AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಹಪುರ್ ಟೋಲ್​​ಗೇಟ್​​ನಲ್ಲಿ AEE ಮೇಲೆ ಹಲ್ಲೆ ಪ್ರಕರಣ: 14 ಜನರ ಬಂಧನ

ಶಹಪುರ್ ಟೋಲ್​​ಗೇಟ್​​ನಲ್ಲಿ AEE ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿ ಮೇಲೆ ಹಲ್ಲೆ ಮಾಡಿದ್ದ 14 ಜನರ ಬಂಧನವಾಗಿದೆ. ಈ ಕುರಿತು, ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಮಾಹಿತಿ ನೀಡಿದ್ದಾರೆ.

ಶಹಪುರ್ ಟೋಲ್​​ಗೇಟ್​​ನಲ್ಲಿ AEE ಮೇಲೆ ಹಲ್ಲೆ ಪ್ರಕರಣ: 14 ಜನರ ಬಂಧನ
ಜನರಿಂದ ಅಧಿಕಾರಿ ಮೇಲೆ ಹಲ್ಲೆ
KUSHAL V
|

Updated on:Mar 26, 2021 | 6:41 PM

Share

ಕೊಪ್ಪಳ: ಶಹಪುರ್ ಟೋಲ್​​ಗೇಟ್​​ನಲ್ಲಿ AEE ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿ ಮೇಲೆ ಹಲ್ಲೆ ಮಾಡಿದ್ದ 14 ಜನರ ಬಂಧನವಾಗಿದೆ. ಈ ಕುರಿತು, ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಮಾಹಿತಿ ನೀಡಿದ್ದಾರೆ. ನಿನ್ನೆ ಶಹಪುರ್​ ಟೋಲ್ ಬಳಿ‌ ಎಇಇ ಚಿದಾನಂದ್ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದರು. ಗ್ರಾಮೀಣಾಭಿವೃದ್ಧಿ ಕುಡಿವ ನೀರು ಸರಬರಾಜು ‌ಇಲಾಖೆಯಲ್ಲಿ AEE ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಚಿದಾನಂದ್​ ತಮ್ಮ ID ಕಾರ್ಡ್ ತೋರಿಸಿದರೂ ಬಂಧಿತರು ಅವರ ಮೇಲೆ ಹಲ್ಲೆ ಮಾಡಿದ್ದರು.

ಜಗಳ ಬಿಡಿಸುವುದಕ್ಕೆ ಹೋದ ಪೊಲೀಸರನ್ನೂ ಸಹ ಬಂಧಿತರು ತಳ್ಳಿದ್ದಾರೆ. ಹಾಗಾಗಿ, ಎಇಇ ಕರ್ತವ್ಯಕ್ಕೆ ಅಡ್ಡಿ, ಪೊಲೀಸರನ್ನು ತಳ್ಳಿದ ಹಿನ್ನೆಲೆಯಲ್ಲಿ ಮುನಿರಾಬಾದ್ ಠಾಣೆಯಲ್ಲಿ 2 ಪ್ರತ್ಯೇಕ ಕೇಸ್​​ ದಾಖಲಾಗಿದೆ. ಇದಲ್ಲದೆ, ಬಂಧಿತರ ವಿರುದ್ಧ ರೌಡಿಶೀಟ್​​ ಓಪನ್ ಮಾಡುವ ಚಿಂತನೆ ಸಹ ಇದೆ ಎಂದು ಎಸ್.​ಪಿ ಮಾಹಿತಿ ನೀಡಿದ್ದಾರೆ.

ಕಟ್ಟಡದ 3ನೇ ಮಹಡಿಯಿಂದ ಜಿಗಿದು ಪೆಟ್ರೋಲ್ ಬಂಕ್ ಮಾಲೀಕ ಆತ್ಮಹತ್ಯೆ ಕಟ್ಟಡದ 3ನೇ ಮಹಡಿಯಿಂದ ಜಿಗಿದು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯ ಮಠದ ಬೆಟ್ಟು ಬಳಿ ನಡೆದಿದೆ. ಕಟ್ಟಡದಿಂದ ಹಾರಿ ಉತ್ತಮ್ ನಾಯಕ್(30) ಆತ್ಮಹತ್ಯೆಗೆ ಶರಣಾಗಿದ್ದಾರೆ.

ಯುವಕನ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಉಡುಪಿ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಂದ ಹಾಗೆ, ಉತ್ತಮ್ ನಾಯಕ್ ಪೆಟ್ರೋಲ್ ಬಂಕ್ ಮಾಲೀಕರಾಗಿದ್ದಾರೆ. ಜೊತೆಗೆ, ಕೆಲವು ತಿಂಗಳ ಹಿಂದೆಯಷ್ಟೇ ಅವರ ಮದುವೆಯಾಗಿತ್ತು.

ಕೋಲಾರ ಸಂಸದ ಮುನಿಸ್ವಾಮಿ ವಿರುದ್ಧ ಡಿಸಿಗೆ ದೂರು ಕೋಲಾರ ಸಂಸದ ಮುನಿಸ್ವಾಮಿ ವಿರುದ್ಧ ಡಿಸಿಗೆ ದೂರು ನೀಡಲಾಗಿದೆ. ಸಭೆಯಲ್ಲಿ ಅಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದಡಿ ದೂರು ನೀಡಲಾಗಿದೆ. PWD ಅಧಿಕಾರಿಗಳನ್ನು ಸಂಸದರು ಸಭೆಯಲ್ಲಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಕೋಲಾರ ಹೊರವಲಯದ ಅರಣ್ಯ ಅತಿಥಿ ಗೃಹದಲ್ಲಿ ಸಭೆ ನಡೆದಿತ್ತು. ಎಸ್​ಎಪಿ ರಸ್ತೆ ಕಾಮಗಾರಿಗಳ ಶಂಕುಸ್ಥಾಪನೆಯ ಕಾರ್ಯಕ್ರಮ ನಡೆಯಿತು. ಈ ವೇಳೆ, ಕಾರ್ಯಕ್ರಮಕ್ಕೆ ತಮ್ಮನ್ನು ಆಹ್ವಾನಿಸದ್ದಕ್ಕೆ ಸಭೆಯಲ್ಲಿ ಸಂಸದ ಮುನಿಸ್ವಾಮಿ ಅಧಿಕಾರಿಗಳನ್ನು ನಿಂದಿಸಿದ್ದರು ಎಂದು ಹೇಳಲಾಗಿದೆ.

ಇದನ್ನೂ ಓದಿ: ನಾನು ಸರ್ಕಾರಿ ಅಧಿಕಾರಿ.. ಟೋಲ್ ಕಟ್ಟಲ್ಲ ಎಂದಿದ್ದಕ್ಕೆ ಜನರಿಂದ ಸಿಕ್ತು ಧರ್ಮದೇಟು

Published On - 6:30 pm, Fri, 26 March 21