ಕರ್ನಾಟಕದ 21 ಜನ ಪೊಲೀಸರಿಗೆ ರಾಷ್ಟ್ರಪತಿ ಪದಕ ಗೌರವ

ಗಣರಾಜ್ಯೋತ್ಸವದ ಪ್ರಯುಕ್ತ, ಕರ್ನಾಟಕದ 21 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ರಾಷ್ಟ್ರಪತಿ ಪದಕಗಳಿಗೆ ಭಾಜನರಾಗಿದ್ದಾರೆ. ಇಬ್ಬರಿಗೆ ವಿಶಿಷ್ಟ ಸೇವಾ ಪದಕ, ಉಳಿದವರಿಗೆ ಶ್ಲಾಘನೀಯ ಸೇವಾ ಪದಕ ದೊರೆತಿದೆ. ಈ ಪುರಸ್ಕಾರವು ಅವರ ಅತ್ಯುತ್ತಮ ಸೇವೆಯನ್ನು ಗುರುತಿಸುತ್ತದೆ. ಇದು ರಾಜ್ಯದ ಪೊಲೀಸ್ ಇಲಾಖೆಗೆ ಹೆಮ್ಮೆಯ ಕ್ಷಣ.

ಕರ್ನಾಟಕದ 21 ಜನ ಪೊಲೀಸರಿಗೆ ರಾಷ್ಟ್ರಪತಿ ಪದಕ ಗೌರವ
ಕರ್ನಾಟಕ ಪೊಲೀಸ್​

Updated on: Jan 25, 2025 | 2:49 PM

ಬೆಂಗಳೂರು, ಜನವರಿ 25: ಗಣರಾಜ್ಯೋತ್ಸವ (Republic Day) ದಿನಾಚರಣೆ ಹಿನ್ನೆಲೆಯಲ್ಲಿ ಕೊಡಲಾಗುವ ರಾಷ್ಟ್ರಪತಿಗಳ ಪದಕ ಗೌರವಕ್ಕೆ ಕರ್ನಾಟಕದ 21 ಜನ ಪೊಲೀಸ್​ ಅಧಿಕಾರಿ ಹಾಗೂ ಸಿಬ್ಬಂದಿಗಳು ಭಾಜನರಾಗಿದ್ದಾರೆ. ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ ಮತ್ತು 19 ಜನ ಪೊಲೀಸರು ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕಕ್ಕೆ ಪಾತ್ರರಾಗಿದ್ದಾರೆ.

ವಿಶಿಷ್ಟ ಸೇವಾ ಪದಕ ಪುರಸ್ಕೃತರು

  • ಬಸವರಾಜು ಶರಣಪ್ಪ ಜಿಳ್ಳೆ- ಡಿಐಜಿಪಿ, ಕೆಎಸ್​ಆರ್​ಪಿ, ಬೆಂಗಳೂರು
  • ಹಂಜಾ ಹುಸೇನ್, ಕಮಾಂಡೆಂಟ್, ಕೆಎಸ್​ಆರ್​ಪಿ, ತುಮಕೂರು

ಶ್ಲಾಘನೀಯ ಸೇವಾ ಪದಕ ಪುರಸ್ಕೃತರು

  • ರೇಣುಕಾ ಕೆ ಸುಕುಮಾರ, ಡಿಐಜಿಪಿ, ಡಿಸಿಆರ್​ಇ, ಬೆಂಗಳೂರು
  • ಸಂಜೀವ ಎಂ ಪಾಟೀಲ್, ಎಐಜಿಪಿ, ಜನರಲ್​, ಪೊಲೀಸ್​ ಪ್ರಧಾನ ಕೇಂದ್ರ ಕಚೇರಿ
  • ಬಿಎಂ ಪ್ರಸಾದ್, ಕಮಾಂಡೆಂಟ್, ಐಆರ್​ಬಿ, ಕೊಪ್ಪಳ
  • ಗೋಪಾಲ್ ಡಿ ಜೋಗಿನ್, ಎಸಿಪಿ, ಸಿಸಿಬಿ ಬೆಂಗಳೂರು
  • ವೀರೆಂದ್ರ ನಾಯಕ್​ ಎನ್​, ಡೆಪ್ಯೂಟಿ ಕಮಾಂಡೆಂಟ್​, ಕೆಎಸ್​ಆರ್​ಪಿ, ಬೆಂಗಳೂರು
  • ಗೋಪಾಲಕೃಷ್ಣ ಬಿ ಗೌಡರ್​, ಡಿವೈಎಸ್​ಪಿ, ಚಿಕ್ಕೋಡಿ ಉಪ ವಿಭಾಗ, ಬೆಳಗಾವಿ
  • ಹೆಚ್​. ಗುರುಬಸವರಾಜ, ಪೊಲೀಸ್​ ಇನ್ಸ್​ಪೆಕ್ಟರ್​​, ಲೋಕಾಯುಕ್ತ, ಚಿತ್ರದುರ್ಗ
  • ಜಯರಾಜ್​ ಹೆಚ್​ ಪೊಲೀಸ್​ ಇನ್ಸ್​ಪೆಕ್ಟರ್​, ಗೋವಿಂದಪುರ ಪೊಲೀಸ್​ ಠಾಣ, ಬೆಂಗಳೂರು
  • ಪ್ರದೀಪ್​ ಬಿ ಆರ್​, ಸರ್ಕಲ್​ ಇನ್ಸ್​ಪೆಕ್ಟರ್​ ಆಫ್​ ಪೊಲೀಸ್​, ಹೊಳೆನರಸಿಪುರ ವೃತ್ತ, ಹಾಸನ
  • ಮೊಹಮದ್​ ಮುಕರಮ್​, ಪೊಲೀಸ್​ ಇನ್ಸ್​ಪೆಕ್ಟರ್ ಸಿಸಿಬಿ, ಬೆಂಗಳೂರು
  • ವಸಂತ್​ ಕುಮಾರ್​ ಎಂಎ, ಪೊಲೀಸ್​ ಇನ್ಸ್​ಪೆಕ್ಟರ್, ಬ್ಯುರೋ ಆಫ್​ ಇಮಿಗ್​ರೇಷನ್​
  • ಮಂಜುನಾಥ ವಿ.ಜಿ, ಎಎಸ್​ಐ ಸಿಐಡಿ, ಬೆಂಗಳೂರು
  • ಅಲ್ತಾಪ್​ ಹುಸೇನ್​ ಎನ್​ ದಖನಿ, ಎಎಸ್​ಐ, ಬೆಂಗಳೂರು
  • ಬಲೇಂದ್ರನ್​ ಸ್ಟೇಷನ್​ ಆರ್​ಹೆಚ್​ಸಿ, ಕೆಎಸ್​ಆರ್​ಪಿ, ಬೆಂಗಳೂರು
  • ಅರುಣಕುಮಾರ, ಸಿಹೆಚ್​ಸಿ, ಡಿಐಜಿಪಿ ಕಚೇರಿ, ಕಲಬುರಗಿ
  • ನಯಾಜ್​ ಅಂಜುಮ್​ ಎಹೆಚ್​ಸಿ ಡಿಪಿಓ, ಚಿಕ್ಕಮಗಳೂರು
  • ಶ್ರೀನಿವಾಸ ಎಂ, ಸಿಹೆಚ್​ಸಿ, ಡಿಸಿಪಿ ಪಶ್ಚಿಮ ವಿಭಾಗ ಕಚೇರಿ, ಬೆಂಗಳೂರು
  • ಅಶ್ರಪ್​ ಪಿ. ಎಂ, ಹಿರಿಯ ಗುಪ್ತ ಸಹಾಯಕರು, ರಾಜ್ಯ ಗುಪ್ತವಾರ್ತೆ, ಬೆಂಗಳೂರು
  • ಶಿವಾನಂದ ಬಿ, ಸಿಹೆಚ್​​ಸಿ ಕುಂದಾಪುರ ಪೊಲೀಸ್​ ಠಾಣೆ, ಉಡುಪಿ

ಎಲ್ಲ ರಾಜ್ಯಗಳ ಪೊಲೀಸ್​, ಅಗ್ನಿಶಾಮಕ, ಗೃಹರಕ್ಷಕ ಮತ್ತು ಇತರೆ ಸೇವೆಗಳ ಒಟ್ಟು 942 ಸಿಬ್ಬಂದಿಯು 2025ರ ಗಣರಾಜ್ಯೋತ್ಸವ ಅಂಗವಾಗಿ ಕೊಡುವ ಶೌರ್ಯ ಮತ್ತು ಸೇವಾ ಪದಕ ಗೌರವಕ್ಕೆ ಪಾತ್ರರಾಗಿದ್ದಾರೆ.

ವರದಿ: ಪ್ರದೀಪ್​ ಚಿಕ್ಕಾಟಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ