AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರಿಷ್ಟವನ್ನು ತಿಳಿದುಕೊಳ್ಳುವುದು ಹೇಗೆ? ಅದರಿಂದ ಆಗುವುದೇನು?

ಅರಿಷ್ಟವೆಂದರೆ ಪಾಪ ಎಂದರ್ಥ. ಜನನ ಕಾಲದಲ್ಲಿ ನಮ್ಮ ಹಿಂದಿನ ಜನ್ಮದ ಶುಭಾಶುಭಕರ್ಮಗಳು ಫಲವನ್ನು ಕೊಡಲು ಆರಂಭಿಸುತ್ತವೆ. ಅಶುಭ ಅಥವಾ ಪಾಪವೇ ಅಧಿಕವಾಗಿದ್ದರೆ ಹುಟ್ಟಿದ ಕ್ಷಣದಿಂದಲೇ ಫಲವು ಪ್ರಾಪ್ತವಾಗುತ್ತದೆ. ಜನನದಿಂದ ಮರಣಪರ್ಯಂತ ತೊಂದರೆಗಳೂ ಒಂದಲ್ಲ ಒಂದು ರೀತಿಯಲ್ಲಿ ಬಂದೇಬರುತ್ತವೆ. ಅದಕ್ಕೆ ಕಾರಣ ಪಾಪವಾಗಿರುತ್ತದೆ. ಅದನ್ನು ವಿಶೇಷವಾಗಿ ಜನನಕಾಲದಲ್ಲಿಯೂ ಹೇಳುತ್ತಾರೆ.

ಅರಿಷ್ಟವನ್ನು ತಿಳಿದುಕೊಳ್ಳುವುದು ಹೇಗೆ? ಅದರಿಂದ ಆಗುವುದೇನು?
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಅಕ್ಷಯ್​ ಪಲ್ಲಮಜಲು​​|

Updated on: Nov 22, 2023 | 5:40 PM

Share

ಅರಿಷ್ಟವೆಂದರೆ ಪಾಪ ಎಂದರ್ಥ. ಜನನ ಕಾಲದಲ್ಲಿ ನಮ್ಮ ಹಿಂದಿನ ಜನ್ಮದ ಶುಭಾಶುಭಕರ್ಮಗಳು ಫಲವನ್ನು ಕೊಡಲು ಆರಂಭಿಸುತ್ತವೆ. ಅಶುಭ ಅಥವಾ ಪಾಪವೇ ಅಧಿಕವಾಗಿದ್ದರೆ ಹುಟ್ಟಿದ ಕ್ಷಣದಿಂದಲೇ ಫಲವು ಪ್ರಾಪ್ತವಾಗುತ್ತದೆ. ಜನನದಿಂದ ಮರಣಪರ್ಯಂತ ತೊಂದರೆಗಳೂ ಒಂದಲ್ಲ ಒಂದು ರೀತಿಯಲ್ಲಿ ಬಂದೇಬರುತ್ತವೆ. ಅದಕ್ಕೆ ಕಾರಣ ಪಾಪವಾಗಿರುತ್ತದೆ. ಅದನ್ನು ವಿಶೇಷವಾಗಿ ಜನನಕಾಲದಲ್ಲಿಯೂ ಹೇಳುತ್ತಾರೆ.

ಸಾಯಂಕಾಲದ ಸಮಯದಲ್ಲಿ ಯಾರದ್ದಾದರೂ ಜನನವಾಗಿ, ಆಗ ಲಗ್ನವು ಚಂದ್ರ ಹೋರೆಯಲ್ಲಿ ಇದ್ದರೆ, ಪಾಪಗ್ರಹಗಳು ಯಾವ ರಾಶಿಯಲ್ಲಾದರೂ ಅಂತ್ಯ ನವಾಂಶದಲ್ಲಿ ಇದ್ದರೆ, ಜನಿಸಿದ ಮಗುವು ಬದುಕುವುದಿಲ್ಲವೆಂದು ತಿಳಿಯಬೇಕು. ಹಾಗೆಯೇ ಚಂದ್ರನು ಪಾಪಗ್ರಹರ ಜೊತೆ ಇದ್ದು ಲಗ್ನ, ಚತುರ್ಥ, ಸಪ್ತಮ, ದಶಮದಲ್ಲಿ ಅಂದರೆ ಕೇಂದ್ರಸ್ಥಾನದಲ್ಲಿ ಇದ್ದು, ಪಾಪಗ್ರಹರು ಯಾವುದಾದರೂ ಮೂರು ಸ್ಥಾನದಲ್ಲಿ ಇದ್ದರೆ ಜನಿಸಿದ ಮಗುವು ಬದುಕುವುದಿಲ್ಲ ಎಂದು ತಿಳಿಯಬೇಕು.

ಮತ್ತೆ, ಜನ್ಮ ಸಮಯದಲ್ಲಿ ಲಗ್ನ ಮತ್ತು ಸಪ್ತಸ್ಥಾನದಲ್ಲಿ ಪಾಪಗ್ರಹರಿದ್ದು, ಚಂದ್ರನು ಪಾಪಗ್ರಹಯುಕ್ತನಾಗಿ ಶುಭಗ್ರಹರ ದೃಷ್ಟಿಯು ಇಲ್ಲದಿದ್ದರೆ ಹುಟ್ಟಿದ ಶಿಶುವು ಶೀಘ್ರವಾಗಿ ಮರಣವನ್ನು ಹೊಂದುತ್ತದೆ ಎಂದು ತಿಳಿಯಬೇಕು. ಯಾರದ್ದಾದರೂ ಜನನ ಸಂದರ್ಭದಲ್ಲಿ ಕ್ಷೀಣ ಚಂದ್ರ ಸಂದರೆ ಕೃಷ್ಣಪಕ್ಷದ ಅಷ್ಟಮಿಯಿಂದ ಶುಕ್ಲಪಕ್ಷದ ಅಷ್ಟಮಿಯವರೆಗಿನ ಚಂದ್ರನು ವ್ಯಯದಲ್ಲಿ ಇದ್ದರೆ, ಲಗ್ನ ಮತ್ತು ಅಷ್ಟಮದಲ್ಲಿ ಪಾಪಗ್ರಹರು ಅಂದರೆ, ಕುಜ, ಶನಿ, ರಾಹು, ಕೇತು ಮುಂತಾದವರು ಇದ್ದರೆ, ಕೇಂದ್ರಸ್ಥಾನ ಎಂದು ಕರೆಸಿಕೊಳ್ಳಲ್ಪಡುವ ಒಂದು, ನಾಲ್ಕು, ಏಳು ಮತ್ತು ಹತ್ತರಲ್ಲಿ ಗುರು, ಶುಕ್ರ ಮುಂತಾದ ಶುಭಗ್ರಹರು ಇಲ್ಲದೇ ಇದ್ದರೆ ಹುಟ್ಟಿದ ಮಗುವಿನ ಮರಣವನ್ನು ತಿಳಿಯಬೇಕು.

ಇದನ್ನೂ ಓದಿ: ಯೂಪ, ಶರ, ಶಕ್ತಿ, ದಂಡಯೋಗಗಳ ಬಗ್ಗೆ ಗೊತ್ತಾ? ಯೋಗಗಳ ಲಕ್ಷಣ ಮತ್ತು ಫಲಗಳೇನು?

ಹೀಗೆ ಜನನ ಕಾಲದಲ್ಲಿ ಮಗುವಿನ ಮರಣವನ್ನು ಹೇಳುತ್ತಾರೆ. ಇದಲ್ಲದೇ ತಾಯಿ ಮತ್ತು ಮಗುವಿನ ಕುರಿತೂ ಜನನ ಕಾಲದಲ್ಲಿ ಏನಾಗುತ್ತದೆ ಎನ್ನುವುದನ್ನು ಹೇಳುತ್ತಾರೆ, ಪ್ರಾಚೀನ ದೈವಜ್ಞರು.

ಚಂದ್ರನು ಲಗ್ನಸ್ಥಾನದಲ್ಲಿ ಹಾಗೂ ಸಪ್ತಮ ಮತ್ತು ಅಷ್ಟಮದಲ್ಲಿ ಅಶುಭಗ್ರಹರಿದ್ದು, ಚಂದ್ರನ ಮೇಲೆ ಶುಭಗ್ರಹರ ದೃಷ್ಟಿ ಇಲ್ಲದೇ ಇದ್ದರೆ ಹುಟ್ಟಿದ ಮಗುವು ತಾಯಿಯ ಸಹಿತವಾಗಿ ಮರಣವನ್ನು ಹೊಂದುತ್ತದೆ. ಒಂದೊಮ್ಮೆ ಬಲವುಳ್ಳ ಗ್ರಹರು ಚಂದ್ರನನ್ನು ನೋಡಿದರೂ ನಾನಾ ರೋಗಗಳು ಕಾಣಿಸಿಕೊಳ್ಳುವುದು. ಈ ರೀತಿಯಿಂದ ಅರಿಷ್ಟವನ್ನು ಅಥವಾ ಪುರ್ವಜನ್ಮದ ಪಾಪವನ್ನು ತಿಳಿಯಬೇಕು ಎನ್ನುವುದು ಜ್ಯೋತಿಷ್ಯಶಾಸ್ತ್ರದ ದೃಷ್ಟಿಯಾಗಿದೆ.

-ಲೋಹಿತಶರ್ಮಾ, ಇಡುವಾಣಿ

ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್