AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sagittarius Yearly Horoscope 2024: ಧನು ರಾಶಿ ವರ್ಷ ಭವಿಷ್ಯ; ಈ ವರ್ಷವು ಹಿಂದಿನ ವರ್ಷದಂತೆ ಸುಗಮವಾಗಿ ಸಾಗುವ ವರ್ಷವಾಗಿಲ್ಲ ವಾರ್ಷಿಕ ಭವಿಷ್ಯ ಇಲ್ಲಿದೆ

ಧನು ರಾಶಿ ವರ್ಷ ಭವಿಷ್ಯ 2024: ಈ ವರ್ಷವು ಹಿಂದಿನ ವರ್ಷದಂತೆ ಸುಗಮವಾಗಿ ಸಾಗುವ ವರ್ಷವಾಗಿಲ್ಲ.‌ ಗ್ರಹಗಳು ಕೆಲವು ನಿಮಗೆ ಪ್ರತಿಕೂಲವಾಗಿದ್ದು ಎಚ್ಚರಿಕೆಯಿಂದ ಹೆಜ್ಜೆ ಹಾಕುವ ಸಂದರ್ಭವು ಬರುವುದು. ದೈವಾನುಗ್ರಹವನ್ನು ಪ್ರಾರ್ಥಿಸಿ ಮುನ್ನುಗ್ಗಿ, ಮನಸ್ಸನ್ನು ದುರ್ಬಲವಾಗಿಸಿಕೊಳ್ಳದೇ ಸಾಗುವ ಮಾನಸಿಕತೆಯನ್ನು ರೂಢಿಸಿಕೊಳ್ಳಿ.

Sagittarius Yearly Horoscope 2024: ಧನು ರಾಶಿ ವರ್ಷ ಭವಿಷ್ಯ; ಈ ವರ್ಷವು ಹಿಂದಿನ ವರ್ಷದಂತೆ ಸುಗಮವಾಗಿ ಸಾಗುವ ವರ್ಷವಾಗಿಲ್ಲ ವಾರ್ಷಿಕ ಭವಿಷ್ಯ ಇಲ್ಲಿದೆ
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Dec 15, 2023 | 7:03 PM

Share

ಈ ವರ್ಷ ಅಂದುಕೊಂಡ ಕಾರ್ಯಗಳನ್ನು ಮಾಡಿ ಮುಗಿಸಲು ಅವಕಾಶಗಳು ಸಿಕ್ಕಿದ್ದವು.‌ ವಿದ್ಯಾರ್ಥಿಗಳು ಉನ್ನತ ಅಭ್ಯಾಸಕ್ಕಾಗಿ ಹೆಚ್ಚಿನ ಸಮಯವನ್ನು ಇಟ್ಟಿದ್ದರು. ಮಕ್ಕಳಿಂದ ನೆಮ್ಮದಿಗಳನ್ನು ಪಡೆದು ನೀವು ಈ ವರ್ಷದ ಇದು ಸಿಗದೇ ಪಶ್ಚಾತ್ತಪ ಪಡುವಿರಿ.‌ ಇದಕ್ಕೆ ಕಾರಣ ಗುರು. ಗುರುಬಲವು ನಿಮ್ಮ ಎಲ್ಲ ಕಾಮನೆಗಳನ್ನು ಪೂರೈಸಲು ಅನುವುಮಾಡಿಕೊಟ್ಟಿದೆ.

2024ರ ಧನು ರಾಶಿಯ ಭವಿಷ್ಯ

ಈ ವರ್ಷವು ಹಿಂದಿನ ವರ್ಷದಂತೆ ಸುಗಮವಾಗಿ ಸಾಗುವ ವರ್ಷವಾಗಿಲ್ಲ.‌ ಗ್ರಹಗಳು ಕೆಲವು ನಿಮಗೆ ಪ್ರತಿಕೂಲವಾಗಿದ್ದು ಎಚ್ಚರಿಕೆಯಿಂದ ಹೆಜ್ಜೆ ಹಾಕುವ ಸಂದರ್ಭವು ಬರುವುದು. ದೈವಾನುಗ್ರಹವನ್ನು ಪ್ರಾರ್ಥಿಸಿ ಮುನ್ನುಗ್ಗಿ, ಮನಸ್ಸನ್ನು ದುರ್ಬಲವಾಗಿಸಿಕೊಳ್ಳದೇ ಸಾಗುವ ಮಾನಸಿಕತೆಯನ್ನು ರೂಢಿಸಿಕೊಳ್ಳಿ.

ಧನಾಗಮನ :

ಧನಸ್ಥಾನಾಧಿಪತಿಯಾದ ಶನಿಯು ತೃತೀಯದಲ್ಲಿ ಇರುವನು. ಅದು ಶನಿಯ ಸ್ವಕ್ಷೇತ್ರವೂ ಆಗಿದ್ದು ಅಧಿಕ ಶ್ರಮವನ್ನು ಹಾಕಿ ಕಾರ್ಯವನ್ನು ಸಾಧಿಸಿಕೊಳ್ಳಬೇಕು.‌ ಲಾಭವನ್ನು ಪಡೆಯಬೇಕಾಗುವುದು. ಇನ್ನು ಶುಕ್ರನು ಉಚ್ಚಕ್ಷೇತ್ರವಾದ ಮೀನರಾಶಿಗೆ ಮಾರ್ಚ್ ತಿಂಗಳಲ್ಲಿ ಇರಲಿದ್ದು ತಕ್ಕಮಟ್ಟಿನ ಆದಾಯವನ್ನು ಕಾಣಬಹುದು.‌ ಏಕೆಂದರೆ ರಾಶಿಯ ಅಧಿಪತಿಯು ಷಷ್ಠದಲ್ಲಿ ಇರುವ ಕಾರಣ ಸಂಪತ್ತಿಗೆ ಪೂರಕವಾಗಿ ಇರಲಾರನು. ಮತ್ತು ಏಕಾದಶಾಧಿಪತಿಯೂ ಶುಕ್ರನೇ ಆಗಿದ್ದು ಬರುವ ಅಲ್ಪ ಆದಾಯವೂ ಸಕಾಲಕ್ಕೆ ಬಂದು‌ ನಿಮಗೆ ಸಹಾಯವಾಗುವುದು.

ಪ್ರೀತಿ ಮತ್ತು ವಿವಾಹ :

ಬುಧನು ಸಪ್ತಮಾಧಿಪತಿಯಾಗಿ ವರ್ಷಾರಂಭದಲ್ಲಿ ನಿಮ್ಮ ರಾಶಿಯಲ್ಲಿಯೇ ಇರುವನು. ಬಂಧುಗಳ ಕಡೆಯಿಂದಲೇ ವಿವಾಹವು ಆಗುವ ಸಾಧ್ಯತೆ ಇದೆ. ವಿವಾಹದ ಯೋಚನೆಯನ್ನು ಮಾಡುತ್ತಿದ್ದರೆ ವರ್ಷಾರಂಭದ ನಾಲ್ಕು ತಿಂಗಳ‌ ಒಳಗೇ ಮಾಡಿಕೊಳ್ಳುವುದು ಉತ್ತಮ.

ವೃತ್ತಿ :

ಕರ್ಮಾಧಿಪತಿಯು ತೃತೀಯದಲ್ಲಿ ಇರುವುದರಿಂದ ಶ್ರಮಕ್ಕೆ ಸರಿಯಾದ ಫಲವು ಸಿಗುವುದು.‌ ಅದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸಿ ಮನಸ್ಸನ್ನು ಹಾಳುಮಾಡಿಕೊಳ್ಳುವುದು ಬೇಡ. ಶಿಕ್ಷಕರು, ಸಾಹಿತ್ಯಾಸಕ್ತರು ಸಿಕ್ಕ‌ ಸಣ್ಣ ಅವಕಾಶವನ್ನು ಬಳಸಿಕೊಂಡು ಮುಂದಿನದಕ್ಕೆ ತಯಾರಾಗುವರು.

ಆರೋಗ್ಯದ ಸ್ಥಿತಿ :

ವರ್ಷವಿಡೀ ಆರೋಗ್ಯದಿಂದ ಇದ್ದ ನಿಮಗೆ ಈ ವರ್ಷ ಆರೋಗ್ಯವು ಕೈಕೊಡುವುದು. ಕಫಕ್ಕೆ‌ ಸಂಬಂಧಿಸಿದ ವ್ಯಾಧಿಯಿಂದ ಕಷ್ಟಪಡುವಿರಿ. ವೈದ್ಯರ ಸಲಹೆಯನ್ನು ನೀವು ಪಾಲಿಸುವುದು ಅನಿವಾರ್ಯವಾಗುವುದು.

ಗುರುವಿನ ಆರಾಧನೆ, ದರ್ಶನ, ಆಶೀರ್ವಾದಗಳನ್ನು ಪಡೆಯುವುದು ಅನಿವಾರ್ಯವಾಗಲಿದೆ.‌ ಲಕ್ಷ್ಮೀನಾರಾಯಣರ ಆರಾಧನೆಯಿಂದ ಮಾನಸಿಕವಾಗಿಯೂ ದೈಹಿಕವಾಗಿಯೂ ಗಟ್ಟಿಯಾಗುವಿರಿ.

ಲೋಹಿತ ಹೆಬ್ಬಾರ್, ಇಡುವಾಣಿ

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ