AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಕೆಗೆ ಕಣ್ಣು ಕಾಣೊಲ್ಲ ಆದರೆ ಎಸ್ಎಸ್ಎಲ್​ಸಿಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ; ಈಕೆಗಿದೆ ಐಎಎಸ್ ಅಧಿಕಾರಿಯಾಗುವ ಅಚಲ ಛಲ

ಕಣ್ಣು ಕಾಣೋದಿಲ್ಲ ಎಂಬ ಕೊರಗು ಇವರನ್ನು ಯಾವತ್ತೂ ಕಾಡಿಲ್ಲ. ಜೊತೆಗೆ ಇವರ ಸಾಧನೆಗೆ ಎಂದೂ ಅಡ್ಡಿಯಾಗಿಲ್ಲ. ಸದ್ಯ ಈಗ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಇವರು ಮಾಡಿದ ಸಾಧನೆ ಅಮೋಘ. ಕಣ್ಣು ಕಾಣಿಸದ ಜ್ಯೋತಿ ಕಟಕೋಳ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಆಕೆಗೆ ಕಣ್ಣು ಕಾಣೊಲ್ಲ ಆದರೆ ಎಸ್ಎಸ್ಎಲ್​ಸಿಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ; ಈಕೆಗಿದೆ ಐಎಎಸ್ ಅಧಿಕಾರಿಯಾಗುವ ಅಚಲ ಛಲ
ಜ್ಯೋತಿ ಕಟಕೋಳ
TV9 Web
| Edited By: |

Updated on:Aug 12, 2021 | 1:37 PM

Share

ಬಾಗಲಕೋಟೆ: ಕೊರೊನಾ, ಲಾಕ್ಡೌನ್, ಸ್ಯಾನಿಟೈಸರ್, ಮಾಸ್ಕ್ ಲಸಿಕೆ ಹೀಗೆ ಈ ಎಲ್ಲ ಗದ್ದಲ ಗೊಂದಲಗಳ ಮಧ್ಯೆ ಕೆಲ ಕಾಲ ಶಾಲೆಗಳು ಆರಂಭವಾಗಿ ಮತ್ತೆ ಆನ್ಲೈನ್ ಕ್ಲಾಸ್ಗಳು ಶುರುವಾದವು. ಈ ಮಧ್ಯೆ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸುವ ವಿಚಾರದಲ್ಲೂ ಸಾಕಷ್ಟು ಗೊಂದಲಗಳು ಪರ ವಿರೋಧ ಚರ್ಚೆಗಳು ನಡೆದವು. ಆದರೂ ಸರಕಾರ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ನಡೆಸಿ ಇತ್ತೀಚೆಗೆ ಫಲಿತಾಂಶ ಕೂಡ ಹೊರಬಿದ್ದಿದೆ. ಫಲಿತಾಂಶದಲ್ಲಿ ಸಾಕಷ್ಟು ವಿದ್ಯಾರ್ಥಿಗಳು ರಾಜ್ಯಕ್ಕೆ ಟಾಪರ್ ಆಗಿದ್ದಾರೆ. ಉತ್ತಮ ಅಂಕ ಪಡೆದು ಕೊರೊನಾ ಹಾವಳಿ ಮಧ್ಯೆಯೂ ಉತ್ತಮ ಸಾಧನೆ ಮಾಡಿದ್ದಾರೆ. ಇದರ ಜೊತೆಗೆ ಇಲ್ಲೊಬ್ಬ ವಿದ್ಯಾರ್ಥಿನಿಯ ಸಾಧನೆ ಮಾತ್ರ ಎಲ್ಲರಿಗಿಂತಲೂ ವಿಭಿನ್ನ.

ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಉತ್ತೂರು ಗ್ರಾಮದ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ಜ್ಯೋತಿ ಕಟಕೋಳ ಸಾಮಾನ್ಯ ವಿದ್ಯಾರ್ಥಿಗಳಿಗಿಂತಲೂ ವಿಭಿನ್ನ. ಏಕೆಂದರೆ ಆಕೆಗೆ ಕಣ್ಣು ಕಾಣೋದಿಲ್ಲ.. ಇಡೀ ಜಗತ್ತು ಕತ್ತಲಾಗಿ ಕಾಣುತ್ತೆ. ಆದರೂ ಜ್ಯೋತಿ ಅವರ ಅಂತರಾತ್ಮ ಸದಾ ಜ್ಯೋತಿಯಂತೆ ಬೆಳಗುತ್ತಿರುತ್ತದೆ. ಕಣ್ಣು ಕಾಣೋದಿಲ್ಲ ಎಂಬ ಕೊರಗು ಇವರನ್ನು ಯಾವತ್ತೂ ಕಾಡಿಲ್ಲ. ಜೊತೆಗೆ ಇವರ ಸಾಧನೆಗೆ ಎಂದೂ ಅಡ್ಡಿಯಾಗಿಲ್ಲ. ಸದ್ಯ ಈಗ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಇವರು ಮಾಡಿದ ಸಾಧನೆ ಅಮೋಘ. ಕಣ್ಣು ಕಾಣಿಸದ ಜ್ಯೋತಿ ಕಟಕೋಳ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಹುಟ್ಟು ಕುರುಡಾದರೂ ಇದುವರೆಗೂ ಯಾರಿಗೂ ಹೊರೆಯಾಗಿಲ್ಲ, ಆತ್ಮವಿಶ್ವಾಸ ಕುಗ್ಗಿಲ್ಲ ಜ್ಯೋತಿ ಕಟಕೋಳ ಹುಟ್ಟು ಅಂದರಾಗಿದ್ದಾರೆ. ಕೆಲವರು ನನಗೆ ಕಣ್ಣು ಕಾಣೋದಿಲ್ಲ ನನ್ನಿಂದ ಏನು ಮಾಡೋಕೆ ಸಾಧ್ಯ ಅಂತ ತಲೆ ಮೇಲೆ ಕೈ ಹೊತ್ತು ಕೂರುತ್ತಾರೆ. ಆದರೆ ಅಂದರಾದರೂ ಎಷ್ಟೋ ಮಹಾನ್ ಸಾಧನೆ ಮಾಡಿದವರು ನಮ್ಮ ಮಧ್ಯೆ ಇದ್ದಾರೆ. ಅಂತಹವರಲ್ಲಿ ಜ್ಯೋತಿ ಕಟಕೋಳ ಕೂಡ ಒಬ್ಬರು. ಮಾರುತಿ ಹಾಗೂ ಸುಮಂಗಲಾ ದಂಪತಿ ಪುತ್ರಿಯಾಗಿರುವ ಜ್ಯೋತಿ, ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಬ್ರೈಲ್ ಲಿಪಿಯಲ್ಲಿ ಬರೆದು 90.24 ಪ್ರತಿಶತ ಅಂದ್ರೆ ಒಟ್ಟು 564 ಅಂಕ ಗಳಿಸಿದ್ದಾರೆ. ಅಂದಳಾದರೂ ಮನೆಯಲ್ಲಿ ಯಾರಿಗೂ ಭಾರ ಆಗಿಲ್ಲ. ಮನೆಯಲ್ಲಿ ಎಲ್ಲರಂತೆ ತನ್ನ ಕೆಲಸ ಮಾಡಿಕೊಳ್ಳುತ್ತಾರೆ. ಪಾತ್ರೆ ತೊಳೆಯೋದು ಕಸ ಗೂಡಿಸೋದು ಎಲ್ಲವನ್ನೂ ಸಾಮಾನ್ಯ ಹೆಣ್ಣುಮಕ್ಕಳಂತೆ ಅಚ್ಚಕಟ್ಟಾಗಿ ಮಾಡಿ ಮುಗಿಸುತ್ತಾರೆ.

ಐಎಎಸ್ ಅಧಿಕಾರಿಯಾಗಿ ಜನರ ಸೇವೆ ಮಾಡುತ್ತೇನೆ ಅದೇ ನನ್ನ ಗುರಿ ಇನ್ನು ಜ್ಯೋತಿ ಕಟಕೋಳ ಗದಗ ಜಿಲ್ಲೆ ರೋಣ ತಾಲ್ಲೂಕಿನ ಹೊಳೆಯಾಲೂರು ಗ್ರಾಮದ ಜ್ಞಾನಸಿಂದು ಅಂದ ಮಕ್ಕಳ ವಸತಿ ಶಾಲೆಯ ವಿದ್ಯಾರ್ಥಿನಿಯಾಗಿದ್ದು, ಬಹಳ ಪ್ರತಿಭಾವಂತೆಯಾಗಿದ್ದಾರೆ. ಓದಿನಲ್ಲಿ ಸದಾ ಮುಂದು ಜೊತೆಗೆ ಸಂಗೀತ ಕೂಡ ಕಲಿತಿದ್ದಾರೆ. ಕಂಪ್ಯೂಟರ್ ಜ್ಞಾನ ಕೂಡ ಹೊಂದಿದ್ದಾಳೆ. ಡಿಡಿ ಚಂದನವಾಹಿನಿಯಲ್ಲಿ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದ ಜ್ಯೋತಿ ಕಟಕೋಳ ಮುಂದೆ ಐಎಎಸ್ ಅಧಿಕಾರಿ ಆಗುವ ಕನಸನ್ನು ಕಟ್ಟಿಕೊಂಡಿದ್ದಾರೆ. ಐಎಎಸ್ ಮಾಡಿ ಜನರ ಸೇವೆ ಮಾಡುವ ಆಸೆ ಹೊಂದಿದ್ದಾರೆ.

ಒಟ್ಟಿನಲ್ಲಿ ಅಂದಳಾದರೂ ಇವರ ಸಾಧನೆಗೆ ಅಂದತ್ವ ಅಡ್ಡಬಂದಿಲ್ಲ. ಇವರ ಓದು ಹೀಗೆ ಉತ್ತಮವಾಗಿ ಸಾಗಲಿ ಇವರ ಕನಸು ನನಸಾಗಲಿ ಎಂದು ಗ್ರಾಮಸ್ಥರು ಹಾಗೂ ಜ್ಞಾನಸಿಂದು ಅಂದ ಮಕ್ಕಳ‌ ಶಾಲೆಯ ಸಿಬ್ಬಂದಿ ಎಲ್ಲರೂ ಹರಸಿದ್ದಾರೆ.

ಇದನ್ನೂ ಓದಿ: ಒಂದೇ ವರ್ಷ ಎಸ್​ಎಸ್​ಎಲ್​ಸಿ ಪಾಸ್ ಆದ ಕೊಡಗಿನ ತಾಯಿ, ಮಗ!

Published On - 1:35 pm, Thu, 12 August 21

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?