ರಜ್ಜು ಯೋಗ, ಮುಸಲ ಯೋಗ, ನಲ ಯೋಗ: ನಿಮ್ಮ ಜಾತಕದಲ್ಲಿ ಈ ಮೂರು ಯೋಗಗಳಿವೆಯೇ ನೋಡಿಕೊಳ್ಳಿ

ರಜ್ಜು ಯೋಗ, ಮುಸಲ ಯೋಗ, ನಲ ಯೋಗ ಈ ಯೋಗಗಳು ಅಪರೂಪಕ್ಕೆ ಬರುವಂತಹ ಯೋಗಗಳಾಗಿವೆ. ಎಲ್ಲರ ಕಾಯಕದಲ್ಲಿ ಈ ಯೋಗವು ಇರುತ್ತದೆ ಎನ್ನಲಾಗದು. ಆದರೆ ಇಂತಹ ಯೋಗಗಳು ಸಂಭವಿಸುತ್ತವೆ ಎನ್ನುವುದು ಸತ್ಯ ಮತ್ತು ಅದಕ್ಕೆ ಫಲವೂ ಇರುತ್ತದೆ.

ರಜ್ಜು ಯೋಗ, ಮುಸಲ ಯೋಗ, ನಲ ಯೋಗ: ನಿಮ್ಮ ಜಾತಕದಲ್ಲಿ ಈ ಮೂರು ಯೋಗಗಳಿವೆಯೇ ನೋಡಿಕೊಳ್ಳಿ
ಪ್ರಾತಿನಿಧಿಕ ಚಿತ್ರ
Edited By:

Updated on: Jul 28, 2023 | 1:30 AM

ಈ ಯೋಗಗಳು ಅಪರೂಪಕ್ಕೆ ಬರುವಂತಹ ಯೋಗ (Yoga) ಗಳಾಗಿವೆ. ಎಲ್ಲರ ಕಾಯಕದಲ್ಲಿ ಈ ಯೋಗವು ಇರುತ್ತದೆ ಎನ್ನಲಾಗದು. ಆದರೆ ಇಂತಹ ಯೋಗಗಳು ಸಂಭವಿಸುತ್ತವೆ ಎನ್ನುವುದು ಸತ್ಯ ಮತ್ತು ಅದಕ್ಕೆ ಫಲವೂ ಇರುತ್ತದೆ. ನಿಮ್ಮ ಜಾತಕ ಕುಂಡಲಿಯಲ್ಲಿ ನೀವು ಜನಿಸಿದ ಸಮಯಕ್ಕೆ ಚರರಾಶಿಯಲ್ಲಿ ಅಂದರೆ, ಮೇಷ, ಕರ್ಕಾಟಕ, ತುಲಾ ಮತ್ತು ಮಕರ ರಾಶಿಗಲ್ಲಿ ಗ್ರಹರಿದ್ದರೆ ಇದನ್ನು ರಜ್ಜು ಯೋಗ ಎನ್ನುವರು.

ಹಾಗಯೇ ಸ್ಥಿರ ರಾಶಿಯಲ್ಲಿ ಎಂದರೆ, ವೃಷಭ, ಸಿಂಹ, ವೃಶ್ಚಿಕ, ಕುಂಭ ರಾಶಿಗಳಲ್ಲಿ ಎಲ್ಲರ ಗ್ರಹರೂ ಇದ್ದರೆ ಅದನ್ನು ಮುಸಲ ಯೋಗ ಎನ್ನುತ್ತಾರೆ. ಹಾಗೆಯೇ ಉಭಯ ರಾಶಿಯಲ್ಲಿ ಎಲ್ಲ ಗ್ರಹರಿದ್ದರೆ, ಅಂದರೆ ಮಿಥುನ, ಕನ್ಯಾ, ಧನು, ಮೀನ ರಾಶಿಗಳಲ್ಲಿ ಎಲ್ಲ ಗ್ರಹರಿದ್ದರೆ ನಲ ಯೋಗವು ಆಗುತ್ತದೆ.

ಇದನ್ನೂ ಓದಿ: ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ನಿಮ್ಮ ಅಂಗೈಯಲ್ಲಿರುವ ಈ 3 ರೇಖೆ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಬಹುದು

ಈ ಯೋಗಗಳಿಂದ ಏನಾಗುತ್ತದೆ ಹಾಗಿದ್ದರೆ?

ರಜ್ಜು ಯೋಗ: ಈ ಯೋಗವನ್ನು ಇಟ್ಟುಕೊಂಡು ಹುಟ್ಟಿರುವವರು ಇನ್ನೊಬ್ಬರ ಅಭಿವೃದ್ಧಿಯನ್ನು ಇಷ್ಟಪಡುವುದಿಲ್ಲ. ಮನೆಯಿಂದ ದೂರವಿರಲು ಅಥವಾ ವಿದೇಶಗಳಿಗೂ ಹೋಗಬಹುದು. ಓಡಾಟದಲ್ಲಿ ಅತಿಯಾದ ಆಸಕ್ತಿ ಉಳ್ಳವನಾಗುವನು.

ಮುಸಲ ಯೋಗ: ಮರ್ಯಾದಸ್ಥ ಕುಟುಂಬದಲ್ಲಿ ಜನಿಸಿ, ಕುಟುಂಬಕ್ಕೆ ಯೋಗ್ಯವಾದ ಕೆಲಸವನ್ನು ಮಾಡುವರು. ಮಾನವಂತರಾಗಿಯೂ ಧನವಂತರಾಗಿಯೂ ಇವರು ಇರುವರು.

ಇದನ್ನೂ ಓದಿ: Virgo Zodiac Sign: ಕನ್ಯಾ ರಾಶಿಯವರು ಬೇರೆ ಅವರಲ್ಲಿ ಹೆಚ್ಚು ತಪ್ಪನ್ನು ಹುಡುಕುತ್ತಾರಾ? ವೈಯಕ್ತಿಕ, ವೃತ್ತಿಪರ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಲು ಈ ಸಲಹೆಗಳನ್ನು ಅನುಸರಿಸಿ

ನಲ ಯೋಗ: ಈ ಯೋಗದಲ್ಲಿ ಜನಿಸಿದವರು ಅಂಗ ಊನ ಇರುವವರು ಆಗಿರುತ್ತಾರೆ. ಎಲ್ಲ ಕೆಲಸಗಳಲ್ಲಿಯೂ ಆಸಕ್ತಿ ಇರಲಿದೆ. ಸ್ಥಿರವಾದ ಸಂಪತ್ತನ್ನು ಉಳಿಸಿಕೊಂಡಿರುತ್ತೀರಿ.

ಈ ಎಲ್ಲ ಯೋಗಗಳೂ ಯಾವಾಗಲೂ ಫಲಿಸುತ್ತಿರುವುದಿಲ್ಲ. ಆದರೆ ಗ್ರಹಗಳ ಆಧಾರದ ಮೇಲೆ ಸ್ಥಾನದ ಮೇಲೆ, ಅಲ್ಲಿರುವ ಗ್ರಹಗಳ ಬಲಾಬಲದ ಮೇಲೆ ಇದು ನಿರ್ಧಾರವಾಗುವುದು. ದಶೆ ಮತ್ತು ಭುಕ್ತಿಯ ಸಮಯದಲ್ಲಿವ ಅವುಗಳ ಫಲವು ಹೆಚ್ಚಾಗುವುದು. ಆದರೆ ಸ್ವಪ್ಪ ಮಟ್ಟಿಗೆ ತಮ್ಮ ಪ್ರಭಾವವನ್ನು ಬೀರುತ್ತಲೇ ಇರುತ್ತವೆ.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Lohitha Hebbar

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
Follow Us