AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘HDK ಕಾಂಗ್ರೆಸ್ ಶಾಸಕರಿಗೆ ತಾರತಮ್ಯ ಮಾಡಿದ್ದಾರೆ, ಅದಕ್ಕೆ ಸರ್ಕಾರ ಪತನವಾಗಿದ್ದು’

ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಾಂಗ್ರೆಸ್ ಶಾಸಕರಿಗೆ ತಾರತಮ್ಯ ಮಾಡಿದ್ದಾರೆ ಎಂದು ಅರವಿಂದ‌ ಲಿಂಬಾವಳಿ ತಿರುಗೇಟು ಕೊಟ್ಟಿದ್ದಾರೆ. ಹಿಂದೆ ಇತಿಹಾಸ ನೋಡಿದ್ರೆ ಯಾರು ಯಾರಿಗೆ ಕಾಟ ಕೊಟ್ಟಿದ್ದಾರೆ ಅನ್ನೋದು ಗೊತ್ತಾಗುತ್ತದೆ, ಧರಂ ಸಿಂಗ್ ಸರ್ಕಾರ ಇದ್ದಾಗ ಧರಂ‌ಸಿಂಗ್ ಗೆ ಕಾಟ ಕೊಟ್ಟಿದ್ಯಾರು? ಯಡಿಯೂರಪ್ಪನವರ ಜೊತೆ ಸೇರಿ ಸರ್ಕಾರ ಮಾಡಿದಾಗ ಸ್ಥಾನ ಬಿಟ್ಟುಕೊಡದೇ ಕಾಟ ಕೊಟ್ಟಿದ್ಯಾರು? ಈಗ ಕಾಂಗ್ರೆಸ್ ಜೊತೆ ಅತಿ ಕಡಿಮೆ ಸ್ಥಾನ ಬಂದಾಗಲೂ ಸರ್ಕಾರ ಮಾಡಿ ತಾರತಮ್ಯ ಮಾಡಿದ್ಯಾರು? ಕಾಂಗ್ರೆಸ್ ಶಾಸಕರಿಗೆ ತಾರತಮ್ಯ ಮಾಡಿದ್ದರ […]

'HDK ಕಾಂಗ್ರೆಸ್ ಶಾಸಕರಿಗೆ ತಾರತಮ್ಯ ಮಾಡಿದ್ದಾರೆ, ಅದಕ್ಕೆ ಸರ್ಕಾರ ಪತನವಾಗಿದ್ದು'
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Nov 18, 2019 | 1:34 PM

Share

ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಾಂಗ್ರೆಸ್ ಶಾಸಕರಿಗೆ ತಾರತಮ್ಯ ಮಾಡಿದ್ದಾರೆ ಎಂದು ಅರವಿಂದ‌ ಲಿಂಬಾವಳಿ ತಿರುಗೇಟು ಕೊಟ್ಟಿದ್ದಾರೆ.

ಹಿಂದೆ ಇತಿಹಾಸ ನೋಡಿದ್ರೆ ಯಾರು ಯಾರಿಗೆ ಕಾಟ ಕೊಟ್ಟಿದ್ದಾರೆ ಅನ್ನೋದು ಗೊತ್ತಾಗುತ್ತದೆ, ಧರಂ ಸಿಂಗ್ ಸರ್ಕಾರ ಇದ್ದಾಗ ಧರಂ‌ಸಿಂಗ್ ಗೆ ಕಾಟ ಕೊಟ್ಟಿದ್ಯಾರು? ಯಡಿಯೂರಪ್ಪನವರ ಜೊತೆ ಸೇರಿ ಸರ್ಕಾರ ಮಾಡಿದಾಗ ಸ್ಥಾನ ಬಿಟ್ಟುಕೊಡದೇ ಕಾಟ ಕೊಟ್ಟಿದ್ಯಾರು? ಈಗ ಕಾಂಗ್ರೆಸ್ ಜೊತೆ ಅತಿ ಕಡಿಮೆ ಸ್ಥಾನ ಬಂದಾಗಲೂ ಸರ್ಕಾರ ಮಾಡಿ ತಾರತಮ್ಯ ಮಾಡಿದ್ಯಾರು?

ಕಾಂಗ್ರೆಸ್ ಶಾಸಕರಿಗೆ ತಾರತಮ್ಯ ಮಾಡಿದ್ದರ ಪರಿಣಾಮ ಸರ್ಕಾರ ಬೀಳುವಂತಾಯ್ತು. ಭ್ರಷ್ಟ ಸರ್ಕಾರದ ವಿರುದ್ಧ, ಅಭಿವೃದ್ಧಿ ಮಾಡದೆ ತಾರತಮ್ಯ ಮಾಡಿದ್ದರಿಂದ ಎಲ್ಲಾ ಶಾಸಕರು ಹೊರಗೆ ಬಂದಿದ್ದಾರೆ ವಿನಹ ಬೇರೆನಿಲ್ಲ ಎಂದು ಹೆಚ್.ಡಿ ಕುಮಾರಸ್ವಾಮಿಗೆ ಕೆ ಆರ್ ಪುರಂ ನಲ್ಲಿ ಲಿಂಬಾವಳಿ ಹೇಳಿದ್ದಾರೆ.

Published On - 1:34 pm, Mon, 18 November 19

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು