AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿಟಿ ಆ್ಯಂಬುಲೆನ್ಸ್​ ಹೆಸರಲ್ಲಿ ಲೂಟಿಯಾಗ್ತಿದೆ ಲಕ್ಷ ಲಕ್ಷ ಹಣ, ಡ್ರೈವರ್​ಗಳೇ ಹೇಳಿದ ಕರ್ಮಕಾಂಡ!

ಬೆಂಗಳೂರು: ಮಹಾಮಾರಿ ಕೊರೊನಾ ರಾಜಧಾನಿಯಲ್ಲಿ ತನ್ನ ಪ್ರತಾಪ ಮುಂದುವರೆಸಿದೆ. ಈ ನಡುವೆ ಆರೋಗ್ಯ ಇಲಾಖೆ ಕೂಡ ಅಂದ ದರ್ಬಾರ್ ನಡೆಸುತ್ತಿದೆ. ಕೊರೊನಾ ಹೆಸರಲ್ಲಿ ಸಿಕ್ಕಿದ ಕಡೆಯಲೆಲ್ಲ ಕಾಸು ಮಾಡೋಕೆ ನಿಂತಿದೆ ಎಂಬ ಆರೋಪ ಕೇಳಿ ಬಂದಿದೆ. ಹೌದು ಟಿಟಿ ಆ್ಯಂಬುಲೆನ್ಸ್​ ನಿಂತಲ್ಲೇ ನಿಂತರು ತಿಂಗಳು ತಿಂಗಳು ಲಕ್ಷ ಲಕ್ಷ ಬಾಡಿಗೆಯನ್ನು ಸುಳಿಗೆ ಮಾಡಲಾಗುತ್ತಿದೆಯಂತೆ. ನಿಂತಿರುವ ಜಾಗದಲ್ಲೇ ವಾಹನವನ್ನ ಆನ್ ಮಾಡಿ ಬಿಡೋದ್ಯಾಕೆ? ಇನ್ನು ನಿಂತಿರುವ ಜಾಗದಲ್ಲೇ ವಾಹನವನ್ನು ಆನ್ ಮಾಡಿ ಬಿಡಲಾಗುತ್ತೆ. ರೋಗಿಗಳನ್ನ ಆಸ್ಪತ್ರೆಗೆ ಶಿಫ್ಟ್ ಮಾಡದಿದ್ರು […]

ಟಿಟಿ ಆ್ಯಂಬುಲೆನ್ಸ್​ ಹೆಸರಲ್ಲಿ ಲೂಟಿಯಾಗ್ತಿದೆ ಲಕ್ಷ ಲಕ್ಷ ಹಣ, ಡ್ರೈವರ್​ಗಳೇ ಹೇಳಿದ ಕರ್ಮಕಾಂಡ!
ಆಯೇಷಾ ಬಾನು
ಆಯೇಷಾ ಬಾನು| Edited By: ಸಾಧು ಶ್ರೀನಾಥ್​|

Updated on: Oct 02, 2020 | 11:11 AM

Share

ಬೆಂಗಳೂರು: ಮಹಾಮಾರಿ ಕೊರೊನಾ ರಾಜಧಾನಿಯಲ್ಲಿ ತನ್ನ ಪ್ರತಾಪ ಮುಂದುವರೆಸಿದೆ. ಈ ನಡುವೆ ಆರೋಗ್ಯ ಇಲಾಖೆ ಕೂಡ ಅಂದ ದರ್ಬಾರ್ ನಡೆಸುತ್ತಿದೆ. ಕೊರೊನಾ ಹೆಸರಲ್ಲಿ ಸಿಕ್ಕಿದ ಕಡೆಯಲೆಲ್ಲ ಕಾಸು ಮಾಡೋಕೆ ನಿಂತಿದೆ ಎಂಬ ಆರೋಪ ಕೇಳಿ ಬಂದಿದೆ. ಹೌದು ಟಿಟಿ ಆ್ಯಂಬುಲೆನ್ಸ್​ ನಿಂತಲ್ಲೇ ನಿಂತರು ತಿಂಗಳು ತಿಂಗಳು ಲಕ್ಷ ಲಕ್ಷ ಬಾಡಿಗೆಯನ್ನು ಸುಳಿಗೆ ಮಾಡಲಾಗುತ್ತಿದೆಯಂತೆ.

ನಿಂತಿರುವ ಜಾಗದಲ್ಲೇ ವಾಹನವನ್ನ ಆನ್ ಮಾಡಿ ಬಿಡೋದ್ಯಾಕೆ? ಇನ್ನು ನಿಂತಿರುವ ಜಾಗದಲ್ಲೇ ವಾಹನವನ್ನು ಆನ್ ಮಾಡಿ ಬಿಡಲಾಗುತ್ತೆ. ರೋಗಿಗಳನ್ನ ಆಸ್ಪತ್ರೆಗೆ ಶಿಫ್ಟ್ ಮಾಡದಿದ್ರು ನಿಂತಲ್ಲೇ ಓಡಿಸಿ ಲೆಕ್ಕ ತೋರಿಸಲಾಗುತ್ತಂತೆ.

ಅನಾವಶ್ಯಕವಾಗಿ ಟಿಟಿ ಆ್ಯಂಬುಲೆನ್ಸ್​ನಿಂದ ಸಾರ್ವಜನಿಕರ ಹಣ ಪೋಲು ಮಾಡಲಾಗುತ್ತಿದೆ. ಟಿಟಿ ಆ್ಯಂಬುಲೆನ್ಸ್​ ಹೆಸರಲ್ಲಿ ಫುಲ್ ಗೋಲ್ ಮಾಲ್ ನಡೀತಿದೆ. ಅವಶ್ಯಕತೆಗೂ ಮೀರಿ ಬಾಡಿಗೆ ಪಡೆದು ಆಫೀಸರ್ಸ್ ಹಣ ನುಂಗುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಒಂದು ಟಿಟಿ ಆ್ಯಂಬುಲೆನ್ಸ್​ಗೆ ತಿಂಗಳಿಗೆ 1 ಲಕ್ಷ 30 ಸಾವಿರ ರೂಪಾಯಿ ಬಾಡಿಗೆ ಇದೆಯಂತೆ. 2 ಸಾವಿರ ಕಿಲೋ ಮೀಟರ್ ಬಳಿಕ 1 ಕಿಲೋಮೀಟರ್ ಗೆ 16 ರೂಪಾಯಿ ಹೆಚ್ಚುವರಿ ಹಣ ನೀಡಲಾಗುತ್ತಿದೆ. ಇನೋವಾ ಕಾರ್​ಗಳಿಗೆ ದಿನಕ್ಕೆ 4300 ಪ್ಲಸ್ ಜಿಎಸ್​ಟಿ ನೀಡಲಾಗುತ್ತೆ.

ಆದ್ರೆ ಟಿಟಿ ಆ್ಯಂಬುಲೆನ್ಸ್ ಮಾಲೀಕರಿಗೆ ನೀಡುವುದು 90 ಸಾವಿರ ರೂಪಾಯಿ. ಉಳಿದಿಲ್ಲಾ ಹಣವನ್ನು ಅಧಿಕಾರಿಗಳು ಜೇಬಿಗಿಳಿಸಿಕೊಳ್ಳುತ್ತಿದ್ದಾರಂತೆ. ಟಿಟಿ ಆ್ಯಂಬುಲೆನ್ಸ್​ಗಳು ಕೂಡ ನಿಂತಲ್ಲಿ ನಿಂತ್ರು ಬಾಡಿಗೆ ನೀಡಲಾಗುತ್ತಿದೆ. ಆ್ಯಂಬುಲೆನ್ಸ್ ಡ್ರೈವರ್​ಗಳೇ ಆರೋಗ್ಯ ಇಲಾಖೆಯ ಕರ್ಮಕಾಂಡ ಬಾಯಿಬಿಟ್ಟಿದ್ದಾರೆ.

ಟಿಟಿ ಆ್ಯಂಬುಲೆನ್ಸ್​ಗಳ ಬದಲು 108 ಆ್ಯಂಬುಲೆನ್ಸ್​ಗಳನ್ನೇ ಸರಿಯಾಗಿ ಬಳಸಬಹುದಿತ್ತು. ಹಣ ಲೂಟಿ ಹೊಡೆಯಲು ಟಿಟಿ ಆ್ಯಂಬುಲೆನ್ಸ್​ಗಳನ್ನ ಮುಂದಿಟ್ಟುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

Follow Us
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!