AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಗಲಕೋಟೆ: ಶ್ವಾನ ಹಾಗೂ ಜಾನುವಾರುಗಳ ಬಾಯಾರಿಕೆ ಮತ್ತು ಹಸಿವು ತಣಿಸುವ ವಿಕಲಚೇತನ

ಬಾಗಲಕೋಟೆ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ 40-42 ಡಿಗ್ರಿ ಸೆಲ್ಸಿಯಸ್​ ಇದೆ. ಇಂತಹ ಬಿರು ಬಿಸಿಲಿನಲ್ಲಿ ಜನರು ಮನೆ ಬಿಟ್ಟು ಹೊರಗೆ ಬರಲು ಹೆದರುತ್ತಿದ್ದಾರೆ. ಇನ್ನು ಈ ಸಮಯದಲ್ಲಿ ಬೀದಿ ಶ್ವಾನಗಳು, ಜಾನುವಾರುಗಳ ಬಾಯಾರಿಕೆ ಮತ್ತು ಹಸಿವನ್ನು ಓರ್ವ ವಿಕಲಚೇತನ ತಣಿಸುತ್ತಿದ್ದಾರೆ.

ಬಾಗಲಕೋಟೆ: ಶ್ವಾನ ಹಾಗೂ ಜಾನುವಾರುಗಳ ಬಾಯಾರಿಕೆ ಮತ್ತು ಹಸಿವು ತಣಿಸುವ ವಿಕಲಚೇತನ
ಘನಶ್ಯಾಮ‌ ಬಾಂಡಗೆ ಪ್ರಾಣಿ ಪ್ರೇಮ
ರವಿ ಹೆಚ್ ಮೂಕಿ, ಕಲಘಟಗಿ
| Updated By: ವಿವೇಕ ಬಿರಾದಾರ|

Updated on: Apr 09, 2024 | 7:52 AM

Share

ಬಾಗಲಕೋಟೆ, ಏಪ್ರಿಲ್​ 09: ಮಳೆಯಿಲ್ಲ-ಬೆಳೆಯಿಲ್ಲ ಭೀಕರ ಬರಗಾಲ (Drought) ಆವರಿಸಿದೆ. ನೆತ್ತಿಯ ಮೇಲೆ ಸುಡು‌ ಬಿಸಿಲು, ನೀರಿಗಾಗಿ ಹಾಹಾಕಾರ. ಬೀದಿ ಶ್ವಾನಗಳು, ಜಾನುವಾರುಗಳ ಹಸಿವು ಬಾಯಾರಿಕೆ‌ ಕೇಳುವವರಿಲ್ಲ. ಇಂತಹ ವೇಳೆ ಬಾಗಲಕೋಟೆಯ (Bagalkot) ವಿಕಲಚೇತನ (Disability) ನಿತ್ಯ ಬೀದಿ‌ಶ್ವಾನಗಳು ಜಾನುವಾರುಗಳ ದಾಹ ಮತ್ತು ಹಸಿವು ನೀಗಿಸುತ್ತಿದ್ದಾರೆ.

ಬಾಗಲಕೋಟೆ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ 40-42 ಡಿಗ್ರಿ ಸೆಲ್ಸಿಯಸ್​ ಇದೆ. ಇಂತಹ ಬಿರು ಬಿಸಿಲಿನಲ್ಲಿ ಜನರು ಮನೆ ಬಿಟ್ಟು ಹೊರಗೆ ಬರಲು ಹೆದರುತ್ತಿದ್ದಾರೆ. ಇನ್ನು ಈ ಸಮಯದಲ್ಲಿ ಬೀದಿ ಶ್ವಾನಗಳು, ಜಾನುವಾರುಗಳ ಆರ್ತನಾದ ಕೇಳುವರಿಲ್ಲ. ಆದರೆ ಬಾಗಲಕೋಟೆಯ ವಿಕಲಚೇತನ ಘನಶ್ಯಾಮ‌ ಬಾಂಡಗೆ ಶ್ವಾನ ಮತ್ತು ಜಾನುವಾರಗಳಿಗೆ ತಾಯಿ ಪ್ರೀತಿ ತೋರುತ್ತಿದ್ದಾರೆ. ಪ್ರತಿದಿನ ಐವತ್ತಕ್ಕೂ ಅಧಿಕ ಬೀದಿ ಶ್ವಾನಗಳಿಗೆ ಬಿಸ್ಕಿಟ್, ಹಾಲು, ಬ್ರೆಡ್ ನೀಡಿ ಹಸಿವು ‌ನೀಗಿಸುತ್ತಿದ್ದಾರೆ. ಶ್ವಾನಗಳಿಗೆ ನೀರು ಕುಡಿಸಿ ದಾಹ ನೀಗಿಸುತ್ತಿದ್ದಾರೆ. ಜೊತೆಗೆ ದನಕರುಗಳಿಗೂ ನಿತ್ಯ ಮೇವು ತಿನ್ನಿಸಿ ಬರಗಾಲದ ಈ ದಿನದಲ್ಲಿ ಜಾನುವಾರುಗಳ ಹಸಿವು ನೀಗಿಸುತ್ತಿದ್ದಾರೆ. ನಿತ್ಯ ಸಾವಿರಾರು ರೂಪಾಯಿ ಇದಕ್ಕೆ‌ ಖರ್ಚು ಮಾಡಿ ಮೂಕ ಪ್ರಾಣಿಗಳಿಗೆ ತಾಯಿ ಪ್ರೀತಿ ತೋರಿಸುತ್ತಿದ್ದಾರೆ.

ಇದನ್ನೂ ಓದಿ: ಹಾವೇರಿ: ಸ್ವಂತ ಹಣದಲ್ಲಿ ಬೋರ್​ವೆಲ್​ ಕೊರಸಿ ನದಿಗೆ ನೀರು ಬಿಟ್ಟ ರೈತ: ಬರಗಾಲದ ಭಗೀರಥ ಎಂದ ಗ್ರಾಮಸ್ಥರು

ಘನಶ್ಯಾಮ‌ ಬಾಂಡಗೆ ಅವರು ಒಬ್ಬ ಚಲನಚಿತ್ರ ನಿರ್ಮಾಕ. ಕೆಂಗುಲಾಬಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇವರಿಗೆ ಮೂಕಪ್ರಾಣಿಗಳೆಂದರೆ ಬಲು ಪ್ರೀತಿ. ಬೀದಿ ಜಾನುವಾರುಗಳನ್ನು ಮಕ್ಕಳಂತೆ ಪ್ರೀತಿಸುತ್ತಾರೆ. ಈ ಕಾರ್ಯವನ್ನು ಎರಡು ದಶಕದಿಂದ ಮಾಡುತ್ತಾ ಬಂದಿದ್ದಾರೆ. ಆದರೆ ಈಗ ಬರಗಾಲ ನೀರಿಗೆ ಪರದಾಟವಿದೆ. ಇಂತಹ ವೇಳೆಯಲ್ಲಿ ಈ ಕಾರ್ಯ ಇನ್ನೂ ಪರಿಣಾಮಕಾರಿಯಾಗಿದೆ. ಶ್ವಾನಗಳಿಗೆ ಅಲ್ಲಲ್ಲಿ ಸಿಮೆಂಟ್ ಗುಂಡಿಗಳನ್ನು ಮಾಡಿದ್ದಾರೆ. ಅವುಗಳ‌ ಮೈ ತೊಳೆದು ನೀರು ಕುಡಿಸ್ತಾರೆ. ಶ್ವಾನಗಳು ಬಿಸಿಲಿನಿಂದ ರಕ್ಷಿಸಿಕೊಳ್ಳಲು ನೀರಲ್ಲಿ ಉರುಳಾಡಿ ಹೊರಳಾಡುತ್ತವೆ. ನಿತ್ಯ ಮೇವನ್ನು ಖರೀದಿಸಿ ಬೀದಿ ದನಕರುಗಳ ಹಸಿವನ್ನು ನೀಗಿಸ್ತಾರೆ. ಇವರ ಪ್ರಾಣಿಗಳ ಮೇಲಿನ ಪ್ರೀತಿ, ಎಲ್ಲರಿಗೂ ಮಾದರಿಯಾಗಿದ್ದು, ಘನಶ್ಯಾಮ ಅವರ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಈ ಬಾರಿಯ ಬೇಸಿಗೆಯಿಂದ ಜನರಷ್ಟೇ ಅಲ್ಲದೆ ಜಾನುವಾರುಗಳಿಗೂ ಸಂಕಷ್ಟ ಎದುರಾಗಿದೆ. ಈ ವೇಳೆ ವಿಕಲಚೇತನ ಘನಶ್ಯಾಮ ಅವರ ಪ್ರಾಣಿ ‌ಪ್ರೇಮ, ಹಸಿವು, ಬಾಯಾರಿಕೆ ನೀಗಿಸುವ ಕಾರ್ಯ ಶ್ಲಾಘನೀಯ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!