ಕೊಪ್ಪಳ: ಗವಿಮಠದಲ್ಲಿ ಹಿಂದೂ ದೇವರ ಮುಂದೆ ಧ್ಯಾನಮಾಡಿ ಸ್ವಾಮೀಜಿ ಮಾರ್ಗದರ್ಶನ ಪಡೆಯುವ ಮುಸ್ಲಿಂ ಮಹಿಳೆ
ಮಠಕ್ಕೆ ಬರಲಾರಂಭಿಸಿದ ನಂತರ ತನ್ನ ಇಬ್ಬರು ಮಕ್ಕಳು ಶಾಲೆಗಳಲ್ಲಿ ಚೆನ್ನಾಗಿ ಓದುತ್ತಿದ್ದಾರೆ ಎನ್ನುವ ಹಸೀನಾ ತಮ್ಮ ಪತಿ ಇಲ್ಲವೆಂದು ಹೇಳುತ್ತಾರೆ. ತಮ್ಮ ಕಷ್ಟಗಳನ್ನು ಅವರು ಅಜ್ಜನವರ ಮುಂದೆ ಹೇಳಿಕೊಂಡು ಮಾರ್ಗದರ್ಶನ ಪಡೆಯುತ್ತಾನರಂತೆ. ಹೆಚ್ಚು ಓದಿದವರಲ್ಲವಾದರೂ ಹಸೀನಾ ಎಲ್ಲ ದೇವರುಗಳು ಒಂದೇ, ತಾನು ಎಲ್ಲರನ್ನೂ ಆರಾಧಿಸುತ್ತೇನೆ ಎನ್ನುತ್ತಾರೆ.
ಕೊಪ್ಪಳ, ಜುಲೈ 25: ಜಿಲ್ಲೆಯ ಯಲಬುರ್ಗಾ ತಾಲೂಕು ಕುದುರೆಮೂತಿ ಗ್ರಾಮದಲ್ಲಿರುವ ಸರ್ಕಾರೀ ಪ್ರೌಢ ಶಾಲೆಯಲ್ಲಿ ಬಿಸಿಯೂಟ ಅಡಿಗೆ ಕೆಲಸ ಮಾಡುವ ಹಸೀನಾ (Hasina) ಒಬ್ಬ ಮುಸ್ಲಿಂ ಮಹಿಳೆಯಾದರೂ ಕೊಪ್ಪಳದಲ್ಲಿರುವ ಗವಿಮಠಕ್ಕೆ ನಡೆದುಕೊಳ್ಳುತ್ತಾರೆ. ಮಠಕ್ಕೆ ಬಂದು ಸ್ವಾಮೀಜಿಯವರಿಗೆ ನಮಸ್ಕರಿಸಿ ನಾಗದೇವನ ಮುಂದೆ ಕೂತು ಒಂದು ತಾಸು ಧ್ಯಾನ ಮಾಡುತ್ತಾರೆ. ತಾನು ಮುಸ್ಲಿ ಆದರೇನಂತೆ ಎಲ್ಲ ದೇವರು ಒಂದೇ ಎನ್ನುವ ಹಸೀನಾಗೆ ಮಠದಲ್ಲಿ ಧ್ಯಾನ ಮಾಡುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಹೇಳುತ್ತಾರೆ. ಮಾನಸಿಕ ವೇದನೆ ಮತ್ತು ದುಗುಡದಿಂದ ಬಳಲುತ್ತಿದ್ದಾಗ ಅಜ್ಜಾರು (ಸ್ವಾಮೀಜಿ) ಮಠದಲ್ಲಿ ಸ್ವಲ್ಪ ಹೊತ್ತು ಧ್ಯಾನ ಮಾಡುವಂತೆ ಹೇಳಿದ್ದರು, ಕಳೆದ 13 ವರ್ಷಗಳಿಂದ ಮಠಕ್ಕೆ ಬರುತ್ತಿದ್ದೇನೆ ಎಂದು ಹಸೀನಾ ಹೇಳುತ್ತಾರೆ.
ಇದನ್ನೂ ಓದಿ: ಕೊಪ್ಪಳ ಗವಿಮಠದ ರಥೋತ್ಸವ: ಹರಿದು ಬಂದ ಭಕ್ತ ಸಾಗರದ ವಿಡಿಯೋ ನೋಡಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

