AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಹಲ್ಲೆ : ಬಾದಾಮಿ ಪೊಲೀಸ್ ಠಾಣೆಯ ಸಿಪಿಐ ಸಸ್ಪೆಂಡ್

ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ ಬಾದಾಮಿ ಪೊಲೀಸ್ ಠಾಣೆಯ ಸಿಪಿಐ ಕರೆಪ್ಪ ಬನ್ನೆಯವರನ್ನು ಬಾಗಲಕೋಟೆ ಎಸ್​​.ಪಿ ಜಯಪ್ರಕಾಶ್​ ಸಸ್ಪೆಂಡ್ ಮಾಡಿದ್ದಾರೆ.

ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಹಲ್ಲೆ : ಬಾದಾಮಿ ಪೊಲೀಸ್ ಠಾಣೆಯ ಸಿಪಿಐ ಸಸ್ಪೆಂಡ್
ಬದಾಮಿ ಸಿಪಿಐ ಸಸ್ಪೆಂಡ್​​
Follow us
TV9 Web
| Updated By: ವಿವೇಕ ಬಿರಾದಾರ

Updated on:Oct 09, 2022 | 4:33 PM

ಬಾಗಲಕೋಟೆ: ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ ಬಾದಾಮಿ ಪೊಲೀಸ್ ಠಾಣೆಯ ಸಿಪಿಐ ಕರೆಪ್ಪ ಬನ್ನೆಯವರನ್ನು ಬಾಗಲಕೋಟೆ ಎಸ್​​.ಪಿ ಜಯಪ್ರಕಾಶ್​ ಸಸ್ಪೆಂಡ್ ಮಾಡಿದ್ದಾರೆ. ಸೆ.6ರಂದು ಕೆರೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಗಲಾಟೆಯಾಗಿತ್ತು. ಗಲಾಟೆ ಬಳಿಕ ಪೊಲೀಸರು ಹಿಂದೂ ಸಂಘಟನೆ ಕಾರ್ಯಕರ್ತರನ್ನು ಬಂಧಿಸಿ ಠಾಣೆಯಲ್ಲಿ ಚಿತ್ರಹಿಂಸೆ ನೀಡಿದ್ದರು. ಇದರಿಂದ ಜಗದೀಶ್ ಕಾರಂತ ನೇತೃತ್ವದಲ್ಲಿ ಹಿಂದೂ ಜಾಗರಣ ವೇದಿಕೆ ಸಿಪಿಐ ವಿರುದ್ಧ ಕೆರೂರು ಚಲೋ ನಡೆಸಿದರು. ಹಿಂದೂ ಜಾಗರಣ ವೇದಿಕೆ ಪ್ರತಿಭಟನೆಗೆ ಮಣಿದು ಬಾಗಲಕೋಟೆ ಎಸ್​​.ಪಿ ಜಯಪ್ರಕಾಶ್​ ಸಿಪಿಐನ್ನು ಅಮಾನತುಗೊಳಿಸಿದ್ದಾರೆ.

ಯಶಸ್ಸಿನ ಕೀರ್ತಿಯನ್ನು, ಒಟ್ಟು ಸಮಾಜಕ್ಕೆ ಸಮರ್ಪಿಸುವದಕ್ಕೆ ಇಷ್ಟಪಡುತ್ತೇನೆ: ಜಗದೀಶ ಕಾರಂತ್  

ಈ ಕುರಿತು ಹಿಂದೂ ಜಾಗರಣ ವೇದಿಕೆ ಉತ್ತರ ಪ್ರಾಂತದ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಬಾಗಲಕೋಟೆಯಲ್ಲಿ ಜಗದೀಶ ಕಾರಂತ್  ಮಾತನಾಡಿ ಈಗ ಸಿಕ್ಕಿರುವ ಭಾಗಶಃ ಯಶಸ್ಸಿನ ಕೀರ್ತಿಯನ್ನು, ಒಟ್ಟು ಸಮಾಜಕ್ಕೆ ಸಮರ್ಪಿಸುವದಕ್ಕೆ ಇಷ್ಟಪಡುತ್ತೇನೆ.  ಇಡೀ ಸಮಾಜ ಒಂದಾಗಿ, ಅದರಲ್ಲೂ ವಿಶೇಷವಾಗಿ ಕೆರೂರಿನ ಜನತೆ  ಮತ್ತು ಹಿಂದೂ ಸಮಾಜ ಪಕ್ಷಾತೀತವಾಗಿ ಹಾಗೂ ವರ್ಗ ರಹಿತವಾಗಿ ಹೋರಾಟದ ರಣರಂಗಕ್ಕೆ ಧುಮುಕಿದ್ದು ಈಗ ಇತಿಹಾಸ. ವಿಶೇಷವಾಗಿ ಕೆರೂರಿನ ನೂರಾರು ಮಹಿಳೆಯರು ಸಹ, ತಮ್ಮೂರಿನ ಯುವಕರ ಮೇಲೆ ನಡೆದ ದೌರ್ಜನ್ಯದ ವಿರುದ್ದ, ಧ್ವನಿಯನ್ನು ಎತ್ತಿರುವುದು ನಮ್ಮ ಹೋರಾಟಕ್ಕೆ ಪ್ರಭಲ ಶಕ್ತಿ ಸಿಕ್ಕಿದೆ ಎಂದು ಹೇಳಿದರು.

ಜಿಲ್ಲೆಯ ಜನತೆ ಯಾವುದೇ ರಾಜಕೀಯ ಅಪಸ್ವರಗಳಿಗೆ, ಒಳಗಾಗದೇ ಅಪಸ್ವರ ವ್ಯಕ್ತಪಡಿಸದೇ, ಒಟ್ಟಾಗಿ ಈ ಹೋರಾಟವನ್ನು ಬೆಂಬಲಿಸಿರುವುರು ಕಂಡುಬಂತು. ಜಿಲ್ಲೆಯ ವಿಧಾನಸಭಾ, ವಿಧಾನಪರಿಷತ್‌ನ ಸದಸ್ಯರು, ಭಾರತೀಯ ಜನತಾ ಪಕ್ಷದ ಜಿಲ್ಲಾ ಪದಾಧಿಕಾರಿಗಳು, ಸರ್ಕಾರದ ಮೇಲೆ, ನಿರಂತರ ಒತ್ತಡ ಹೇರಿ, ತಡವಾಗಿಯಾದರೂ ಸರ್ಕಾರ ಎಚ್ಚೆತ್ತುಕೊಳ್ಳುವಂತೆ ಮಾಡಿ, ತಪ್ಪಿತಸ್ಥ ಅಧಿಕಾರಿಯನ್ನ ಶಿಕ್ಷಿಸುವ ದಿಕ್ಕಿನಲ್ಲಿ, ದಿಟ್ಟ ಕ್ರಮಕ್ಕೆ ಕೈ ಹಾಕಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಹಾಗಾಗಿ ಈ ಹೋರಾಟದ ಯಶಸ್ಸಿನ ಎಲ್ಲಾ ಹಿರಿಮೆಯನ್ನು, ಈ ರೀತಿ ಹೋರಾಟವನ್ನ ಬೆಂಬಲಿಸಿದಂತಹ ಸರ್ವರಿಗೂ ಒಪ್ಪಿಸಿ, ಅವರೆಲ್ಲರಿಗೂ ಹಿಂದೂ ಜಾಗರಣ ವೇದಿಕೆ ಕೃತಜ್ಞತೆ ಸಲ್ಲಿಸುತ್ತದೆ. ಅದೇ ರೀತಿ ನಮ್ಮ ಉಳಿದಿರುವ ಬೇಡಿಕೆಗಳು, ಯಾವ ಯಾವ ಅಧಿಕಾರಿ ಮತ್ತು  ಸಿಬ್ಬಂಧಿ ಅಮಾಯಕ ಯುವಕರ ಮೇಲೆ, ಅಮಾನುಷವಾದ ದೌರ್ಜನ್ಯ ಎಸಗಿದರೂ, ಆ ಎಲ್ಲಾ ಅಧಿಕಾರಿಗಳ ಮೇಲೆಯೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಯುವಕರ ಕೈಯಿಂದ ಸುಮಾರು ೧೦ ಸಾವಿರ ರೂ ನಗದು, ಮೊಬೈಲ್ ಒಂದು ಬೆಳ್ಳಿ ಚೈನ್ ಹಾಗೂ ಬೆಳ್ಳಿ ಕಡಗ ಠಾಣೆಯಲ್ಲಿ ತೆಗೊಂಡಿದ್ದಾರೆ. ಯಾರು ತಗೊಂಡಿದ್ದಾರೆ ಅದು ಗೊತ್ತಿಲ್ಲ. ಅದನ್ನ ದೂರಿನಲ್ಲಿ ಹೆಸರಿಸಿದ್ದಾರೆ. ಆ ಯುವಕರಿಗೆ ನಗದು ಹಾಗೂ ಮೋಬೈಲ್,ಚೈನ್, ಕಡಗವನ್ನ, ಜಿಲ್ಲಾ ಪೊಲೀಸ್ ಅಧಿಕಾರಿಗಳು ತಕ್ಷಣ ಹಿಂದಿರುಗಿಸಬೇಕು ಎಂದು ಆಗ್ರಹಿಸಿದರು.

ಹಿನ್ನೆಲೆ

ಸೆ. 6 ರಂದು  ಗಣೇಶ ಮೂರ್ತಿ ವಿಜಸರ್ಜನೆ ಮೆರವಣಿಗೆ ವೇಳೆ ಹಿಂದೂ ಕಾರ್ಯಕರ್ತರು ಪೊಲೀಸರ ಮೇಲೆ ಹಲ್ಲೆ ಮಾಡಿದ್ದರು.  ಮೆರವಣಿಗೆ ವೇಳೆ ಸಿಪಿಐ ಕರಿಯಪ್ಪ ಬನ್ನೆ ಮತ್ತು ಕಾನ್ಸ್​​ಟೇಬಲ್​ ಸುರೇಶ್​ ಮತ್ತು ರಮೇಶ್ ಮೇಲೆ ಹಲ್ಲೆ ಮಾಡಿದ್ದರು.  ಬೇಗ ಗಣೇಶ ಮೆರವಣಿಗೆ ಸಾಗಿಸಿ ಎಂದು ಹೇಳಿದ್ದಕ್ಕೆ ಸಿಪಿಐ ಸೇರಿದಂತೆ ಇಬ್ಬರು ಕಾನ್ಸ್‌ಟೇಬಲ್ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಶರಣು ಸಜ್ಜನ, ಮಹಾಂತೇಶ್ ಪಟ್ಟಣಶೆಟ್ಟಿ, ಸಿದ್ದೇಶ್, ಸಚಿನ್, ಗಂಗಾಧರ, ಬಸವರಾಜ ಸೇರಿದಂತೆ 11 ಜನರ ವಿರುದ್ಧ ಹಲ್ಲೆ ನಡೆಸಿದ ಆರೋಪವಿತ್ತು. ಪ್ರಕರಣ ಸಂಬಂಧ ಆರು ಆರೋಪಿಗಳನ್ನ  ಪೊಲೀಸರು ಬಂಧಿಸಿದ್ದರು. ಆರೋಪಿಗಳನ್ನು ಬಂಧಿಸಿ ಬಾದಾಮಿ ಠಾಣೆಗೆ ಕರೆ ತಂದು, ಅವರ ಮೇಲೆ ಲಾಠಿಯಿಂದ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂದು ಆರೋಪಿಗಳು ಹಾಗೂ ಹಿಂದೂ ಜಾಗರಣ ವೇದಿಕೆ ಮುಖಂಡರು ದೂರಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:38 pm, Sun, 9 October 22

ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
ವಕ್ಫ್​ ಆಸ್ತಿ ಕಬಳಿಕೆ ತೆರವು: ವಕ್ಫ್ ನಮ್ಮ ದುಷ್ಮನ್ ಎಂದ ಮುಸ್ಲಿಂ ಮಹಿಳೆ
ವಕ್ಫ್​ ಆಸ್ತಿ ಕಬಳಿಕೆ ತೆರವು: ವಕ್ಫ್ ನಮ್ಮ ದುಷ್ಮನ್ ಎಂದ ಮುಸ್ಲಿಂ ಮಹಿಳೆ
ಜನಸಾಮಾನ್ಯರಿಗೆ ಕಷ್ಟ ತಪ್ಪಿದ್ದಲ್ಲ ಅಂತ ಉಡಾಫೆ ಮಾತಾಡಿದ ಕಾರ್ಯಕರ್ತೆ
ಜನಸಾಮಾನ್ಯರಿಗೆ ಕಷ್ಟ ತಪ್ಪಿದ್ದಲ್ಲ ಅಂತ ಉಡಾಫೆ ಮಾತಾಡಿದ ಕಾರ್ಯಕರ್ತೆ