AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹರಿ ಹರ ಬ್ರಹ್ಮಯೋಗ ಎಂದರೇನು? ಈ ಯೋಗ ಯಾರಿಗೆ ಮತ್ತು ಹೇಗೆ ಲಭಿಸುತ್ತದೆ?

Hari Hara Brahma Yoga: ಹರಿ ಹರ ಬ್ರಹ್ಮ ಯೋಗಗಳೂ ಸಮಾನವಾಗಿದ್ದು ಒಂದೇ ಫಲವನ್ನು ಕೊಡುತ್ತವೆ ಎನ್ನುವುದು ವಿಶೇಷ. ಬ್ರಹ್ಮ, ವಿಷ್ಣು, ಮಹೇಶ್ವರ ತ್ರಿಮೂರ್ತಿಗಳು ಮೇಲ್ನೋಟಕ್ಕೆ ಬೇರೆ ಎಂದು ಕಂಡರೂ ಅವರೆಲ್ಲರೂ ಒಂದೇ ಆದ ಕಾರಣ ಒಂದೇ‌ ಫಲ ಎಲ್ಲರಿಂದ ಸಿಗುತ್ತದೆ.

ಹರಿ ಹರ ಬ್ರಹ್ಮಯೋಗ ಎಂದರೇನು? ಈ ಯೋಗ ಯಾರಿಗೆ ಮತ್ತು ಹೇಗೆ ಲಭಿಸುತ್ತದೆ?
ಹರಿ ಹರ ಬ್ರಹ್ಮ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Jul 17, 2025 | 5:25 PM

Share

ಜ್ಯೋತಿಷ್ಯ ಶಾಸ್ತ್ರದಲ್ಲಿ ಇಂತಹದ್ದೊಂದು ಯೋಗವಿದೆ. ಇದು ಊರ ಹೆಸರಲ್ಲ. ಹರಿಯೋಗ ಮತ್ತು ಹರಯೋಗ ಬ್ರಹ್ಮ ಯೋಗ ಎನ್ನುವ ಮೂರು ಯೋಗಗಳು ಜಾತಕದಲ್ಲಿ ಕಾಣಸಿಗುತ್ತವೆ. ಯಾವಾಗ ಹೇಗೆ ಯೋಗ ಸಂಭವಿಸುತ್ತದೆ ಎನ್ನುವುದನ್ನು ನೋಡುವುದಾದರೆ ಹರಿ ಯೋಗವು ನೀವು ಹುಟ್ಟಿದಾಗಿನ ಲಗ್ನದಿಂದ ಎರಡನೇ ರಾಶಿಯ ಅಧಿಪತಿ ಜಾತಕದಲ್ಲಿ ಎಲ್ಲಿರುತ್ತಾನೆ ಎನ್ನುವುದು ನೋಡಬೇಕು.

ಹರಿಯೋಗ

ಮೇಷದಲ್ಲಿ ಲಗ್ನ ಎಂದು ಬರೆದಿದ್ದರೆ ವೃಷಭವು ದ್ವಿತೀಯ ರಾಶಿ. ಅದರ ಅಧಿಪತಿ ಶುಕ್ರ. ಅವನು ಹನ್ನೆರಡು ರಾಶಿಗಳಲ್ಲಿ ಎಲ್ಲಿಯೂ ಇರಬಹುದು. ಅವನಿರುವ ರಾಶಿಯಿಂದ ಎರಡು, ಎಂಟು ಮತ್ತು ಹನ್ನೆರಡನೇ ರಾಶಿಯಲ್ಲಿ ಶುಭಗ್ರಹರು ಅಂದರೆ ಗುರು, ಶುಕ್ರ, ಪೂರ್ಣ ಚಂದ್ರ, ಪಾಪಸಂಸರ್ಗವಿಲ್ಲದ ಬುಧ ಇದ್ದರೆ ಹರಿಯೋಗ.

ಹರಯೋಗ

ಮೇಷ ಲಗ್ನವಾಗಿದ್ದರೆ ಅದರಿಂದಿ ಸಪ್ತಮ ಸ್ಥಾನ ಎಂದರೆ ತುಲಾ ರಾಶಿಯಾಗಿದ್ದು, ಅದರ ಅಧಿಪತಿ ಶುಕ್ರನು ಹನ್ನೆರಡು ರಾಶಿಯಲ್ಲಿ ಎಲ್ಲಿಯಾದರೂ ಇದ್ದರೆ, ಅಲ್ಲಿಂದ ಎರಡು, ಎಂಟು ಹಾಗೂ ಒಂಭತ್ತರಲ್ಲಿ ಗುರು, ಶುಕ್ರ, ಬುಧರಿದ್ದರೆ ಹರಯೋಗ.

ಬ್ರಹ್ಮಯೋಗ

ಇನ್ನೊಂದು ಬ್ರಹ್ಮ ಯೋಗ. ಮೇಷ ಲಗ್ನವಾಗಿದ್ದರೆ ಆ ರಾಶಿಯ ಅಧಿಪತಿ ಕುಜನು ಹನ್ನೆರಡು ರಾಶಿಯಲ್ಲಿ ಎಲ್ಲಿಯಾದರೂ ಇದ್ದರೆ, ಅಲ್ಲಿಂದ ನಾಲ್ಕು, ಒಂಭತ್ತು ಹಾಗೂ ಹನ್ನೊಂದನೇ ರಾಶಿಯಲ್ಲಿ ಸೂರ್ಯ, ಶುಕ್ರ ಹಾಗು ಕುಜರಿದ್ದರೆ ಬ್ರಹ್ಮ ಯೋಗ.

ಈ ಮೂರೂ ಯೋಗಗಳೂ ಸಮಾನವಾಗಿದ್ದು ಒಂದೇ ಫಲವನ್ನು ಕೊಡುತ್ತವೆ ಎನ್ನುವುದು ವಿಶೇಷ. ತ್ರಿಮೂರ್ತಿಗಳು ಮೇಲ್ನೋಟಕ್ಕೆ ಬೇರೆ ಎಂದು ಕಂಡರೂ ಅವರೆಲ್ಲರೂ ಒಂದೇ ಆದ ಕಾರಣ ಒಂದೇ‌ ಫಲ ಎಲ್ಲರಿಂದ ಸಿಗುತ್ತದೆ.

ವಿದ್ಯಾಪಾರಂಗತ : ಋಕ್ – ಯಜುಸ್ – ಸಾಮ ವೇದಗಳನ್ನು ಅಧ್ಯಯನ ಸಂಪನ್ನರು, ಪ್ರಾಚೀನ ಶಾಸ್ತ್ರ, ವಿದ್ಯೆಗಳ ತಲಸ್ಪರ್ಶಿಯಾದ ಅಧ್ಯಯನವನ್ನೂ ಮಾಡುವರು. ‌ವಿಶೇಷ ಜ್ಞಾನಾರ್ಜನೆಯನ್ನು ಮಾಡಿದವರಾಗುವರು.

ಸಕಲಸುಖ : ಈ ಯೋಗದವರಿಗೆ ಎಲ್ಲ ರೀತಿಯ ಸುಖ ವೈಭೋಗಗಳೂ ಸಿಗಲಿದೆ. ಮಾತ್ರವಲ್ಲ ಜೀವನದಲ್ಲಿ ಸಿಗುವುದೆಲ್ಲವೂ ನಿಮಗೆ ಸುಖವನ್ನೇ ನೀಡುವುದಾಗಿರುತ್ತದೆ.

ಆಕರ್ಷಕ‌ ಮಾತು : ಇವರ ಮಾತುಗಳು ಎಲ್ಲರಿಗೂ ಆಕರ್ಷಕವಾಗಿರಲಿದ್ದು, ಹಿತವೂ ಮಿತವೂ ಸ್ಪಷ್ಟವೂ ಮಧುರವೂ ಆಗಿರಲಿದೆ. ಅಷ್ಟೇ ಅಲ್ಲದೇ ಮಾತಿನಲ್ಲಿ ಸತ್ಯವೂ ಇರುವುದು.

ಸರ್ವೋಪಕಾರೀ : ಎಲ್ಲ ಸ್ತರದ ಜನರಿಗೂ ಇವರಿಂದ ಆ ಸಂದರ್ಭಕ್ಕೆ ಬೇಕಾದ ಸಹಕಾರ ಇವರಿಂದ ಸಿಗಲಿದೆ. ಎಲ್ಲರ ಹಿತವನ್ನೂ ಬಯಸುವ ಮತ್ತು ಉಪಕಾರದ ಮನೋಭಾವವುಳ್ಳ ವ್ಯಕ್ತಿತ್ವ ಇವರದಾಗಿರುತ್ತದೆ.

ಇದಲ್ಲದೇ ಪುತ್ರನ್ನು ಪಡೆಯುವರು, ಸಂಪತ್ತು ಉಳ್ಳವರೂ ಆಗಿರುತ್ತಾರೆ.

ಸದ್ಯದ ಕುಂಡಲಿಯನ್ನು ಗಮನಿಸಿದಾಗ ಆ ಯೋಗ ಕಂಡುಬಂದರೆ ಯೋಗಕ್ಕೆ ಹೇಳಿದ ಕೆಲವು ಅಂಶಗಳು ಕಾಣಿಸುತ್ತವೆ. ಅಲ್ಪವಾದರೂ ಯೋಗವು ಯಾವುದಾದರೂ ಒಂದು ರೀತಿಯಲ್ಲಿ ಫಲವನ್ನು ಕೊಟ್ಟು ಹೋಗುತ್ತದೆ.

– ಲೋಹಿತ ಹೆಬ್ಬಾರ್ – 8762924271

VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್