AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Horoscope: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ

ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ​ 17) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ
ಪ್ರಾತಿನಿಧಿಕ ಚಿತ್ರ
ಗಂಗಾಧರ​ ಬ. ಸಾಬೋಜಿ
|

Updated on: May 17, 2023 | 5:30 AM

Share

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಮೇ​ 17) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಕೃತ್ತಿಕಾ, ಮಾಸ : ವೈಶಾಖ, ಪಕ್ಷ : ಕೃಷ್ಣ, ವಾರ : ಬುಧ, ತಿಥಿ : ತ್ರಯೋದಶೀ, ನಿತ್ಯನಕ್ಷತ್ರ : ರೇವತೀ, ಯೋಗ : ಪ್ರೀತಿ, ಕರಣ : ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 05 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 15 ನಿಮಿಷಕ್ಕೆ, ರಾಹು ಕಾಲ 12:29 ರಿಂದ 02:05ರ ವರೆಗೆ, ಯಮಘಂಡ ಕಾಲ 07:41 ರಿಂದ 09:17ರ ವರೆಗೆ, ಗುಳಿಕ ಕಾಲ 10:53 ರಿಂದ 12:29ರ ವರೆಗೆ.

ಮೇಷ: ನಿಮ್ಮನ್ನು ನೀವು ಸರಿಯಾಗಿ ಅರ್ಥಮಾಡಿಕೊಂಡರೂ ಇನ್ನೊಬ್ಬರು ಅದನ್ನು ಬೇರೇ ರೀತಿಯಲ್ಲಿ ಅರ್ಥೈಸುವರು. ಸ್ನೇಹಿತರಿಂದ ಸಹಾಯಗಳು ಸಿಗಬಹುದು. ಎಲ್ಲವನ್ನೂ ನೀವೇ ನಿರ್ವಹಣೆ ಮಾಡಬೇಕು ಎನ್ನುವ ಅತಿಯಾದ ಆಸೆಯಾಗಲೀ ದುರ್ಬುದ್ಧಿಯಾಗಲಿ ಬೇಡ. ಎಲ್ಲರ ಜೊತೆ ಸಂತೋಷದಿಂದ ಮಾಡುವುದು ಒಳ್ಳೆಯದು. ಸಲುಗಿಯನ್ನು ಹೆಚ್ಚು ಮಕ್ಕಳ ವಿಚಾರದಲ್ಲಿ ಕೊಡುವುದು ಬೇಡ. ವಿದ್ಯಾರ್ಥಿಗಳು ತಮ್ಮ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳುವುದು ಸೂಕ್ತ. ಗೃಹದ ನಿರ್ವಹಣೆಯಲ್ಲಿ ಅಧಿಕ ಖರ್ಚು ಬರಬಹುದು. ಇದು ಅನಿವಾರ್ಯವಾದುದು ಆಗಿದೆ.

ವೃಷಭ: ಸಜ್ಜನರ ಸಹವಾಸ ನಿಮಗೆ ಸಿಗಲಿದೆ. ನಿಮ್ಮ ಉತ್ತಮ‌ ಆಲೋಚನೆಗಳನ್ನು ಬೇರೆಯವರ ಜೊತೆ ಹಂಚಿಕೊಳ್ಳುವಿರಿ. ಸ್ನೇಹಿತರ ಜೊತೆಗಿನ ಅನುಬಂಧವು ಸ್ವಲ್ಪ ಹದಗೆಡಬಹುದು. ಸುತ್ತಾಟಗಳು ನಿಮಗೆ ಆಯಾಸವನ್ನು ಉಂಟುಮಾಡುವುವು.‌ ಅಂದುಕೊಂಡಷ್ಟು ಕೆಲಸವಾಗಿದ್ದರೂ ಆಗಿರುವಷ್ಟರಲ್ಲಿ ಖುಷಿಯಿರಲಿದೆ. ಜಬಾಬ್ದಾರಿಯಲ್ಲಿ ಸ್ವಲ್ಪ ಹಿನ್ನಡೆಯಾದೀತು. ಎಲ್ಲ ಸಂದರ್ಭವನ್ನೂ ಒಂದೇ ರೀತಿಯಲ್ಲಿ ನೋಡಲಾಗದು. ಹೆಚ್ಚು ಪಾರದರ್ಶಕವಾಗಿ ಇರುವಿರಿ.

ಮಿಥುನ: ಎಲ್ಲದಕ್ಕೂ ನಿಮ್ಮನ್ನೆ ಹೊಣೆಗಾರರನ್ನಾಗಿ ಮಾಡುವರು. ನಿಮಗೆ ಅದು ಇಷ್ಟವಾಗದೇ ಕಿರಿಕಿರಿ ಆದೀತು. ನಿಮ್ಮವರ ಮೇಲೆ ನಂಬಿಕೆ ಇರಲಿ. ಬಂದಿದ್ದನ್ನು ಸ್ವೀಕರಿಸುವ ಸ್ವಭಾವದಿಂದ ಹೆಚ್ಚು ಸುಖವಾಗಿ ಇರಬಹುದು. ಭೂಮಿಯ ವ್ಯವಹಾರವು ತಕ್ಕ ಮಟ್ಟಿಗೆ ಲಾಭವನ್ನು ನೀಡುತ್ತದೆ, ನಿರೀಕ್ಷಿಸಿದಷ್ಟು ಅಲ್ಲ. ಕಛೇರಿಯು ನಿಮ್ಮ ಕಾರ್ಯವನ್ನು ಸದಾ ಅಪೇಕ್ಷಿಸುತ್ತದೆ. ಆತುರ ನಿರ್ಧಾರಗಳು ನಿಮಗೆ ಸೂಕ್ತವಾಗದು. ಮಾತುಗಳನ್ನು ಕಡಿಮೆ ಮಾಡಿ, ಕೆಲಸದ ಕಡೆ ಗಮನವಿರಲಿ. ನೂತನ ವಸ್ತುಗಳನ್ನು ಖರೀದಿಸುವಿರಿ.

ಕರ್ಕಾಟಕ: ಹತ್ತಾರು ಅವಕಾಶಗಳು ತೆರೆದಿದ್ದರೂ ಯಾವುದೂ ನಿಮಗೆ ಸೂಕ್ತವಾಗಿ ಇರಲಾರದು. ಯೋಗ್ಯವಾದುದು ಸಿಕ್ಕರೂ ಇನ್ನೊಬ್ಬರ ಪಾಲಾಗುವ ಸಾಧ್ಯತೆ ಇದೆ. ಕನ್ನಡಿಯ ಗಂಟಿನಂತೆ ಎಲ್ಲವೂ ಆಗುವುದು. ತಂತ್ರಜ್ಞಾನದಲ್ಲಿ ತೊಡಗಿರುವವರು ಹೆಚ್ಚಿನ ಅನನುಕೂಲತೆಯನ್ನು ಅನುಭವಿಸಬೇಕಾದೀತು. ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸೋಲುವಿರಿ. ಉದ್ವೇಗವು ನಿಮ್ಮ ನೆಮ್ಮದಿಯನ್ನು ಹಾಳು ಮಾಡೀತು. ಕೆಲಸಗಳು ಅಪೂರ್ಣವಾಗಲಿವೆ. ಕಳೆದುದರ ಬಗ್ಗೆ ಚಿಂತೆ ಬೇಡ. ಉತ್ತಮವಾದುದನ್ನು ಪಡೆಯುವಿರಿ.