Weekly Horoscope in Kannada: ವಾರ ಭವಿಷ್ಯ: ಅಕ್ಟೋಬರ್ 20 ರಿಂದ 26 ರವರೆಗೆ ವಾರ ಭವಿಷ್ಯ

ಇದು ಅಕ್ಟೋಬರ್ ತಿಂಗಳ ನಾಲ್ಕನೇ ವಾರ. 20-10-2024ರಿಂದ 26-10-2024ರವರೆಗೆ ಇರಲಿದೆ. ಬುಧಾದಿತ್ಯ ಯೋಗವಿದ್ದರೂ ಸೂರ್ಯನು ನೀಚನಾದ ಕಾರಣ ಯೋಗವು ಪೂರ್ಣವಾಗಿ ಫಲಿಸದು. ಕುಜನೂ ನೀಚಸ್ಥನಾಗುವ ಕಾರಣ ಸಾಹೋದರ್ಯ, ಬಲ, ಭೂಮಿ, ವಿಚಾರಕ್ಕೆ ಸಂಬಂಧಿಸಿದಂತೆ ಊರ್ಜತೆ ಕಾಣಸಿದು.

Weekly Horoscope in Kannada: ವಾರ ಭವಿಷ್ಯ: ಅಕ್ಟೋಬರ್ 20 ರಿಂದ 26 ರವರೆಗೆ ವಾರ ಭವಿಷ್ಯ
ವಾರ ಭವಿಷ್ಯ: ಅಕ್ಟೋಬರ್ 20 ರಿಂದ 26 ರವರೆಗೆ ವಾರ ಭವಿಷ್ಯ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Oct 20, 2024 | 1:02 AM

ಇದು ಅಕ್ಟೋಬರ್ ತಿಂಗಳ ನಾಲ್ಕನೇ ವಾರ. 20-10-2024ರಿಂದ 26-10-2024ರವರೆಗೆ ಇರಲಿದೆ. ಬುಧಾದಿತ್ಯ ಯೋಗವಿದ್ದರೂ ಸೂರ್ಯನು ನೀಚನಾದ ಕಾರಣ ಯೋಗವು ಪೂರ್ಣವಾಗಿ ಫಲಿಸದು. ಕುಜನೂ ನೀಚಸ್ಥನಾಗುವ ಕಾರಣ ಸಾಹೋದರ್ಯ, ಬಲ, ಭೂಮಿ, ವಿಚಾರಕ್ಕೆ ಸಂಬಂಧಿಸಿದಂತೆ ಊರ್ಜತೆ ಕಾಣಸಿದು.

ಮೇಷ ರಾಶಿ: ಇದು ಅಕ್ಟೋಬರ್ ತಿಂಗಳ ನಾಲ್ಕನೇ ವಾರವಾಗಿದ್ದು ನಿಮ್ಮ ಸ್ವತ್ತುಗಳ ಕುರಿತು ಅತ್ಯಂತ ಆತಂಕವಾಗಬಹುದು. ಆಸ್ತಿಯ ಖರೀದಿಯನ್ನು ನೀವು ಬಹಳ ಮುತುವರ್ಜಿಯಿಂದ ಮಾಡುವಿರಿ. ನಿಮ್ಮ ಪ್ರೀತಿಗೆ ಯಾರಾದರೂ ಸೋಲುವರು. ಈ ವಾರದ ಹೂಡಿಕೆಯು ಉತ್ತಮ ರೀತಿಯಲ್ಲಿ ಲಾಭವನ್ನು ಗಳಿಸಬಹುದು. ನಿಮ್ಮ ಕಾರ್ಯವನ್ನು ಮೂರನೇ ವ್ಯಕ್ತಿಗಳು ಬಳಸಿಕೊಳ್ಳುವರು. ಕಾರ್ತಕೇಯನನ್ನು ಸಹಸ್ರನಾಮದಿಂದ ಪೂಜಿಸಿ.

ವೃಷಭ ರಾಶಿ: ಈ ವಾರ ನಿಮಗೆ ಅನಾರೋಗ್ಯವು ಕಾಡುವುದು. ಹೊಸತನವನ್ನು ರೂಢಿಸಿಕೊಳ್ಳಲು ನೀವು ಶಕ್ತರಾಗಬಹುದು. ಶತ್ರುಗಳನ್ನು ನೀವು ಕ್ಷಮಿಸುವಿರಿ. ಕಲಾವಿದರಿಗೆ ಹೊರದೇಶಕ್ಕೆ ತೆರಳುವ ಅವಕಾಶವಿರುವುದು. ಇಷ್ಟವಾಗುವುದು ಕಾರ್ಯವನ್ನು ಬೇಗ ಮುಕ್ತಾಯ ಮಾಡಿಕೊಳ್ಳುವಿರಿ. ಮಾನಸಿಕ ಅಶಾಂತಿಯನ್ನು ಬೇರೆ ಮಾಧ್ಯಮಗಳ ಮೂಲಕ ಮಾಡಿಕೊಳ್ಳುವಿರಿ. ಗೋವಿಗೆ ಆಹಾರವನ್ನು ಕೊಡಿ.

ಮಿಥುನ ರಾಶಿ: ಅಕ್ಟೋಬರ್ ತಿಂಗಳ ಈ ವಾರದಲ್ಲಿ ನೀವು ನಿಮ್ಮ ಅನಿರೀಕ್ಷಿತ ಏರಿಳಿತದ ಮನಃಸ್ಥಿತಿಯಿಂದ ಪದೇ ಪದೇ ಎರಡು ಮನಸ್ಸುಗಳಲ್ಲಿ ಸಿಲುಕಿಕೊಳ್ಳುವಿರಿ. ಇದು ಸಾಕಷ್ಟು ಮಾನಸಿಕ ಒತ್ತಡ ಸೃಷ್ಟಿಸುತ್ತದೆ. ನೀವು ನಿಮ್ಮ ಸಮಸ್ಯೆಗಳನ್ನು ನಿಮ್ಮ ಕುಟುಂಬ ಸದಸ್ಯರ ಜೊತೆ ಚರ್ಚೆ ನಡೆಸುವ ಮೂಲಕ ನಿಮ್ಮ ಆತಂಕ ಕಡಿಮೆ ಮಾಡಬಹುದು. ಈ ವಾರ ನಿಮ್ಮ ಆರೋಗ್ಯಕ್ಕೆ ಗಮನ ನೀಡಬೇಕಾದುದು ಅಗತ್ಯ. ಸೀತಾರಾಮರ ಅನುಗ್ರಹವನ್ನು ಪಡೆಯಿರಿ.

ಕರ್ಕಾಟಕ ರಾಶಿ: ಈ ವಾರದಲ್ಲಿ ನೀವು ಕಲ್ಪನೆಯಲ್ಲಿ ಮುಳುಗಿಹೋಗುವಿರಿ. ನಿಮ್ಮ ಯೋಜನೆಗಳಿಗೆ ಅದ್ಭುತವಾದ ಸ್ಪಂದನೆ ಸಿಗಲಿದೆ. ನಿಮ್ಮ ಸ್ಥಾನಮಾನ ಮತ್ತು ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುವಿರಿ. ಜನರು ನಿಮ್ಮ ಪ್ರಯತ್ನಗಳನ್ನು ಶ್ಲಾಘಿಸುತ್ತಾರೆ. ಸೃಜನಶೀಲತೆ ಮತ್ತು ಯಶಸ್ಸಿನ ವಾರವಾಗಿದೆ. ದುರಭ್ಯಾಸಕ್ಕೆ ಬೀಳುವ ಸಾಧ್ಯತೆ ಇದೆ. ಅಹಂಕಾರದಿಂದ ನಿಮಗೆ ಹಿನ್ನಡೆಯಾಗುವುದು. ದುರ್ಗಾಮಾತೆಯ ಮಂದಿರದಲ್ಲಿ ಸ್ವಲ್ಪ ಕಾಲ ಕಳೆದರೆ ಸಕಾರಾತ್ಮ ಮಾರ್ಗವು ಕಾಣಿಸುವುದು.

ಸಿಂಹ ರಾಶಿ: ತಿಂಗಳ ನಾಲ್ಕನೇ ವಾರದಲ್ಲಿ ನೀವು ಮನೆಯಲ್ಲಿನ ವಿಷಯಗಳಿಗೆ ಹೆಚ್ಚು ಗಮನ ನೀಡುತ್ತೀರಿ. ನೀವು ಮನೆ ನವೀಕರಣ ಯೋಜನೆಗಳನ್ನು ಕೈಗೊಳ್ಳಬಹುದು. ನಿಮ್ಮ ಸ್ಥಳವೂ ಒಳಗೊಂಡು ಇಡೀ ಪೀಠೋಪಕರಣ ಬದಲಾಯಿಸುತ್ತೀರಿ. ನಿಮ್ಮ ಕುಟುಂಬ ಸದಸ್ಯರು ಮತ್ತು ಮಿತ್ರರ ಜೊತೆ ದಿನವನ್ನು ಆನಂದಿಸುತ್ತಾ ಕಳೆಯುತ್ತೀರಿ. ಉದ್ಯೋಗದ ಬದಲಾವಣೆಯ ಬಗ್ಗೆ ಚಿಂತನೆಯನ್ನು ಆರಂಭಿಸುವಿರಿ. ಸೂರ್ಯನ ಕವಚವನ್ನು ಪಠಿಸಿ.

ಕನ್ಯಾ ರಾಶಿ: ಈ ತಿಂಗಳ ನಾಲ್ಕನೇ ವಾರದಲ್ಲಿ ನಿಮಗೆ ಮಕ್ಕಳ ವಿಚಾರಕ್ಕೆ ಸಂತೋಷವಾಗಲಿದೆ. ನಿಮ್ಮ ತಾರ್ಕಿಕ ಸಾಮರ್ಥ್ಯಗಳು ಸದೃಢವಾಗುತ್ತವೆ. ಶಾಂತಯುತವಾಗಿರಲು ಪ್ರಯತ್ನಿಸಿ, ಅಲೆ ಬಂದಂತೆ ಸಾಗುತ್ತಿರಿ ಮತ್ತು ಈ ವಾರ ಏನೇ ಆಗಲಿ, ನೀವು ಆನಂದಿಸಿರಿ. ಬೇಕಾದ ಜನರನ್ನು ಅನಿರೀಕ್ಷಿತವಾಗಿ ಭೇಟಿಯಾಗುವಿರಿ. ಸುಲಭವಾಗಿ ಸಿಗುವುದನ್ನು ಬಿಟ್ಟುಕೊಡುವಿರಿ. ಲಕ್ಷ್ಮೀನಾರಾಯಣರ ಸ್ತೋತ್ರವನ್ನು ಪಠಿಸಿ.

ತುಲಾ ರಾಶಿ: ರಾಶಿ ಚಕ್ರದ ಏಳನೇ ರಾಶಿಯವರಿಗೆ ಈ ತಿಂಗಳು ಪ್ರೀತಿಯಲ್ಲಿರುವ ನೀವು ಒಳ್ಳೆಯ ದಿನಗಳನ್ನು ಅನುಭವಿಸುವಿರಿ. ನಿಮಗೆ ಸಂಪೂರ್ಣ ಸಂತೋಷ, ಹುರುಪು ಮತ್ತು ಆನಂದದ ದಿನವಾಗಿದೆ. ವ್ಯಾಪಾರಕ್ಕಾಗಿ ದೂರದ ಊರಿಗೆ ಹೋಗಬೇಕಾಗಬಹುದು. ದೈವದ ಕೋಪಕ್ಕೆ ಒಳಗಾಗುವಿರಿ. ಏಕಾಗ್ರತೆಯ ಕೊರತೆ ಹೆಚ್ಚು ಕಾಣಿಸುವುದು. ಮಹಾಗೌರಿಯ ಉಪಾಸನೆಯಿಂದ ಶುಭ.

ವೃಶ್ಚಿಕ ರಾಶಿ: ಅಕ್ಟೋಬರ್ ತಿಂಗಳ ನಾಲ್ಕನೇ ವಾರ ಮುಖ್ಯವಾದ ಕೆಲಸವನ್ನು ಅನುಷ್ಠಾನಗೊಳಿಸುವ ಕಾಲ. ನಿಮ್ಮ ವ್ಯಾಪಾರವನ್ನು ಜಂಟಿ ಸಹಯೋಗದಲ್ಲಿ ಕೊಂಚ ಹೆಚ್ಚು ಕಾಯಬೇಕಾಗಬಹುದು. ಆದಾಗ್ಯೂ, ತಾಳ್ಮೆ ನೀಡುವ ಪ್ರತಿಫಲ ಸಿಹಿಯಾಗಿರುವುದರಿಂದ ಭರವಸೆ ಕಳೆದುಕೊಳ್ಳಬೇಡಿ. ನಿರಂತರ ಕಾರ್ಯವನ್ನು ಮಾಡುವುದು ಶ್ರೇಯಸ್ಸಾದರೂ ಅದನ್ನು ಮಾಡುವಂತೆ ಮಾಡುವಿರಿ. ದೈವಾನುಕೂಲವು ನಿಮಗೆ ಬೆಂಬಲ ನೀಡುವುದು. ಪ್ರೇಮಪಾಶದಿಂದ ನಿಮಗೆ ಬಂಧನವಾಗಲಿದೆ. ಸುಬ್ರಹ್ಮಣ್ಯನಿಗೆ ಪ್ರಿಯವಾದ ನೈವೇದ್ಯವನ್ನು ಅರ್ಪಿಸಿ.

ಧನು ರಾಶಿ: ರಾಶಿ ಚಕ್ರದ ಹತ್ತನೇ ರಾಶಿಯವರಿಗೆ ಈ ವಾರ ಆತಂಕದ‌ ಬಿರುಗಾಳಿ ಬೀಸುವುದು. ಎಂತಹ ವಸ್ತುವೂ ಅದರ ಎದುರು ನಿಲ್ಲಲಾಗದು. ನಿಮ್ಮ ಸನ್ನಿವೇಶವು ಸಹಜಸ್ಥಿತಿಗೆ ಬರಲು ಬಯಸಿದರೆ ಅದು ಕೊಂಚ ತಡವಾಗಬಹುದು. ವಾರದ ಮಧ್ಯದಲ್ಲಿ ಅನುಕೂಲ ಪಡೆಯಬಹುದು. ಬಂಧುಗಳ ಬಗ್ಗೆ ನೀವು ಅಂದುಕೊಂಡಂತೆ ಆಗದು. ನಿಶ್ಚಲ ಸ್ಥಿತಿಯನ್ನು ವಾತಾವರಣವು ಬದಲಿಸುವುದು. ಮನೆಯಲ್ಲಿ ಹೆಚ್ಚು ಕೆಲಸವನ್ನು ಮಾಡಲು ಸಾಧ್ಯವಾಗದು. ಗುರುಚರಿತ್ರೆಯ ಪಾರಾಯಣದಿಂದ ಶುಭ.

ಮಕರ ರಾಶಿ: ಈ ತಿಂಗಳ ನಾಲ್ಕನೇ ವಾರದಲ್ಲಿ ನೀವು ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುವ ಯೋಜನೆಯನ್ನು ಮಾಡಿಕೊಳ್ಳುವಿರಿ. ದಾಖಲೆಗಳ ಸಿದ್ಧತೆಗಳನ್ನು ಪ್ರಾರಂಭಿಸುವಿರಿ. ನೀವು ವಿದ್ಯಾರ್ಥಿಯಾಗಿದ್ದಲ್ಲಿ ಮುಂದೆ ಮಾಡಬೇಕಾದ ತುರ್ತು ಕಾರ್ಯಗಳ ಬಗ್ಗೆ ಗಮನ ಹೆಚ್ವಿರಲಿ. ಈ ವಾರ ನೀವು ಹೆಚ್ಚು ಆಯಾಸದಿಂದ ಕಾರ್ಯವನ್ನು ಮಾಡುವಿರಿ. ವಿಶ್ರಾಂತಿಯೂ ಹೆಚ್ಚು ಬೇಕಾಗುವುದು. ಸಂಗಾತಿಯ ಜೊತೆ ವೈಮನಸ್ಯ ಅಧಿಕವಾಗುವುದು. ಮಕ್ಕಳಿಂದ‌‌ ಪ್ರಶಂಸೆ ಹೆಚ್ಚಾಗುವುದು. ಶಿವಕವಚವನ್ನು ಹನ್ನೊಂದು ಬಾರಿ ಪಠಿಸಿ.

ಕುಂಭ ರಾಶಿ: ರಾಶಿ ಚಕ್ರದ ಹನ್ನೊಂದನೇ ರಾಶಿಯವರಿಗೆ ಈ ವಾರ ಗುರಿಗೆ ಅಡ್ಡಿಗಳು ಎದುರಾಗುವುದು. ಹಾಗಾಗಿ ನಿಮ್ಮ ಮಾರ್ಗದಲ್ಲಿ ಸಣ್ಣ ಬದಲಾವಣೆ ಮಾಡಿಕೊಳ್ಳುವಿರಿ. ನಿಮ್ಮ ಮಾತಿನಲ್ಲಿ ಈ ವಾರ ಸ್ಪಷ್ಟತೆ ಕಾಣುತ್ತದೆ. ಹಿಂದೆ ನೀವು ಮಾಡಿದ ಪ್ರಯತ್ನಗಳು ಈ ವಾರ ಕೆಲವು ಫಲ ನೀಡಲು ಸಜ್ಜಾಗಿವೆ. ನಿಮ್ಮ ಪ್ರಸ್ತುತದ ಸಾಧನೆಗಳ ಕುರಿತು ಸಂತೃಪ್ತರಾಗಬೇಡಿ. ನೀವು ಕಠಿಣ ಪರಿಶ್ರಮಪಡುವಲ್ಲಿ ನೀವು ಇನ್ನೂ ದೂರ ಸಾಗಬೇಕಾಗಿದೆ. ಕೌಟುಂಬಿಕವಾಗಿ ಕಾಳಜಿ ಹೆಚ್ಚಾಗುವುದು. ಹನುಮಾನ್ ದೇವಾಲಯದಲ್ಲಿ ತೈಲದೀಪವನ್ನು ಬೆಳಗಿ.

ಮೀನ ರಾಶಿ: ಇದು ಅಕ್ಟೋಬರ್ ತಿಂಗಳ ನಾಲ್ಕನೇ ವಾರವು ಇದಾಗಿದ್ದು, ನೀವು ಯಾವುದೇ ದೊಡ್ಡ ಹೂಡಿಕೆಗಳ ಯೋಜನೆಯ ಬಗ್ಗೆ ಯೋಚಿಸುವುದು ಬೇಡ. ಈ ವಾರ ಆದಷ್ಟು ಕಾಲ್ಪನಿಕ ಚಟುವಟಿಕೆಗಳನ್ನು ತಪ್ಪಿಸುವುದು ಉತ್ತಮ. ಉದ್ಯೋಗದಲ್ಲಿರುವವರಿಗೆ ನಿಮ್ಮ ಸಹೋದ್ಯೋಗಿಗಳ ಸಹಕಾರದಿಂದ ನೀವು ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ಆದರೆ ಯಾವುದೇ ಉದ್ಧಟತನದಿಂದ ವರ್ತಿಸುವುದು ಬೇಡ. ಗೋಗ್ರಾಸವನ್ನು ಪ್ರಾತಃಕಾಲದಲ್ಲಿ ನೀಡಿ.

ಲೋಹಿತ ಹೆಬ್ಬಾರ್ – 8762924271 (what’s app only)

ರೈಲು ಅಪಘಾತದಿಂದ 60 ಆನೆಗಳ ರಕ್ಷಣೆ; ಲೋಕೋ ಪೈಲಟ್ ಕಾರ್ಯಕ್ಕೆ ಮೆಚ್ಚುಗೆ
ರೈಲು ಅಪಘಾತದಿಂದ 60 ಆನೆಗಳ ರಕ್ಷಣೆ; ಲೋಕೋ ಪೈಲಟ್ ಕಾರ್ಯಕ್ಕೆ ಮೆಚ್ಚುಗೆ
ತೆಲಂಗಾಣದಲ್ಲಿ ಉತ್ಖನನದ ವೇಳೆ ಆಂಜನೇಯನ ಪ್ರತಿಮೆ ಪತ್ತೆ
ತೆಲಂಗಾಣದಲ್ಲಿ ಉತ್ಖನನದ ವೇಳೆ ಆಂಜನೇಯನ ಪ್ರತಿಮೆ ಪತ್ತೆ
ಮನೆ ಸದಸ್ಯರಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ್, ಎಲ್ಲರೂ ಎಲಿಮಿನೇಟ್?
ಮನೆ ಸದಸ್ಯರಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ್, ಎಲ್ಲರೂ ಎಲಿಮಿನೇಟ್?
ಈಡಿ ವ್ಯಾಪ್ತಿಯನ್ನು ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ: ಸಚಿವ
ಈಡಿ ವ್ಯಾಪ್ತಿಯನ್ನು ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ: ಸಚಿವ
ಬೆಂಗಳೂರು: ಜಿಟಿ ಜಿಟಿ ಮಳೆಯಲ್ಲಿ ಫೋಟೋಶೂಟ್ ಮಾಡಿಸಿಕೊಂಡ ಮುದ್ದಾದ ಜೋಡಿ
ಬೆಂಗಳೂರು: ಜಿಟಿ ಜಿಟಿ ಮಳೆಯಲ್ಲಿ ಫೋಟೋಶೂಟ್ ಮಾಡಿಸಿಕೊಂಡ ಮುದ್ದಾದ ಜೋಡಿ
Bangalore Rains: ಬೆಂಗಳೂರಿನಲ್ಲಿ ಮತ್ತೆ ಮಳೆ, ಧರೆಗುರುಳಿದ ಮರಗಳು
Bangalore Rains: ಬೆಂಗಳೂರಿನಲ್ಲಿ ಮತ್ತೆ ಮಳೆ, ಧರೆಗುರುಳಿದ ಮರಗಳು
ಲೋಕಸಭಾ ಚುನಾವಣೆಯಲ್ಲಿ ಸೋಲ್ತೀನಿ ಅಂತ ನನಗೆ ಗೊತ್ತಿತ್ತು: ಕೆಎಸ್ ಈಶ್ವರಪ್ಪ
ಲೋಕಸಭಾ ಚುನಾವಣೆಯಲ್ಲಿ ಸೋಲ್ತೀನಿ ಅಂತ ನನಗೆ ಗೊತ್ತಿತ್ತು: ಕೆಎಸ್ ಈಶ್ವರಪ್ಪ
ವಂಚನೆ ಕೇಸ್​ನಲ್ಲಿ ಪ್ರಲ್ಹಾದ್ ಜೋಶಿ ಪಾತ್ರ ಏನೂ ಇಲ್ಲ: ದೂರುದಾರೆ ಸ್ಪಷ್ಟನೆ
ವಂಚನೆ ಕೇಸ್​ನಲ್ಲಿ ಪ್ರಲ್ಹಾದ್ ಜೋಶಿ ಪಾತ್ರ ಏನೂ ಇಲ್ಲ: ದೂರುದಾರೆ ಸ್ಪಷ್ಟನೆ
ಯಾರೇ ಗಣತಿ ಮಾಡಿಸಿದರೂ ಜಾತಿಗಳಿಗೆ ಸೂಕ್ತ ಪ್ರಾತಿನಿಧ್ಯ ಸಿಗಬೇಕು: ಶಾಸಕ
ಯಾರೇ ಗಣತಿ ಮಾಡಿಸಿದರೂ ಜಾತಿಗಳಿಗೆ ಸೂಕ್ತ ಪ್ರಾತಿನಿಧ್ಯ ಸಿಗಬೇಕು: ಶಾಸಕ
ಪಂತ್ ಪವರ್​ಗೆ ಚಿನ್ನಸ್ವಾಮಿ ಮೇಲ್ಛಾವಣಿಗೆ ಬಿದ್ದ ಚೆಂಡು; ವಿಡಿಯೋ
ಪಂತ್ ಪವರ್​ಗೆ ಚಿನ್ನಸ್ವಾಮಿ ಮೇಲ್ಛಾವಣಿಗೆ ಬಿದ್ದ ಚೆಂಡು; ವಿಡಿಯೋ