AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rashi Bhavishya: ನಿಮ್ಮ ಗಂಭೀರವಾದ ವರ್ತನೆ ನಿಮ್ಮವರಲ್ಲಿ ಆತಂಕ ಮೂಡಿಸಬಹುದು

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ 7) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Rashi Bhavishya: ನಿಮ್ಮ ಗಂಭೀರವಾದ ವರ್ತನೆ ನಿಮ್ಮವರಲ್ಲಿ ಆತಂಕ ಮೂಡಿಸಬಹುದು
ಪ್ರಾತಿನಿಧಿಕ ಚಿತ್ರ
ಗಂಗಾಧರ​ ಬ. ಸಾಬೋಜಿ
|

Updated on: May 07, 2023 | 6:15 AM

Share

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಮೇ​ 7) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಭರಣೀ, ಮಾಸ : ವೈಶಾಖ, ಪಕ್ಷ : ಕೃಷ್ಣ, ವಾರ : ಭಾನು, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ: ಅನುರಾಧಾ, ಯೋಗ : ವರಿಯಾನ್, ಕರಣ : ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 08 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 49 ನಿಮಿಷಕ್ಕೆ, ರಾಹು ಕಾಲ 05:14 ರಿಂದ 06:49ರ ವರೆಗೆ, ಯಮಘಂಡ ಕಾಲ 12:29 ರಿಂದ 02:04ರ ವರೆಗೆ, ಗುಳಿಕ ಕಾಲ 03:39 ರಿಂದ 05:14ರವರೆಗೆ.

ಧನು: ನಿಮ್ಮ ಮಕ್ಕಳು ವಿದ್ಯಾಭ್ಯಾಸದಲ್ಲಿ ಆಸಕ್ತರಾಗಿದ್ದರೆ ಅದನ್ನು ತಪ್ಪಿಸುವ ಕೆಲಸ ಮಾಡಬೇಡಿ. ನಿಮ್ಮ ಸ್ಥಿತಿಯಂತೆ ಎಲ್ಲರ ಸ್ಥಿತಿಯೂ ಆಗಿದೆ ಎಂದುಕೊಳ್ಳಬೇಡಿ. ಅವರವರ ಜೀವನವು ಅವರದ್ದಾಗಿರುತ್ತದೆ. ನಿಮಗೆ ಗೌರವ ಸಿಗದೆ ಕಡೆ ಸುಮ್ಮನೇ ಹೋಗಬೇಡಿ. ದಾಂಪತ್ಯದಲ್ಲಿ ಹೆಚ್ಚಿನ ಸುಖವನ್ನು ನೀವು ಪಡೆಯಬಹುದಾಗಿದೆ. ಆಸ್ತಿಯ ವಿಚಾರದಲ್ಲಿ ಸ್ವಲ್ಪ ಗೊಂದಲವಿರಲಿದ್ದು ಅದನ್ನು ಕುಳಿತು ಮಾತನಾಡುವುದಕ್ಕಿಂತ ಸರಿಯಾದ ಲೆಕ್ಕಾಚಾರ ಮಾಡಿಕೊಳ್ಳುವುದು ಉತ್ತಮ. ನಿಮ್ಮನ್ನು ಕೆರಳಿಸುವ ಮಾತುಗಳು ಕೇಳಿಬರಬಹುದು. ತಾಳ್ಮೆಯಿಂದ ಇರುವುದು ಉತ್ತಮ.

ಮಕರ: ಅತಿಯಾದ ಅಸತ್ಮವಿಶ್ವಾಸವೂ ಅಹಂಕಾರದಂತೆ ತೋರಬಹುದು. ಗೆಳೆತನದಲ್ಲಿ ಬಹಳ ಚುರುಕಿದ್ದರೂ ಕೆಲವು ಸಂದರ್ಭಗಳಿಗೆ ಬಳಕೆಗೆ ಬಾರದು. ಅಲ್ಪ ಕಾಲದ ಆನಂದಕ್ಕೆ ಹೆಚ್ಚು ಮೊತ್ತವನ್ನು ಕೊಡಬೇಕಾದೀತು. ಇಂದು ಮುಕ್ತಾಯವಾಗದಷ್ಟು ಕೆಲಸ, ಕಾರ್ಯಗಳು ಇಂದು ಇರಲಿವೆ. ದೂರ ಪ್ರಯಾಣವನ್ನು ಕೈ ಬಿಡುವುದು ಉತ್ತಮ. ಕೆಲಸದಲ್ಲಿ ತನ್ಮಯತೆಯ ಕೊರತೆ ಇರಲಿದೆ. ಬಹಳ ಪ್ರಯತ್ನದ ಫಲವಾಗಿ ಸಂಪಾದಿಸಬೇಕಿದೆ. ದೈವಾನುಕೂಲವು ಅಷ್ಟಾಗಿ ಇಲ್ಲದ ಕಾರಣ ಕೆಲಸವನ್ನು ನಿಮ್ಮದೇ ಜಾಗರೂಕತೆಯಿಂದ ಮಾಡುವುದು ಉತ್ತಮ.

ಕುಂಭ: ನೀವು ಇಂದು ನಿಶ್ಚಿಂತೆಯಿಂದ ಇರಬೇಕು ಎಂದು ಅನ್ನಿಸಿದರೂ ಕೆಲಸಗಳು ಒಂದಾದಮೇಲೆ ಒಂದರಂತೆ ಬರಬಹುದು. ವಿದ್ಯಾರ್ಥಿಗಳು ಆಲಸ್ಯದಿಂದ ಆಟದಲ್ಲಿ ಮಗ್ನರಾಗುವರು. ವ್ಯಾಪಾರದ ನಷ್ಟವನ್ನು ತೂಗಲು ಹೊಸ ತಂತ್ರವನ್ನು ರೂಪಿಸಬಹುದು. ಗಂಭೀರವಾದ ನಿಮ್ಮ ವರ್ತನೆಯು ನಿಮ್ಮವರಲ್ಲಿ ಆತಂಕವನ್ನು ತರಿಸಬಹುದು. ಬರುವ ಸಣ್ಣ ಪುಟ್ಟ ಸಮಸ್ಯೆಗಳನ್ನು ಎದುರಿಸಲು ನೀವು ಸಮರ್ಥರಿದ್ದೀರಿ. ಬಂಧುಗಳ ಮನೆಯಲ್ಲಿ ನೀವು ವಾಸಮಾಡಬಹುದು. ನಕರಾತ್ಮಕ ಅಂಶಗಳನ್ನು ಗುರುತಿಸುವ ದೃಷ್ಟಿಯು ಕಡಿಮೆಯಾಗಬಹುದು. ನಿಮ್ಮ ಕಲ್ಪನೆಗಳು ಅರ್ಧ ಸರಿಯಾಗಬಹುದು.

ಮೀನ: ಇಂದು ನಿಮ್ಮದೇ ಆದ ಕಾರ್ಯಗಳು ಇರಲಿವೆ. ಬೇರೆಯವರಿಗೆ ಸಮಯವನ್ನು ಕೊಡುವುದು ಕಷ್ಟವಾದೀತು. ಮನೆಯಲ್ಲಿ ಎಲ್ಲರ ಜೊತೆ ಸಂತೋಷದಿಂದ ಇರುವಿರಿ. ಯಾರನ್ನೂ ಅವಲಂಬಿಸಬಾರದು ಎಂಬ ಸತ್ಯವು ನಿಮಗೆ ತಿಖಿಯಬಹುದು. ದೇವರ ಮೇಲೆ ಶ್ರದ್ಧೆ, ಭಕ್ತಿಗಳು ಕಡಿಮೆಯಾದೀತು. ಹೆಚ್ಚಿನ ಸಮಯವನ್ನು ವಿಶ್ರಾಂತಿಗೆ ಇಡುವಿರಿ. ಅಂದುಕೊಂಡ ಕೆಲಸಗಳು ಅಪೂರ್ಣವಾದಾವು. ನಿಮ್ಮ ಆಯ್ಕೆ ಸರಿಯಿದೆ ಎಂದು ಕಾಲಾನಂತರದಲ್ಲಿ ನಿಮ್ಮ ಅನುಭವಕ್ಕೆ ಬರಬಹುದು. ದುಃಸ್ವಪ್ನಗಳು ಬೀಳಬಹುದು. ಸ್ವಲ್ಪ ಭಯಗೊಳ್ಳುವಿರಿ.

ಲೋಹಿತಶರ್ಮಾ 8762924271 (what’s app only)

ವಿವಿಯಲ್ಲಿ ಕಲ್ಲು ತೂರಾಟ, ವಿದ್ಯಾರ್ಥಿಗಳ ಮೇಲೆ ಕಾರು ಹತ್ತಿಸಲು ಯತ್ನ
ವಿವಿಯಲ್ಲಿ ಕಲ್ಲು ತೂರಾಟ, ವಿದ್ಯಾರ್ಥಿಗಳ ಮೇಲೆ ಕಾರು ಹತ್ತಿಸಲು ಯತ್ನ
ಡ್ರೈವರ್ ಇಲ್ಲ, ಇಳಿಜಾರಿನಲ್ಲಿ ಇದ್ದಕ್ಕಿದ್ದಂತೆ ಹಿಂದೆ ಹೋದ ವಾಹನ
ಡ್ರೈವರ್ ಇಲ್ಲ, ಇಳಿಜಾರಿನಲ್ಲಿ ಇದ್ದಕ್ಕಿದ್ದಂತೆ ಹಿಂದೆ ಹೋದ ವಾಹನ
ಈ ರಾಶಿಯವರು ಇಂದು ಭೂ ಖರೀದಿ ಮಾಡಬಹುದು
ಈ ರಾಶಿಯವರು ಇಂದು ಭೂ ಖರೀದಿ ಮಾಡಬಹುದು
ಮಸ್ಕತ್​​ನಲ್ಲಿ ಭಾರತೀಯರಿಂದ ಪ್ರಧಾನಿ ಮೋದಿಗೆ ಯಕ್ಷಗಾನ, ನೃತ್ಯದ ಸ್ವಾಗತ
ಮಸ್ಕತ್​​ನಲ್ಲಿ ಭಾರತೀಯರಿಂದ ಪ್ರಧಾನಿ ಮೋದಿಗೆ ಯಕ್ಷಗಾನ, ನೃತ್ಯದ ಸ್ವಾಗತ
3 ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ಒಮನ್​ಗೆ ತೆರಳಿದ ಪ್ರಧಾನಿ ಮೋದಿ
3 ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ಒಮನ್​ಗೆ ತೆರಳಿದ ಪ್ರಧಾನಿ ಮೋದಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,