AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭೂಮಿಯೊಳಗಿಂದ ಬರುವ ನಿಗೂಢ ಸದ್ದಿಗೆ ಬೆಚ್ಚಿಬಿದ್ದ ಗ್ರಾಮಸ್ಥರು; ಭಯದಲ್ಲೇ ದಿನದೂಡುತ್ತಿರುವ ಜನರು

ಸದ್ದು ಎಂದ ಮಾತ್ರಕ್ಕೆ ಇದು ಭೂಮಿಯ ಮೇಲಿನ ಸದ್ದಾಗಲೀ, ಗಣಿಗಾರಿಕೆ ಸದ್ದಾಗಲೀ, ಪಟಾಕಿ, ಸಿಡಿಮದ್ದುಗಳ ಸದ್ದಾಗಲಿ ಅಲ್ಲ. ಬದಲಾಗಿ ಭೂಮಿಯೊಳಗಿನಿಂದ ಬರುತ್ತಿರುವ ವಿಚಿತ್ರ ಸದ್ದು. ಈ ವಿಚಿತ್ರ ಸದ್ದಿಗೆ ಬೆಚ್ಚಿಬಿದ್ದಿರೋದು ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದ ಜನರು.

ಭೂಮಿಯೊಳಗಿಂದ ಬರುವ ನಿಗೂಢ ಸದ್ದಿಗೆ ಬೆಚ್ಚಿಬಿದ್ದ ಗ್ರಾಮಸ್ಥರು; ಭಯದಲ್ಲೇ ದಿನದೂಡುತ್ತಿರುವ ಜನರು
ನಿಗೂಢ ಸದ್ದಿಗೆ ಸಾಕ್ಷಿಯಾದ ಗ್ರಾಮ
Skanda
| Updated By: preethi shettigar|

Updated on: Apr 04, 2021 | 7:28 AM

Share

ಕಲಬುರಗಿ: ಆ ಜನರು ಹಗಲು ಹೊತ್ತಿನಲ್ಲೇ ಗ್ರಾಮದಲ್ಲಿರಲು ಭಯ ಪಡ್ತಿದ್ದಾರೆ. ರಾತ್ರಿಯಾಗುತ್ತಿದ್ದಂತೆಯೇ ಮನೆಯಲ್ಲಿ ಹೇಗೆ ಇರುವುದಪ್ಪಾ ಎಂದು ಅಂಜುತ್ತಿದ್ದಾರೆ. ಗ್ರಾಮದಲ್ಲಿ ಯಾವಾಗ ಏನಾಗುತ್ತೋ ಅನ್ನೋ ಭಯದಲ್ಲೇ ದಿನ ದೂಡುತ್ತಿದ್ದಾರೆ. ಹಾಗಂತ ಆ ಗ್ರಾಮದಲ್ಲಿ ಕಾಡು ಪ್ರಾಣಿಗಳ ಭಯವಾಗಲೀ. ಕಳ್ಳರ ಚಿಂತೆಯಾಗಲೀ ಇಲ್ಲವೇ ಇಲ್ಲ. ಆದ್ರೂ ಈಗ ಕಾಡುತ್ತಿರುವ ಭಯ ಮಾತ್ರ ಅವರ ನೆಮ್ಮದಿಯನ್ನೇ ಕಸಿದುಕೊಂಡಿದೆ. ಅಷ್ಟಕ್ಕೂ ಅಲ್ಲಿಯ ಜನರಿಗೆ ಆತಂಕ ಮತ್ತು ಭಯ ಹುಟ್ಟಿಸಿರೋದು ಒಂದು ನಿಗೂಢ ಶಬ್ಧ.

ಸದ್ದು ಎಂದ ಮಾತ್ರಕ್ಕೆ ಇದು ಭೂಮಿಯ ಮೇಲಿನ ಸದ್ದಾಗಲೀ, ಗಣಿಗಾರಿಕೆ ಸದ್ದಾಗಲೀ, ಪಟಾಕಿ, ಸಿಡಿಮದ್ದುಗಳ ಸದ್ದಾಗಲಿ ಅಲ್ಲ. ಬದಲಾಗಿ ಭೂಮಿಯೊಳಗಿನಿಂದ ಬರುತ್ತಿರುವ ವಿಚಿತ್ರ ಸದ್ದು. ಈ ವಿಚಿತ್ರ ಸದ್ದಿಗೆ ಬೆಚ್ಚಿಬಿದ್ದಿರೋದು ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದ ಜನರು. ಈ ಗ್ರಾಮದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನರು ವಾಸವಾಗಿದ್ದಾರೆ. ಆದ್ರೆ ಕಳೆದ ಮಳೆಗಾಲದಿಂದ ಗ್ರಾಮದ ಜನರು ಭಯದಲ್ಲಿಯೇ ಬದಕು ಸಾಗಿಸುತ್ತಿದ್ದಾರೆ. ಗ್ರಾಮದಲ್ಲಿ ಮೇಲಿಂದ ಮೇಲೆ ಭೂಮಿಯಿಂದ ಢಂ ಢಂ ಅನ್ನೋ ಸದ್ದು ಕೇಳಿ ಬರುತ್ತಿದೆ. ಕೆಲವು ಸಲ ಸದ್ದು ಬಂದಾಗ ಭೂ ಕಂಪನದ ಅನುಭವ ಕೂಡಾ ಗ್ರಾಮದ ಜನರಿಗೆ ಆಗುತ್ತಿದೆ. ಆದ್ರೆ ಭೂ ಕಂಪನ ಮಾತ್ರ ರಿಕ್ಟರ್ ಮಾಪಕದಲ್ಲಿ ದಾಖಲಾಗುತ್ತಿಲ್ಲ.

A Village in Kalaburagi

ಭೂಮಿಯೊಳಗಿಂದ ಬರುವ ಸದ್ದಿಗೆ ಊರಿಗೆ ಊರೇ ಭಯದಲ್ಲಿದೆ

ಗಡಿಕೇಶ್ವರ ಸೇರಿದಂತೆ ಕಲಬುರಗಿ ಜಿಲ್ಲೆಯ ಅನೇಕ ಕಡೆ ಭೂಮಿಯೊಳಗೆ ಸುಣ್ಣದ ಕಲ್ಲಿನ ಪ್ರಮಾಣ ಹೆಚ್ಚಾಗಿದೆ. ಸುಣ್ಣದ ಕಲ್ಲಿನ ಮೇಲೆ ನೀರು ಬಿದ್ದಾಗ, ಈ ರೀತಿಯ ಸದ್ದು ಭೂಮಿಯಿಂದ ಬರುತ್ತದೆ. ಇದು ಭೂ ಕಂಪನ ಅಲ್ಲ. ಇದು ಭೂಮಿಯೊಳಗೆ ಆಗಾಗ ರಾಸಾಯನಿಕ ಪ್ರಕ್ರಿಯೆಗಳು ನಡೆಯುವುದರಿಂದ ಆಗುತ್ತಿದೆ. ಹೀಗಾಗಿ ಜನರು ಭಯ ಪಡುವ ಅಗತ್ಯವಿಲ್ಲ ಅಂತಿದ್ದಾರೆ ಗಣಿ ಇಲಾಖೆ ಅಧಿಕಾರಿಗಳು. ಆದ್ರೆ ಬೇಸಿಗೆ ಸಮಯದಲ್ಲಿ ಕೂಡ ಸದ್ದು ಬರ್ತಾ ಇರುವುದು ಗ್ರಾಮದ ಜನರ ಆತಂಕವನ್ನು ಹೆಚ್ಚಿಸಿದೆ.

ಗ್ರಾಮದಲ್ಲಿ ಮೇಲಿಂದ ಮೇಲೆ ಭೂಮಿಯಿಂದ ಸದ್ದು ಬರ್ತಾ ಇದ್ದರೂ ಜಿಲ್ಲಾಡಳಿತ ಮಾತ್ರ ನಿದ್ರೆಗೆ ಜಾರಿದೆ. ಗ್ರಾಮಕ್ಕೆ ಭೇಟಿ ನೀಡಿ, ಜನರ ನೋವು ಕೇಳುವ ಕೆಲಸವನ್ನು ಜಿಲ್ಲಾಡಳಿತ ಮಾಡುತ್ತಿಲ್ಲ. ಆದಷ್ಟು ಬೇಗ ಜಿಲ್ಲಾಡಳಿತ ಸದ್ದಿನ ಮೂಲವನ್ನು ಪತ್ತೆ ಮಾಡಿಸಿ, ಜನರ ಆತಂಕವನ್ನು ದೂರು ಮಾಡುವ ಕೆಲಸ ಮಾಡಬೇಕಿದೆ.

(ವರದಿ: ಸಂಜಯ್ ಚಿಕ್ಕಮಠ –  9980510149)

ಇದನ್ನೂ ಓದಿ: ನದಿಯಿಂದ ಮೇಲೆದ್ದು ಬಂದ ಚನ್ನಕೇಶವ; ಶತಮಾನಗಳಷ್ಟು ಹಳೆಯ ದೇಗುಲದ ಜೀರ್ಣೋದ್ಧಾರದ ವೇಳೆ ಮಹಾ ಅಚ್ಚರಿ

ಪೊಲೀಸರ ಸೋಗಿನಲ್ಲಿ ಬಂದು ಉದ್ಯಮಿಯ ಚಿನ್ನ ದರೋಡೆ; ಕಲಬುರಗಿಯಲ್ಲಿ ಹಾಡಹಗಲೇ ದುಷ್ಕೃತ್ಯ

(A Village in Kalaburagi getting some unusual sound from Earth)

‘ಸು ಫ್ರಮ್ ಸೋ’ ನಿರ್ದೇಶಕರಿಗೆ ತಾಯಿಯಿಂದ ಸಿಕ್ತು ಬೆಸ್ಟ್ ಪ್ರತಿಕ್ರಿಯೆ
‘ಸು ಫ್ರಮ್ ಸೋ’ ನಿರ್ದೇಶಕರಿಗೆ ತಾಯಿಯಿಂದ ಸಿಕ್ತು ಬೆಸ್ಟ್ ಪ್ರತಿಕ್ರಿಯೆ
ಬಿಳಿ ಪಂಚೆ ಧರಿಸಿ ಚೋಳಪುರಂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿ
ಬಿಳಿ ಪಂಚೆ ಧರಿಸಿ ಚೋಳಪುರಂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿ
ಮೈಸೂರಿನಲ್ಲೇ ಡ್ರಗ್ಸ್​ ತಯಾರಿಕಾ ಘಟಕ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್
ಮೈಸೂರಿನಲ್ಲೇ ಡ್ರಗ್ಸ್​ ತಯಾರಿಕಾ ಘಟಕ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್
ಆರಂಭಿಕನಾಗಿ ಕಣಕ್ಕಿಳಿದು 6 ಸಿಕ್ಸ್ ಸಿಡಿಸಿದ ಗ್ಲೆನ್ ಮ್ಯಾಕ್ಸ್​ವೆಲ್
ಆರಂಭಿಕನಾಗಿ ಕಣಕ್ಕಿಳಿದು 6 ಸಿಕ್ಸ್ ಸಿಡಿಸಿದ ಗ್ಲೆನ್ ಮ್ಯಾಕ್ಸ್​ವೆಲ್
7 ರನ್​ಗಳ ಅವಶ್ಯಕತೆ: ಪಂದ್ಯದ ಫಲಿತಾಂಶ ಬದಲಿಸಿದ 2 ಅದ್ಭುತ ಕ್ಯಾಚ್​ಗಳು
7 ರನ್​ಗಳ ಅವಶ್ಯಕತೆ: ಪಂದ್ಯದ ಫಲಿತಾಂಶ ಬದಲಿಸಿದ 2 ಅದ್ಭುತ ಕ್ಯಾಚ್​ಗಳು
ಗೂಗಲ್ ಮ್ಯಾಪ್ ನಂಬಿ ಹೋದ ಕಾರು ಸೇತುವೆ ಮೇಲಿಂದ ಬಿತ್ತು, ಮುಂದೇನಾಯ್ತು?
ಗೂಗಲ್ ಮ್ಯಾಪ್ ನಂಬಿ ಹೋದ ಕಾರು ಸೇತುವೆ ಮೇಲಿಂದ ಬಿತ್ತು, ಮುಂದೇನಾಯ್ತು?
ಹರಿದ್ವಾರದ ಮಾನಸ ದೇವಿ ದೇವಸ್ಥಾನದಲ್ಲಿ ಕಾಲ್ತುಳಿತ, ಆರು ಮಂದಿ ಸಾವು
ಹರಿದ್ವಾರದ ಮಾನಸ ದೇವಿ ದೇವಸ್ಥಾನದಲ್ಲಿ ಕಾಲ್ತುಳಿತ, ಆರು ಮಂದಿ ಸಾವು
ಮನೆ ಕೌಂಪೌಂಡ್ ಹಾರಿ ಬಂದು ನಾಯಿ ಹೊತ್ತೊಯ್ದ ಚಿರತೆ
ಮನೆ ಕೌಂಪೌಂಡ್ ಹಾರಿ ಬಂದು ನಾಯಿ ಹೊತ್ತೊಯ್ದ ಚಿರತೆ
ಟೇಕ್ ಆಫ್ ಆಗುವಾಗ ಅಮೆರಿಕನ್ ಏರ್​​ಲೈನ್ಸ್ ವಿಮಾನದಲ್ಲಿ ಬೆಂಕಿ
ಟೇಕ್ ಆಫ್ ಆಗುವಾಗ ಅಮೆರಿಕನ್ ಏರ್​​ಲೈನ್ಸ್ ವಿಮಾನದಲ್ಲಿ ಬೆಂಕಿ
ಹೆಚ್ಚುತ್ತಲೇ ಇದೆ ‘ಸು ಫ್ರಮ್ ಸೋ’ ಸಿನಿಮಾ ಶೋ ಸಂಖ್ಯೆ; ಕಲೆಕ್ಷನ್ ಹೇಗಿದೆ?
ಹೆಚ್ಚುತ್ತಲೇ ಇದೆ ‘ಸು ಫ್ರಮ್ ಸೋ’ ಸಿನಿಮಾ ಶೋ ಸಂಖ್ಯೆ; ಕಲೆಕ್ಷನ್ ಹೇಗಿದೆ?