AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿಟಿ ಆ್ಯಂಬುಲೆನ್ಸ್​ ಹೆಸರಲ್ಲಿ ಲೂಟಿಯಾಗ್ತಿದೆ ಲಕ್ಷ ಲಕ್ಷ ಹಣ, ಡ್ರೈವರ್​ಗಳೇ ಹೇಳಿದ ಕರ್ಮಕಾಂಡ!

ಬೆಂಗಳೂರು: ಮಹಾಮಾರಿ ಕೊರೊನಾ ರಾಜಧಾನಿಯಲ್ಲಿ ತನ್ನ ಪ್ರತಾಪ ಮುಂದುವರೆಸಿದೆ. ಈ ನಡುವೆ ಆರೋಗ್ಯ ಇಲಾಖೆ ಕೂಡ ಅಂದ ದರ್ಬಾರ್ ನಡೆಸುತ್ತಿದೆ. ಕೊರೊನಾ ಹೆಸರಲ್ಲಿ ಸಿಕ್ಕಿದ ಕಡೆಯಲೆಲ್ಲ ಕಾಸು ಮಾಡೋಕೆ ನಿಂತಿದೆ ಎಂಬ ಆರೋಪ ಕೇಳಿ ಬಂದಿದೆ. ಹೌದು ಟಿಟಿ ಆ್ಯಂಬುಲೆನ್ಸ್​ ನಿಂತಲ್ಲೇ ನಿಂತರು ತಿಂಗಳು ತಿಂಗಳು ಲಕ್ಷ ಲಕ್ಷ ಬಾಡಿಗೆಯನ್ನು ಸುಳಿಗೆ ಮಾಡಲಾಗುತ್ತಿದೆಯಂತೆ. ನಿಂತಿರುವ ಜಾಗದಲ್ಲೇ ವಾಹನವನ್ನ ಆನ್ ಮಾಡಿ ಬಿಡೋದ್ಯಾಕೆ? ಇನ್ನು ನಿಂತಿರುವ ಜಾಗದಲ್ಲೇ ವಾಹನವನ್ನು ಆನ್ ಮಾಡಿ ಬಿಡಲಾಗುತ್ತೆ. ರೋಗಿಗಳನ್ನ ಆಸ್ಪತ್ರೆಗೆ ಶಿಫ್ಟ್ ಮಾಡದಿದ್ರು […]

ಟಿಟಿ ಆ್ಯಂಬುಲೆನ್ಸ್​ ಹೆಸರಲ್ಲಿ ಲೂಟಿಯಾಗ್ತಿದೆ ಲಕ್ಷ ಲಕ್ಷ ಹಣ, ಡ್ರೈವರ್​ಗಳೇ ಹೇಳಿದ ಕರ್ಮಕಾಂಡ!
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on: Oct 02, 2020 | 11:11 AM

Share

ಬೆಂಗಳೂರು: ಮಹಾಮಾರಿ ಕೊರೊನಾ ರಾಜಧಾನಿಯಲ್ಲಿ ತನ್ನ ಪ್ರತಾಪ ಮುಂದುವರೆಸಿದೆ. ಈ ನಡುವೆ ಆರೋಗ್ಯ ಇಲಾಖೆ ಕೂಡ ಅಂದ ದರ್ಬಾರ್ ನಡೆಸುತ್ತಿದೆ. ಕೊರೊನಾ ಹೆಸರಲ್ಲಿ ಸಿಕ್ಕಿದ ಕಡೆಯಲೆಲ್ಲ ಕಾಸು ಮಾಡೋಕೆ ನಿಂತಿದೆ ಎಂಬ ಆರೋಪ ಕೇಳಿ ಬಂದಿದೆ. ಹೌದು ಟಿಟಿ ಆ್ಯಂಬುಲೆನ್ಸ್​ ನಿಂತಲ್ಲೇ ನಿಂತರು ತಿಂಗಳು ತಿಂಗಳು ಲಕ್ಷ ಲಕ್ಷ ಬಾಡಿಗೆಯನ್ನು ಸುಳಿಗೆ ಮಾಡಲಾಗುತ್ತಿದೆಯಂತೆ.

ನಿಂತಿರುವ ಜಾಗದಲ್ಲೇ ವಾಹನವನ್ನ ಆನ್ ಮಾಡಿ ಬಿಡೋದ್ಯಾಕೆ? ಇನ್ನು ನಿಂತಿರುವ ಜಾಗದಲ್ಲೇ ವಾಹನವನ್ನು ಆನ್ ಮಾಡಿ ಬಿಡಲಾಗುತ್ತೆ. ರೋಗಿಗಳನ್ನ ಆಸ್ಪತ್ರೆಗೆ ಶಿಫ್ಟ್ ಮಾಡದಿದ್ರು ನಿಂತಲ್ಲೇ ಓಡಿಸಿ ಲೆಕ್ಕ ತೋರಿಸಲಾಗುತ್ತಂತೆ.

ಅನಾವಶ್ಯಕವಾಗಿ ಟಿಟಿ ಆ್ಯಂಬುಲೆನ್ಸ್​ನಿಂದ ಸಾರ್ವಜನಿಕರ ಹಣ ಪೋಲು ಮಾಡಲಾಗುತ್ತಿದೆ. ಟಿಟಿ ಆ್ಯಂಬುಲೆನ್ಸ್​ ಹೆಸರಲ್ಲಿ ಫುಲ್ ಗೋಲ್ ಮಾಲ್ ನಡೀತಿದೆ. ಅವಶ್ಯಕತೆಗೂ ಮೀರಿ ಬಾಡಿಗೆ ಪಡೆದು ಆಫೀಸರ್ಸ್ ಹಣ ನುಂಗುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಒಂದು ಟಿಟಿ ಆ್ಯಂಬುಲೆನ್ಸ್​ಗೆ ತಿಂಗಳಿಗೆ 1 ಲಕ್ಷ 30 ಸಾವಿರ ರೂಪಾಯಿ ಬಾಡಿಗೆ ಇದೆಯಂತೆ. 2 ಸಾವಿರ ಕಿಲೋ ಮೀಟರ್ ಬಳಿಕ 1 ಕಿಲೋಮೀಟರ್ ಗೆ 16 ರೂಪಾಯಿ ಹೆಚ್ಚುವರಿ ಹಣ ನೀಡಲಾಗುತ್ತಿದೆ. ಇನೋವಾ ಕಾರ್​ಗಳಿಗೆ ದಿನಕ್ಕೆ 4300 ಪ್ಲಸ್ ಜಿಎಸ್​ಟಿ ನೀಡಲಾಗುತ್ತೆ.

ಆದ್ರೆ ಟಿಟಿ ಆ್ಯಂಬುಲೆನ್ಸ್ ಮಾಲೀಕರಿಗೆ ನೀಡುವುದು 90 ಸಾವಿರ ರೂಪಾಯಿ. ಉಳಿದಿಲ್ಲಾ ಹಣವನ್ನು ಅಧಿಕಾರಿಗಳು ಜೇಬಿಗಿಳಿಸಿಕೊಳ್ಳುತ್ತಿದ್ದಾರಂತೆ. ಟಿಟಿ ಆ್ಯಂಬುಲೆನ್ಸ್​ಗಳು ಕೂಡ ನಿಂತಲ್ಲಿ ನಿಂತ್ರು ಬಾಡಿಗೆ ನೀಡಲಾಗುತ್ತಿದೆ. ಆ್ಯಂಬುಲೆನ್ಸ್ ಡ್ರೈವರ್​ಗಳೇ ಆರೋಗ್ಯ ಇಲಾಖೆಯ ಕರ್ಮಕಾಂಡ ಬಾಯಿಬಿಟ್ಟಿದ್ದಾರೆ.

ಟಿಟಿ ಆ್ಯಂಬುಲೆನ್ಸ್​ಗಳ ಬದಲು 108 ಆ್ಯಂಬುಲೆನ್ಸ್​ಗಳನ್ನೇ ಸರಿಯಾಗಿ ಬಳಸಬಹುದಿತ್ತು. ಹಣ ಲೂಟಿ ಹೊಡೆಯಲು ಟಿಟಿ ಆ್ಯಂಬುಲೆನ್ಸ್​ಗಳನ್ನ ಮುಂದಿಟ್ಟುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ
2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ