
ಸುಮಾರು ಒಂದುವರೆ ತಿಂಗಳುಗಳ ಅನಂತರ ಕುಜನು ಸ್ಥಾನವನ್ನು ಬದಲಿಸುತ್ತಿದ್ದಾನೆ. ಇಷ್ಟು ದಿನ ಸಿಂಹ ರಾಶಿಯಲ್ಲಿ ಬುಧನ ಜೊತೆ ಹೆಚ್ಚು ಕಾಲ ಹಾಗೂ ಶುಕ್ರನ ಜೊತೆ ಕೆಲವು ದಿನ ಹಾಗೂ ಸೂರ್ಯನ ಜೊತೆ ಒಂದೆರಡು ದಿನ ಇದ್ದು ಅನಂತರ ಕನ್ಯಾರಾಶಿಯನ್ನು ಪ್ರವೇಶಿಸುವನು. ಮಿತ್ರನ ಗೃಹದಲ್ಲಿ ಇದ್ದ ಕುಜನು ಇನ್ನು ಶತ್ರುವಿನ ಮನೆಯನ್ನು ಪ್ರವೇಶ ಮಾಡುವನು. ಹಾಗಾಗಿ ಕುಜನಿಂದ ಇನ್ನು ಮುಂದಿನ ಒಂದಿಷ್ಟು ದಿನ ಅಮಂಗಲವನ್ನೇ ನೋಡಬೇಕಾಗಿಬರಬಹುದು. ಅದರಲ್ಲಿಯೂ ಹೆಚ್ಚು ಅಮಂಗಲವನ್ನು ಯಾವ ರಾಶಿಯವರು ಪಡೆಯುತ್ತಾರೆ ಎನ್ನುವುದನ್ನು ಗಮನಿಸಬೇಕಿದೆ.
ಈ ರಾಶಿಯನ್ನೇ ಪ್ರವೇಶಿಸುವುದರಿಂದ ಬಲದ ವಿಚಾರವು ಬಂದಾಗ ನೀವು ಹಿಂದೇಟು ಹಾಕುವಿರಿ. ಯಂತ್ರಕ್ಕೆ ಸಂಬಂಧಿಸಿದ ವ್ಯಾಪಾರಗಳಿಂದ ನಷ್ಟವಾಗಬಹುದು. ಶರೀರಕ್ಕೆ ನಾನಾ ಪ್ರಕಾರದ ತೊಂದರೆಗಳು, ನೋವುಗಳು ಆಗಬಹುದು.
ದ್ವಾದಶಕ್ಕೆ ಬರುವ ಕುಜನಿಂದ ಭೂಮಿಯ ವ್ಯವಹಾರವು ಲಾಭದಾಯಕವಾಗದು. ಹಾಗೂ ಭೂಮಿಯಿಂದ ಉತ್ಪನ್ನವಾಗುವ ವಸ್ತುಗಳ ವ್ಯಾಪಾರದಲ್ಲಿಯೂ ಹಿನ್ನಡೆ ಅಥವಾ ನಷ್ಟವಾದೀತು. ಅಗ್ನಿಭಯವು ಉಂಟಾಗುವುದು.
ಇದು ಕುಜನ ದೃಷ್ಟಿಯು ಬೀಳುವ ರಾಶಿಯಾಗಿದ್ದು ವೃತ್ತಿಗೆ ಸಂಬಂಧಿಸಿದಂತೆ ತೊಂದರೆಗಳು ಬರಬಹುದು. ಕಛೇರಿಯಲ್ಲಿ ಮಾನಸಿಕ ನೆಮ್ಮದಿಯ ಕೊರತೆಯು ಎದ್ದು ತೋರುವುದು. ಉದ್ಯೋಗವನ್ನು ಬದಲಿಸಲೂ ಆಲೋಚನೆಯು ಬರಬಹುದು.
ಇದು ಸಪ್ತಮರಾಶಿಯಾಗಲಿದ್ದು ವಿವಾಹಕ್ಕೆ ಅಡ್ಡಿಗಳು ಬರಬಹುದು. ಮಾತುಕತೆಯಾದ ವಿವಾಹವು ಮುರಿದು ಹೋಗಬಹುದು. ಮನಸ್ಸು ಬೇಡದ ನಕಾರಾತ್ಮಕ ಆಲೋಚನೆಗಳನ್ನೇ ಹೆಚ್ಚು ಮಾಡುವುದು.
ಕುಜನ ಕ್ಷೇತ್ರವೂ ಆಗಿದ್ದಾರೂ ಶತ್ರುವಿನ ಮನೆಯಲ್ಲಿ ಇರುವ ಕಾರಣ ಸಂಪೂರ್ಣ ಶುಭಫಲವನ್ನು ಕೊಡಲಾರನು. ಶತ್ರುಗಳ ಸಂಹಾರಕನಾಗಿರವವನು ತನ್ನ ಬಲವನ್ನು ಕಳೆದುಕೊಳ್ಳುವನು. ಸಾಲಬಾಧೆಯು ನಿಮ್ಮನ್ನು ಕಾಡುವುದು.
ಕುಟುಂಬದಲ್ಲಿ ನೆಮ್ಮದಿಯ ವಾತಾವರಣವು ಕಷ್ಟವಾದೀತು. ಸಹೋದರ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚು ಬರಬಹುದು. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸವು ಕಾಣಿಸಿಕೊಳ್ಳುವುದು.
ಈ ಎಲ್ಲ ರಾಶಿಯವರೂ ದೇವಸೇನಾನೀ ಎನಿಸಿಕೊಂಡ ಕಾರ್ತಿಕೇಯನನ್ನು ನಿತ್ಯವೂ ಪ್ರಾರ್ಥಿಸಿ, ಸ್ತೋತ್ರವನ್ನು ಪಠಿಸುವುದರಿಂದ ಆತನಿಂದ ಬರಬಹುದಾದ ತೊಂದರೆಗಳು ಕಡಿಮೆ ಆಗಬಹುದು, ಇಲ್ಲವಾಗಲೂಬಹುದು.
ಷಡಾನನಂ ಕುಂಕುಮರಕ್ತವರ್ಣಂ
ಮಹಾಮತಿಂ ದಿವ್ಯಮಯೂರವಾಹನಮ್ |
ರುದ್ರಸ್ಯ ಸೂನುಂ ಸುರಸೈನ್ಯನಾಥಂ
ಗುಹಂ ಸದಾ ಶರಣಮಹಂ ಪ್ರಪದ್ಯೇ ||
ಜ್ಯೋತಿಷ್ಯಕ್ಕೆ ಸಂಬಂಧಿಸಿದ ಮತ್ತಷ್ಟು ಲೇಖನಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ