ಬೆಂಗಳೂರು, (ಮಾರ್ಚ್ 06): ವೇದ ಆಗಮ ಸಂಸ್ಕೃತ ಮಹಾ ಪಾಠಶಾಲೆಯ 22ನೇ ವಾರ್ಷಿಕೋತ್ಸವವನ್ನು ದಿ ಆರ್ಟ್ ಆಫ್ ಲಿವಿಂಗ್ (Art of Living) ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ವೇದಾಧ್ಯಯನದ ಪ್ರಮುಖ ಸಂಸ್ಥೆಗಳಲ್ಲೊಂದಾದ ಈ ಪಾಠಶಾಲೆಯ ವಾರ್ಷಿಕ ಕಾರ್ಯಕ್ರಮವು ಗುರುದೇವ ಶ್ರೀ ಶ್ರೀ ರವಿ ಶಂಕರ್ ಅವರ ದಿವ್ಯ ಆಶೀರ್ವಾದದೊಂದಿಗೆ ನೆರವೇರಿತು.
ಈ ಸಂದರ್ಭದಲ್ಲಿ ವಿದ್ವತ್ಪೂರ್ಣ ಸಮ್ಮೇಳನ, ಭವ್ಯ ಪ್ರದರ್ಶನ ಹಾಗೂ ಬಹು-ನಿರೀಕ್ಷಿತ ಪದವೀಪ್ರದಾನ ಸಮಾರಂಭವನ್ನು ಆಯೋಜಿಸಲಾಗಿತ್ತು. ರತ್ನಗಿರಿಯ ಶ್ರೀ ಬಾಲಮುರುಗನ್ ದೇವಸ್ಥಾನದ ಶ್ರೀ ಬಾಲಮುರುಗನ್ ಆದಿಮಾಯಿ ಸ್ವಾಮಿಗಳು ಮುಖ್ಯ ಅತಿಥಿಯಾಗಿ ಪದವೀಪ್ರದಾನ ಭಾಷಣವನ್ನು ನೀಡಿದರು.
ಇನ್ನು ಇದೇ ವೇಳೆ 48 ವಿದ್ಯಾರ್ಥಿಗಳಿಗೆ ಶಿವಾಗಮ ವಿದ್ಯಾನಿಧಿ ಎಂಬ ಗೌರವಾನ್ವಿತ ಪದವಿ ಪ್ರದಾನ ಮಾಡಲಾಯಿತು. ಅವರು ವೇದ ಆಗಮ ಶಾಸ್ತ್ರಗಳಲ್ಲಿ ಎಂಟು ವರ್ಷಗಳ ಕಠಿಣ, ಸಮಗ್ರ ವಸತಿ ಅಧ್ಯಯನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈ ಪದವೀಧರರಲ್ಲಿ ಹಲವರು ದೇಶ-ವಿದೇಶಗಳ ಗೌರವಾನ್ವಿತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಲು ಆಯ್ಕೆಯಾಗಿದ್ದು, ಭವ್ಯ ವೇದ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ.
ಈ ಅದ್ಭುತ ಕ್ಷಣಕ್ಕೆ ಮತ್ತಷ್ಟು ಮೆರುಗು ನೀಡುವಂತೆ ಒಂದು ವಿಶಿಷ್ಟ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಮಂದಿರ ವಾಸ್ತುಶಿಲ್ಪ, ವೈದಿಕ ಸಂಪ್ರದಾಯಗಳು ಹಾಗೂ ಪವಿತ್ರ ರೇಖಾಗಣಿತದ ಆಕರ್ಷಕ ನೋಟ ಸಿಗುವಂತೆ ಮಾಡಲಾಗಿತ್ತು.
ವಿವಿಧ ಬ್ಯಾಚ್ಗಳ ವಿದ್ಯಾರ್ಥಿಗಳು ಹಲವು ವೈದಿಕ ಸಂಪ್ರದಾಯಗಳ ಕುರಿತು ವಿವರವಾದ ಸಂಶೋಧನಾ ಪ್ರಾಜೆಕ್ಟ್ಗಳನ್ನು ಪ್ರಸ್ತುತಪಡಿಸಿದರು. ಅವು ಈ ಕೆಳಗಿನಂತಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ