ಆಷಾಢ ಅಮಾವಾಸ್ಯೆ: ಈ ಕೆಲಸ ಮಾಡಿದರೆ ಪಿತೃ ದೋಷ ನಿವಾರಣೆಯಾಗುತ್ತದೆ, ಆದರೆ ಈ ತಪ್ಪುಗಳನ್ನು ಮಾಡಬೇಡಿ

Ashadha Amavasya 2024: ಆಷಾಢ ಮಾಸದ ಅಮಾವಾಸ್ಯೆಯಂದು.. ಮೃತ ಪೂರ್ವಜರು ತಮ್ಮ ಕುಟುಂಬ ಸದಸ್ಯರನ್ನು ನೋಡಲು ಬರುತ್ತಾರೆ ಎಂದು ನಂಬಲಾಗಿದೆ. ಆದ್ದರಿಂದಲೇ ಆಷಾಢ ಅಮಾವಾಸ್ಯೆಯಲ್ಲಿ ಕೆಲವೊಂದು ಕೆಲಸಗಳನ್ನು ಮಾಡಿದರೆ ಪಿತೃ ಅಮಾವಾಸ್ಯೆಯಷ್ಟೇ ಫಲ ಸಿಗುತ್ತದೆ ಎನ್ನುತ್ತಾರೆ ಜ್ಯೋತಿಷ್ಯ ತಜ್ಞರು.

ಆಷಾಢ ಅಮಾವಾಸ್ಯೆ: ಈ ಕೆಲಸ ಮಾಡಿದರೆ ಪಿತೃ ದೋಷ ನಿವಾರಣೆಯಾಗುತ್ತದೆ, ಆದರೆ ಈ ತಪ್ಪುಗಳನ್ನು ಮಾಡಬೇಡಿ
2024- ಆಷಾಢ ಅಮಾವಾಸ್ಯೆ ತಿಥಿ ಯಾವಾಗ?
Follow us
|

Updated on: Jun 29, 2024 | 7:39 AM

ಅಮಾವಾಸ್ಯೆಯ ತಿಥಿ ಹಿಂದೂಗಳಿಗೆ ವಿಶೇಷವಾದ ಮಹತ್ವದ (Spiritual) ದಿನವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಅಮವಾಸ್ಯೆ ಬರಲಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಆಷಾಢ ಅಮಾವಾಸ್ಯೆ ಬಹಳ ಮುಖ್ಯವಾದ ತಿಥಿ. ಈ ದಿನ ಸ್ನಾನ ಮತ್ತು ದಾನಗಳನ್ನು ಮಾಡಲಾಗುತ್ತದೆ. ಶಾಸ್ತ್ರಗಳ ಪ್ರಕಾರ ಆಷಾಢ ಮಾಸದ ಅಮಾವಾಸ್ಯೆಯಂದು.. (Ashadha Amavasya 2024) ಮೃತ ಪೂರ್ವಜರು ತಮ್ಮ ಕುಟುಂಬ ಸದಸ್ಯರನ್ನು ನೋಡಲು ಬರುತ್ತಾರೆ ಎಂದು ನಂಬಲಾಗಿದೆ. ಆದ್ದರಿಂದಲೇ ಆಷಾಢ ಅಮಾವಾಸ್ಯೆಯಲ್ಲಿ ಕೆಲವೊಂದು ಕೆಲಸಗಳನ್ನು ಮಾಡಿದರೆ ಪಿತೃ ಅಮಾವಾಸ್ಯೆಯಷ್ಟೇ ಫಲ ಸಿಗುತ್ತದೆ ಎನ್ನುತ್ತಾರೆ ಜ್ಯೋತಿಷ್ಯ ತಜ್ಞರು. ಈ ದಿನ ಕೆಲವು ವಿಶೇಷ ಕೆಲಸಗಳನ್ನು ಮಾಡಿದರೆ ಪಿತೃ ದೋಷ ಮತ್ತು ಕಾಳಸರ್ಪ ದೋಷದಿಂದ ಮುಕ್ತಿ ಪಡೆಯಬಹುದು ಎಂದು ಹೇಳಲಾಗುತ್ತದೆ. ಈ ಏಳು ಆಷಾಢ ಅಮವಾಸ್ಯೆ ಯಾವಾಗ ಬರುತ್ತೆ..? ಆ ದಿನ ಏನು ಮಾಡಬೇಕು ಎಂಬುದನ್ನು (Ashadha Amavasya rituals) ಇಲ್ಲಿ ತಿಳಿಯೋಣ..

Ashadha Amavasya 2024- ಆಷಾಢ ಅಮಾವಾಸ್ಯೆ ತಿಥಿ ಯಾವಾಗ?

ಹಿಂದೂ ಕ್ಯಾಲೆಂಡರ್ ಪ್ರಕಾರ ಅಮಾವಾಸ್ಯೆ ತಿಥಿ ಶುಕ್ರವಾರ, ಜುಲೈ 5 ರಂದು ಬೆಳಿಗ್ಗೆ 4:57 ಕ್ಕೆ ಬರುತ್ತದೆ. ಮರುದಿನ ಅಂದರೆ ಶನಿವಾರ ಜುಲೈ 6 ರಂದು ಮುಂಜಾನೆ 4:26 ರವರೆಗೆ ಅಮಾವಾಸ್ಯೆ ಇರುತ್ತದೆ. ಅಮವಾಸ್ಯೆಯನ್ನು ಜುಲೈ 5 ರಂದು ಬೆಳಿಗ್ಗೆ ತಿಥಿಯ ಪ್ರಕಾರ ಆಚರಿಸಲಾಗುತ್ತದೆ.

ಇದನ್ನೂ ಓದಿ: Trending -Late Marriages – ಲೇಟ್​ ಆಗಿ ಮದುವೆ ಆಗುವುದು! ಏನಿದು ಲೇಟೆಸ್ಟ್​ ಟ್ರೆಂಡ್​? ತಡವಾಗಿ ಮದುವೆ ಆಗುವುದರಿಂದ ಲಾಭ ಏನು? ನಷ್ಟವೆಷ್ಟು?

Ashadha Amavasya 2024- ಆಷಾಢ ಅಮವಾಸ್ಯೆಯಲ್ಲಿ ಏನು ಮಾಡಬೇಕು?

ಶಾಸ್ತ್ರಗಳ ಪ್ರಕಾರ, ಆಷಾಢ ಅಮಾವಾಸ್ಯೆಯು ವಿಶೇಷವಾದ ಮಹತ್ವದ ದಿನವಾಗಿದೆ. ಈ ದಿನ ಮುಂಜಾನೆಯೇ ಸ್ನಾನ ಮಾಡಿ ಪೂರ್ವಜರಿಗೆ ತರ್ಪಣವನ್ನು ಅರ್ಪಿಸುವುದು ವಾಡಿಕೆ. ಪೂರ್ವಜರ ಹೆಸರಿನಲ್ಲಿ ದಾನ ಮಾಡಿ. ಇಂದು ಬಡವರಿಗೆ ಬಟ್ಟೆ ಮತ್ತು ಧಾನ್ಯವನ್ನು ದಾನ ಮಾಡಿ. ಪೂರ್ವಜರಿಗೆ ತರ್ಪಣವನ್ನು ಅರ್ಪಿಸುವಾಗ ನಿಮ್ಮ ಕೈಯಲ್ಲಿ ಕೂಸ, ಕಪ್ಪು ಎಳ್ಳು ಮತ್ತು ಬಿಳಿ ಹೂವುಗಳನ್ನು ಇರಿಸಿ.

ಇದನ್ನೂ ಓದಿ: July 2024 Festivals Calendar: ಜುಲೈ 2024 – ಭಾರತದ ಪ್ರಸಿದ್ಧ ಹಬ್ಬಗಳ ಸಂಕ್ಷಿಪ್ತ ವಿವರ ಇಲ್ಲಿದೆ

ಆಷಾಢ ಅಮಾವಾಸ್ಯೆಯಂದು ಸಂಜೆ ಅಶ್ವತ್ಥ ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿದರೆ ಶುಭ ಫಲ ಸಿಗುತ್ತದೆ. ಸತ್ತ ಪೂರ್ವಜರು ಅಶ್ವತ್ಥ ಮರದಲ್ಲಿ ನೆಲೆಸಿದ್ದಾರೆ ಎಂಬ ನಂಬಿಕೆ ಇದೆ. ಹಾಗೆಯೇ ಸಂಜೆ ಮನೆಯ ದಕ್ಷಿಣ ಭಾಗದಲ್ಲಿ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿ. ಈ ದಿನದಂದು ಹಿಟ್ಟನ್ನು ದಾನ ಮಾಡುವುದರಿಂದ ಉತ್ತಮ ಫಲಿತಾಂಶವನ್ನು ನೀಡುತ್ತದೆ. ಈ ದಿನ ನೀವು ಉಪ್ಪು ಮತ್ತು ಸಕ್ಕರೆಯನ್ನು ದಾನ ಮಾಡಬಹುದು.

Ashadha Amavasya 2024- ಆಷಾಢ ಅಮವಾಸ್ಯೆಯಂದು ಏನು ಮಾಡಬಾರದು?

ಆಷಾಢ ಅಮವಾಸ್ಯೆ ತಿಥಿಯಂದು ಕೆಲವು ನಿಯಮಗಳನ್ನು ಪಾಲಿಸುವುದು ಮುಖ್ಯ. ನೀವು ಈ ದಿನವನ್ನು ಮರೆತರೂ, ಹಿರಿಯರೊಂದಿಗೆ ಅನುಚಿತವಾಗಿ ವರ್ತಿಸಬೇಡಿ. ಅಂದು ಮದ್ಯ ಅಥವಾ ಮಾಂಸವನ್ನು ಮುಟ್ಟಬೇಡಿ. ಅಂದು ಯಾರೊಂದಿಗೂ ಜಗಳವಾಡದಿರುವುದು ಉತ್ತಮ. ಅಮವಾಸ್ಯೆಯ ತಿಥಿಯಂದು ನಿಮ್ಮ ಮನೆಗೆ ಭಿಕ್ಷುಕ ಬಂದರೆ ಅವನನ್ನು ಬರಿಗೈಯಲ್ಲಿ ಕಳಿಸಬೇಡಿ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)

ತಾಜಾ ಸುದ್ದಿ
Daily Devotional: ತಥಾಸ್ತು ದೇವತೆಗಳ ಬಗ್ಗೆ ತಿಳಿಯಲು ಈ ವಿಡಿಯೋ ನೋಡಿ
Daily Devotional: ತಥಾಸ್ತು ದೇವತೆಗಳ ಬಗ್ಗೆ ತಿಳಿಯಲು ಈ ವಿಡಿಯೋ ನೋಡಿ
Daily Horoscope: ವಾಹನದಿಂದ ಅಪಘಾತ, ಸಣ್ಣ ಅಂತರದಿಂದ ಬಚಾವ್
Daily Horoscope: ವಾಹನದಿಂದ ಅಪಘಾತ, ಸಣ್ಣ ಅಂತರದಿಂದ ಬಚಾವ್
‘ನಿಜ ಜೀವನದಲ್ಲಿ ಆ ರೀತಿ ಪಾತ್ರ ಆಗಬಾರದು’: ದರ್ಶನ್​ ಬಗ್ಗೆ ಹಂಸಲೇಖ ಮಾತು
‘ನಿಜ ಜೀವನದಲ್ಲಿ ಆ ರೀತಿ ಪಾತ್ರ ಆಗಬಾರದು’: ದರ್ಶನ್​ ಬಗ್ಗೆ ಹಂಸಲೇಖ ಮಾತು
‘ದರ್ಶನ್ ನೋಡಿದ್ರೆ ಧರ್ಮಸ್ಥಳ ಮಂಜುನಾಥ ಸ್ವಾಮಿ ನೋಡಿದಂತೆ’: ಅಭಿಮಾನಿ
‘ದರ್ಶನ್ ನೋಡಿದ್ರೆ ಧರ್ಮಸ್ಥಳ ಮಂಜುನಾಥ ಸ್ವಾಮಿ ನೋಡಿದಂತೆ’: ಅಭಿಮಾನಿ
ಬಿಜೆಪಿಯವರು ಇದನ್ನ ಪ್ರೂವ್​ ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್‌
ಬಿಜೆಪಿಯವರು ಇದನ್ನ ಪ್ರೂವ್​ ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್‌
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ
ಆಗಾಗ ಸಿಎಂ ಸಿದ್ದರಾಮಯ್ಯರ ತಲೆ ತಿನ್ನುತ್ತಿರಬೇಕು: ಜಗ್ಗೇಶ್
ಆಗಾಗ ಸಿಎಂ ಸಿದ್ದರಾಮಯ್ಯರ ತಲೆ ತಿನ್ನುತ್ತಿರಬೇಕು: ಜಗ್ಗೇಶ್
ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ
ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ
ಅಶೋಕ್​ ನಮ್ಮ ಪಕ್ಷದ ಆಂತರಿಕದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್​ ಈಶ್ವರ್
ಅಶೋಕ್​ ನಮ್ಮ ಪಕ್ಷದ ಆಂತರಿಕದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್​ ಈಶ್ವರ್