
ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರ ಮಾಸ : ಭಾದ್ರಪದ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಮಘಾ, ವಾರ : ಸೋಮ, ಪಕ್ಷ : ಕೃಷ್ಣ, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ಉತ್ತರಾಫಲ್ಗುಣೀ, ಯೋಗ : ವರಿಯಾನ್, ಕರಣ : ಬಾಲವ, ಸೂರ್ಯೋದಯ – 06 – 21 am, ಸೂರ್ಯಾಸ್ತ – 06 : 48 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:55 : 09:28, ಗುಳಿಕ ಕಾಲ 14:08 – 15:41 ಯಮಗಂಡ ಕಾಲ 11:09 – 12:25
ಮೇಷ ರಾಶಿ: ಬರುವ ಸಂಕಷ್ಟಕ್ಕೆ ಪ್ರಾಮಾಣಿಕವಾದ ಪಶ್ಚಾತ್ತಾಪವಿದ್ದರೆ ಪರಿಹಾರವೂ ಪಕ್ಕದಲ್ಲಿಯೇ ಕುಳಿತಿರುತ್ತದೆ. ಇಂದು ನಿಮಗೆ ಗೊತ್ತಿಲ್ಲದೇ ಪುಣ್ಯವು ನಿಮ್ಮನ್ನು ಸೇರಿಸುವ ಸ್ಥಳಕ್ಕೆ ತಂದುಬಿಡುವುದು. ಪ್ರಶಂಸೆಯಿಂದ ನಿಮಗೆ ಮುಜುಗರವಾಗುವುದು. ವ್ಯಾಪಾರಸ್ಥರು ಪ್ರಾಮಾಣಿಕತೆಯಿಂದಲೂ ಸೋಲುವರು. ನಿಮ್ಮ ಜವಾಬ್ದಾರಿಯನ್ನು ಸರಿಯಾಗಿ ಸಮಯಕ್ಕೆ ಪೂರೈಸುವಿರಿ. ತಾಯಿಯ ಕಡೆಯ ಬಂಧುಗಳು ನಿಮಗೆ ಆಪ್ತರಾಗುವರು. ಇಂದು ನೀವು ಸುಳ್ಳು ಹೇಳಿ ಸಿಕ್ಕಿಬೀಳುವ ಸಾಧ್ಯತೆ ಇದೆ. ನಿಮ್ಮ ಮನೋಬಲವನ್ನು ಕೆಲವೊಮ್ಮೆ ಕೆಲವರ ಮಾತು ಕುಗ್ಗಿಸುವುದು. ನೆರೆಹೊರೆಯರಲ್ಲಿ ಸ್ನೇಹದಿಂದ ಮಾತನಾಡುವಿರಿ. ಆಸಕ್ತಿ ಇಲ್ಲದಿದ್ದರೂ ನೀವು ಅದನ್ನು ಮಾಡಬೇಕಾದೀತು. ನಿಮ್ಮನ್ನು ಇನ್ನೊಬ್ಬರಿಗೆ ಹೋಲಿಸಿಕೊಳ್ಳುತ್ತ ಇರುವಿರಿ. ಪ್ರೀತಿಯಲ್ಲಿ ನಿಮಗೆ ಬಯಸಿದ್ದು ಸಿಗದೇಹೋಗಬಹುದು. ಸುಲಭವಾದ ಕಾರ್ಯವನ್ನು ಮೊದಲು ಮಾಡಿ ಮುಗಿಸಿ. ಫಲವೂ ಉತ್ತಮವಾದುದೇ ಸಿಗುವುದು.
ವೃಷಭ ರಾಶಿ: ನಿಯತ್ತಿಗೂ ನಿಮಗೂ ಸಂಬಂಧವೇ ಇಲ್ಲದಂತೆ ವ್ಯವಹರಿಸುವಿರಿ. ಮನಸ್ಸಿನ ನಿಯಂತ್ರಣದಿಂದ ಇಂದಿನ ಎಲ್ಲ ಒತ್ತಡವನ್ನೂ ಸರಿಮಾಡಿಕೊಳ್ಳುವಿರಿ. ಇಂದು ನಿಮಗೆ ಒಳ್ಳೆಯ ವಾರ್ತೆ ಸಿಗಬಹುದು. ನಿಮ್ಮ ವೈಯಕ್ತಿಕ ಯೋಜನೆಗಳಿಗೆ ಯಾರೂ ಅಡ್ಡಿ ಮಾಡಲಾರರು. ಲಾಭವನ್ನು ಪಡೆಯಲು ಹೊಸ ಮಾರ್ಗಗಳು ಗೊತ್ತಾಗಬಹುದು. ಆಮಿಷಕ್ಕೆ ಒಳಗಾಗಿ ಕೆಟ್ಟದ್ದನ್ನು ಮಾಡಬಹುದು. ಸೋಲಿನ ಯೋಚನೆ ಇಲ್ಲದೇ ನಿರಾತಂಕದಿಂದ ಇರುವಿರಿ. ನೀವು ಆಸ್ತಿಯ ವಿಷಯದ ಬಗ್ಗೆ ನಿಮ್ಮವರಿಗೆ ಹೆಮ್ಮೆಯಾಗಲಿದೆ. ನಿಮ್ಮ ಸ್ವಾತಂತ್ರ್ಯವೇ ನಿಮಗೆ ತೊಂದರೆ ಕೊಟ್ಟೀತು. ಬಹಳ ದಿನಗಳಿಂದ ಮಂದಗತಿಯಲ್ಲಿ ಸಾಗುತ್ತಿದ್ದ ಕೆಲಸಕ್ಕೆ ವೇಗ ಸಿಗಲಿದೆ. ನಿಮ್ಮ ಅಮೂಲ್ಯವಾದ ವಸ್ತುವನ್ನು ರಕ್ಷಣೆ ಮಾಡಿಕೊಳ್ಳಿ. ಕುಟುಂಬದಲ್ಲಿ ಒಡಕು ಬರುವಂತೆ ಕಾಣಬಹುದು. ಫಲಾಪೇಕ್ಷೆ ಇಲ್ಲದೇ ನಿಮಗೆ ಕಾರ್ಯವನ್ನು ಮಾಡಲುಬಾರದು. ಆರಂಭಿಸುವ ಕೆಲಸದ ಬಗ್ಗೆ ಪೂರ್ಣ ಮಾಹಿತಿ ಇರಲಿ. ಮಕ್ಕಳಿಗೆ ಬೇಕಾದ ವಸ್ತುಗಳನ್ನು ಕೊಡಿಸುವಿರಿ.
ಮಿಥುನ ರಾಶಿ: ಅಪರಿಚಿತರು ಮನೆಗೇ ಬಂದು ವಂಚಿಸಿ ಹಣವನ್ನು ಪಡೆಯುವರು. ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಭ್ಯಾಸದ ಕಡೆ ಗಮನವಿಡಿ. ಅದೇ ಉತ್ತರವಾಗಲಿದೆ. ಅವಿವಾಹಿತರ ನಿರೀಕ್ಷೆ ಅಧಿಕವಾಗಿರುವುದು. ಬಹಳ ದಿನಗಳ ಅನಂತರ ಕುಟುಂಬದ ಸಂಬಂಧಗಳು ಬಲಗೊಳ್ಳುವುದು. ನೀವು ಯಶಸ್ಸನ್ನು ಸಾಧಿಸಲು ಹಂಬಲಿಸುವಿರಿ. ಒಂದೇ ವಿಚಾರವನ್ನು ಮತ್ತೆ ಮತ್ತೆ ಹೇಳಿ ಇತರರಿಂದ ದೂರಾಗಬಹುದು. ಬೇಕಾದಷ್ಟನ್ನು ಪಡೆದರೆ ಕೊಟ್ಟವರಿಗೂ ಪಡೆದವರಿಗೂ ಒಳ್ಳೆಯದು. ಹೂಡಿಕೆ ಲಯ ಹಣವು ನಿಮ್ಮ ಇಂದಿನ ಆಪತ್ಕಾಲಕ್ಕೆ ನೆರವಾಗುವುದು. ಮನೆಯ ಕೆಲಸವನ್ನು ಸರಳ ಮಾಡಿಕೊಳ್ಳುವ ಅನಿವಾರ್ಯತೆ ಬರಲಿದೆ. ನಿಮಗೆ ನಿರ್ಣಯವನ್ನು ಅಂತಿಮಗೊಳಿಸಲು ಸಮಯವನ್ನು ತೆಗೆದುಕೊಳ್ಳುವಿರಿ. ನಿಮ್ಮ ವ್ಯವಹಾರದಲ್ಲಿ ಶುದ್ಧತೆ ಇರುವುದು. ಹೊರಗಡೆ ಪ್ರಯಾಣವನ್ನು ಮಾಡುವಿರಿ. ಯಾವುದನ್ನೂ ಅತಿಯಾಗಿ ಬಳಸಲಾರಿರಿ. ಯಾವ ಕಾರಣಕ್ಕೂ ಸಾಲವನ್ನು ಮಾಡಲು ಹೋಗುವುದು ಬೇಡ. ನೀವು ಕಾರ್ಯದಲ್ಲಿ ಮಗ್ನರಾಗಿದ್ದು ಯಾವ ವಿಷಯಕ್ಕೂ ಭಾಗಿಯಾಗಲಾರಿರಿ. ವಾಹನದ ಚಿಂತೆಯೇ ನಿಮ್ಮನ್ನು ಕುಗ್ಗಿಸುವುದು.
ಕರ್ಕಾಟಕ ರಾಶಿ: ವಿದೇಶದಲ್ಲಿ ನೀವು ಎಂದೂ ಊಹಿಸದ ಸ್ಥಿತಿ ಬಂದು ಬೇಸರವಾಗಲಿದೆ. ಇಂದು ನೀವು ಬಹಳ ದಿನಗಳ ಅನಂತರ ಸಂಗಾತಿಯ ಜೊತೆ ದೂರದ ಊರಿಗೆ ಪ್ರಯಾಣ ಮಾಡುವಿರಿ. ಹಣವು ನಿಮ್ಮ ತುರ್ತು ಅವಶ್ಯಕತೆಯಾದ ಕಾರಣ ಅದನ್ನು ಗಳಿಸುವ ವಿಧಾನವನ್ನು ಯೋಚಿಸುವಿರಿ. ಇಂದಿನ ನಿಮ್ಮ ಅಭಿಪ್ರಾಯವನ್ನು ಕುಟುಂಬ ಗೌರವಿಸುವುದು. ಕಳೆದುಹೋದ ವಸ್ತುವಿನ ಬಗ್ಗೆ ನಿಮಗೆ ಅತಿಯಾದ ಮೋಹ ಉಂಟಾಗುವ ಸಾಧ್ಯತೆ ಇದೆ. ಕುಟುಂಬ ಕಾರಣದಿಂದ ನಿಮಗೆ ಗೌರವ ಸಿಗಬಹುದು. ಮಾತನ್ನು ಮಿತವಾಗಿ ಆಡಿ. ಇನ್ನೊಬ್ಬರ ವಸ್ತುವನ್ನು ಉಪಯೋಗಕ್ಕೆ ಪಡೆಯುವುದು ಸ್ವಾಭಿಮಾನಕ್ಕೆ ತೊಂದರೆ ಕೊಟ್ಟೀತು. ಅಧಿಕ ಸುತ್ತಾಟದಿಂದ ಆಯಾಸವಾಗಬಹುದು. ಸ್ತ್ರೀಯರಿಂದ ಆದ ಅಪಮಾನವನ್ನು ಸಹಿಸಲಾಗದು. ಸಾಲಬಾಧೆಯು ನಿಮಗೆ ಎಲ್ಲರಿಂದ ದೂರವಿರುವಂತೆ ಮಾಡೀತು. ಕುಟುಂಬ ಮೇಲೆ ಬೇಸರ ಬರಬಹುದು. ನಿಮ್ಮ ಭಾವವನ್ನು ಬಂಧಿಸಿಟ್ಟರೂ ಅದು ಗೊತ್ತಾಗುವುದು. ಇಂದು ಕಡಿಮೆ ಕಾರ್ಯದಲ್ಲಿ ಹೆಚ್ಚು ಲಾಭವನ್ನು ನಿರೀಕ್ಷಿಸುವಿರಿ.
ಸಿಂಹ ರಾಶಿ: ನಿಮ್ಮ ಬಳಿ ಇಲ್ಲದೇ ಸಹಾಯ ಮಾಡುತ್ತೇನೆ ಎನ್ನುವುದು ನಗೆಪಾಟಲಾಗುವುದು. ಇಂದು ಸಿಕ್ಕಿದ್ದರಲ್ಲಿ ಸಂತೃಪ್ತಿಯಿಂದ ಅನುಭವಿಸುವುದು ಅವಶ್ಯಕ. ನಿಮಗೆ ನೀವೇ ಉತ್ತೇಜನವನ್ನು ಕೊಟ್ಟುಕೊಳ್ಳಬೇಕಾಗುವುದು. ಇನ್ನೊಬ್ಬರಿಗೆ ಸಾಲವಾಗಿ ನೀಡಿದ ಹಣವನ್ನು ಸ್ವೀಕರಿಸಬಹುದು. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ ಸಂಪತ್ತನ್ನು ಉಳಿಸಿಕೊಳ್ಳಿ. ಸ್ನೇಹಿತರ ಜೊತೆ ಮೋಜಿನಲ್ಲಿ ಸಮಯವನ್ನು ಕಳೆಯುವಿರಿ. ವಿಪತ್ತಿಗೆ ಮೊದಲೇ ನಿ ನಿವಾರಣೆಗೆ ಬೇಕಾದ ಸಿದ್ಧತೆ ನಡೆಸುವಿರಿ. ಭೂ ವ್ಯವಹಾರದಲ್ಲಿ ಲಾಭವಿದ್ದರೂ ಅದನ್ನು ನಿರ್ವಹಿಸುವುದರಲ್ಲಿ ಇರಲಿದೆ. ನಿಮ್ಮದು ರಾಜಕೀಯ ಪ್ರೇರಿತ ಮನಸ್ಸಾಗಿದ್ದು ಎಲ್ಲದರಲ್ಲಿಯೂ ಅದನ್ನೇ ಕಾಣುವಿರಿ. ಸಹಾಯ ಮಾಡುವ ಮನಸ್ಸು ಇಂದು ನಿಮ್ಮಲ್ಲಿ ಇಲ್ಲವಾದೀತು. ಅತಿಯಾದ ವಿಶ್ವಾಸವು ನಿಮಗೆ ಹಿನ್ನಡೆಯನ್ನು ತಂದೀತು. ನೀವಂದುಕೊಂಡಂತೆ ಇಂದಿನ ಕೆಲಸವು ಸಾಗದು. ಬೇಡವೆನಿಸಿದ್ದನ್ನು ಒತ್ತಾಯಪೂರ್ವಕ ಪಡೆಯುವುದು ಬೇಡ. ಇಂದು ಸ್ವಲ್ಪ ಆಲಸ್ಯವೂ ಇರಬಹುದು. ಆರೋಗ್ಯವನ್ನು ದೈವಾನುಗ್ರಹದಿಂದಲೂ ಸರಿಮಾಡಿಕೊಳ್ಳಬಹುದು. ಸಂಗಾತಿಯ ವಿಷಯದಲ್ಲಿ ವಾಗ್ವಾದ ನಡೆಯಲಿದೆ.
ಕನ್ಯಾ ರಾಶಿ: ಹಣವನ್ನು ಕಳಿಸುವಾಗ ಯಾರಿಗೋ ಕಳಿಸುವುದು ಮತ್ಯಾರಿಗೋ ಹೋಗಬಹುದು. ಇಂದು ನಿಮ್ಮ ವ್ಯವಹಾರದಲ್ಲಿ ಕೆಲವು ಬದಲಾವಣೆಗಳು ಬೇಕು ಎಂದು ಅನ್ನಿಸಬಹುದು. ನಿಮಗೆ ಹಿರಿಯರಿಂದ ಪ್ರಶಂಸೆ ಸಿಗುವುದು. ಹಿರಿಯರ ಜೊತೆ ಸಮಯವನ್ನು ಕಳೆಯಲು ಅವಕಾಶ ಸಿಗಲಿದೆ. ಯಾವುದನ್ನೂ ಗೊತ್ತಿಲ್ಲ ಎಂದು ಹೇಳುವುದನ್ನು ಬಿಡಬೇಕು. ಆರ್ಥಿಕ ವ್ಯವಹಾರಗಳನ್ನು ಇಂದು ಸರಿಯಾಗಿ ತಿಳಿದುಕೊಳ್ಳುವಿರಿ. ಅಶ್ಲೀಷಪದಗಳನ್ನು ಬಳಸಿ ಹಿರಿಯರಿಂದ ನಿಂದನೆಯಾಗಲಿದೆ. ಹೊಸ ಆದಾಯದ ಮೂಲವನ್ನು ಸಿದ್ಧಪಡಿಸಿಕೊಳ್ಳುವಿರಿ. ಸಭೆಗಳಿಗೆ ಭಾಗವಹಿಸಲು ಹೋಗುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಬಹುದು. ವಿಶ್ವಾದದಿಂದ ಮಾತ್ರ ನಿಮ್ಮ ಕಾರ್ಯವನ್ನು ಸಾಧಿಸಲು ಆಗುವುದು. ನಿಮ್ಮ ವ್ಯಕ್ತಿತ್ವವನ್ನು ಸರಿಮಾಡಿಕೊಳ್ಳಲು ಬಯಸುವಿರಿ. ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯುವುದು ಉಚಿತ. ಆಪ್ತರ ಜೊತೆ ಹರಟೆ ಹೊಡೆಯುವಿರಿ. ಸಾಹಿತ್ಯ ಕ್ಷೇತ್ರದವರು ಸಾಧಿಸಲು ಮಾರ್ಗಗಳು ಗೊತ್ತಾಗಲಿವೆ. ಯಾರ ಮಾತನ್ನೂ ಕೇಳುವ ಸಹನೆ ಇಲ್ಲವಾದೀತು. ಪ್ರೀತಿಯಿಂದ ಆಡಿದ ಮಾತು ಉಪಯೋಗಕ್ಕೆ ಬರಲಿದೆ.
ತುಲಾ ರಾಶಿ: ಸಮಯಪಾಲನೆ, ಕಾರ್ಯದಲ್ಲಿ ನಿಷ್ಠೆ ನಿಮ್ಮನ್ನು ಭಯದಿಂದ ದೂರಮಾಡಲಿದೆ. ಇಂದು ನಿಮ್ಮ ಮಾತುಗಳು ಕೆಲವರಿಗೆ ವಿರೋಧದಂತೆ ಭಾಸವಾಗಬಹುದು. ಹರಿತವಾದ ಕತ್ತಿ ಇದೆ ಎಂದು ಮೂಗನ್ನು ಕತ್ತರಿಸಲಾಗದು. ಅದರ ಉಪಯೋಗವನ್ನು ತಿಳಿದಿಕೊಂಡು ಅದನ್ನು ಮಾಡಬೇಕು. ಜನರ ಜೊತೆ ಬೆರೆಯುವ ಮನಸ್ಸಾಗುವುದು. ದೂರದಲ್ಲಿ ಇರುವವರು ಮನೆಗೆ ಹೋಗಲಿದ್ದಾರೆ. ಹಳೆಯ ಪದ್ಧತಿಗಳ ಅನುಷ್ಠಾನಕ್ಕೆ ಒತ್ತುಕೊಡುವಿರಿ. ಆಸ್ತಿಯ ವಿಚಾರವಾಗಿ ನೆರೆ ಹೊರೆಯಲ್ಲಿ ಕಲಹವಾಗಬಹುದು. ವಿದೇಶದ ವ್ಯಾಪಾರದಲ್ಲಿ ಸ್ವಲ್ಪ ಹಿನ್ನಡೆಯಾಗಬಹುದು. ಅನಿವಾರ್ಯವಾದ ವಸ್ತುಗಳನ್ನು ಮಾತ್ರ ಖರೀದಿಸಿ. ವ್ಯವಹಾರದಲ್ಲಿ ಶುದ್ಧಹಸ್ತರಾದಷ್ಟು ಬೇಡಿಕೆ ಹೆಚ್ಚು. ಸಂಗಾತಿಯೂ ನಿಮ್ಮ ಜೊತೆ ಸರಿಯಾಗಿ ಮಾತನಾಡುವುದಿಲ್ಲ. ಏಕಾಂತವಾಗಿ ಒಂದುಕಡೆ ಕುಳಿತು ಚಿಂತಾಮಗ್ನರಾಗುವಿರಿ. ದೂರದ ಊರಿಗೆ ಹೋಗಬೇಕಾಗುವುದು. ನಿಮಗೆ ಸಿಗಬೇಕಾದ ಗೌರವವು ಗೊಂದಲದಲ್ಲಿ ಇದ್ದು ಕೊನೆಗೂ ನಿಮಗೇ ಸಿಗಲಿದೆ. ತಾಳ್ಮೆಯನ್ನು ಕಳೆದುಕೊಳ್ಳದೇ ವ್ಯವಹರಿಸಲು ಪ್ರಯತ್ನಿಸಿ.
ವೃಶ್ಚಿಕ ರಾಶಿ: ನಿಮ್ಮ ಮಾತು ಶಾಸನವಾಗಲು ನೀವು ಶಾಸನಪಾಲಕರಾಗಬೇಕಾಗುವುದು. ಮಕ್ಕಳ ಪ್ರೀತಿಯಲ್ಲಿ ನೀವು ಕಳೆದುಹೋಗುವಿರಿ. ಕ್ರೀಡೆಯಲ್ಲಿ ಹೆಚ್ಚು ಮನಸ್ಸುಳ್ಳವರಾಗುವಿರಿ. ಸ್ನೇಹಪರವಾಗಿ ಇದ್ದಷ್ಟು ನಿಮಗೆ ಅನುಕೂಲತೆಗಳು ಜಾಸ್ತಿ. ಇಂದು ನೀವು ಇನ್ನೊಬ್ಬರ ಶ್ರೇಯಸ್ಸಿಗೆ ಕೆಲಸವನ್ನು ಮಾಡಲು ಇಚ್ಛಿಸುವಿರಿ. ಸಾಮಾಜಿಕ ಕೆಲಸವು ನಿಮಗೆ ಪ್ರಿಯವಾದುದಾಗಿದೆ. ನಿಮ್ಮ ಮಾತು ತಪ್ಪಾಗಿ ಅರ್ಥವಾಗಬಹುದು. ನೂತನ ವಸ್ತುಗಳನ್ನು ಧರಿಸಿ ಸಂತೋಷ ಪಡುವಿರಿ. ದಾಂಪತ್ಯದಲ್ಲಿ ಸುಖವಾಗಿರಬೇಕೆಂಬ ವಿಷಯವನ್ನು ಸಂಗಾತಿಯ ಜೊತೆ ಹಂಚಿಕೊಳ್ಳುವಿರಿ. ಹಣಕಾಸಿನ ಕೊರತೆಯಿಂದ ನಿಮಗೆ ನೆಮ್ಮದಿ ಕಡಿಮೆಯಾದೀತು. ಮನೆಯ ಒತ್ತಡದ ವ್ಯವಹಾರದಿಂದ ಸುಖ ನಿದ್ರೆ ನಿಮ್ಮದಾಗದು. ಹೆಚ್ಚಿನ ದುಡಿಮೆಗೆ ಪ್ರತ್ನಿಸುವಿರಿ. ಅನ್ಯರನ್ನು ಅನುಸರಿಸಲು ನಿಮಗೆ ಇಷ್ಟವಾಗದು. ನಿಮ್ಮದೇ ಚಿಂತನೆಯನ್ನು ಬೆಳೆಸಿಕೊಳ್ಳಲು ಬಯಸುವಿರಿ. ನಿಮ್ಮದಲ್ಲದ ವಸ್ತುಗಳನ್ನು ಜೋಪಾನ ಮಾಡುವುದು ಅನಿವಾರ್ಯ. ಸಮಯದ ಬೆಲೆಯನ್ನು ಅನ್ಯರಿಂದ ಪಡೆಯುವಿರಿ.
ಧನು ರಾಶಿ: ಹಣವನ್ನು ಉಳಿಸಲು ಅದನ್ನು ಪರಿವರ್ತನೆ ಮಾಡದೇ ಬೇರೆ ಉಪಾಯವಿರದು. ಇಂದು ಕಛೇರಿಯಲ್ಲಾಗಲಿ ನಿಮ್ಮ ಮಾತನ್ನು ಬೆಂಬಲಿಸತ್ತಾರೆ. ಎಲ್ಲವನ್ನೂ ಮರೆತು ಕುಳಿತುಕೊಳ್ಳಲು ಕಷ್ಟವಾಗುವುದು. ಇಂದು ನಿಮ್ಮ ಕೌಶಲದ ಬಗ್ಗೆ ಹಂಚಿಕೊಳ್ಳಿ. ನಿಮಗೆ ಮುಂದಿನ ಜೀವನೋಪಾಯಕ್ಕೆ ದಾರಿಯಾದೀತು. ಆರ್ಥಿಕವಾಗಿ ಸಬಲರಾಗುವ ಹಂಬಲವಿದ್ದರೂ ಆಲಸ್ಯದಿಂದ ಹೊರಬರದೇ ಇದು ಸಾಧ್ಯವಿಲ್ಲ. ನಿಮ್ಮ ಸಂದೇಶ ಬೇರೆ ಅರ್ಥವನ್ನು ಕೊಡಬಹುದು. ಸಾಲವನ್ನು ಸ್ವಲ್ಪ ತೀರಿಸುವಿರಿ. ಅಲ್ಪವೇ ಮಾತನಾಡಿದರೂ ಅದು ಸ್ಪಷ್ಟವಾಗಿ ಇರಲಿದೆ. ನಿಮ್ಮದಲ್ಲದ ವಸ್ತುವನ್ನು ನೀವು ಸ್ವೀಕರಿಸಿ ಅಪಮಾನವನ್ನು ಅನುಭವಿಸುವಿರಿ. ಸ್ತ್ರೀಯರ ಕುರಿತ ನಿಮ್ಮ ಕಾಳಜಿ ಅತಿಯಾದೀತು. ಕೆಲಸವಿಲ್ಲದೇ ಮನೆಯಲ್ಲಿ ಕುಳಿತಿರುವುದು ಹಿಂಸೆಯಾದೀತು. ಕಾನೂನಿಗೆ ವಿರುದ್ಧವಾದ ನಡೆಯು ನಿಮಗೆ ಅಪಾಯಕಾರಿ. ಆತುರಾತುರದಿಂದ ನೀವು ಮಾಡುವ ನಿರ್ಧಾರಗಳು ಮುಜುಗರ ಉಂಟುಮಾಡಲಿದೆ.
ಮಕರ ರಾಶಿ: ದುರ್ಬುದ್ಧಿಯನ್ನು ಪರಿವರ್ತಿಸುವ ಪ್ರಯತ್ನ ನಡೆಯಲಿದೆ. ಇಂದು ನಿಮಗೆ ಸೇವೆಯಲ್ಲಿ ಸಂತೋಷ ಸಿಗಲಿದೆ. ನೀವು ತೊಂದರೆಗೆ ಸಿಲುಕದಂತೆ ದಾಟಲು ನಿಮಗೆ ಯಾರಿಂದಲಾದರೂ ಸೂಚನೆ ಬರಬಹುದು. ಯಾವುದಾದರೂ ಜವಾಬ್ದಾರಿಯನ್ನು ಪಡೆದರೆ ಮುಂದಾಗುವ ಎಲ್ಲದೂ ನಿಮ್ಮ ಮೇಲೆ ಬರಬಲಿದೆ. ಆತ್ಮೀಯರಾದರೂ ಅವರ ಹಣಕಾಸಿನ ವಿಚಾರ ನಿಮಗೆ ಬೇಡದ್ದು. ಕಛೇರಿಯಲ್ಲಿ ಕೆಲಸ ಮಾಡುವವರು ಒತ್ತಡದಿಂದ ಬೇಯಲಿದ್ದೀರಿ. ಭೂಮಿಯ ವ್ಯವಹಾರವನ್ನು ತೆಗೆದುಕೊಳ್ಳಲು ಹಿಂಜರಿಯಬಹುದು. ನಿಮ್ಮ ಮಾತನ್ನು ಕೇಳುತ್ತಾರೆಂದು ಏನನ್ನಾದರೂ ಹೇಳಿ ಇನ್ನೊಬ್ಬರ ಕೆಂಗಣ್ಣಿಗೆ ಗುರಿಯಾಗಬೇಡಿ. ನಿಮ್ಮ ಅತಿಕೋಪವು ಬಾಂಧವ್ಯವನ್ನು ಅಸ್ಥಿರ ಮಾಡುವುದು. ಆಕಸ್ಮಿಕ ವಾರ್ತೆಯಿಂದ ದುಃಖವು ಉಂಟಾಗಬಹುದು. ನಿರ್ಲಕ್ಷ್ಯದ ಮನೋಭಾವವು ನಿಮಗೆ ಹಿಡಿಸಿದ್ದಲ್ಲ. ಎಲ್ಲ ಸುದ್ದಿಗಳನ್ನೂ ಕೇಳುವ ಮನಃಸ್ಥಿತಿಯನ್ನು ಬಿಡಿಬೇಕಾದೀತು. ಪಾಲುದಾರಿಕೆಯು ಬಳಕೆ ಇಲ್ಲದೇ ತಪ್ಪಿಹೋಗುವುದು.
ಕುಂಭ ರಾಶಿ: ಸ್ತ್ರೀಯರಿಗೆ ವಿವಾಹದ ಮಾತುಕತೆ ಗಲಿಬಿಲಿಯನ್ನು ಉಂಟುಮಾಡಬಹುದು. ಆತುರದಲ್ಲಿ ಏನಾದರೂ ನಿರ್ಧಾರವನ್ನು ತೆಗದುಕೊಳ್ಳಬೇಡಿ. ಸಾಲವು ನಿಮ್ಮ ಆತ್ಮೀಯತೆಯನ್ನು ಹಾಳುಮಾಡುವುದು. ಇಂದು ನೀವು ಸಣ್ಣ ವಿಷಯಗಳಿಗೂ ಕೋಪ ಮಾಡಿಕೊಳ್ಳುವಿರಿ. ನಿಮ್ಮದೇ ತೀರ್ಮನದಿಂದ ಹೊರಬರಲು ಪ್ರಯತ್ನಿಸಿ. ಸಹೋದರರ ಜೊತೆ ವಾಗ್ವಾದವು ಹೆಚ್ಚಾಗಲಿದೆ. ಒಂದು ವಿಷಯಕ್ಕೆ ಅನೇಕ ಮುಖಗಳು ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕಾಗಿದೆ. ಗೊತ್ತಿರುವ ವಿಷಯವನ್ನೇ ಎಲ್ಲರಿಂದ ಪುನಃ ಪುನಃ ಕೇಳುವಿರಿ. ನಿಮಗೆ ದೈವಬಲವು ಕಡಿಮೆ ಇದ್ದು ಏನಾದರೂ ತೊಂದರೆಯಾದೀತು. ಶ್ರದ್ಧೆಯಿಂದ ಕುಲದೇವರನ್ನು ಆರಾಧಿಸಿ. ಇಂದಿನ ನಿಮ್ಮ ಕೆಲಸಗಳು ಆತಂಕವಿಲ್ಲದೇ ನಡೆಯುವುದು. ಗ್ರಾಹಕರನ್ನು ಚನ್ನಾಗಿ ಇಟ್ಟುಕೊಂಡು ವ್ಯಾಪಾರದಲ್ಲಿ ಲಾಭವನ್ನು ಪಡೆಯಿರಿ. ಆರ್ಥಿಕ ಸಂಕಷ್ಟದಿಂದ ಬುದ್ಧಿಗೆ ಏನೂ ಸೂಚಿಸದೇ ಇರಬಹುದು. ಇಂದು ಜೊತೆಗಾರಿಂದ ಅಪಹಾಸ್ಯಕ್ಕೆ ಸಿಲುಕುವ ಸಾಧ್ಯತೆ.
ಮೀನ ರಾಶಿ: ನಿಮಗೆ ವಿಶ್ರಾಂತಿ ಇಲ್ಲದೆ ಕುಟುಂಬಕ್ಕಾಗಿ ದುಡಿಯುವುದು ಅಭ್ಯಾಸವಾಗಲಿದೆ. ನಿಮಗೆ ಧಾರ್ಮಿಕ ಕಾರ್ಯಗಳಿಂದ ನಿಮ್ಮ ಹಣದ ಸಂಪಾದನೆಯಾಗಲಿದೆ. ಹಿರಿಯರ ಬೇಸರವೇ ನಿಮಗೆ ಶಾಪದಂತೆ ಆಗಬಹುದು. ಇದು ನಿಮ್ಮ ಮನಸ್ಸಿಗೆ ಇಂದು ನೀವು ಶುಭದಿನದ ನಿರೀಕ್ಷೆಯಲ್ಲಿ ಇರುವಿರಿ. ನಿಮ್ಮ ಸಾಮರ್ಥ್ಯ ಅನಾವರಣಕ್ಕೆ ಇಂದು ಶುಭದಿನವಾಗಲಿದೆ. ಪ್ರೀತಿಯಲ್ಲಿ ಬಿದ್ದು ನೀವು ಒದ್ದಾಡುವ ಸ್ಥಿತಿ ಎದುರಾಗಬಹುದು. ಕೆಲವೊಮ್ಮೆ ಸಹನೆ ಕಳೆದುಕೊಂಡು ಉಗ್ರವಾಗುವಿರಿ. ಸಂಗಾತಿಗೆ ಅನಿರೀಕ್ಷಿತ ಉಡುಗೊರೆಯನ್ನು ನೀಡಿ. ಅನಾರೋಗ್ಯದವಿದ್ದರೂ ಕೆಲಸವನ್ನು ಮಾಡಬೇಕಾಗುವುದು. ಅತಿಯಾದ ಪ್ರೀತಿಯನ್ನು ಮಕ್ಕಳಮೇಲೆ ತೋರಿಸಬೇಡಿ. ಅವಶ್ಯಕತೆ ಇದ್ದಷ್ಟೇ ಇರಲಿ. ಇಂದು ಮನೆಯ ಕೆಲಸದಲ್ಲಿ ಮಗ್ನರಾಗುವಿರಿ. ಮಕ್ಕಳು ನಿಮಗೆ ಸಹಾಯ ಮಾಡಿಯಾರು. ಒಳ್ಳೆಯ ಭೋಜನವನ್ನು ಸ್ವೀಕರಿಸುವಿರಿ. ಮಾತನಾಡುವ ಇಚ್ಛೆ ಇಂದು ಕಡಿಮೆ ಇರಲಿದೆ. ವಸ್ತುಗಳು ಕಾಣೆಯಾಗಬಹುದು. ಎಲ್ಲವನ್ನೂ ನಿಮ್ಮ ಮೇಲೆ ಹೇರಬಹುದು.
– ಲೋಹಿತ ಹೆಬ್ಬಾರ್ – 8762924271 (what’s app only)