AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಷಾಢ ಅಮಾವಾಸ್ಯೆ: ಈ ಕೆಲಸ ಮಾಡಿದರೆ ಪಿತೃ ದೋಷ ನಿವಾರಣೆಯಾಗುತ್ತದೆ, ಆದರೆ ಈ ತಪ್ಪುಗಳನ್ನು ಮಾಡಬೇಡಿ

Ashadha Amavasya 2024: ಆಷಾಢ ಮಾಸದ ಅಮಾವಾಸ್ಯೆಯಂದು.. ಮೃತ ಪೂರ್ವಜರು ತಮ್ಮ ಕುಟುಂಬ ಸದಸ್ಯರನ್ನು ನೋಡಲು ಬರುತ್ತಾರೆ ಎಂದು ನಂಬಲಾಗಿದೆ. ಆದ್ದರಿಂದಲೇ ಆಷಾಢ ಅಮಾವಾಸ್ಯೆಯಲ್ಲಿ ಕೆಲವೊಂದು ಕೆಲಸಗಳನ್ನು ಮಾಡಿದರೆ ಪಿತೃ ಅಮಾವಾಸ್ಯೆಯಷ್ಟೇ ಫಲ ಸಿಗುತ್ತದೆ ಎನ್ನುತ್ತಾರೆ ಜ್ಯೋತಿಷ್ಯ ತಜ್ಞರು.

ಆಷಾಢ ಅಮಾವಾಸ್ಯೆ: ಈ ಕೆಲಸ ಮಾಡಿದರೆ ಪಿತೃ ದೋಷ ನಿವಾರಣೆಯಾಗುತ್ತದೆ, ಆದರೆ ಈ ತಪ್ಪುಗಳನ್ನು ಮಾಡಬೇಡಿ
2024- ಆಷಾಢ ಅಮಾವಾಸ್ಯೆ ತಿಥಿ ಯಾವಾಗ?
ಸಾಧು ಶ್ರೀನಾಥ್​
|

Updated on: Jun 29, 2024 | 7:39 AM

Share

ಅಮಾವಾಸ್ಯೆಯ ತಿಥಿ ಹಿಂದೂಗಳಿಗೆ ವಿಶೇಷವಾದ ಮಹತ್ವದ (Spiritual) ದಿನವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಅಮವಾಸ್ಯೆ ಬರಲಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಆಷಾಢ ಅಮಾವಾಸ್ಯೆ ಬಹಳ ಮುಖ್ಯವಾದ ತಿಥಿ. ಈ ದಿನ ಸ್ನಾನ ಮತ್ತು ದಾನಗಳನ್ನು ಮಾಡಲಾಗುತ್ತದೆ. ಶಾಸ್ತ್ರಗಳ ಪ್ರಕಾರ ಆಷಾಢ ಮಾಸದ ಅಮಾವಾಸ್ಯೆಯಂದು.. (Ashadha Amavasya 2024) ಮೃತ ಪೂರ್ವಜರು ತಮ್ಮ ಕುಟುಂಬ ಸದಸ್ಯರನ್ನು ನೋಡಲು ಬರುತ್ತಾರೆ ಎಂದು ನಂಬಲಾಗಿದೆ. ಆದ್ದರಿಂದಲೇ ಆಷಾಢ ಅಮಾವಾಸ್ಯೆಯಲ್ಲಿ ಕೆಲವೊಂದು ಕೆಲಸಗಳನ್ನು ಮಾಡಿದರೆ ಪಿತೃ ಅಮಾವಾಸ್ಯೆಯಷ್ಟೇ ಫಲ ಸಿಗುತ್ತದೆ ಎನ್ನುತ್ತಾರೆ ಜ್ಯೋತಿಷ್ಯ ತಜ್ಞರು. ಈ ದಿನ ಕೆಲವು ವಿಶೇಷ ಕೆಲಸಗಳನ್ನು ಮಾಡಿದರೆ ಪಿತೃ ದೋಷ ಮತ್ತು ಕಾಳಸರ್ಪ ದೋಷದಿಂದ ಮುಕ್ತಿ ಪಡೆಯಬಹುದು ಎಂದು ಹೇಳಲಾಗುತ್ತದೆ. ಈ ಏಳು ಆಷಾಢ ಅಮವಾಸ್ಯೆ ಯಾವಾಗ ಬರುತ್ತೆ..? ಆ ದಿನ ಏನು ಮಾಡಬೇಕು ಎಂಬುದನ್ನು (Ashadha Amavasya rituals) ಇಲ್ಲಿ ತಿಳಿಯೋಣ..

Ashadha Amavasya 2024- ಆಷಾಢ ಅಮಾವಾಸ್ಯೆ ತಿಥಿ ಯಾವಾಗ?

ಹಿಂದೂ ಕ್ಯಾಲೆಂಡರ್ ಪ್ರಕಾರ ಅಮಾವಾಸ್ಯೆ ತಿಥಿ ಶುಕ್ರವಾರ, ಜುಲೈ 5 ರಂದು ಬೆಳಿಗ್ಗೆ 4:57 ಕ್ಕೆ ಬರುತ್ತದೆ. ಮರುದಿನ ಅಂದರೆ ಶನಿವಾರ ಜುಲೈ 6 ರಂದು ಮುಂಜಾನೆ 4:26 ರವರೆಗೆ ಅಮಾವಾಸ್ಯೆ ಇರುತ್ತದೆ. ಅಮವಾಸ್ಯೆಯನ್ನು ಜುಲೈ 5 ರಂದು ಬೆಳಿಗ್ಗೆ ತಿಥಿಯ ಪ್ರಕಾರ ಆಚರಿಸಲಾಗುತ್ತದೆ.

ಇದನ್ನೂ ಓದಿ: Trending -Late Marriages – ಲೇಟ್​ ಆಗಿ ಮದುವೆ ಆಗುವುದು! ಏನಿದು ಲೇಟೆಸ್ಟ್​ ಟ್ರೆಂಡ್​? ತಡವಾಗಿ ಮದುವೆ ಆಗುವುದರಿಂದ ಲಾಭ ಏನು? ನಷ್ಟವೆಷ್ಟು?

Ashadha Amavasya 2024- ಆಷಾಢ ಅಮವಾಸ್ಯೆಯಲ್ಲಿ ಏನು ಮಾಡಬೇಕು?

ಶಾಸ್ತ್ರಗಳ ಪ್ರಕಾರ, ಆಷಾಢ ಅಮಾವಾಸ್ಯೆಯು ವಿಶೇಷವಾದ ಮಹತ್ವದ ದಿನವಾಗಿದೆ. ಈ ದಿನ ಮುಂಜಾನೆಯೇ ಸ್ನಾನ ಮಾಡಿ ಪೂರ್ವಜರಿಗೆ ತರ್ಪಣವನ್ನು ಅರ್ಪಿಸುವುದು ವಾಡಿಕೆ. ಪೂರ್ವಜರ ಹೆಸರಿನಲ್ಲಿ ದಾನ ಮಾಡಿ. ಇಂದು ಬಡವರಿಗೆ ಬಟ್ಟೆ ಮತ್ತು ಧಾನ್ಯವನ್ನು ದಾನ ಮಾಡಿ. ಪೂರ್ವಜರಿಗೆ ತರ್ಪಣವನ್ನು ಅರ್ಪಿಸುವಾಗ ನಿಮ್ಮ ಕೈಯಲ್ಲಿ ಕೂಸ, ಕಪ್ಪು ಎಳ್ಳು ಮತ್ತು ಬಿಳಿ ಹೂವುಗಳನ್ನು ಇರಿಸಿ.

ಇದನ್ನೂ ಓದಿ: July 2024 Festivals Calendar: ಜುಲೈ 2024 – ಭಾರತದ ಪ್ರಸಿದ್ಧ ಹಬ್ಬಗಳ ಸಂಕ್ಷಿಪ್ತ ವಿವರ ಇಲ್ಲಿದೆ

ಆಷಾಢ ಅಮಾವಾಸ್ಯೆಯಂದು ಸಂಜೆ ಅಶ್ವತ್ಥ ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿದರೆ ಶುಭ ಫಲ ಸಿಗುತ್ತದೆ. ಸತ್ತ ಪೂರ್ವಜರು ಅಶ್ವತ್ಥ ಮರದಲ್ಲಿ ನೆಲೆಸಿದ್ದಾರೆ ಎಂಬ ನಂಬಿಕೆ ಇದೆ. ಹಾಗೆಯೇ ಸಂಜೆ ಮನೆಯ ದಕ್ಷಿಣ ಭಾಗದಲ್ಲಿ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿ. ಈ ದಿನದಂದು ಹಿಟ್ಟನ್ನು ದಾನ ಮಾಡುವುದರಿಂದ ಉತ್ತಮ ಫಲಿತಾಂಶವನ್ನು ನೀಡುತ್ತದೆ. ಈ ದಿನ ನೀವು ಉಪ್ಪು ಮತ್ತು ಸಕ್ಕರೆಯನ್ನು ದಾನ ಮಾಡಬಹುದು.

Ashadha Amavasya 2024- ಆಷಾಢ ಅಮವಾಸ್ಯೆಯಂದು ಏನು ಮಾಡಬಾರದು?

ಆಷಾಢ ಅಮವಾಸ್ಯೆ ತಿಥಿಯಂದು ಕೆಲವು ನಿಯಮಗಳನ್ನು ಪಾಲಿಸುವುದು ಮುಖ್ಯ. ನೀವು ಈ ದಿನವನ್ನು ಮರೆತರೂ, ಹಿರಿಯರೊಂದಿಗೆ ಅನುಚಿತವಾಗಿ ವರ್ತಿಸಬೇಡಿ. ಅಂದು ಮದ್ಯ ಅಥವಾ ಮಾಂಸವನ್ನು ಮುಟ್ಟಬೇಡಿ. ಅಂದು ಯಾರೊಂದಿಗೂ ಜಗಳವಾಡದಿರುವುದು ಉತ್ತಮ. ಅಮವಾಸ್ಯೆಯ ತಿಥಿಯಂದು ನಿಮ್ಮ ಮನೆಗೆ ಭಿಕ್ಷುಕ ಬಂದರೆ ಅವನನ್ನು ಬರಿಗೈಯಲ್ಲಿ ಕಳಿಸಬೇಡಿ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)

‘ಸಾರಥಿ’ ಸಿನಿಮಾ ಬಿಡುಗಡೆ ಸಮಯದಲ್ಲಿ ಪಟ್ಟ ಕಷ್ಟ ನೆನೆದ ನಿರ್ಮಾಪಕ
‘ಸಾರಥಿ’ ಸಿನಿಮಾ ಬಿಡುಗಡೆ ಸಮಯದಲ್ಲಿ ಪಟ್ಟ ಕಷ್ಟ ನೆನೆದ ನಿರ್ಮಾಪಕ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು
ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು
ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ
ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ
ವಿಷ್ಣುವರ್ಧನ್ ಸ್ಮಾರಕ ವಿಚಾರದಲ್ಲಿ ತಾವು ಮಾಡಿದ ಶಪಥ ರಿವೀಲ್ ಮಾಡಿದ ವೀರಕಪು
ವಿಷ್ಣುವರ್ಧನ್ ಸ್ಮಾರಕ ವಿಚಾರದಲ್ಲಿ ತಾವು ಮಾಡಿದ ಶಪಥ ರಿವೀಲ್ ಮಾಡಿದ ವೀರಕಪು