Weekly Horoscope: ವಾರ ಭವಿಷ್ಯ: ಫೆ 16 ರಿಂದ 22 ರವರೆಗೆ ವಾರ ಭವಿಷ್ಯ
ಇದು ಫೆಬ್ರವರಿ ತಿಂಗಳ ಮೂರನೇ ವಾರವಿದಾಗಿದೆ. ೧೬-೦೨-೨೦೨೫ರಿಂದ ೨೨-೦೨-೨೦೨೫ರವರೆಗೆ ಇರಲಿದೆ. ಗ್ರಹಗಳಲ್ಲಿ ಅಲ್ಪ ಬದಲಾವಣೆ ಇದೆ. ರವಿಯೊಬ್ಬನೇ ಕುಂಭ ರಾಶಿಯನ್ನು ಪ್ರವೇಶಿಸುವನು. ರಾಶಿಯ ಅಧಿಪತಿಗಳು ಶುಭಸ್ಥಾನದಲ್ಲಿ ಇರುವ ಕಾರಣ, ಆಯಾ ಅಧಿಪತಿಗಳ ದಶೆ ಉತ್ತಮವಾಗಿರಲಿದೆ.

ಇದು ಫೆಬ್ರವರಿ ತಿಂಗಳ ಮೂರನೇ ವಾರವಿದಾಗಿದೆ. ೧೬-೦೨-೨೦೨೫ರಿಂದ ೨೨-೦೨-೨೦೨೫ರವರೆಗೆ ಇರಲಿದೆ. ಗ್ರಹಗಳಲ್ಲಿ ಅಲ್ಪ ಬದಲಾವಣೆ ಇದೆ. ರವಿಯೊಬ್ಬನೇ ಕುಂಭ ರಾಶಿಯನ್ನು ಪ್ರವೇಶಿಸುವನು. ರಾಶಿಯ ಅಧಿಪತಿಗಳು ಶುಭಸ್ಥಾನದಲ್ಲಿ ಇರುವ ಕಾರಣ, ಆಯಾ ಅಧಿಪತಿಗಳ ದಶೆ ಉತ್ತಮವಾಗಿರಲಿದೆ.
ಮೇಷ ರಾಶಿ: ಫೆಬ್ರವರಿ ತಿಂಗಳ ನಾಲ್ಕನೇ ವಾರದಲ್ಲಿ ರಾಶಿ ಚಕ್ರದ ಮೊದಲನೇ ರಾಶಿಯವರಿಗೆ ರಾಶಿಯ ಅಧಿಪತಿ ಕುಜನಿಂದ ಶುಭ. ಗುರುವಿನ ನಕ್ಷತ್ರದಲ್ಲಿ ತೃತೀಯ ರಾಶಿಯಲ್ಲಿ ಸತ್ಕಾರ್ಯಕ್ಕೆ ಸದ್ಬುದ್ದಿಯನ್ನು ತೋರಿಸುವನು. ನೀವು ಕೆಲಸಕ್ಕೋಸ್ಕರ ಅಲೆದಾಡಬೇಕಾದೀತು. ಅಧ್ಯಾತ್ಮದಲ್ಲಿ ಆಸಕ್ತಿ ಇರಲಿದೆ. ದೊಡ್ಡ ಕೋರಿಕೆಯ ಪಟ್ಟಿಯನ್ನು ಇಟ್ಟುಕೊಂಡು ಯಾವುದೂ ಆಗಲಿಲ್ಲ ಎಂಬ ಕೊರಗಿನಲ್ಲಿ ಇರಲಿದ್ದೀರಿ. ಸಹೋದರರ ಸಾಮರಸ್ಯ ವೃದ್ಧಿಯಾಗಲಿದೆ. ಒತ್ತಡದ ನಡುವೆಯೂ ನಿಮ್ಮ ಕಾರ್ಯಗಳನ್ನು ಸರಳೀಕರಿಸಿಕೊಂಡು ಮಾಡುವ ವಿಧಾನಕ್ಕೆ ಮೆಚ್ಚುಗೆ ಸಿಗಲಿದೆ. ಗೊಂದಲಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ತೀರ್ಮಾನಕ್ಕೆ ಬರದೇ ಅನುಭವಿಸಬೇಕಾಗಬಹುದು. ಹಣವನ್ನು ಉಳಿಸಲು ಯತ್ನಿಸುವಿರಿ. ಸರ್ಕಾರದ ಕಡೆಯಿಂದ ಆಗಬೇಕಾದ ಕಾರ್ಯ ಅಥವಾ ಪ್ರಭಾವಿ ವ್ಯಕ್ತಿಗಳಿಂದ ಮಾಡಿಸಿಕೊಳ್ಳುವುದನ್ನು ಇದೇ ಮಾಡಿಸಿಕೊಳ್ಳಿ. ಆದರೆ ಅದು ಮುಂದಿನ ಬಾಗಿಲಿನಿಂದ ಬಂದು ಹಿಂದಿನ ಬಾಗಿಲಿನಿಂದ ನಿಮಗೆ ಗೊತ್ತಾಗದಂತೆ ಹೋಗಿರುತ್ತದೆ.
ವೃಷಭ ರಾಶಿ: ಈ ತಿಂಗಳ ನಾಲ್ಕನೇ ವಾರದಲ್ಲಿ ರಾಶಿ ಅಧಿಪತಿ ಶನಿಯ ನಕ್ಷತ್ರದಲ್ಲಿ ಇರುವನು. ದಶಮಸ್ಥಾನವಾದ ಕಾರಣ ಉದ್ಯಮ ಅಥವಾ ಉದ್ಯೋಗದ ಮೇಲೆ ನಿರೀಕ್ಷಿತ ಲಾಭ ಗಳಿಸಲಾಗದು. ಆದರೆ ಭವಿಷ್ಯವನ್ನು ಚಿಂತಿಸಿ ನಿರ್ಧಾರ ಮಾಡುವುದು ಸುಖಕರ. ನಿಮ್ಮ ಕೆಲಸಕ್ಕೆ ಮೇಲಧಿಕಾರಿಗಳು ನಿಮ್ಮನ್ನು ಪ್ರಶಂಸಿಸಲಿದ್ದಾರೆ. ಮಕ್ಕಳಿಂದ ಬಂದ ಸಿಹಿ ವಾರ್ತೆ ನಿಮ್ಮ ಸಂತೋಷವನ್ನು ಇಮ್ಮಡಿಗೊಳಿಸಲಿದೆ. ಕಛೇರಿ, ನ್ಯಾಯಾಲಯಗಳಲ್ಲಿ ಮೇಲುಗೈ ಸಾಧಿಸುವಿರಿ. ವ್ಯವಹಾರದಲ್ಲಿ ಪಾಲುದಾರಿಕೆಯಲ್ಲಿ ಸಣ್ಣ ವೈಮನಸ್ಯ ತಲೆ ಹಾಕಲಿದೆ. ಸೂರ್ಯನು ದಶಮದಲ್ಲಿ ಇರುವ ಕಾರಣ ಉದ್ಯೋಗದಲ್ಲಿ ಒತ್ತಡ, ಉದ್ವೇಗ, ಕಲಹವುಂಡಾಗುವುದು. ದೂರದಲ್ಲಿ ವಾಸಿಸುವ ನೀವು ಇಂದು ಮನೆಗೆ ಹೋಗಿ ಪೋಷಕರನ್ನು ಸಂತೋಷಗೊಳಿಸುವಿರಿ. ಆಪ್ತರಿಂದ ವಂಚನೆಗೆ ಒಳಗಾಗಬಹುದು. ಒಳ್ಳೆಯ ಪುಸ್ತಕವನ್ನು ಆಯ್ದುಕೊಂಡು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವಿರಿ.
ಮಿಥುನ ರಾಶಿ: ರಾಶಿ ಚಕ್ರದ ಮೂರನೇ ರಾಶಿಗೆ ರಾಶಿಯ ಅಧಿಪತಿ ಬುಧನು ನವಮದಲ್ಲಿ ಗುರುವಿನ ನಕ್ಷತ್ರದಲ್ಲಿ ಇದ್ದಾನೆ. ನಿಮ್ಮ ವಿದ್ಯೆಗೆ, ತಿಳುವಳಿಕೆಗೆ ಗೌರವ ಪ್ರಾಪ್ತವಾಗಲಿದೆ. ಮಕ್ಕಳು ಶುಭ ಸಮಾಚಾರವನ್ನು ತಿಳಿಸುವರು. ನಿಮ್ಮ ಶ್ರಮವಿಂದು ಸಾರದಥಕವಾಗಲಿದೆ. ಆಗಾಧವಾದ ಆಲೋಚನಯಲ್ಲಿ ಮುಳುಗಲಿದ್ದೀರಿ. ವಿದ್ಯಾರ್ಥಿಗಳು ತಮ್ಮ ಮುಂದಿನ ಅಧ್ಯಯನ ವಿಷಯವನ್ನು ಆಯ್ದುಕೊಳ್ಳಲು ಪ್ರಯಥನಿಸುವರು. ಉತ್ತಮವಾದ ವಿಚಾರ ಹಾಗು ಸಂದರ್ಭಗಳನ್ನು ಮನನ ಮಾಡಿ. ನವಮದಲ್ಲಿ ಸೂರ್ಯನಿರುವುದರಿಂದ ಸರ್ಕಾರದ ಬಾಕಿ ಕಾರ್ಯವನ್ನು ಮಾಡಿಕೊಳ್ಳುವಿರಿ. ಆ ಕುರಿತು ಆಲೋಚಿಸಿ. ಸಕಾರಾತ್ಮಕತೆ ಉಂಟಾಗಲಿದೆ. ಆಗಾಗ ಬರುವ ನೋವುಗಳು ನಿಮ್ಮನ್ನು ಪೀಡಿಸಿ ಮಾನಸಿಕವಾಗಿ ಕುಗ್ಗುವಂತೆ ಮಾಡುವುವು. ಆಪ್ತರ ಜೊತೆ ಒಂದಿಷ್ಟು ಹರಟೆ ಹೊಡೆಯಿರಿ. ಹಣದ ಚಿಂತೆ ನಿಮ್ಮನ್ನು ಕಾಡಲಿದೆ. ಹೊಸ ಉತ್ಪನ್ನಗಳ ಮಾರಾಟದಿಂದ ಲಾಭವಿದೆ.
ಕರ್ಕಾಟಕ ರಾಶಿ: ರಾಶಿ ಚಕ್ರದ ನಾಲ್ಕನೇ ರಾಶಿಯರಿಗೆ ರಾಶಿಯ ಅಧಿಪತಿಯಿಂದ ಕಿರಿಕಿರಿ. ಅನಾರೋಗ್ಯವು ನಿಮಗೆ ಕೈಕೊಡುವುದು. ನಿಮ್ಮನ್ನು ಅಪರಿಚಿರೊಬ್ಬರು ಭೇಟಿಯಾಗಬಹುದು. ಮಿತ್ರರಾಗಲು ಸ್ವಲ್ಪ ಕಾಲ ಕಳೆಯಲಿ. ಶೈತ್ಯದಿಂದ ನೀವು ಹೈರಾಣಾಗಲಿದೆ. ಈಗಲೇ ಕಡಿಮೆ ಮಾಡಿಕೊಳ್ಳುವುದು ಉಚಿತ. ಮಕ್ಕಳ ಜೊತೆ ಕಾಲಕಳೆಯಿರಿ. ಆರ್ಥಿಕತೆಯಲ್ಲಿ ಅಸಮತೋಲನ ಕಾಣಿಸುವುದು. ವಿದ್ಯುತ್ ಉಪಕರಣಗಳನ್ನು ಖರೀದಿಸುವಿರಿ. ಸುಖ ಹಾಗೂ ದುಃಖವನ್ನು ಸಮವಾಗಿ ತೆಗರಲೆದುಕೊಳ್ಳಬೇಕಾದೀತು. ದಿನಸಿ ಉದ್ಯೋಗಿಗಳಿಗೆ ಹೆಚ್ಚಿನ ಅನುಕೂಲವಿದೆ. ರವಿಯು ಅಷ್ಟಮದಲ್ಲಿ ಇದ್ದು, ರವಿ ದಶೆ ಇದ್ದವರಿಗೆ ಅತಿಯಾದ ಸೌಖ್ಯವನ್ನು ಪಡೆಯಲು ಹೋಗಿ ಅವಗಢವಾದೀತು. ವಿವಾಹವು ವಿಳಂಬವೆಂದು ಅನ್ನಿಸಬಹುದು. ತಂದೆಯ ಜೊತೆ ಕಲಹವಾಗಬಹುದು.
ಸಿಂಹ ರಾಶಿ: ಫೆಬ್ರವರಿ ತಿಂಗಳ ನಾಲ್ಕನೇ ವಾರದಲ್ಲಿ ರಾಶಿಯ ಅಧಿಪತಿ ಸಪ್ತಮದಲ್ಲಿ ಇದ್ದು ರಾಹುವಿನ ನಕ್ಷತ್ರದಲ್ಲಿ ಇರುವನು. ದಾಂಪತ್ಯದಲ್ಲಿ ಪ್ರತಿಕೂಲ ಗಾಳಿ ಬರಬಹುದು. ಬರಬೇಕಾದ ಹಣವು ಬರಲಿದೆ. ಈ ವಾರದಲ್ಲಿ ಶತ್ರುಗಳ ಒಮ್ಮೆ ಮುಖಾಮುಖಿಯಾಗಿ ಜಗಳವನ್ನು ಮಾಡಲಿದ್ದೀರಿ. ನಿಮ್ಮ ಬುದ್ಧಿ, ಮನಸ್ಸುಗಳು ನಿಮ್ಮ ಸ್ತಿಮಿತದಲ್ಲಿರಲಿ. ಕೆಲಸದಲ್ಲಿ ಆಲಸ್ಯ ಮಾಡಿ ಬರಬೇಕಾದುದನ್ನು ಕಳೆದುಕೊಳ್ಳುವಿರಿ. ಶುಭ ಸ್ಥಾನದ ರಾಹುವಿನ ದಶೆಯಿಂದ ಸಂಗಾತಿಯ ಲಾಭ. ಯಾವ ಸಂದರ್ಭದಲ್ಲಿ ಕೈಮೀರಿ ಹೋಗಿವ ಸನ್ನಿವೇಶವನ್ನು ತಂದುಕೊಳ್ಳಬೇಡಿ. ಅಮೂಲ್ಯ ವಸ್ತು ಅಥವಾ ಉನ್ನತ ಪದವಿಗಳು ನಷ್ಟವಾಗಲಿವೆ. ದುಃಖಿಸುವ ಅಗತ್ಯವಿಲ್ಲ. ಇನ್ನಷ್ಟು ಉತ್ತಮವಾದುದನ್ನು ನೀಡಲು ಇದು ಸಂಭವಿಸಿರಬಹುದು. ಅನಾರೋಗ್ಯ ವಿಚಾರವಾಗಿ ಸ್ನೇಹಿತರ ಜೊತೆ ಮಾತನಾಡಿ. ಉತ್ತಮವಾದ ಮಾರ್ಗವು ನಿಮಗೆ ಸಿಗಬಹುದು. ಮನಸ್ಸಿನ ನೆಮ್ಮದಿ ಕೆಡಬಹುದು.
ಕನ್ಯಾ ರಾಶಿ: ಇದು ಈ ತಿಂಗಳ ನಾಲ್ಕನೇ ವಾರ. ರಾಶಿಯ ಅಧಿಪತಿ ಬುಧ ಗುರುವಿನ ನಕ್ಷತ್ರದಲ್ಲಿ ಇದ್ದಾನೆ. ಇವರ ನಡುವೆ ಪರಸ್ಪರ ಮಿತ್ರತ್ವವಿಲ್ಲದ ಕಾರಣ ಬುಧ ದಶೆ ಪೂರ್ಣ ಶುಭವಲ್ಲ. ಕುಟುಂಬದವರ ಜೊತೆ ಸುಖವಾಗಿ ಬಾಳುವಿರಿ. ವಿನಾ ಕಾರಣ ಯಾರಮೇಲೋ ಸಿಟ್ಟಗುವ ಅವಶ್ಯಕತೆಯಿಲ್ಲ. ವಿವಾಹದ ಇಚ್ಛೆ ಉಳ್ಳವರಿಗೆ ಸಾಧಾರಣ ಕುಲದ ಸಂಗಾತಿ ಸಿಗಲಿದ್ದಾರೆ. ಹೊರಗೆ ಆಹಾರವನ್ನು ಸ್ವೀಕರಿಸಬೇಕು ಎನ್ನುವ ಆಸೆಯು ನಿಮಗಿದ್ದರೂ ಆರೋಗ್ಯವನ್ನು ಗಮನಿಸಿಕೊಂಡು ಹೋಗುವುದು ಉತ್ತಮ. ಕೃಷಿಯಲ್ಲಿ ನಷ್ಟವಾಗುವ ಸಾಧ್ಯತೆ ಇದೆ. ಇನ್ನೂ ಸೂರ್ಯನು ಷಷ್ಠದಲ್ಲಿ ಉದ್ಯಮದಲ್ಲಿ ಶತ್ರುಗಳ ಕಾಟ. ಶತ್ರುಗಳು ನಿಮ್ಮ ಸಾಧನೆಯನ್ನು ಕಂಡು ಕೊರಗಬಹುದು. ಹೂಡಿಕೆಗೆ ಬೇಕಾದ ಆಲೋಚನೆಗಳನ್ನು ಮಾಡಬಹುದು. ಮನೆಯನ್ನು ಕಟ್ಟಲು ಸಾಲಮಾಡಬೇಕಾದ ಸ್ಥಿತಿಯು ಬರಬಹುದು. ಮನೆಗೆಲಸಕ್ಕೆ ಸಹಾಯಮಾಡಲಿದ್ದೀರಿ.
ತುಲಾ ರಾಶಿ: ರಾಶಿ ಚಕ್ರದ ಏಳನೇ ರಾಶಿಯವರಿಗೆ ರಾಶಿಯ ಅಧಿಪತಿ ಶುಕ್ರ ಶನಿಯ ನಕ್ಷತ್ರದಲ್ಲಿ ಇದ್ದಾನೆ. ನಿಮ್ಮ ಆಸಕ್ತಿಗಳು, ಸಂತೋಷಗಳು ಸಿಗಲಿದ್ದು, ಅತೃಪ್ತಿ ಕಾಡುವುದು. ಅಂತಿಮವಾಗಿ ದುಃಖವೂ ನಿಮ್ಮನ್ನು ಬಾಧಿಸೀತು. ಒತ್ತಡದ ಕೆಲಸಗಳಿಂದ ಇಂದು ನೀವು ಮುಕ್ತರು. ತುಂಬ ದಿನಗಳ ಅನಂತರ ಕುಟುಂಬದವರ ಮಿಲನವಾಗಲಿದ್ದು ಬಹಳ ಸಂತೋಷದಿಂದ ಭಾಗವಹಿಸುವಿರಿ. ಶುಕ್ರನು ಷಷ್ಠದಲ್ಲಿ ಇದ್ದು ಅನವಶ್ಯಕ ಖರ್ಚನ್ನು ಹೆಚ್ಚಿಸುವನು. ಗೃಹೋಪಯೋಗಿ ವಸ್ತುಗಳ ಖರೀದಿಯಿಂದ ಖರ್ಚಾಗುವ ಸಾಧ್ಯತೆಯಿದೆ. ವಿನಾ ಕಾರಣ ಆರಂಭವಾದ ಕಲಹವು ನ್ಯಾಯಾಲಯಕ್ಕೆ ಹೋಗಲಿದೆ. ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿಸಿಗಲಿದೆ. ಸೂರ್ಯನು ಪಂಚಮದಲ್ಲಿ ಇದ್ದು ಹೊಸ ಯೋಚನೆಯನ್ನು ಕಾರ್ಯಗತ ಮಾಡುವಿರಿ. ಸಂಗಾತಿಯ ಜೊತೆ ಅನೌಪಚಾರಿಕ ಹರಟೆಯಿಂದ ಕಾಲವನ್ನು ಕಳೆಯುವಿರಿ. ನಿಮ್ಮನ್ನು ಇಷ್ಟಪಟ್ಟವರು ನಿಮ್ಮ ಜೊತೆ ಇರುವರು.
ವೃಶ್ಚಿಕ ರಾಶಿ: ಫೆಬ್ರವರಿ ತಿಂಗಳ ನಾಲ್ಕನೇ ವಾರದಲ್ಲಿ ರಾಶಿಯ ಅಧಿಪತಿಯಾದ ಕುಜ ಗುರುವಿನ ನಕ್ಷತ್ರದಲ್ಲಿ ಇರುವನು. ಪರಸ್ಪರ ಮಿತ್ರರಾದರೂ ಅವರಿರುವ ಸ್ಥಾನ ಅಷ್ಟಮವಾಗಿದೆ. ಗುರುದಶೆ ಅಶುಭಪ್ರದ. ಆರ್ಥಿಕಸಂಕಷ್ಟವು ಎದುರಾದೀತು. ರಾಜಕಾರಣಿಗಳು ಇಂದು ತಮ್ಮ ಕ್ಷೇತ್ರದಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಲಿದ್ದಾರೆ. ಆಭರಣವನ್ನು ತಡಗೆದುಕೊಳ್ಳುವ ಮನಸ್ಸು ಮಾಡುವಿರಿ. ನೀವು ಉನ್ನತಸ್ಥಾನಕ್ಕೆ ಹೋಗಲು ಯಾರದೋ ಕಳ್ಳತನದ ಅಪವಾದ ಬರಬಹುದು. ಯಾವುದಾದರೂ ಸಣ್ಣ ದೇಶಕ್ಕೆ ಹೋಗಿಬರುವ ಅವಕಾಶವಿದೆ. ಅಲ್ಲವೆನ್ನುವುದನ್ನು ಸಾಬೀತುಪಡಿಸಬೇಕು. ಆದಾಯ ಮತ್ತು ಖರ್ಚುಗಳ ಲೆಕ್ಕಾಚಾರವನ್ನು ಕಂಡಾಗ ನಿಮಗೆ ಆಶ್ಚರ್ಯವು ಕಾದಿರುತ್ತದೆ. ಸಂಗಾತಿಯ ಬೇಸರವನ್ನು ಕ್ಷಣಕಾಲದಲ್ಲಿ ದೂರ ಮಾಡುವ ವಿದ್ಯೆಯನ್ನು ನೀವು ಕಲಿತಿದ್ದೀರಿ.
ಧನು ರಾಶಿ: ಈ ವಾರದಲ್ಲಿ ರಾಶಿಯ ಅಧಿಪತಿ ಗುರು ಚಂದ್ರನ ಆಧಿಪತ್ಯದ ನಕ್ಷತ್ರದಲ್ಲಿ ಇರುವ ಶುಭವಾದರೂ ಷಷ್ಠದಲ್ಲಿ ಇದ್ದಾನೆ. ಸ್ತ್ರೀಯರಿಂದ ಅಪಮಾನ, ಕಫ ಸಂಬಂಧಿರೋಗವು ಅಧಿಕವಾಗುವುದು. ವಿದ್ಯುದುಪಕರಣವನ್ನು ಮಾರಾಟದಿಂದ ಲಾಭವಿದೆ. ಯೋಜನೆಯನ್ನು ಪೂರ್ಣಗೊಳಿಸಲು ಬೇಕಾದ ಪ್ರಯತ್ನವನ್ನು ಮಾಡುವಿರಿ. ವಿದ್ಯಾಭ್ಯಾಸಕ್ಕೆಂದು ಉತ್ತಮವಾದ ವಿದ್ಯಾಕೇಂದ್ರವನ್ನು ಹುಡುಕುತ್ತಿದ್ದರೆ ನಿಮಗದು ಸಿಗಲಿದೆ. ಜನಜಾಗರಣದ ಕಾರ್ಯಕ್ರಮಗಳಿಗೆ ಹೋಗಲಿದ್ದೀರಿ. ಉತ್ತಮ ಆಹಾರವನ್ನು ಸೇವಿಸುವ ದಿನವಿಂದು. ತೃತೀಯದಲ್ಲಿ ಸೂರ್ಯನು ದುರ್ಬುದ್ಧಿಗೆ ಪ್ರೇರಣೆ ನೀಡಬಹುದು. ಅಂತಹವರ ಸಹವಾಸ ಮಾಡುವಿರಿ. ನಿಮ್ಮ ಮೇಲೆ ಅನುಮಾನದ ಹುತ್ತಗಳು ಇರುತ್ತವೆ. ಶುಭದಿನದ ನಿರೀಕ್ಷೆಯಲ್ಲಿ ಇರುವಿರಿ. ನಿಮ್ಮ ಸುದೀರ್ಘ ಸೇವೆಗೆ ಗೌರವಿಸುವರು.
ಮಕರ ರಾಶಿ: ಈ ತಿಂಗಳ ನಾಲ್ಕನೇ ವಾರದಲ್ಲಿ ರಾಶಿ ಅಧಿಪತಿ ದ್ವಿತೀಯದಲ್ಲಿ ಗುರುವಿನ ನಕ್ಷತ್ರದಲ್ಲಿ ಇದ್ದಾನೆ. ಗುರುವಿನ ಒಳ್ಳೆಯದು. ಆದರೆ ಆಸ್ತಿ, ಕುಟುಂಬ, ಭೋಗದ ಕಡೆ ಮನಸ್ಸು ಹೋಗದು. ಎಲ್ಲವನ್ನೂ ಪಡೆದು ಏನು ಮಾಡುವುದು ಎಂಬ ಮನೋಭಾವ ಇರಲಿದೆ. ದೇಹಾಲಸ್ಯದಿಂದ ಅನೇಕ ಕಾರ್ಯಗಳು ಮುಗಿಯದು. ಆದಷ್ಟು ಶೀಘ್ರದಲ್ಲಿ ಮುಗಿಸಿದರೆ ಉತ್ತಮ. ಹೆಚ್ಚು ವಿಶ್ರಾಂತಿಯನ್ನು ಬಯಸಲಿದ್ದೀರಿ. ನಿಮಗಿಂದು ಸಭೆ, ಸಮಾರಂಭಗಳಲ್ಲಿ ಮಾತನಾಡುವ ಅವಕಾಶ ಸಿಗಲಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಸ್ವ ಆಸಕ್ತಿಯಿಂದ ತೊಡಗಿಕೊಳ್ಳುವರು. ದ್ವಿತೀಯದಲ್ಲಿ ಇರುವ ಸೂರ್ಯನು ತಂದೆಯ ಸಂತೋಷವನ್ನು ನೀಡುವನು. ಆಯಾಸವಿದ್ದರೂ ಇನ್ನೊಬ್ಬರ ಒತ್ತಾಯಕ್ಕೆ ಅವರೊಂದಿಗೆ ವಾಯುವಿಹಾರಕ್ಕೆಂದು ಹೋಗುವಿರಿ. ದೀರ್ಘಕಾಲದ ವಾಹನದಿಂದ ವಾತಸಂಬಂಧಿ ರೋಗಗಳು ಬರಬಹುದು. ಭೂಮಿಯ ವಿಕ್ರಯದ ಹಣ ಬರುವುದು.
ಕುಂಭ ರಾಶಿ: ರಾಶಿ ಚಕ್ರದ ಹನ್ನೊಂದನೇ ರಾಶಿಯವರಿಗೆ ರಾಶಿ ಅಧಿಪತಿ ಶನಿ ಗುರುವಿನ ಆಧಿಪತ್ಯ ನಕ್ಷತ್ರದಲ್ಲಿ ಇದ್ದಾನೆ. ಗುರು ದೆಶೆ ಇವರಿಗೆ ಉತ್ತಮ. ಯಾವುದೇ ವಿಚಾರವನ್ನೂ ಸ್ವೀಕರಿಸಿ ಮುನ್ನಡೆಯುವರು. ಮನಸ್ಸು ಬಹಳ ಚಂಚಲವಾಗಲಿದೆ. ನಿಮ್ಮ ಅಮೂಲ್ಯ ವಸ್ತುಗಳು ಕಣ್ಮರೆಯಾಗಲಿದೆ. ನಿಮ್ಮ ಆಲೋಚನಗಳಿಂದ ಅನೇಕರು ಪ್ರಭಾವಿತರಾಗುವ ಸಾಧ್ಯತೆ ಇದೆ. ಪಿತ್ರಾರ್ಜಿತ ಆಸ್ತಿಯ ಬಗ್ಗೆ ಮಾತುಕತೆಗಳು ಮನೆಯಲ್ಲಿ ನಡೆಯಬಹುದು. ಬಂಧುಗಳು ನಿಮ್ಮ ವ್ಯಕ್ತಿತ್ವದ ಬಗ್ಗೆ ಮಾತನಾಡುವರು. ಸಂಪತ್ತಿನ ಅನಿರೀಕ್ಷಿತವಾಗಿ ಖರ್ಚಾಗಲಿದೆ. ರವಿಯು ನಿಮ್ಮ ರಾಶಿಯಲ್ಲಿ ಇರುವ ಕಾರಣ ಶರೀರ ತಾಪ ಮನಸ್ಸಿನ ತಾಪಗಳು ಅಧಿಕವೇ. ಕಲಾವಿದರಿಗೆ ಉತ್ತಮ ಅವಕಾಶವು ಸಿಗಲಿದೆ. ನಿಮ್ಮ ಸಹಾಯಕ್ಕೆ ಬಂದವರನ್ನು ಸ್ಮರಿಸಿಕೊಳ್ಳಲಿದ್ದೀರಿ. ತಿಳಿವಳಿಕಯಿಂದ ಕೂಡಿದ ನಿಮ್ಮ ಜೀವನ ಸುಗಮವಾಗಲಿದೆ. ಧನವ್ಯಯವವನ್ನು ತಡೆಯಲು ಮಾರ್ಗವನ್ನು ಹುಡುಕಿ.
ಮೀನ ರಾಶಿ: ಇದು ತಿಂಗಳ ನಾಲ್ಕನೇ ವಾರವಾಗಿದ್ದು ರಾಶಿಯ ಅಧಿಪತಿ ತೃತೀಯದಲ್ಲಿ ಇದ್ದಾನೆ. ಚಂದ್ರ ಆಧಿಪತ್ಯದಲ್ಲಿ ಇದ್ದು, ಚಂದ್ರದಶೆ ನಡೆಯುವವೆರಿಗೆ ಉತ್ತಮ. ವಿದ್ಯಾಭ್ಯಾಸದಲ್ಲಿ ಆಸಕ್ತಿ ಇದ್ದರೂ ಅದನ್ನು ಬೆಳೆಸಿಕೊಂಡು ಹೋಗಬೇಕಾದ ಕೆಲಸವಿದೆ. ವಿರಾಮದ ಸಮಯವನ್ನು ಆರಾಮಾಗಿ ಕಳೆಯುವಿರಿ. ಎಂದೋ ಕೂಡಿಟ್ಟ ಹಣವು ನಿಮ್ಮ ಸಮಯಕ್ಕೆ ಸರಿಯಾಗಿ ಸಿಗುವುದು. ನಿಮ್ಮಿಂದ ಪ್ರೀತಿಯನ್ನು ಬಯಸುವವರಿಗೆ ಪ್ರೀತಿಯನ್ನು ಕೊಡಿ. ಬೆಚ್ಚಗಿನ ವಾತಾವರಣದಲ್ಲಿರ ಇರಿ. ಅನಿರೀಕ್ಷಿತ ವ್ಯಕ್ತಿಗಳ ಭೇಟಿಯಿಂದ ಸಂತಸ. ರವಿಯು ದ್ವಾದಶದಲ್ಲಿ ಇದ್ದು ಸರ್ಕಾರದ ಉದ್ಯೋಗದಲ್ಲಿ ಕಿರಿಕಿರಿ, ಅಪವಾದ, ಭೀತಿಯನ್ನು ನೀಡುವನು. ನಿಧಾನವಾಗಿ ಸಾಗುತ್ತಿದ್ದ ನಿಮ್ಮ ಕೆಲಸಕ್ಕೆ ವೇಗ ಸಿಗಲಿದೆ. ಸಿವಿಲ್ ಕೆಲಸದಲ್ಲಿ ಪ್ರಗತಿ ಇದೆ. ಸ್ವಲ್ಪ ಪ್ರಯಾಣದ ಅನಿವಾರ್ಯತೆ ಬರಬಹುದು. ಆರೋಗ್ಯದ ಬಗ್ಗೆ ಗಮನವಿರಲಿ.
ಲೋಹಿತ ಹೆಬ್ಬಾರ್ 8762924271 (what’s app only)




