AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಗಸ್ಟ್​ ತಿಂಗಳಲ್ಲಿ ಹುಟ್ಟಿದರೆ ಈ ಗುಣಗಳು ಇರುತ್ತವೆ; ನಿಮ್ಮಲ್ಲಿ ಈ ಸ್ವಭಾವ ಇದೆಯೇ?

ಇನ್ನು ನಾಲ್ಕು ದಿನ ಕಳೆದರೆ ಜುಲೈ ತಿಂಗಳು ಮುಗಿಯುತ್ತದೆ. ಆಗಸ್ಟ್ ಆರಂಭವಾಗುತ್ತದೆ. ಇಂದಿನ ಲೇಖನದಲ್ಲಿ ಆಗಸ್ಟ್ ತಿಂಗಳಲ್ಲಿ ಹುಟ್ಟಿದವರ ಸ್ವಭಾವ, ಗುಣಾವಗುಣಗಳು ಹೇಗಿರುತ್ತವೆ ಎಂಬುದನ್ನು ತಿಳಿಸಿಕೊಡಲಾಗುತ್ತದೆ. ಈ ಮೂಲಕ ಇವರ ಸಾಮರ್ಥ್ಯ ಏನು ಹಾಗೂ ತಿದ್ದುಕೊಳ್ಳಬೇಕಾದ ಗುಣಗಳು ಏನು ಎಂಬುದು ಸಹ ತಿಳಿಯಲು ಅನುಕೂಲ ಆಗುತ್ತದೆ. ಇನ್ನು ತಡ ಮಾಡುವುದು ಬೇಡ, ಆಗಸ್ಟ್ ತಿಂಗಳಲ್ಲಿ ಹುಟ್ಟಿದವರು ಹೇಗಿರುತ್ತಾರೆ ಎಂಬುದರ ವಿವರ ಇಲ್ಲಿದೆ. – ಎಂಥ ಕಠಿಣ ಸನ್ನಿವೇಶಲ್ಲೂ ತಮ್ಮ ಭರವಸೆವನ್ನು ಕಳೆದುಕೊಳ್ಳದ ಜನ ಇವರು. ಜೀವನ ಅನ್ನೋದೇ […]

ಆಗಸ್ಟ್​ ತಿಂಗಳಲ್ಲಿ ಹುಟ್ಟಿದರೆ ಈ ಗುಣಗಳು ಇರುತ್ತವೆ; ನಿಮ್ಮಲ್ಲಿ ಈ ಸ್ವಭಾವ ಇದೆಯೇ?
ರಾಶಿ ಚಕ್ರ
TV9 Web
| Edited By: |

Updated on: Jul 28, 2021 | 6:50 AM

Share

ಇನ್ನು ನಾಲ್ಕು ದಿನ ಕಳೆದರೆ ಜುಲೈ ತಿಂಗಳು ಮುಗಿಯುತ್ತದೆ. ಆಗಸ್ಟ್ ಆರಂಭವಾಗುತ್ತದೆ. ಇಂದಿನ ಲೇಖನದಲ್ಲಿ ಆಗಸ್ಟ್ ತಿಂಗಳಲ್ಲಿ ಹುಟ್ಟಿದವರ ಸ್ವಭಾವ, ಗುಣಾವಗುಣಗಳು ಹೇಗಿರುತ್ತವೆ ಎಂಬುದನ್ನು ತಿಳಿಸಿಕೊಡಲಾಗುತ್ತದೆ. ಈ ಮೂಲಕ ಇವರ ಸಾಮರ್ಥ್ಯ ಏನು ಹಾಗೂ ತಿದ್ದುಕೊಳ್ಳಬೇಕಾದ ಗುಣಗಳು ಏನು ಎಂಬುದು ಸಹ ತಿಳಿಯಲು ಅನುಕೂಲ ಆಗುತ್ತದೆ. ಇನ್ನು ತಡ ಮಾಡುವುದು ಬೇಡ, ಆಗಸ್ಟ್ ತಿಂಗಳಲ್ಲಿ ಹುಟ್ಟಿದವರು ಹೇಗಿರುತ್ತಾರೆ ಎಂಬುದರ ವಿವರ ಇಲ್ಲಿದೆ.

– ಎಂಥ ಕಠಿಣ ಸನ್ನಿವೇಶಲ್ಲೂ ತಮ್ಮ ಭರವಸೆವನ್ನು ಕಳೆದುಕೊಳ್ಳದ ಜನ ಇವರು. ಜೀವನ ಅನ್ನೋದೇ ಹಲವು ಅಚ್ಚರಿಗಳ ಸರಮಾಲೆ ಎಂಬುದು ಇವರಿಗೆ ಗೊತ್ತು. ಆದ್ದರಿಂದ ಯಶಸ್ಸು- ವೈಫಲ್ಯಗಳನ್ನು ಸಮಾನವಾಗಿ ಸ್ವೀಕರಿಸುತ್ತಾರೆ. ವೈಫಲ್ಯಗಳು ಇವರನ್ನು ವಿಚಲಿತರನ್ನಾಗಿ ಮಾಡುವುದಿಲ್ಲ. ಅದಕ್ಕೆ ಇವರು ಅವಕಾಶ ಮಾಡಿಕೊಡುವುದಿಲ್ಲ.

– ತಮಗೆ ದೊರೆಯಬೇಕಾದ್ದನ್ನು ಪಡೆದುಕೊಳ್ಳಲು ಬಹಳ ಶ್ರಮ ಪಡುತ್ತಾರೆ. ತಮ್ಮ ಜೀವನದ ಗುರಿಯನ್ನು ತಲುಪುವ ಕಡೆಗೆ ದೃಷ್ಟಿ ನೆಟ್ಟಿರುತ್ತಾರೆ. ಅದು ಆಚೀಚೆ ಆಗದಂತೆ ನೋಡಿಕೊಳ್ಳುತ್ತಾರೆ.

– ಸುಖವೋ ದುಃಖವೋ ಸಮಾಧಾನವೋ ಅಸಮಾಧಾನವೋ ಅದೇನೇ ಆದರೂ ಅದನ್ನು ನೇರವಾಗಿ ಹೇಳಿಕೊಳ್ಳುತ್ತಾರೆ. ತಮ್ಮ ಭಾವನೆಗಳನ್ನು ಮರೆ ಮಾಚಲು ಬಾರದ ವ್ಯಕ್ತಿತ್ವ ಇವರದು. ಆದ್ದರಿಂದ ಇವರಿಗ ಏನಿಷ್ಟವೋ ಏನು ಇಷ್ಟ ಇಲ್ಲವೋ ಎದುರಿನವರಿಗೆ ಸುಲಭವಾಗಿ ತಿಳಿಯುತ್ತದೆ.

– ಇವರು ಎಲ್ಲ ವಿಚಾರದಲ್ಲೂ ಇಂಥದ್ದೇ ಆಗಬೇಕು ಎಂದು ಹಠ ಹಿಡಿಯುವ ಜನ. ಆದ್ದರಿಂದ ಬೇರೆಯವರಿಗೆ ಅಸಾಧ್ಯ ಸಿಟ್ಟು ಕೂಡ ತರಿಸುತ್ತಾರೆ. ಆದರೆ ಇವರನ್ನು ಬದಲಾಯಿಸುವುದಕ್ಕೆ ಆಗಲ್ಲ. ಭಾವನಾತ್ಮಕ ಜೀವಿಗಳಾದ ಇವರು, ತಮ್ಮನ್ನು ಅರ್ಥ ಮಾಡಿಕೊಳ್ಳುವವರೊಂದಿಗೆ ಮಾತ್ರ ಆರಾಮವಾಗಿರುತ್ತಾರೆ.

– ಆಗಸ್ಟ್​ ತಿಂಗಳಲ್ಲಿ ಹುಟ್ಟಿದವರಿಗೆ ಬರವಣಿಗೆ ಕೌಶಲ ಸಹಜವಾಗಿ ಇರುತ್ತದೆ. ಆದರೆ ತಮ್ಮದೇ ಪ್ರತಿಭೆಯ ಬಗ್ಗೆ ಹೆಮ್ಮೆ ಪಡುವಂಥವರಲ್ಲ. ಪದೇಪದೇ ಇವರಿಗೆ ಸಾಮರ್ಥ್ಯವನ್ನು ನೆನಪಿಸುತ್ತಿರಬೇಕು.

– ಭಾವನಾತ್ಮಕ ಜೀವಿಗಳಾದರೂ ಬಹಳ ಗಟ್ಟಿ ಇವರು. ಇತರರಿಗೆ ಕಷ್ಟದ ಸನ್ನಿವೇಶ ಎದುರಾದಾಗ ಬೆನ್ನಿಗೆ ನಿಲ್ಲುತ್ತಾರೆ.

– ತಮ್ಮ ಜತೆಯಲ್ಲಿ ಇರುವವರಿಗೆ ಎಷ್ಟು ಬೋರ್ ಆಗುತ್ತಿದ್ದರೂ ಆ ಕಡೆ ಗಮನ ಇರುವುದಿಲ್ಲ. ತಾನು ಇರೋದೇ ಹೀಗೆ, ಬೇಕಿದ್ದರೆ ಒಪ್ಪಿಕೊಳ್ಳಲಿ- ಇಲ್ಲದಿದ್ದರೆ ಬಿಡಲಿ ಎಂಬ ಧೋರಣೆ ಇವರದು. ಇತರರಿಗೆ ಹೋಲಿಸಿದರೆ ಇವರ ಆಸಕ್ತಿಯೇ ಬೇರೆ ಎಂಬುದರಿಂದ ಹೀಗಾಗುತ್ತದೆ.

– ತಮಗೆ ಬೇಕಾದ್ದು ಸಿಕ್ಕಿದರೆ ಮಾತ್ರ ಸಮಾಧಾನ ಪಡುವ ಇವರು, ಇಲ್ಲದಿದ್ದಲ್ಲಿ ವಿಪರೀತ ಹತಾಶರಾಗುತ್ತಾರೆ. ಮೊಂಡುತನ, ಹಠಮಾರಿತನ ವಿಪರೀತ ಆಗುತ್ತದೆ.

ಇದನ್ನೂ ಓದಿ: Numerology Predictions: 1ರಿಂದ 9ರ ಸಂಖ್ಯೆಗೆ ಯಾವ ದಿನದಲ್ಲಿ ಹುಟ್ಟಿದರೆ ಯಾವ ಗ್ರಹದ ಪ್ರಭಾವ? ಹೇಗಿರುತ್ತದೆ ಸ್ವಭಾವ?

ಇದನ್ನೂ ಓದಿ: Astrology: ಯಾವ ರಾಶಿಗೆ ಯಾವ ಗ್ರಹ ಅಧಿಪತಿ; ಯಾವ ಗ್ರಹಕ್ಕೆ ಎಲ್ಲಿ ಉಚ್ಚ ಸ್ಥಿತಿ ನೀಚ ಸ್ಥಿತಿ ಇಲ್ಲಿದೆ ಮಾಹಿತಿ

(Nature And Characteristics Of August Born People According To Astrology)

Follow Us
ಅಬ್ಬಿ ಫಾಲ್ಸ್‌ನಲ್ಲಿ ಪ್ರವಾಸಿಗರ ಹುಚ್ಚಾಟ!
ಅಬ್ಬಿ ಫಾಲ್ಸ್‌ನಲ್ಲಿ ಪ್ರವಾಸಿಗರ ಹುಚ್ಚಾಟ!
ಅಪಾರ್ಟ್​ಮೆಂಟ್ ನಿರ್ವಹಣೆಗೆ ಹೊಸ ಕಾನೂನು: ಸಮಾಲೋಚನೆ ನಡೆಸಲಿರುವ ಸಿಎಂ
ಅಪಾರ್ಟ್​ಮೆಂಟ್ ನಿರ್ವಹಣೆಗೆ ಹೊಸ ಕಾನೂನು: ಸಮಾಲೋಚನೆ ನಡೆಸಲಿರುವ ಸಿಎಂ
'ಜೋಡಿ ನಂ 1’ ವಿನ್ನರ್ ಆದ ಕೋಟೆ ಪ್ರಭಾಕರ್​-ಮಾಲತಿ ಜೋಡಿ; ಸಿಕ್ಕ ಹಣ ಎಷ್ಟು?
'ಜೋಡಿ ನಂ 1’ ವಿನ್ನರ್ ಆದ ಕೋಟೆ ಪ್ರಭಾಕರ್​-ಮಾಲತಿ ಜೋಡಿ; ಸಿಕ್ಕ ಹಣ ಎಷ್ಟು?
ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕದ್ದವರಿಗೆ ಶುರುವಾಯ್ತು ನಡುಕ!
ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕದ್ದವರಿಗೆ ಶುರುವಾಯ್ತು ನಡುಕ!
ನಿರ್ಲಕ್ಷ್ಯದಿಂದ ಮಹಿಳೆ ಸಾವು: ಜಯದೇವ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ
ನಿರ್ಲಕ್ಷ್ಯದಿಂದ ಮಹಿಳೆ ಸಾವು: ಜಯದೇವ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ
‘ಪರಾಕ್’ ಚಿತ್ರ ಹೇಗೆ ಭಿನ್ನ? ವಿವರಿಸಿದ ನಟ ಶ್ರೀಮುರಳಿ
‘ಪರಾಕ್’ ಚಿತ್ರ ಹೇಗೆ ಭಿನ್ನ? ವಿವರಿಸಿದ ನಟ ಶ್ರೀಮುರಳಿ
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?