AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pisces Yearly Horoscope 2025: ಈ ರಾಶಿಯವರಿಗೆ ಒತ್ತಡ, ಉದ್ವೇಗ, ಮನಸ್ತಾಪ ಅಧಿಕ

ಮೀನ ರಾಶಿ ವರ್ಷ ಭವಿಷ್ಯ 2025: ಮೀನ ರಾಶಿಗೆ ಈ ವರ್ಷ ಸದ್ಯದ ಪರಿಸ್ಥಿತಿಯಲ್ಲಿ ನೀವು ಸುಬ್ರಹ್ಮಣನ ಉಪಾಸನೆ ಮಾಡುವುದೇ ಉಪಾಯ. ಆರ್ಥಿಕವಾಗಿ ಸಬಲರಾಗಲು, ಧೈರ್ಯದಿಂದ ಮುನ್ನಡೆಯಲು ಸುರನಾಯಕನೇ ದಾರಿ. ಸಾಡೇಸಾಥ್ ಕೂಡ ಇರುವುದರಿಂದ ಯಾವುದರಿಂದ ನೋವು ಎನ್ನುವುದು ಅರ್ಥವಾಗದೇ ಇದ್ದೀತು. ನಿಮ್ಮ ಜೀವನದಲ್ಲಿ ಇಂತಹ ಕಷ್ಟಗಳನ್ನು ಅಭವಿಸಬಹುದು.

Pisces Yearly Horoscope 2025: ಈ ರಾಶಿಯವರಿಗೆ ಒತ್ತಡ, ಉದ್ವೇಗ, ಮನಸ್ತಾಪ ಅಧಿಕ
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Jan 03, 2025 | 2:56 PM

Share

ಕೊನೆಯ ರಾಶಿಯವರಿಗೆ ಈ ವರ್ಷ ಮಿಶ್ರ ಫಲ. ಕಳೆದ ವರ್ಷಕ್ಕಿಂತ ಈ ವರ್ಷ ಸ್ವಲ್ಪ ಸುಧಾರಣೆ ಇರುವುದು. ಸಾಡೇಸಾಥ್ ನ ಮಧ್ಯಾವಧಿಯಲ್ಲಿ ಇರುವ ಕಾರಣ ಒತ್ತಡ, ಉದ್ವೇಗ, ಮನಸ್ತಾಪ ಅಧಿಕವಾಗಲಿದೆ. ದ್ವಾದಶದಲ್ಲಿ ರಾಹು ಹಾಗೂ ಷಷ್ಠದಲ್ಲಿ ಕೇತು ಹಾಗೂ ಚತುರ್ಥದಲ್ಲಿ ಗುರುವು ನಿಮ್ಮ ಪೂರ್ಣಬಲನಾಗಿ ಇರಲಾರನು. ಆರ್ಥಿಕತೆ ಮಧ್ಯಮ ಸ್ಥಿತಿಯಲ್ಲಿ ಇರುವುದು. ಉತ್ಸಾಹವೂ ಪರರ ಕಾರಣಗಳಿಂದ ಕಡಿಮೆಯಾಗಲಿದೆ.

ಆರೋಗ್ಯ :

ಈ ವರ್ಷ ನಿಮ್ಮ ಆರೋಗ್ಯವನ್ನು ಬುದ್ಧಿ ಪೂರ್ವಕ ಸರಿ ಮಾಡಿಕೊಳ್ಳಬೇಕು. ಯಾರಾದರೂ ಆಹಾರವನ್ನು ಒತ್ತಾಯ ಮಾಡಿ ತನ್ನಿಸಬಹುದು. ಅದೆಲ್ಲವೂ ನಿಮ್ಮ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವುದು. ಅವಶ್ಯಕತೆ ಇರುವಷ್ಟು ಮಾತ್ರ ತಿನ್ನಿ. ಉದರಬಾಧೆ ಅಧಿಕವಾಗಿ ಕಾಡುವುದು.

ಪ್ರೇಮ ಮತ್ತು ವಿವಾಹ :

ಮೊದಲನೆಯದಾಗಿ ವಿವಾಹಕ್ಕೆ ಗುರು ಬಲ ಬರುವತನಕ ಕಾಯುವುದು ಅನಿವಾರ್ಯ. ಇನ್ನು ಪ್ರೇಮವಿದ್ದರೂ ಅದರ ಬಗ್ಗೆ ಅತಿಯಾದ ಮೋಹವಿರದು. ಆದಂತೆ ಆಗಲಿ ಎಂಬ ಮನೋಭಾವ ಇರುವುದು. ಸಮಯ ಸಂದರ್ಭ ನೋಡಿ ಅದನ್ನು ಉಳಿಸಿಕೊಳ್ಳುವ ಮನೋಭಾವ ಇರಲಿದೆ. ಶುಕ್ರನು ನಿಮ್ಮ ರಾಶಿಗೆ ಬಂದಾಗ ಪ್ರೇಮದ ಬಗ್ಗೆ ಸಣ್ಣ ಆಸೆ ಆರಂಭವಾಗುವುದು.

ಉದ್ಯಮ ಮತ್ತು ಆರ್ಥಿಕತೆ :

ವರ್ಷಾರಂಭದಲ್ಲಿ ಉದ್ಯಮಾಧಿಪತಿಯ ಸ್ಥಾನದಲ್ಲಿ ಬುಧ ಸೂರ್ಯರಿರುವರು. ವೈದ್ಯಕಾರ್ಯದಲ್ಲಿ ಇದ್ದವರಿಗೆ ಆದಾಯ ಅಧಿಕ. ಭೂ ಉದ್ಯಮದಲ್ಲಿ ತಕ್ಕಮಟ್ಟಿಗೆ ಅಭಿವೃದ್ಧಿ. ಅತಿಯಾದ ಲಾಭಕ್ಕೆ ಹೋಗಿ ಎಡವಟ್ಟು ಮಾಡಿಕೊಳ್ಳಬಹುದು. ಬೇಡದ ಕಾರ್ಯಕ್ಕೆ ರಾಹುವು ಅವಕಾಶ ಕೊಟ್ಟರೂ ಗುರುವಿನ ದೃಷ್ಟಿ ಇರುವುದು ಅದಕ್ಕೆ ಬೇರೆ ರೀತಿಯಲ್ಲಿ ಬದಲಿಸುತ್ತದೆ. ಹಿರಿಯರ ಉಪದೇಶದಿಂದ ಸರಿಯಾಗಲು ಅವಕಾಶ ಬರಲಿದೆ.

ಕುಟುಂಬ ವ್ಯವಸ್ಥೆ :

ಕೌಟುಂಬಿಕ ಜೀವನ ಬಹಳ ಡೋಲಾಯಮಾನವಾಗಿ ಕಾಣಿಸುವುದು. ಸಿಟ್ಟು ಮಾಡಿಕೊಂಡು ಎಲ್ಲವನ್ನೂ ಎಲ್ಲರನ್ನೂ ತೆಗಳುವಿರಿ. ದೊಡ್ಡ ಮನೆಯಲ್ಲಿ ಈ ವರ್ಷ ಹೆಚ್ಚು ದಿನ ವಾಸ ಮಾಡುವಿರಿ. ಸದ್ಯ ಕುಜ ದಶೆ ನಿಮಗೆ ಒಳ್ಳೆಯದಲ್ಲ.

ಶತ್ರುಬಾಧೆ :

ವರ್ಷದ ಮಧ್ಯಭಾಗದಿಂದ ಕೇತುವಿನ ಸಂಚಾರ ಷಷ್ಠಸ್ಥಾನದಲ್ಲಿ. ಕ್ಷುಲ್ಲಕ ಕಾರಣಕ್ಕೆ ಶತ್ರುತ್ವ ಹುಟ್ಟಿಕೊಳ್ಳುವುದು. ಅದನ್ನು ದೊಡ್ಡದಾಗಿ ನೀವೇ ಮಾಡಿಕೊಳ್ಳುವಿರಿ. ನಿರ್ಲಕ್ಷ್ಯ ತೋರಿದಷ್ಟು ಅಲ್ಲೇ ಮುಕ್ತಾಯವಾಗುವುದು.

ಅದೃಷ್ಟ :

ನಿಮ್ಮ ಅದೃಷ್ಟ ಸ್ಥಾನ ಹಾಗೂ ಆರ್ಥಿಕ ವ್ಯವಹಾರ ಸ್ಥಾನದ ಅಧಿಪತಿ ಒಬ್ಬರೇ. ಅವನು ನೀಚನಾಗಿದ್ದು ಮೇ ತನಕ ಯಾವ ಕೆಲಸವೂ ತೃಪ್ತಿ ಕೊಡದು. ನಿಮ್ಮ ಪ್ರಯತ್ನವೇ ಪೂರ್ಣವಾಗಿ ಬೇಕು. ದೈವವನ್ನು ನಂಬಿ‌ಮಾಡಲಾಗದು. ಕುಜದಶೆ ಇದ್ದವರಿಗೆ ಅತಿಯಾದ ದುಃಸ್ಥಿತಿ ಬರಲಿದೆ.

ಸದ್ಯದ ಪರಿಸ್ಥಿತಿಯಲ್ಲಿ ನೀವು ಸುಬ್ರಹ್ಮಣನ ಉಪಾಸನೆ ಮಾಡುವುದೇ ಉಪಾಯ. ಆರ್ಥಿಕವಾಗಿ ಸಬಲರಾಗಲು, ಧೈರ್ಯದಿಂದ ಮುನ್ನಡೆಯಲು ಸುರನಾಯಕನೇ ದಾರಿ. ಸಾಡೇಸಾಥ್ ಕೂಡ ಇರುವುದರಿಂದ ಯಾವುದರಿಂದ ನೋವು ಎನ್ನುವುದು ಅರ್ಥವಾಗದೇ ಇದ್ದೀತು.

– ಲೋಹಿತ ಹೆಬ್ಬಾರ್, ಇಡುವಾಣಿ

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ