ಅಗಲಿಕೆಯನ್ನೂ ನೀವು ಗಂಭೀರವಾಗಿ ಪರಿಗಣಿಸಲಾರಿರಿ. ಕಛೇರಿಯ ಕೆಲಸಗಳು ಸಲೀಸಾಗಿ ಆಗುವುದು. ಯಾರದೋ ಮಾತಿಗೆ ಕುಣಿಯುವುದು ಬೇಡ. ನಿಮ್ಮ ಮನಸ್ಸಿಗೆ ಸರಿ ಎನಿಸಿದ್ದರೆ ಮುಂದುವರಿಯಿರಿ. ವ್ಯವಹಾರದ ವಿಚಾರದಲ್ಲಿ ನಿಮಗೆ ಅಳುಕು ಕಾಣಿಸುವುದು. ನಿರ್ದಯೆಯಿಂದ ವ್ಯವಹರಿಸುವುದು ಬೇಡ.

ವೃಷಭ ರಾಶಿ: :ಸಂಪರ್ಕ ಕಡಿತದಿಂದ ತೃಪ್ತಿ ಇದ್ದರೂ ಭವಿಷ್ಯದ ದೃಷ್ಟಿಯಿಂದ ಮನಸ್ಸು ಆಲೋಚಿಸುವುದು. ಇಂದು ನಿಮಗೆ ಪ್ರಾಪ್ತವಾದ ಸ್ಥಾನದಿಂದ ನಿಮ್ಮ ಆಲೋಚನಾ ಕ್ರಮಗಳೂ ವ್ಯತ್ಯಾಸವಾಗುವುದು. ಸಣ್ಣ ಪುಟ್ಟ ನೋವುಗಳೂ ನಗುವಿನ ಜೊತೆ ಕರಗಲಿ. ಸ್ನೇತರ ಜೊತೆ ಸುತ್ತಡಿ ಹಣವನ್ನು ಖರ್ಚು ಮಾಡುವಿರಿ. ಇದು ಸಂತೋಷದಿಂದ ಮಾಡಿದ್ದಾಗಿರುತ್ತದೆ. ವಿಶೇಷವಾದ ಸ್ಥಾನ, ಮಾನಗಳು ಬರುವ ಸಾಧ್ಯತೆ ಇದೆ. ವಿಶ್ರಾಂತಿಯಿಂದ ಸದಾ ಇದ್ದರೆ ಮನೆಯಲ್ಲಿ ನಿಂದೆ ಮಾಡುವರು. ದಾಂಪತ್ಯದಲ್ಲಿ ಕಲಹವು ಸಹಜವೆನ್ನುವಷ್ಟು ಆಗಿದೆ. ಸಮಾಧಾನವೂ ಹಾಗೇ ಆಗಲಿ. ಹಿರಿಯರ ಮಾತಿಗೆ ಟೀಕೆ, ವ್ಯಾಖ್ಯಾನಗಳು ಬೇಡ. ಅವರ ಮಾತನ್ನು ಅನುಸರಿಸಿ. ಅಸತ್ಯವನ್ನು ಹೇಳುವುದು ಗೊತ್ತಾದೀತು. ಹಿತವಚನದಿಂದ ಯಾವ ಪರಿವರ್ತನೆಯೂ ಆಗದು. ಒಂಟಿಯಾಗಿ ಕೆಲಸವನ್ನು ಮಾಡದೇ ಒಗ್ಗಟ್ಟಿನ ಕೆಲಸದಲ್ಲಿ ಜಯವಿರಲಿದೆ. ನಿಮ್ಮ ಗುಟ್ಟನ್ನು ಯಾರ ಬಳಿಯೂ ಬಿಟ್ಟುಕೊಡಲಾರಿರಿ. ನಿಮ್ಮ ನಡೆವಳಿಕೆಯು ಅಸಹಜತೆ ಎಂದು ಕೆಲವರಿಗೆ ಅನ್ನಿಸಬಹುದು.

ಮಿಥುನ ರಾಶಿ: : :ಬಯಕೆಗಳು ಮಿತಿಯಲ್ಲಿ ಮುಂದುವರಿದರೆ ಒಳ್ಳೆಯದು. ಬೇಡದ ಆಸೆಗಳಿಗೆ ಸಮಯ ವ್ಯರ್ಥ ಮಾಡಿಕೊಳ್ಳುವಿರಿ. ಇಂದು ನಿಮ್ಮ ಅನುಭವದ ಆಧಾರದ ಯೋಗ್ಯವಾದ ಕೆಲವು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಮಕ್ಕಳ ಯಶಸ್ಸಿನಿಂದಾಗಿ ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ಇಂದಿನ ಕೆಲಸವನ್ನು ಪೂರೈಸಲು ಅನಾರೋಗ್ಯವು ಅಡ್ಡವಾಗಬಹುದು. ಒಂದೇ ಆದಾಯವನ್ನು ನಂಬಿದವರಿಗೆ ಕಷ್ಟವಾದೀತು. ಕೋಪದ ಕೈಯಲ್ಲಿ ಬುದ್ಧಿ ಕೊಟ್ಟು ತೊಂದರೆಗೆ ಸಿಕ್ಕಿಕೊಳ್ಳಬೇಡಿ. ಆಕರ್ಷಕ ವಸ್ತುಗಳಿಗೆ ಮನಸೋಲಬಹುದು. ಆಪ್ತರ ಜೊತೆ ಮಾತನಾಡಿ ಇಂದಿನ ಹೆಚ್ಚು ಸಮಯವನ್ನು ಕಳೆಯುವಿರಿ. ಉದ್ಯಮದಲ್ಲಿ ಪ್ರಗತಿ ಇರಲಿದೆ. ನಿಮ್ಮ‌ ಮೇಲೆ ಸಂದೇಹವು ಬರಬಹುದು. ಭವಿಷ್ಯದ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಳ್ಳುವಿರಿ. ನಿಮ್ಮ ಮನೆಯ ಸಮಸ್ಯೆಯನ್ನು ಬೇರೆಯವರ ಜೊತೆ ಹಂಚಿಕೊಳ್ಳುವುದು ಬೇಡ. ಹೂಡಿಕೆಯ ಹಣವನ್ನು ತೆಗೆಯುವ ನಿರ್ಧಾರಕ್ಕೆ ಬರಬೇಕಾದೀತು.‌ ಪರಿಸ್ಥಿತಿಯನ್ನು ನೋಡಿ ತೀರ್ಮಾನಿಸಿ.

ಕರ್ಕಾಟಕ ರಾಶಿ: :ಜಯದ ಸಂಭ್ರಮದಲ್ಲಿದ್ದು ಸೋತ‌ ಮನಸ್ಸಿಗೆ ಸಾಂತ್ವನ ಹೇಳುವಿರಿ. ನಿಮ್ಮ ಸ್ನೇಹಪರವಾದ ವ್ಯಕ್ತಿತ್ವವು ಎಲ್ಲರಿಗೂ ಇಷ್ಟವಾಗುತ್ತದೆ ಎನ್ನಲಾಗದು. ಹಳೆಯ ನೋವನ್ನು ಸ್ಮರಿಸಿಕೊಳ್ಳುವುದು ಬೇಡ. ಆದಯಾದ ಮೂಲವನ್ನು ಹುಡುಕಿಕೊಳ್ಳುವಿರಿ. ಮನೆಗೆ ಹಣದ ಸಹಾಯ ಮಾಡಬೇಕಾದ ಸ್ಥಿತಿ ಬರಬಹುದು. ನಿಮ್ಮವರ ಗೌಪ್ಯತೆಯನ್ನು ಕಾಪಾಡಿಕೊಳ್ಳಿ. ಇಲ್ಲವಾದರೆ ಅವಮಾನವಾದೀತು. ಮಾತಿನಿಂದ ಗೆಲ್ಲುವುದು ಸುಲಭವಾಗದು. ನಿಮ್ಮ ಜೀವನದ ಬಗೆಗೆ ಬಹಿರಂಗ ಹೇಳಿಕೆಗಳು ನಗೆಯನ್ನು ಉಂಟುಮಾಡುವುದು. ದೂರದ ಪ್ರಯಾಣವನ್ನು ಮಾಡಲೇಬೇಕಾದ ಸ್ಥಿತಿ ಬರಬಹುದು. ಉದ್ವೇಗವನ್ನು ಕಡಿಮೆ ಮಾಡಿಕೊಳ್ಳಿ. ಉತ್ಸಾಹಕ್ಕೆ ಭಂಗ ಬರುವ ಮಾತುಗಳನ್ನು ಕೇಳಬೇಕಾದೀತು. ಅದನ್ನು ಅಲ್ಲಿಯೇ ಬಿಟ್ಟು ಮುನ್ನಡೆಯಿರಿ. ನಿಮ್ಮದಲ್ಲದ್ದನ್ನು ಉಳಿಸಿಕೊಳ್ಳುವುದು ಕಷ್ಟವಾಗುವುದು. ವೃತ್ತಿಯ ಬಗ್ಗೆ ನಿಮ್ಮಲ್ಲಿ ಹಲವು ಗೊಂದಲಗಳು ಕಾಣಿಸುವುದು. ಇಂದು ನೀವು ಯಾವುದಾದರೂ ವಿಚಾರವನ್ನು ಮಾತಿನಿಂದ ಗೆಲ್ಲವುದು ಸುಲಭವಲ್ಲ.

ಸಿಂಹ ರಾಶಿ: :ಮಕ್ಕಳ ಮೇಲೆ ಕೋಪಗೊಳ್ಳುವ ಅಗತ್ಯ ಬೀಳಬಹುದು. ಇಂದು ವಾಹನದಿಂದ ತೊಂದರೆಯಾಗುವ ಸಾಧ್ಯತೆ ಹೆಚ್ಚು ಅಥವಾ ವಾಹನದ ದುರಸ್ತಿ ಕಾರ್ಯವನ್ನು ಮಾಡಬೇಕಾಗಬಹುದು. ಅವಸರದಲ್ಲಿ ಪ್ರಯಾಣವನ್ನು ಮಾಡಬೇಡಿ. ಸಾವಧಾನತೆವಿರಲಿ. ಕೇಳಿದವರಿಗೆ ಆಗದು ಎಂದು ಹೇಳದೇ ಇರುವುದನ್ನು ಕೊಡಿ. ಸಂತೃಪ್ತಿಯು ನಿಮಗೆ ಸಿಗಬಹುದು. ಸಂಗಾತಿಯ ಆಸೆಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುವಿರಿ. ಯಾರದೋ ಕೋಪ ನಿಮ್ಮ ಕಡಗೆ ತಿರುಗುವುದು. ದಿನವನ್ನು ಸುಂದರವಾಗಿ ಮಾಡಿಕೊಳ್ಳಲು ಮೊದಲೇ ಯೋಚಿಸಿ. ಪರರ ನ್ಯೂನತೆಗಳ ಬಗ್ಗೆ ಆಡಿಕೊಳ್ಳುವುದು ಬೇಡ. ಪೂರ್ಣವಿಶ್ವಾಸದಿಂದ ಆರಂಭಿಸಿದ ಕಾರ್ಯವು ಅಪೂರ್ಣವಾಗದು ಎಂಬ ಆತ್ಮಬಲವಿರುವುದು. ನಿಮ್ಮನ್ನು ಎದುರೇ ಯಾರಾದರೂ ನಿಂದಿಸಬಹುದು. ನಿಮ್ಮ ಪ್ರತಿಕ್ರಿಯೆ ಅಧಿಕಾರಿವರ್ಗದಿಂದ ನಿಮ್ಮ ಗೌರವಕ್ಕೆ ದಕ್ಕೆ ಆಗಬಹುದು. ಸಂಗಾತಿಯ ಇಂಗಿತವನ್ನೇ ಅರಿತು ಕಾರ್ಯವನ್ನು ಮಾಡುವಿರಿ. ಇಂದು ನಿಮ್ಮ‌ ಬಳಿ ಸಾಮಾಜಿಕ ಕಳಕಳಿಯಿಂದವ ಜನರು ಬರುವರು.

ಕನ್ಯಾ ರಾಶಿ: :ಮರಳಿಯತ್ನವ ಮಾಡಿ ಮರುವುದು ಬೇಡ. ಇಂದು ಯಾರ ಬಳಿಯೂ ಸಹಾಯವನ್ನು ಕೇಳುವ ಮನಸ್ಸು ಇರದು. ಪರಸ್ಪರ ಸಂವಹನದ ಮೂಲಕ ವ್ಯಾಪಾರದಲ್ಲಿ ಉತ್ತಮ ಪ್ರಗತಿಯನ್ನು ಕಾಣುವಿರಿ. ಹಣದ ಸಮಸ್ಯೆಗಳು ತಾನಾಗಿಯೇ ನಿವಾರಣೆಯಾಗುವುದು. ವಿವಾಹಕ್ಕೆ ಕಾಣದವರಿಂದ ಅಡತಡೆ ಬರುವುದು. ನಿಮ್ಮವರ ಬಗ್ಗೆ ದೂರು ಕೊಡಬಹುದು ನಿಮ್ಮ ಬಳಿ.‌ ಅದನ್ನು ಸಮಾಧಾನ ಚಿತ್ತದಿಂದ ಸ್ವೀಕರಿಸಿ. ಸ್ವಚ್ಛಂದತೆಯಿಂದ ತಪ್ಪುಗಳು ನಡೆಯಬಹುದು. ಪಾಲುದಾರಿಕೆಯಲ್ಲಿ ಹೊಸ ಕಾರ್ಯಗಳನ್ನು ಆರಂಭಿಸಲು ಆಲೋಚಿಸುವಿರಿ‌. ಅನಗತ್ಯ ವಸ್ತುಗಳ ಬಗ್ಗೆ ಆಸೆ ಬೇಡ. ಮಾಡಬೇಕಾದ ಕಾರ್ಯವನ್ನು ಆರಂಭಿಸಿ. ಸಮಯವು ನಿಮಗಾಗಿ ಕಾಯುವುದಿಲ್ಲ. ಮನೆಯಲ್ಲಿ ನೋವಿನ ಮಾತನ್ನು ಆಡಬೇಡಿ. ವಾಹನವನ್ನು ಚಲಾಯಿಸುವಾಗ ಆತುರ ಬೇಡ. ದೂರ ಹೋಗುವವರಿದ್ದರೆ ಹಿರಿಯರ ಆಶೀರ್ವಾದವನ್ನು ಪಡೆದುಕೊಳ್ಳಿ. ಸಂಗಾತಿಯು ನಿಮ್ಮ ಜೊತೆ ಜಗಳವಾಡಿ ಹಳೆಯ ವಿಚಾರವನ್ನು ಪುನಃ ಪ್ರಸ್ತಾಪಿಸಬಹುದು. ಸಿಟ್ಟು ಮಾಡಿಕೊಂಡು ಒಂಟಿಯಾಗಿ ಇರುವಿರಿ.

ತುಲಾ ರಾಶಿ: :ನಿಮ್ಮ ಆಚರಣೆಗೆ ಭಂಗ ಉಂಟಾಗುವುದು. ಅದಕ್ಕಾಗಿ ಪಶ್ಚಾತ್ತಾಪ ಉಂಟಾಗುವುದು. ಇಂದು ಭೂಮಿಯ ಖರೀದಿಯ ಬಗ್ಗೆ ಚಿಂತನೆ ಇದ್ದರೆ ಮುಂದುವರಿಯಬಹುದು. ಆರೋಗ್ಯವನ್ನು ಸುಧಾರಿಸಿಕೊಳ್ಳಲು ವಿಶ್ರಾಂತಿಯ ಅಗತ್ಯವಿರುವುದು.‌ ಮಾನಸಿಕವಾದ ಯಾವ ಕ್ಷೋಭೆಯನ್ನೂ ಮನಸ್ಸಿಗೆ ತಂದುಕೊಳ್ಳದೇ ಚಿತ್ತವಿಶ್ರಾಂತಿಯನ್ನೂ ಕೊಡಿ. ಹಳೆಯ ಸ್ನೇಹಿತರು ನಿಮ್ಮನ್ನು ಅಕಸ್ಮಾತ್ ಭೇಟಿಯಾಗಬಹುದು. ಸಂಗಾತಿಯು ನಿಮ್ಮ ಪೂರ್ವವೃತ್ತಾಂತವನ್ನು ಹೇಳಬಹುದು. ನೀವಾಗಿಯೇ ವ್ಯಕ್ತಿಗಳನ್ನು ಬಿಟ್ಟುಕೊಳ್ಳುವಿರಿ. ಕೆಲಸವನ್ನು ಬದಲಿಸುವ ಯೋಚನೆ ಇರಲಿದೆ. ಹೊಸ ಸಂಗತಿಗಳನ್ನು ಕಲಿಯುವಿರಿ. ದಾಂಪತ್ಯದಲ್ಲಿ ಮನಸ್ಸು ಬಂದರೂ ಅದನ್ನು ಸರಿ ಮಾಡಿಕೊಂಡು ಮುಂದುವರಿಯುವಿರಿ. ಬರಬೇಕಾದ ಹಣದಲ್ಲಿ ಸಂಶಯ ಕಾಡಬಹುದು. ಹೊಸ ವಿಷಯವನ್ನು ಕಲಿಯಲು ಆಲೋಚಿಸುವಿರಿ. ನಿಮ್ಮ ಹೆಸರಿನಿಂದ ಬೇರೆಯವರು ಕೆಲಸ ಮಾಡಿಕೊಳ್ಳಬಹುದು. ನಿಮ್ಮ ನಿರ್ಧಾರವನ್ನು ಯಾರು ಏನೇ ಹೇಳಿದರೂ ಬದಲಾಯಿಸುವುದಿಲ್ಲ. ಉದ್ಯೋಗದಲ್ಲಿ ಗಾಂಭೀರ್ಯವಿರಲಿದೆ. ಸರಿಯಾದ ವಿವೇಚನೆಯಿಂದ ಕಾರ್ಯವನ್ನು ನಿರ್ವಹಿಸುವಿರಿ.

ವೃಶ್ಚಿಕ ರಾಶಿ: :ಪರರ ಕುರಿತು ದ್ವೇಷ ಬರುವಂತೆ ಮಾಡುವರು. ನೀವು ಇಂದು ಅನೇಕ ದಿನಗಳಿಂದ ನಿಂತಿದ್ದ ಕೆಲಸಗಳನ್ನು ಪೂರ್ಣಗೊಳ್ಳಬಹುದು. ಆತ್ಮವಿಶ್ವಾಸವು ಋಣಾತ್ಮಕ ಸಂದರ್ಭದಲ್ಲಿಯೂ ಧೈರ್ಯದಿಂದ ಇರುವಂತೆ ಮಾಡುತ್ತದೆ. ದೂರ ಪ್ರಯಾಣ ಇಂದು ಬದಲಾಗುವುದು. ಇನ್ನೊಬ್ಬರ ಪ್ರಭಾವದ ಮೇಲೆ ನೀವು ಕೆಲಸವನ್ನು ಪಡೆಯುವಿರಿ. ಆಪ್ತರಿಂದ ಅನಿರೀಕ್ಷಿತ ಪಾರಿತೋಷಕಗಳು ಸಿಗಬಹುದು. ಕೃಷಿಯ ಬಗ್ಗೆ ಆಸಕ್ತಿ ಇರುವುದು. ಸಂಗಾತಿಯನ್ನು ಮಾತಿನಿಂದ ನೋಯಿಸುವಿರಿ. ಮನಸ್ಸನ್ನು ಅರ್ಥಮಾಡಿಕೊಂಡು ಬೇರೆಯವರ ಜೊತೆ ವ್ಯವಹಾರ ಮಾಡಿ. ಉದ್ಯಮದಲ್ಲಿ ಸಣ್ಣ ಪ್ರಗತಿ ಇರಬಹುದು. ಕಛೇರಿಯಲ್ಲಿ ರಜ ಹಾಕಲು ಸುಳ್ಳು ನೆಪವನ್ನು ತೋರುವಿರಿ. ನಿಮ್ಮ ನಿಜರೂಪವನ್ನು ಆತ್ಮೀಯರು ಅರಿಯಬಹುದು. ಖರೀದಿಗೆ ಹೆಚ್ಚಿನ ಸಮಯವನ್ನು ಮೀಸಲಿಡುವಿರಿ. ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಪರಾಜಯ ಆಗಬಹುದು. ಭಾವನಾತ್ಮಕ ವಿಚಾರಗಳಿಗೆ ಸ್ಪಂದಿಸುವುದು ಕಷ್ಟವಾಗಲವಾಗಲಿದೆ. ನಿಮ್ಮವರ ಮಾತುಗಳಿಂದ ನೀವು ಬೇಸರಗೊಳ್ಳುವಿರಿ. ಇನ್ನೊಬ್ಬರ ಅವಲಂಬನೆಯಿಂದ ನಿಮಗೆ ಮುಜುಗರವಾಗುವುದು.

ಧನು ರಾಶಿ: :ಸಾಲಕ್ಕಾಗಿ ಅಂತರ್ಜಾಲ ಹುಡುಕುವ ನಿಮಗೆ ಸಾಲ ಕೊಡಲಿಕ್ಕಾಗಿ ಒಂದರಮೇಲೆ‌ ಒಂದರಂತೆ ಕರೆಗಳು ಬರಬಹುದು. ಮಾನಸಿಕ ಹಿಂಸೆಯೂ ಆಗುವುದು. ಸಂತೋಷವಾಗಿರಲು ಎಲ್ಲ ಯೋಜನೆಗಳನ್ನು ಸಿದ್ಧಪಡಿಸಿದರೂ ಅದು ವ್ಯತ್ಯಾಸ ಆಗಬಹುದು. ಅಥವಾ ಇನ್ನೇನೋ ಆಗಬಹುದು. ಇಂದಿನ ಸಿಟ್ಟು ನಿಮ್ಮ ಜೀವನಕ್ಕೆ ಬೇಡವಾಗಿರುವುದು. ಅದು ಬೇರೆ ರೂಪವನ್ನು ಪಡೆಯಬಹುದು. ಕಿರಿಯರ ಭಾವನೆ ಸ್ಪಂದಿಸುವಿರಿ. ನಿರಂತರ ಶ್ರಮದಿಂದ ಆಯಾಸವಾದ ನಿಮಗೆ ಇಂದು ಸ್ವಲ್ಪ ಬಿಡುಗಡೆಯಂತೆ ತೋರುವುದು‌. ದೇವರ ಕಾರ್ಯದಲ್ಲಿ ತೊಡಗುವಿರಿ. ನಿಮ್ಮವರನ್ನು ಕಳೆದುಕೊಳ್ಳುವ ಭೀತಿ ಇರುವುದು. ಭೂಮಿಯ ವ್ಯವಹಾರದಲ್ಲಿ ಅಜಾಗರೂಕತೆಯಿಂದ ನಷ್ಟ ಮಾಡಿಕೊಳ್ಳುವಿರಿ. ಅಧಿಕಾರದಿಂದ ಮಾತ್ರ ಎಲ್ಲವೂ ಸರಿಯಾಗುವುದು ಎಂಬ ಭ್ರಮೆ‌ ಬೇಡ. ನಿಮ್ಮ ಕ್ರಮವನ್ನು ನೀವು ಮಾಡಿ. ಇಂದಿನ ಕಾರ್ಯವು ಯಾವುದೇ ತೊಂದರೆಗಳಿಲ್ಲದೇ ಮುಗಿಯುವುದು. ಸ್ತ್ರೀಯರು ಅನಾರೋಗ್ಯದಿಂದ ಪೀಡಿತರಾಗುವಿರಿ.

ಮಕರ ರಾಶಿ: :ಪ್ರೀತಿ ಪಾತ್ರರನ್ನು ಬಿಟ್ಟುಕೊಡಲಾರಿರಿ. ಅಜ್ಞಾನವು ನಿಮ್ಮ ಹಾದಿಯನ್ನು ತಪ್ಪಿಸುವುದು.‌ ಕಿಂಚಿತ್ತಾದರೂ ನಿಮ್ಮಿಂದ ಸಹಕರಾವಾದರೆ ನಿಮಗೆ ಸಮಾಧಾನ ಸಿಗಲಿದೆ. ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮನಸ್ಸು ನಿಮ್ಮಲ್ಲಿರಲಿದೆ. ಸಾಮಾಜಿಕ ಕಾರ್ಯಕ್ಕೆ ಹಲವರಿಂದ ಒತ್ತಡ ಸಿಗಬಹುದು. ಹಣವು ವ್ಯಯವಾಗುವ ಸಾಧ್ಯತೆ ಇದೆ‌. ನಿಮ್ಮ ಕನಸುಗಳು ನಿನಗೆ ಉತ್ಸಾಹವನ್ನು ತಂದುಕೊಡುತ್ತವೆ. ಪ್ರೀತಿಯಿಂದ ಎಲ್ಲರನ್ನೂ ಮಾತನಾಡಿಸುವಿರಿ. ನಿಮ್ಮ ಆಲೋಚನೆಗಳು ಇಷ್ಟವಾದೀತು. ಅನಿರೀಕ್ಷಿತ ಖರ್ಚುಗಳನ್ನು ನೀವು ಮಾಡಬೇಕಾಗುವುದು. ಮಾರಾಟಗಾರರು ಹೆಚ್ಚು ಆದಾಯ ಪಡೆಯುವರು. ಮಕ್ಕಳು ನಿಮ್ಮನ್ನು ಇಷ್ಟಪಡುವರು. ಸಾಹಸಕ್ಕೆ ಆದಷ್ಟು ಕೈ ಹಾಕುವುದು ಬೇಡ. ಹೊಸತರ ಕಲಿಕೆಯಲ್ಲಿ ಆಸಕ್ತಿಯು ಅಧಿಕವಾಗುವುದು. ಸಮಾರಂಭಗಳಿಗೆ ತೆರಳುವಿರಿ. ಕೃಷಿಕರಿಗೆ ಲಾಭದಲ್ಲಿ ಸ್ವಲ್ಪ ಇಳಿಮುಖ ಇರಲಿದೆ‌. ಹಿರಿಯರಿಂದ ಆದ ದೋಷವನ್ನು ಸರಿ ಮಾಡಿಕೊಳ್ಳುವಿರಿ.

ಕುಂಭ ರಾಶಿ: :ಸ್ಥಾನ ಲಾಭದಿಂದ ಸಮಾಧಾ‌ನವಾದರೂ ಸಮಯವನ್ನು ಕೊಡಬೇಕಾದ ಸ್ಥಿತಿ ಬಂದಿರುವುದರಿಂದ ಇನ್ಮೊಂದೆಡೆ ಆತಂಕ ಕಾಣಿಸುವುದು. ನಿಮ್ಮ ಇಂದಿನ‌ ಯೋಜನೆಗಳು ತಲೆಕೆಳಗಾಗುವುದು. ಮನೆಗೆ ಸಂಬಂಧಿಸಿದಂತೆ ಸರಿಯಾದ ಖರ್ಚುಗಳ ಮಾಹಿತಿ ಇಲ್ಲದೇ ಅಧಿಕ ಖರ್ಚನ್ನು ಮಾಡಬೇಕಾಗಿಬರಬಹುದು. ಎಲ್ಲರ ಮಾತುಗಳು ನಿಮಗೆ ಕರ್ಣಕಠೋರವಾದೀತು. ಎಲ್ಲವೂ ಘಟಿಸಿ ಮೇಲೆ ಪಶ್ಚಾತ್ತಾಪ ಪಡುವುದರಿಂದ ಫಲ ಸಿಗದು. ಅನಗತ್ಯವಾಗಿ ಖರ್ಚನ್ನು ಮಾಡಿಕೊಳ್ಳುವುದು ಬೇಡ. ವಿದ್ಯಾರ್ಥಿಗಳು ಸ್ವಾತಂತ್ರ್ಯವನ್ನು ಬಯಸುವವರು. ದೊರೆತ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಿ. ಮನೆಗೆಲಸವೇ ನಿಮಗೆ ಆಯಾಸ ತರಿಸೀತು. ಸಂಗಾತಿಯ ಮಾತನ್ನು ಇಂದು ಅನುಸರಿಸುವಿರಿ. ನಿಮ್ಮನ್ನು ನಂಬಿದವರಿಗೆ ಏನಾದರೂ ಒಂದು ದಾರಿ ಮಾಡಿಕೊಡಬೇಕಾಗುವುದು. ತಂತ್ರಜ್ಞರು ವಹಿಸಿಕೊಂಡ ಕಾರ್ಯದ ಗಡುವುದು ಸಮೀಪಿಸಿದ್ದು, ತುರ್ತು ಕಾರ್ಯವನ್ನು ಮಾಡಬೇಕಿದೆ. ವ್ಯಾಪಾರವು ಸಾಧಾರಣವಾಗಿ ಇರಲಿದೆ. ಹಣವು ಬರುವ ನಿರೀಕ್ಷೆಯಲ್ಲಿ ಎಲ್ಲವನ್ನೂ ಮಾಡುವಿರಿ. ಉದ್ಯೋಗವನ್ನು ಬದಲಿಸುವುದು ಅನಿವಾರ್ಯವಾಗಿ ಬರಬಹುದು.

ಮೀನ ರಾಶಿ: :ನಿಮ್ಮ ಕೌಶಲ್ಯದ ಬಗ್ಗೆ ವಿಶ್ವಾಸ ಬೇಕು. ಅನ್ಯರ ಮಾತನ್ನು ವಿಮರ್ಶೆಗೆ ಇಡಿ. ನಿಮ್ಮ ಕನಸುಗಳು ನನಸಾಗಿಸುವ ಸಮಯವನ್ನು ನಿರೀಕ್ಷಿಸುವಿರಿ. ಇತರರ ಸಲಹೆಗಳನ್ನು ಕೇಳಿ, ನಿಮಗೆ ಸರಿಯಾದೃ ಮಾತ್ರ ಮುಂದುವರಿಯಿರಿ. ನಿಮಗೆ ಉತ್ತಮ ಅವಕಾಶಗಳು ಸಿಗಲಿವೆ. ಆಪ್ತರ ಜೊತೆ ನಿಮ್ಮ ಸುಖ ದುಃಖಗಳನ್ನು ಹಂಚಿಕೊಳ್ಳುವಿರಿ. ಅಪರಿಚತವಾದ ಹುದ್ದೆಗಳನ್ನು ಅನಿವಾರ್ಯವಾಗಿ ಅಲಂಕರಿಸಬೇಕಾದೀತು. ಆಸ್ತಿಯ ಇಬ್ಬಾಗಕ್ಕೆ ಸಹಿ ಹಾಕಲೇಬೇಕಾದೀತು. ಅತಿಯಾದ ನಗುವು ಬೇಡ. ಕಳೆದುಕೊಂಡವರ ಬಗ್ಗೆ ಪಶ್ಚಾತ್ತಾಪ‌ ಇರಲಿದೆ. ನಿಮ್ಮ ವಿನಮ್ರತೆಯು ನಿಮಗೆ ವರದಾನವಾಗಿದೆ. ಕಲಾವಿದರು ಹೆಚ್ಚಿನ ಕೀರ್ತಿಯನ್ನು ಪಡೆಯುವರು. ಎಲ್ಲರೂ ಸ್ವಾರ್ಥಿಗಳಂತೆ ಕಂಡಾರು. ಕೆಲವು ಸಂದರ್ಭಗಳಲ್ಲಿ ನೀವು ಧೈರ್ಯದಿಂದ ಇರಬೇಕಾಗುವುದು.‌ ಇಲ್ಲದಿದ್ದರೆ ನಿಮ್ಮ ಪಾಲಿಗೇ ಸಂಕಷ್ಟ ಬರುವುದು. ಆರ್ಥಿಕ ಒತ್ತಡದಿಂದ ನೀವು ಹೊರಬರುವ ಮಾರ್ಗವನ್ನು ಹುಡುಕುವಿರಿ. ಯಾವದೇ ಸಂದರ್ಭದಲ್ಲಿಯೂ ಗಾಬರಿಯಾಗದೇ ಸಮಯಪ್ರಜ್ಞೆಯಿಂದ ಮುನ್ನಡೆಯಿರಿ. ಇಂದಿನ ಉತ್ಸಾಹವು ಕೆಲಸಕ್ಕೆ ಪೂರಕವಾಗವುವುದು.

-ಲೋಹಿತ ಹೆಬ್ಬಾರ್-8762924271 (what’s app only)