ಅಪಾಯ ತಿಳಿದಿದ್ದರೂ ಯುವಕರ ಹುಚ್ಚಾಟ; ಜಾರುವ ಬಂಡೆಗಳ ಮೇಲೆ ನಿಂತು ಸೆಲ್ಫಿ, ರೀಲ್ಸ್​ಗಾಗಿ ಮುಗಿಬಿದ್ದ ಪ್ರವಾಸಿಗರು

| Updated By: ಆಯೇಷಾ ಬಾನು

Updated on: Jul 25, 2023 | 12:36 PM

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿ ಬಳಿ ಇರುವ ಕೂಡುಗೆ ಫಾಲ್ಸ್​ಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.  ಡೇಂಜರಸ್ ಜಲಪಾತದಲ್ಲಿ ಪ್ರವಾಸಿಗರು ಹುಚ್ಚಾಟ ಪ್ರದರ್ಶಿಸುತ್ತಿದ್ದಾರೆ. ಆರ್ಭಟಿಸುತ್ತಿರುವ ಜಲಪಾತ ನೋಡಲು ಬರುತ್ತಿರುವ ಪ್ರವಾಸಿಗರು ಜಾರುವ ಬಂಡೆಗಳ ಮೇಲೆ ನಿಂತು ಫೋಸ್ ಕೊಡುತ್ತ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.

ಅಪಾಯ ತಿಳಿದಿದ್ದರೂ ಯುವಕರ ಹುಚ್ಚಾಟ; ಜಾರುವ ಬಂಡೆಗಳ ಮೇಲೆ ನಿಂತು ಸೆಲ್ಫಿ, ರೀಲ್ಸ್​ಗಾಗಿ ಮುಗಿಬಿದ್ದ ಪ್ರವಾಸಿಗರು
ಯುವಕನಿಂದ ಸೆಲ್ಫಿಗೆ ಫೋಸ್, ಹರಿಯುವ ನೀರಿನಲ್ಲಿ ಬೈಕ್ ತೊಳೆಯುತ್ತಿರುವುದು
Follow us on

ಬಾಗಲಕೋಟೆ, ಜುಲೈ 25: ರಾಜ್ಯದಲ್ಲಿ ಮುಂಗಾರು(Monsoon) ಮಳೆ ಚುರುಕುಗೊಂಡಿದೆ. ರಾಜ್ಯದ ಅನೇಕ ಕಡೆ ಭಾರಿ ಮಳೆಯಾಗಿ(Karnataka Rain) ಡ್ಯಾಂಗಳು ತುಂಬಿ ಹರಿಯುತ್ತಿವೆ. ಮನೆಗಳು, ದೇವಸ್ಥಾನಗಳು ಮುಳುಗಿವೆ. ರಸ್ತೆಗಳು ಕೊಚ್ಚಿಕೊಂಡು ಹೋಗಿವೆ. ಜನ ಜೀವನ ಅಸ್ತವ್ಯಸ್ತಗೊಂಡಿದೆ. ಆದ್ರೆ ಮಳೆಯ ಪರಿಣಾಮ ಅರಿಯದ ಕೆಲ ಯುವಕರು ಪುಂಡಾಟ ಮೆರೆಯುತ್ತಿದ್ದಾರೆ. ರೀಲ್ಸ್, ಸೆಲ್ಫಿಗಾಗಿ ನದಿ ಕಿನಾರೆ, ಜಲಪಾತಗಳಿಗೆ ಭೇಟಿ ನೀಡಿ ಯಮನಿಗೆ ಆಹ್ವಾನವಿಡುತ್ತಿದ್ದಾರೆ. ನಿನ್ನೆ(ಜು.24) ಉಡುಪಿಯ ಕೊಲ್ಲೂರು ಸಮೀಪದ ಅರಿಶಿನ ಗುಂಡಿ ಜಲಪಾತದಲ್ಲಿ ರೀಲ್ಸ್ ವಿಡಿಯೋ ಮಾಡಲು ಹೋಗಿ ಯುವಕ ನೀರು ಪಾಲಾಗಿದ್ದ. ಯುವಕನ ಶವ ಇನ್ನೂ ಪತ್ತೆಯಾಗಿಲ್ಲ. ಇಷ್ಟೆಲ್ಲ ಆದರೂ ಯುವಕರು ಬುದ್ದಿ ಕಲಿಯುತ್ತಿಲ್ಲ. ಜಲಪಾತ ಸೇರಿದಂತೆ ಅಪಾಯ ಸ್ಥಳಗಳಲ್ಲಿ ಹುಚ್ಚಾಟ ಪ್ರದರ್ಶಿಸುತ್ತಿದ್ದಾರೆ.

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಶ್ರಮಬಿಂದುಸಾಗರ ಬ್ಯಾರೇಜ್ ಮೇಲೆ ನಿಂತು ಯುವಕರು ಸೆಲ್ಫಿ, ರೀಲ್ಸ್​ಗಾಗಿ ಮುಗಿಬಿದ್ದಿದ್ದಾರೆ. ಅಪಾಯಕಾರಿ ಸ್ಥಳದಲ್ಲಿ ಹೋಗಿ ಸೆಲ್ಫಿ ಹಾಗೂ ಇನ್ನಿತರೆ ಚಟುವಟಿಕೆ ಮಾಡಬೇಡಿ. ತಮ್ಮ ಪ್ರಾಣವನ್ನು ಅಪಾಯಕ್ಕೆ ಒಡ್ಡುತ್ತಿದ್ದೀರಿ. ನೀರಿನ ಒಳ ಹರಿವು ಹೆಚ್ಚಾಗಿರೋದರಿಂದ ಅಲ್ಲಿ ಹೋಗಿ ಸೆಲ್ಫಿ ಆಗಲಿ ಇನ್ನಿತರೆ ಚಟುವಟಿಕೆ ಮಾಡಬೇಡಿ ಎಂದು ಜಮಖಂಡಿ ತಹಸೀಲ್ದಾರ್ ಸದಾಶಿವ ಮಕ್ಕೋಜಿ ಅವರು ಯುವಕರಿಗೆ ಸೂಚನೆ ನೀಡಿದ್ದಾರೆ. ಇನ್ನು ನದಿ ಪಾತ್ರದ ಜನರು ಜಾಗರೂಕರಾಗಿರಲು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Karnataka Rains: ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ 4 ದಿನಗಳ ಕಾಲ ಭಾರಿ ಮಳೆಯ ಎಚ್ಚರಿಕೆ, ರೆಡ್ ಅಲರ್ಟ್​ ಘೋಷಣೆ

ತುಂಬಿ ಹರಿಯುತ್ತಿರುವ ಜಲಪಾತದ ಬಳಿ ಪ್ರವಾಸಿಗರ ಹುಚ್ಚಾಟ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿ ಬಳಿ ಇರುವ ಕೂಡುಗೆ ಫಾಲ್ಸ್​ಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.  ಡೇಂಜರಸ್ ಜಲಪಾತದಲ್ಲಿ ಪ್ರವಾಸಿಗರು ಹುಚ್ಚಾಟ ಪ್ರದರ್ಶಿಸುತ್ತಿದ್ದಾರೆ. ಆರ್ಭಟಿಸುತ್ತಿರುವ ಜಲಪಾತ ನೋಡಲು ಬರುತ್ತಿರುವ ಪ್ರವಾಸಿಗರು ಜಾರುವ ಬಂಡೆಗಳ ಮೇಲೆ ನಿಂತು ಫೋಸ್ ಕೊಡುತ್ತ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.  ಸ್ವಲ್ಪ ಯಾಮಾರಿದ್ರು ಜೀವಕ್ಕೆ ಅಪಾಯ ಭೀತಿ ಇದ್ದರೂ ಲೆಕ್ಕಿಸದೆ ಮೋಜು-ಮಸ್ತಿಯಲ್ಲಿ ಮುಳುಗಿದ್ದಾರೆ. ಅಪಾಯ ತಿಳಿದಿದ್ದರೂ ಚಿಕ್ಕಮಗಳೂರು ಪೊಲೀಸ್ ಇಲಾಖೆ ಯಾವುದೇ ಕಡಿವಾಣ ಹಾಕಿಲ್ಲ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ 

Published On - 10:45 am, Tue, 25 July 23