AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಲ್ಕೈದು ಸರ್ವೆ ನಡೆದ್ರೂ ಆಂಧ್ರ-ಕರ್ನಾಟಕ ಗಡಿ ಗುರುತು ಸಿಕ್ಕಿಲ್ಲ.. ಅನುಮಾನಕ್ಕೆ ಕಾರಣವಾದ ಅಧಿಕಾರಿಗಳ ನಡೆ

ಕರ್ನಾಟಕ-ಆಂಧ್ರ ಪ್ರದೇಶದ ಗಡಿ ಗುರುತು ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗಡಿ ಗುರುತು ಪತ್ತೆ ಹಚ್ಚುವ ದಶಕದಿಂದಲೂ ಕಗ್ಗಂಟ್ಟಾಗಿ ಉಳಿದಿದೆ. ಇದುವರೆಗೆ ನಾಲ್ಕೈದು ಸರ್ವೆಗಳು ನಡೆದ್ರೂ ಇದುವರೆಗೆ ಆಂಧ್ರ-ಕರ್ನಾಟಕ ಗಡಿ ಗುರುತು ಪತ್ತೆ ಹಚ್ಚಲು ಸಾಧ್ಯವಾಗದಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ನಾಲ್ಕೈದು ಸರ್ವೆ ನಡೆದ್ರೂ ಆಂಧ್ರ-ಕರ್ನಾಟಕ ಗಡಿ ಗುರುತು ಸಿಕ್ಕಿಲ್ಲ.. ಅನುಮಾನಕ್ಕೆ ಕಾರಣವಾದ ಅಧಿಕಾರಿಗಳ ನಡೆ
ಆಯೇಷಾ ಬಾನು
|

Updated on: Dec 23, 2020 | 7:28 AM

Share

ಬಳ್ಳಾರಿ: ಗಣಿಗಾರಿಕೆ. ಆಂಧ್ರ-ಕರ್ನಾಟಕ ಭಾಗದ ಗಡಿ ಪ್ರದೇಶದಲ್ಲಿ ಎಗ್ಗಿಲ್ಲದೇ ನಡೆಯುತ್ತಿತ್ತು. ಹೀಗೆ ಅಕ್ರಮ ಗಣಿಗಾರಿಕೆ ಉತ್ತುಂಗದಲ್ಲಿ ನಡೆಯುತ್ತಿರುವಾಗ ಕೆಲ ಗಣಿ ಕಂಪನಿಗಳು ಕರ್ನಾಟಕ-ಆಂಧ್ರ ಗಡಿ ಒತ್ತುವರಿ ಮಾಡಿ ಗಣಿಗಾರಿಕೆ ನಡೆಸಿದ ಆರೋಪಗಳು ಕೇಳಿ ಬಂದಿದ್ದವು. ಹೀಗಾಗಿ ಗಡಿ ಒತ್ತುವರಿ ಮಾಡಿಕೊಂಡಿರುವುದನ್ನ ಪತ್ತೆ ಹಚ್ಚಿ ಗಡಿ ಗುರುತಿಸಬೇಕು ಅಂತಾ ಒಂದು ದಶಕದಿಂದಲೂ ಹೋರಾಟ ನಡೆಯುತ್ತಲೇ ಇತ್ತು.

ಈ ಹಿಂದೆ ಲೋಕಾಯುಕ್ತ ವರದಿಯಲ್ಲೂ ಕೆಲ ಗಣಿ ಕಂಪನಿಗಳು ಗಡಿ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಉಲ್ಲೇಖ ಮಾಡಲಾಗಿತ್ತು. ಜೊತೆಗೆ ಸಿಇಸಿ ಕೂಡ ಜಂಟಿ ಸರ್ವೆ ನಡೆಸಿತ್ತು. ಆದ್ರೆ ಗಡಿ ಗುರುತು ಪತ್ತೆ ಹಚ್ಚಿರಲಿಲ್ಲ. ಆಗ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಸುಪ್ರೀಂಕೋರ್ಟ್ ಜಂಟಿ ಸರ್ವೆ ನಡೆಸುವಂತೆ ಎರಡು ರಾಜ್ಯದ ಅಧಿಕಾರಿಗಳಿಗೆ ಆದೇಶ ಮಾಡಿತ್ತು. ಈ ಹಿನ್ನೆಲೆಯಲ್ಲಿ ಡೆಹ್ರಾಡೂನ್‌ನಿಂದ 20 ಕ್ಕೂ ಹೆಚ್ಚು ಸರ್ವೆ ಅಧಿಕಾರಿಗಳು, ಎರಡು ರಾಜ್ಯಗಳಿಂದ ಸರ್ವೆ ಅಧಿಕಾರಿಗಳು, ಅರಣ್ಯಾಧಿಕಾರಿಗಳ ಜೊತೆಗೆ ಸ್ಥಳೀಯ ಅಧಿಕಾರಿಗಳು ಕೂಡ ಸರ್ವೆ ನಡೆಸಿ ವರದಿ ಸಲ್ಲಿಸಿದ್ರು.

ಅನುಮಾನಕ್ಕೆ ಎಡೆಯಾದ ಅಧಿಕಾರಿಗಳ ನಡೆ: ಆದರೂ ಕೂಡ ನಿಖರವಾಗಿ ಗಡಿ ಗುರುತು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಈಗ ಮತ್ತೊಮ್ಮೆ ಸುಪ್ರೀಂಕೋರ್ಟ್ ಸರ್ವೆ ಆಫ್ ಇಂಡಿಯಾದ ಅಧಿಕಾರಿಗಳಿಗೆ ಗಡಿ ಗುರುತು ಪತ್ತೆ ಹಚ್ಚುವಂತೆ ನಿರ್ದೇಶನ ನೀಡಿದೆ. ಈಗಾಗಲೇ ಅಧಿಕಾರಿಗಳು 1896ರ ನಕ್ಷೆ ಪ್ರಕಾರ ಸರ್ವೆ ಮಾಡಿ ವಾಪಾಸ್ ಆಗಿದ್ದಾರೆ. ಆದ್ರೆ ಅಧಿಕಾರಿಗಳ ಸರ್ವೇಗೆ ಒಪ್ಪದ ದೂರುದಾರ ಟಪಾಲ್ ಗಣೇಶ್, 1887ರ ನಕ್ಷೆಯ ಪ್ರಕಾರವೇ ಗಡಿ ಗುರುತು ಗುರುತಿಸುವ ಕಾರ್ಯ ಆಗಬೇಕಿದೆ ಎಂದು ಒತ್ತಾಯಿಸಿದ್ದಾರೆ.

ಸರ್ವೆ ಆಫ್ ಇಂಡಿಯಾದ ಅಧಿಕಾರಿಗಳಿಗೆ ಬಳ್ಳಾರಿ ಜಿಲ್ಲಾಧಿಕಾರಿ ಐದು ಪತ್ರಗಳನ್ನ ಬರೆದಿದ್ದಾರೆ. ಯಾವ ಆಧಾರದ ಮೇಲೆ ಸರ್ವೆ ನಡೆಸಲಾಗುತ್ತಿದೆ. ಜೊತೆಗೆ ಹಿಂದಿನ ಸ್ಕೆಚ್ ಗಳನ್ನ ನೀಡುವಂತೆ ಪತ್ರ ಬರೆದಿದ್ದಾರೆ. ಆದ್ರೆ ಇದುವರೆಗೆ ಸರ್ವೆ ಆಫ್ ಇಂಡಿಯಾದ ಅಧಿಕಾರಿಗಳಿಂದ ಉತ್ತರ ಬಂದಿಲ್ಲವಂತೆ. ಕಳೆದ 10-12 ವರ್ಷಗಳಿಂದಲೂ ಸರ್ವೆ ಆಫ್ ಇಂಡಿಯಾದ ಅಧಿಕಾರಿಗಳು ಸಮರ್ಪಕವಾಗಿ ಸರ್ವೆ ನಡೆಸಿ ಆಂಧ್ರ-ಕರ್ನಾಟಕ ಗಡಿ ಗುರುತು ಪತ್ತೆ ಹಚ್ಚುವುದು ಬಿಟ್ಟು ಕೇವಲ ವಿಳಂಬ ಮಾಡುತ್ತಿದ್ದಾರೆ. ಹೀಗಾಗಿ ಸರ್ವೆ ಆಫ್ ಇಂಡಿಯಾದ ಅಧಿಕಾರಿಗಳು ಒತ್ತಡಕ್ಕೆ ಮಣಿದಿದ್ದಾರೆ ಅನ್ನೋ ಆರೋಪ ಕೇಳಿ ಬರುತ್ತಿದೆ.

ಕರ್ನಾಟಕ-ಆಂಧ್ರ ಗಡಿ ಗುರುತು ಸರ್ವೆ ಕಾರ್ಯ ಕಳೆದ ಒಂದು ದಶಕದಿಂದಲೂ ವಿಳಂಬ ಯಾಕೆ ಆಗುತ್ತಿದೆ ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ. ಸುಪ್ರೀಂ ಆದೇಶದ ನಂತರವೂ ಅಧಿಕಾರಿಗಳು ಸರ್ವೆ ಪೂರ್ಣಗೊಳಿಸದೇ ವಾಪಾಸ್ ಹೋಗಿರುವುದು ಅಚ್ಚರಿ ತಂದಿದೆ.

Follow Us
ನನಗೆ ಯಶಸ್ವಿ ವ್ಯಕ್ತಿಗಳೆಂದರೆ ಇಷ್ಟವಿಲ್ಲ; ಅಮೆರಿಕ ಅಧ್ಯಕ್ಷ ಟ್ರಂಪ್
ನನಗೆ ಯಶಸ್ವಿ ವ್ಯಕ್ತಿಗಳೆಂದರೆ ಇಷ್ಟವಿಲ್ಲ; ಅಮೆರಿಕ ಅಧ್ಯಕ್ಷ ಟ್ರಂಪ್
ಇರಾನ್‌ ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಬಗ್ಗೆ ಟ್ರಂಪ್ ಶಾಕಿಂಗ್ ಹೇಳಿಕೆ
ಇರಾನ್‌ ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಬಗ್ಗೆ ಟ್ರಂಪ್ ಶಾಕಿಂಗ್ ಹೇಳಿಕೆ
ಕೊಹ್ಲಿ ನನಗೆ ಲವ್ ಬೈಟ್ ನೀಡಿದ್ದಾನೆ; ಯುವತಿಯ ಹೇಳಿಕೆ ವೈರಲ್
ಕೊಹ್ಲಿ ನನಗೆ ಲವ್ ಬೈಟ್ ನೀಡಿದ್ದಾನೆ; ಯುವತಿಯ ಹೇಳಿಕೆ ವೈರಲ್
ಬಿಜೆಪಿ ಕಚೇರಿ ಮುಂದೆನೇ ಬಂದು ತೊಡೆತಟ್ಟಿದ್ದೇವೆ: ಗುಡುಗಿದ ಪ್ರದೀಪ್ ಈಶ್ವರ್
ಬಿಜೆಪಿ ಕಚೇರಿ ಮುಂದೆನೇ ಬಂದು ತೊಡೆತಟ್ಟಿದ್ದೇವೆ: ಗುಡುಗಿದ ಪ್ರದೀಪ್ ಈಶ್ವರ್
ಜೆವಾರ್‌ನಲ್ಲಿ ಅಂತಾರಾಷ್ಟ್ರೀಯ ಏರ್​ಪೋರ್ಟ್​ ಉದ್ಘಾಟನೆ ಮಾಡಿದ ಮೋದಿ!
ಜೆವಾರ್‌ನಲ್ಲಿ ಅಂತಾರಾಷ್ಟ್ರೀಯ ಏರ್​ಪೋರ್ಟ್​ ಉದ್ಘಾಟನೆ ಮಾಡಿದ ಮೋದಿ!
ಕಾಫಿನಾಡಿನಲ್ಲಿ ವರುಣನ ಅಬ್ಬರ
ಕಾಫಿನಾಡಿನಲ್ಲಿ ವರುಣನ ಅಬ್ಬರ
ಚಿಕ್ಕೋಡಿ ಕಾಡಸಿದ್ದೇಶ್ವರ ಮಠಕ್ಕೆ ಮೋಹನ್ ಭಾಗವತ್​ ಭೇಟಿ: ತುಲಾಭಾರ
ಚಿಕ್ಕೋಡಿ ಕಾಡಸಿದ್ದೇಶ್ವರ ಮಠಕ್ಕೆ ಮೋಹನ್ ಭಾಗವತ್​ ಭೇಟಿ: ತುಲಾಭಾರ
ಇನ್ನೋವಾ ಕಾರು ಡಿಕ್ಕಿಯಾಗಿ ಗರ್ಭಿಣಿ ಇದ್ದ ಆಂಬುಲೆನ್ಸ್ ಪಲ್ಟಿ
ಇನ್ನೋವಾ ಕಾರು ಡಿಕ್ಕಿಯಾಗಿ ಗರ್ಭಿಣಿ ಇದ್ದ ಆಂಬುಲೆನ್ಸ್ ಪಲ್ಟಿ
ಬೆಂಗಳೂರಿನಲ್ಲಿ ಗ್ಯಾಸ್​​ ಸಿಲಿಂಡರ್​ ಲಾರಿ ಪಲ್ಟಿ: ತಪ್ಪಿದ ಭಾರಿ ಅನಾಹುತ
ಬೆಂಗಳೂರಿನಲ್ಲಿ ಗ್ಯಾಸ್​​ ಸಿಲಿಂಡರ್​ ಲಾರಿ ಪಲ್ಟಿ: ತಪ್ಪಿದ ಭಾರಿ ಅನಾಹುತ
ಮದ್ಯದ ಅಂಗಡಿಗೆ ಮುತ್ತಿಗೆ ಹಾಕಿ ಸಿಬ್ಬಂದಿಗೆ ಕ್ಲಾಸ್ ತಗೊಂಡ ಮಹಿಳೆಯರು!
ಮದ್ಯದ ಅಂಗಡಿಗೆ ಮುತ್ತಿಗೆ ಹಾಕಿ ಸಿಬ್ಬಂದಿಗೆ ಕ್ಲಾಸ್ ತಗೊಂಡ ಮಹಿಳೆಯರು!