AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿವಿಧ ಕಂಪನಿಗಳಲ್ಲಿ ಹಣ ಹಾಕಿ ಮೋಸ: ದಿಕ್ಕುತೋಚದೇ ಡಿಸಿ ಕಚೇರಿ ಮುಂದೆ ಬಂದು ನಿಂತ ಬಾಗಲಕೋಟೆ ಜನ

ಅವರಲ್ಲಿ ಕೆಲವರು ಕೂಲಿ ಮಾಡಿ ಹಣ ತೊಡಗಿಸಿದ್ದರೆ, ಹಲವರು ಒಡವೆ ಮಾರಿ ಹಣ ಕಟ್ಟಿದ್ದರು. ‌ಇನ್ನು ಹೊಲವನ್ನು ಬಡ್ಡಿ ಮೇಲೆ ಅಡವಿಟ್ಟು ಹಣ ತುಂಬಿದ್ದರು‌. ಆದರೆ, ಅವರಿಗೆಲ್ಲ ಮರಳಿ ನಯಾಪೈಸೆ ಬಂದಿಲ್ಲ. ಇದರಿಂದ ಅವರೆಲ್ಲ ಅನಿರ್ಧಿಷ್ಟ ಧರಣಿ ಕೈಗೊಂಡಿದ್ದಾರೆ. ಎಲ್ಲಿ ಅಂತೀರಾ? ಈ ಸ್ಟೋರಿ ಓದಿ.

ವಿವಿಧ ಕಂಪನಿಗಳಲ್ಲಿ ಹಣ ಹಾಕಿ ಮೋಸ: ದಿಕ್ಕುತೋಚದೇ ಡಿಸಿ ಕಚೇರಿ ಮುಂದೆ ಬಂದು ನಿಂತ ಬಾಗಲಕೋಟೆ ಜನ
ವಿವಿಧ ಕಂಪನಿಗಳಲ್ಲಿ ಹಣ ಹಾಕಿ ಮೋಸ ಹೋದ ಬಾಗಲಕೋಟೆ ಜನ
ರವಿ ಹೆಚ್ ಮೂಕಿ, ಕಲಘಟಗಿ
| Edited By: |

Updated on: Sep 04, 2024 | 7:40 PM

Share

ಬಾಗಲಕೋಟೆ, ಸೆ.04: ಸಮೃದ್ದಿ ಜೀವನ್, ಗರೀಮಾ, ಪಿಎಸಿಎಲ್, ಕಲ್ಪತರು ಅಗ್ರಿಗೋಲ್ಡ್ ಸೇರಿದಂತೆ ವಿವಿಧ 185 ಕಂಪನಿಗಳಲ್ಲಿ ಹಣ ಹಾಕಿ ಕೈ ಸುಟ್ಟುಕೊಂಡ ಬಾಗಲಕೋಟೆ(Bagalkote) ಜನರು, ಇಂದು(ಬುಧವಾರ) ಕೈಯಲ್ಲಿ ನಾಮಫಲಕ, ತಮಗೆ ಮೋಸ ಮಾಡಿದ ಕಂಪನಿಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಅಷ್ಟೇ ಅಲ್ಲ, ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ‘ನಮ್ಮ ಹಣ ನಮಗೆ ಕೊಡಿಸಿ ಎಂದು ಘೋಷಣೆ ಕೂಗಿದರು.

ಕೂಲಿ ನಾಲಿ ಮಾಡಿದ ಹಣ, ಒಡವೆ, ಆಸ್ತಿ ಒತ್ತೆಯಿಟ್ಟು ದುಡ್ಡು ತಂದು ಇವರೆಲ್ಲ ಮೇಲ್ಕಂಡ ಫೈನಾನ್ಸ್ ಇನ್ಸುರೆನ್ಸ್, ಚಿಟ್ ಫಂಡ್​ ಕಂಪನಿಗಳಲ್ಲಿ ಹಣ ಹಾಕಿ ಈಗ ಬೀದಿಗೆ ಬರುವಂತಾಗಿದೆ. 5 ಲಕ್ಷ, 10, 50, ಕೋಟಿಗಟ್ಟಲೇ ಒಬ್ಬೊಬ್ಬರು ಹಣ ಕಳೆದುಕೊಂಡಿದ್ದಾರೆ. ಕಂಪನಿ ಎಜೆಂಟ್ ಇದ್ದವರು ಗ್ರಾಹಕರ ಹಣ ತೊಡಗಿಸಿದ ಕಾರಣ ಗ್ರಾಹಕರು ಮನೆಗೆ ಬಂದು ಕೂರುತ್ತಿದ್ದಾರೆ. ಇದರಿಂದ ವಂಚನೆಗೊಳಗಾದ ಠೇವಣಿದಾರರು ಹಾಗೂ ಗ್ರಾಹಕರು, ನಮ್ಮ ಹಣ ನಮಗೆ ಕೊಡಿಸಿ ಎಂದು ಪ್ರತಿಭಟನೆ ಹಾದಿ ಹಿಡಿದಿದ್ದಾರೆ.

ಇದನ್ನೂ ಓದಿ:ಆನ್​ಲೈನ್​​​ ಟ್ರೇಡಿಂಗ್​ ನೆಪದಲ್ಲಿ ಜನರಿಗೆ ಕೋಟ್ಯಂತರ ರೂ. ವಂಚನೆ; ನಾಲ್ವರು ಅರೆಸ್ಟ್

ವಂಚನೆ ಸಂತ್ರಸ್ತ ಠೇವಣಿದಾರರ ಕುಟುಂಬ ಸದಸ್ಯರ ಬೃಹತ್ ಪ್ರತಿಭಟನೆ ನಿರಂತರವಾಗಿ ಮುಂದುವರೆದಿದೆ. ಬಾಗಲಕೋಟೆ ಜಿಲ್ಲೆಯೊಂದರಲ್ಲೇ ಅಂದಾಜು 200 ಕೋಟಿ ಹಣ ಠೇವಣಿದಾರರಿಗೆ ಬರಬೇಕಾಗಿದೆ‌‌‌. ಬಾಗಲಕೋಟೆ ಜಿಲ್ಲೆಯಲ್ಲಿ 1 ಲಕ್ಷ 20 ಸಾವಿರ ಜನರು ವಂಚನೆಗೆ ಒಳಗಾಗಿದ್ದಾರೆ. ಇಡೀ ರಾಜ್ಯಾದ್ಯಂತ 2 ವರೆ ಕೋಟಿ ಜನ ಹೂಡಿಕೆ ಮಾಡಿ ಮೋಸ ಹೋಗಿದ್ದಾರೆ‌. ಈ ಕಂಪನಿಗಳಿಂದ ವಂಚನೆ ಕಂಡುಬಂದ ಕಾರಣ ಕೇಂದ್ರ ಸರಕಾರ 1978 ಆ್ಯಕ್ಟ್ ಸೆಬಿ ಮೂಲಕ ಕಂಪನಿಗಳನ್ನು ಬಂದ್ ಮಾಡಿ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದೆ‌. ಹಣ ಕೂಡ ಜಪ್ತಿ ಮಾಡಿದೆ. ಆದರೆ, 2019 ಬಡ್ಸ್(banning of unregulated deposits scheme)act ಪ್ರಕಾರ ವಂಚನೆ ಠೇವಣಿ ಸಂತ್ರಸ್ತರಿಗೆ ಹಣ ವಾಪಸ್ ಕೊಡಿಸುವ ಕಾರ್ಯವಾಗಿಲ್ಲ.

ನಮಗೆ 2019 ರ ಬಡ್ಸ್ ಆ್ಯಕ್ಟ್ ಪ್ರಕಾರ ಹಣ ಮರಳಿ ಕೊಡಿಸಬೇಕು‌. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಆಗ್ರಹ ಮಾಡುತ್ತಿದ್ದಾರೆ. ಕಷ್ಟಪಟ್ಟು ಕೂಡಿಟ್ಟ ಹಣ ಹಾಕಿ ಇವರೆಲ್ಲ ಪರದಾಡುವಂತಾಗಿದೆ. ಇವರ ಹೋರಾಟಕ್ಕೆ ಸರಕಾರ ಸ್ಪಂಧಿಸಿ ಹಣ ವಾಪಸ್ ಕೊಡಿಸುವ ಕಾರ್ಯ ಮಾಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸಿ: ಖರ್ಗೆಗೆ VR ಸುದರ್ಶನ್ ಪತ್ರ
ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸಿ: ಖರ್ಗೆಗೆ VR ಸುದರ್ಶನ್ ಪತ್ರ