AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತಿ ಕ್ಲಿಷ್ಟಕರವಾದ ಯೋಗ ಹ್ರದ – ಹುತಾಶನ ಯೋಗ.. ಏನೆಲ್ಲ ಪಡೆದುಕೊಳ್ಳಬಹುದು? ಏನನ್ನು ಕಳೆದುಕೊಳ್ಳಬಹುದು?

ಹುತಾಶನ ಮತ್ತು ಹ್ರದ ಯೋಗಗಳು ಜ್ಯೋತಿಷ್ಯ ಶಾಸ್ತ್ರದಲ್ಲಿ ಅತ್ಯಂತ ಕಷ್ಟಕರವಾದ ಯೋಗಗಳಾಗಿವೆ. ಇವು ಗ್ರಹಗಳ ಅಶುಭ ಸ್ಥಾನಗಳಿಂದ ಉಂಟಾಗುತ್ತವೆ ಮತ್ತು ಜಾತಕದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಹುತಾಶನ ಯೋಗದಲ್ಲಿ ಕೆಲಸಗಳು ನಾಶವಾಗಬಹುದು, ಆದರೆ ಹ್ರದ ಯೋಗದಲ್ಲಿ ಜೀವನವೇ ಕಷ್ಟಕರವಾಗಬಹುದು. ಪ್ರತಿದಿನ ದೇವರ ಆರಾಧನೆಯಿಂದ ಈ ಯೋಗಗಳ ಪರಿಣಾಮವನ್ನು ಕಡಿಮೆ ಮಾಡಬಹುದು.

ಅತಿ ಕ್ಲಿಷ್ಟಕರವಾದ ಯೋಗ ಹ್ರದ - ಹುತಾಶನ ಯೋಗ.. ಏನೆಲ್ಲ ಪಡೆದುಕೊಳ್ಳಬಹುದು? ಏನನ್ನು ಕಳೆದುಕೊಳ್ಳಬಹುದು?
ಜ್ಯೋತಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Jul 22, 2025 | 4:19 PM

Share

ಮನುಷ್ಯನಿಗೆ ಮಾತ್ರವಲ್ಲ, ಜಗತ್ತಿನಲ್ಲಿ ಜನಿಸಿದ ಪ್ರತಿಯೊಂದು ಜೀವಿಗೂ ಆಗುವ ಪ್ರತಿಯೊಂದು ಶುಭಾಶುಭವೂ ಒಂದು ಕಡೆಯಲ್ಲಿ ಸೇರಿಕೊಂಡಿರುತ್ತದೆ. ಅದು ಕಾಲಕಾಲಕ್ಕೆ ಗ್ರಹಗಳ ಮೂಲಕ ಅವುಗಳಿಗೆ ಪ್ರಾಪ್ತವಾಗುವುದು. ಶುಭಕ್ಕೂ ಅಶುಭಕ್ಕೂ ಮನುಷ್ಯನ ಅಥವಾ ಆಯಾ ಜೀವಿಗಳ ಕರ್ಮವೇ ಕಾರಣವಾದುದರಿಂದ ಅವುಗಳು ಗ್ರಹಗಳ ರೂಪದಿಂದ ಫಲ ನೀಡುತ್ತವೆ. ಶುಭಾಶುಭ ಫಲಗಳನ್ನು ನೋಡಲೂ ಅಶುಭವನ್ನು ಪರಿಹರಿಸಿಕೊಳ್ಳಲೂ ಬರುವುದು. ಅದಕ್ಕೆ ಜ್ಯೋತಿಷ್ಯ ಶಾಸ್ತ್ರ ಬಹಳ ಉಪಕಾರಿ. ಇಲ್ಲಿ ಹೇಳಿರುವ ಯೋಗಗಳು ಪೂರ್ವಜನ್ಮದ ಆಧಾರದ ಮೇಲೆ ಇರುವ ಕಾರಣ ಅವುಗಳು ನೋಡಿಕೊಳ್ಳಲು ಬರುತ್ತದೆ. ಜ್ಯೋತಿಷ್ಯ ಶಾಸ್ತ್ರ ವಿವರಿಸುವ ಅನೇಕ ವಿಶೇಷ ಯೋಗಗಳಲ್ಲಿ‌ ಇದೂ ಒಂದು ಯೋಗ. ಹುತಾಶನ ಎಂದರೆ ಅಗ್ನಿ ಎಂದರ್ಥ. ಆದರೆ ಈ ಯೋಗವಿದ್ದವರಿಗೆ ಅಗ್ನಿಯಿಂದ ಲಾಭ ನಷ್ಟ ಎಂದಲ್ಲ. ಕೆಲವು ಗ್ರಹಗಳ‌ ಸಂಯೋಗದಿಂದ ಇದು ಸಂಭವಿಸುತ್ತದೆ.

ಶನಿ, ಕುಜ, ಬುಧ, ಚಂದ್ರರು ನೀಚಸ್ಥಾನದಲ್ಲಿದ್ದಾಗ ಹಾಗೂ ಮಕರ ರಾಶಿಯಲ್ಲಿ ಶುಕ್ರ ಇದ್ದಾಗ ಈ ಯೋಗ. ಶನಿಯ ನೀಚ ಸ್ಥಾನ ಮೇಷ, ಕುಜನ ನೀಚ ಸ್ಥಾನ ಕರ್ಕಾಟಕ, ಬುಧನ ನೀಚ ರಾಶಿ ಮೀನ ಹಾಗೂ ಚಂದ್ರನ ನೀಚ ರಾಶಿ ವೃಶ್ಚಿಕ. ಇಲ್ಲಿದ್ದಾಗ ಹುತಾಶನ ಯೋಗ.

ಇದನ್ನೂ ಓದಿ: ಮನೆಯಲ್ಲಿ ನಟರಾಜನ ಪ್ರತಿಮೆ ಇಡಬಾರದು ಎಂದು ಹೇಳುವುದೇಕೆ?

ಈ ಯೋಗವನ್ನು ಇನ್ನೊಂದು ರೀತಿಯಲ್ಲಿ ನೋಡುತ್ತಾರೆ. ತಿಥಿಯಲ್ಲಿ ಷಷ್ಠೀ ತಿಥಿಯಿಂದ ಆರಂಭಿಸಿ ಸೋಮ, ಮಂಗಳ, ಬುಧ, ಗುರು, ಶುಕ್ರ, ಶನಿ, ಭಾನುವಾರಗಳು ಬಂದರೆ ಅದನ್ನು ಹುತಾಶನ ಯೋಗವೆನ್ನುವರು. ಇಂತಹ ಯೋಗವಿದ್ದಾಗ ಆರಂಭ ಮಾಡಿದ ಕೆಲಸಗಳು ನಾಶವಾಗುವುವು. ಹೊಸ ಕಾರ್ಯಗಳನ್ನು ತಿಳಿವಳಿಕೆಯುಳ್ಳವರು ಪ್ರಾರಂಭವನ್ನು ಮಾಡಲಾರರು. ಈ ಯೋಗದಲ್ಲಿ ಜನಿಸಿದವರು ಸದಾ ಉದ್ವೇಗ, ಒತ್ತಡದಲ್ಲಿ ಇರುವರು ಮತ್ತು ಸುಖವಾಗಿ ಇರಲಾರರು. ನಿತ್ಯ ದುಃಖದಿಂದ ಇರುವರು.

ಹ್ರದ ಎಂದರೆ ಕೆಸರು ಎಂದರ್ಥ. ಎಲ್ಲ ಗ್ರಹಗಳೂ ತಮ್ಮ ತಮ್ಮ ನೀಚ ರಾಶಿಯವರ ಇದ್ದರೆ ಹ್ರದ ಯೋಗ. ಈ ಯೋಗದಲ್ಲಿ ಜನಿಸುವವರು ಬಹಳ ಅಪರೂಪವಾದರೂ ಜನಿಸಿದ ಮನುಷ್ಯ ಅತ್ಯಂತ ಕಷ್ಟದಲ್ಲಿಯೇ ಜೀವನ ನಡೆಸುವನು. ಹೇಗೆಂದರೆ, ಕೆಸರಿನಲ್ಲಿ ಇರುವ ಮನುಷ್ಯ ಅಥವಾ ಪ್ರಾಣಿ ಹೇಗೆ ನೆಮ್ಮದಿಯಿಂದ ಜೀವನವನ್ನು ನಡೆಸಲು ಸಾಧಯವಾಗದೋ, ಅಲ್ಲಿಂದ ಮೇಲೆ ಬರಲು ಪ್ರಯತ್ನಿಸಿಯೂ ಮೇಲೆ ಬರಲು ಅಶಕ್ಯವಾಗದೋ ಹಾಗೆ. ತನ್ನ ಬಲವನ್ನೆಲ್ಲ ಕಳೆದುಕೊಳ್ಳಬೇಕಾಗುತ್ತದೆ. ಯಾವ ಪ್ರಯೋಜನವೂ ಆಗದು. ಅದೇ ಸ್ಥಿತಿ ಹ್ರದ ಯೋಗ ಜಾತಕದಲ್ಲಿ ಇರಲಿದೆ. ಗ್ರಹಗಳು ದುರ್ಬಲರಾದರೆ ಜಾತಕನೂ ದುರ್ಬಲನಾಗುವನು.

ಬಹಳ ಅಪರೂಪದ ಯೋಗವಾಗಿದದ್ದು ಅಂತಹ ದೌರ್ಭಾಗ್ಯವುಳ್ಳವನಿಗೆ ಪ್ರಾಪ್ತವಾಗುವುದು. ಇಂತಹ ಯೋಗವನ್ನು ಪ್ರಾಚೀನರು ಕಂಡಿದ್ದಾರೆ ಎಂದರೆ, ಯಾರಿಗೋ ಬಂದಿದೆ ಎನ್ನುವುದನ್ನು ಅರಿತುಕೊಳ್ಳಬಹುದು. ಪ್ರತಿದಿನ ಎಲ್ಲ ಗ್ರಹಗಳನ್ನೂ ಅವರ ಅಧಿದೇವತೆಯನ್ನೂ ಅನನ್ಯ ಮನಸ್ಸಿನಿಂದ ಆರಾಧಿಸುವಿದೊಂದೇ ದಾರಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Lohitha Hebbar
Lohitha Hebbar

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
ರೋಗಿ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಕ್ಯಾಂಟರ್​​ಗೆ ಡಿಕ್ಕಿ
ರೋಗಿ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಕ್ಯಾಂಟರ್​​ಗೆ ಡಿಕ್ಕಿ
ಪೆದ್ದಿ ರಿಲೀಸ್​​ಗೂ ಮೊದಲು ಕಾಲ್ನಡಿಗೆಯಲ್ಲಿ ತಿರುಪತಿಗೆ ಬಂದ ಜಾನ್ವಿ
ಪೆದ್ದಿ ರಿಲೀಸ್​​ಗೂ ಮೊದಲು ಕಾಲ್ನಡಿಗೆಯಲ್ಲಿ ತಿರುಪತಿಗೆ ಬಂದ ಜಾನ್ವಿ
ವಿದ್ಯಾರ್ಥಿ ಜೀವನದಲ್ಲಿ ಇವುಗಳಿದ್ದರೆ ಉದ್ಧಾರ ಗ್ಯಾರಂಟಿ
ವಿದ್ಯಾರ್ಥಿ ಜೀವನದಲ್ಲಿ ಇವುಗಳಿದ್ದರೆ ಉದ್ಧಾರ ಗ್ಯಾರಂಟಿ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ