AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tomato Price: ಟೊಮೆಟೊ ಬೆಲೆ ಕುಸಿತ; ಬೆಳೆಗಾರರಿಗೆ ಸಿಗದಂತಾಯ್ತು ಕೆಜಿಗೆ 6 ರೂಪಾಯಿ, ರೈತರಲ್ಲಿ ಹೆಚ್ಚಿದ ಆತಂಕ

ಟೊಮೆಟೊ ಒಂದು ಟ್ರೇಗೆ (25 ಕೆಜಿ ಟ್ರೇ) ವ್ಯಾಪಾರಸ್ಥರು 100 ರೂಪಾಯಿಯಿಂದ 150 ರೂಪಾಯಿವರೆಗೆ ಕೇಳುತ್ತಿದ್ದಾರೆ. ಇದರಿಂದ ಕೂಲಿ ಖರ್ಚು ಸಹ ಬೆಳೆಗಾರನಿಗೆ ಸಿಗದಂತಾಗಲಿದೆ. ಹೀಗಾಗಿ ಬೆಳೆಗಾರರು ಬೆಳೆ ಸಾಗಾಣಿಕೆಯ ವ್ಯರ್ಥ ಖರ್ಚು ಏಕೆ? ಎಂಬ ಆಲೋಚನೆ ಮಾಡಿ ಕಟಾವು ಮಾಡದೇ ಹಾಗೆಯೇ ಬಿಟ್ಟಿದ್ದಾರೆ.

Tomato Price: ಟೊಮೆಟೊ ಬೆಲೆ ಕುಸಿತ; ಬೆಳೆಗಾರರಿಗೆ ಸಿಗದಂತಾಯ್ತು ಕೆಜಿಗೆ 6 ರೂಪಾಯಿ, ರೈತರಲ್ಲಿ ಹೆಚ್ಚಿದ ಆತಂಕ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Feb 24, 2022 | 8:01 AM

Share

ಬಾಗಲಕೋಟೆ: ಕಳೆದೆರಡು ವರ್ಷಗಳಿಂದ ಅತೀವೃಷ್ಟಿ, ಕೊವಿಡ್​ನಿಂದ ಟೊಮೆಟೋ(Tomato) ಬೆಳೆಗಾರರು ಕಂಗಾಲಾಗಿದ್ದರು. ಈ ಬಾರಿ ಯಾವುದೇ ಸಮಸ್ಯೆ ಇಲ್ಲದೇ ಭರ್ಜರಿಯಾಗಿ ಬೆಳೆಯೇನೋ ಬಂದಿದೆ. ಆದರೆ ಈಗ ಮತ್ತೆ ಬೆಳೆಗಾರನಿಗೆ ಬೆಲೆ ಕೈ ಕೊಟ್ಟಿದೆ. ದರ ಪಾತಾಳಕ್ಕೆ ಕುಸಿದ ಕಾರಣ, ಸತತ ಎರಡು ವರ್ಷ ನಷ್ಟ ಅನುಭವಿಸಿ ಲಾಭದ ನಿರೀಕ್ಷೆಯಲ್ಲಿದ್ದ ರೈತನ( Farmers) ಕನಸು ನುಚ್ಚುನೂರಾಗಿದೆ. ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ(Price) ಸಿಗದ ಕಾರಣ ಭರ್ಜರಿಯಾಗಿ ಬಂದಿದ್ದ ಬೆಳೆ ಜಮೀನಿನಲ್ಲೇ ಕೊಳೆಯುತ್ತಿದೆ.

ಬಾಗಲಕೋಟೆ ತಾಲ್ಲೂಕಿನಲ್ಲಿ ಹೊನ್ನಾಕಟ್ಟಿ, ಶಿರೂರು, ಬೆನಕಟ್ಟಿ ಭಾಗದಲ್ಲಿ ಬೆಳೆದ ಟೊಮೆಟೊ ಜಮೀನಿನಲ್ಲಿಯೇ ಕೊಳೆಯುತ್ತಿದೆ. ಕಳೆದೆರಡು ವರ್ಷಗಳಿಂದ ಅತೀವೃಷ್ಟಿ ಹಾಗೂ ಕೊವಿಡ್ ಹಾವಳಿಗೆ ತುತ್ತಾಗಿ ಟೊಮೆಟೊ ಬೆಳೆಗಾರರು ಕೈ ಸುಟ್ಟುಕೊಂಡಿದ್ದರು. ಈ ಸಾರಿಯೂ ಯಾವುದೇ ಸಮಸ್ಯೆ ಇಲ್ಲದೇ ಸಮೃದ್ಧವಾಗಿ ಟೊಮೆಟೊ ಬೆಳೆ ಕೂಡಾ ತೆಗೆದಿದ್ದರು. ಇನ್ನೇನು ಸಮೃದ್ಧವಾಗಿ ಬಂದ ಟೊಮೆಟೊ ಬೆಳೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಆಲೋಚನೆ ಮಾಡಿದ್ದ ಬೆಳೆಗಾರರಿಗೆ ದರ ಬರಸಿಡಿಲಿನಂತೆ ಬಂದಪ್ಪಳಿಸಿದೆ.

ಟೊಮೆಟೊ ಒಂದು ಟ್ರೇಗೆ (25 ಕೆಜಿ ಟ್ರೇ) ವ್ಯಾಪಾರಸ್ಥರು 100 ರೂಪಾಯಿಯಿಂದ 150 ರೂಪಾಯಿವರೆಗೆ ಕೇಳುತ್ತಿದ್ದಾರೆ. ಇದರಿಂದ ಕೂಲಿ ಖರ್ಚು ಸಹ ಬೆಳೆಗಾರನಿಗೆ ಸಿಗದಂತಾಗಲಿದೆ. ಹೀಗಾಗಿ ಬೆಳೆಗಾರರು ಬೆಳೆ ಸಾಗಾಣಿಕೆಯ ವ್ಯರ್ಥ ಖರ್ಚು ಏಕೆ? ಎಂಬ ಆಲೋಚನೆ ಮಾಡಿ ಕಟಾವು ಮಾಡದೇ ಹಾಗೆಯೇ ಬಿಟ್ಟಿದ್ದಾರೆ. ಇದರಿಂದ ಭರ್ಜರಿಯಾಗಿ ಬಂದಿದ್ದ ಟೊಮೆಟೊ ಬೆಳೆ ಜಮೀನಿನಲ್ಲೇ ಕರಗಿ ಹೋಗುತ್ತಿದೆ.

ಟೊಮೆಟೊ ಬೆಳೆ ಬೆಳೆಯುವುದಕ್ಕೆ ಒಂದು ಎಕರೆಗೆ 50 ಸಾವಿರ ರೂಪಾಯಿವರೆಗೂ ರೈತ ಖರ್ಚು ಮಾಡಿದ್ದಾನೆ. ಇದರಲ್ಲಿ ಪ್ರತಿಯೊಬ್ಬ ಕೂಲಿಯವರ ಖರ್ಚು 4 ರಿಂದ 5 ಟ್ರೇ ಹರಿಯುವವರಿಗೆ 250 ರೂಪಾಯಿಯಿಂದ 300 ರೂಪಾಯಿ ನೀಡಲಾಗುತ್ತದೆ. ಇನ್ನು ಬೀಜ ಖರೀದಿ, ಗೊಬ್ಬರ ಸೇರಿ ಆ ಖರ್ಚು ಕೂಡಾ ಬೇರೆ. ಹೀಗಾಗಿ ಈಗ 25 ಕೆಜಿಯ ಒಂದು ಟೊಮೆಟೊ ಟ್ರೇಗೆ ಸಿಗುತ್ತಿರುವ 100 ರೂಪಾಯಿಯಿಂದ 150 ರೂಪಾಯಿ ಹಣ ಕೂಲಿಗೆ ಸಾಲೋದಿಲ್ಲ. ಇನ್ನು ಸಾಗಾಟದ ಖರ್ಚು ಬೇರೆನೆ. ಹೀಗಾಗಿ‌ ಟೊಮ್ಯಾಟೊ ಬೆಳೆಗಾರನಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೆಳೆದಿದ್ದ ಟೊಮ್ಯಾಟೊ ಬೆಳೆಗಾರ ಈಗ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದಾನೆ. ಸದ್ಯ ಈ ವಾತಾವರಣದಲ್ಲಿ ರೈತರ ಬದುಕು ದುಃಸ್ಥರ ಆಗಿದೆ. ಸರ್ಕಾರದಿಂದಲೂ ಸರಿಯಾಗಿ ಸಹಾಯ ಸಿಗುತ್ತಿಲ್ಲ. ಈಗಲಾದರೂ ಸರ್ಕಾರ ಎಚ್ಚೆತ್ತು ಸಂಕಷ್ಟದಲ್ಲಿರುವ ರೈತರ ಸಹಾಯಕ್ಕೆ ಬರಬೇಕಿದೆ ಎಂದು ಟೊಮೆಟೊ ಬೆಳೆಗಾರರಾದ ಪರಶುರಾಮ ಕಟಗಿ ಮನವಿ ಮಾಡಿದ್ದಾರೆ.

ಒಟ್ಟಾರೆ ಸತತ ಎರಡು ವರ್ಷ ಪ್ರಕೃತಿ ವಿಕೋಪಕ್ಕೆ ನಲುಗಿ ಕೈ ಸುಟ್ಟುಕೊಂಡಿದ್ದ ಬೆಳೆಗಾರನಿಗೆ ಈ ಬಾರಿ ಟೊಮೆಟೊ ಕೈ ಹಿಡಿದಿತ್ತು. ಆದರೆ ಬೆಳೆ ಕೈ ಹಿಡಿದರೂ ಬೆಲೆ ಕೈ ಹಿಡಿಯದ ಕಾರಣ ರೈತ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಟೊಮೆಟೊ ರೈತರ ಸಹಾಯಕ್ಕೆ ದೌಡಾಯಿಸಬೇಕಿದೆ.

ವರದಿ: ರವಿ ಮೂಕಿ

ಇದನ್ನೂ ಓದಿ:

Tomato Price: ಟೊಮೆಟೊ ದರ ಕಳೆದ ವರ್ಷ ನವೆಂಬರ್​ಗೆ ಹೋಲಿಸಿದಲ್ಲಿ ಶೇ 142ರಷ್ಟು ಏರಿಕೆ

ಭಾರೀ ಮಳೆಗೆ ಐದು ಲಕ್ಷ ಹೆಕ್ಟೇರ್ ಬೆಳೆ ನಾಶ; ದುಪ್ಪಟ್ಟಾದ ತರಕಾರಿ ಬೆಲೆ, ಪ್ಯಾಕೆಟ್ ಒಂದರಲ್ಲಿ 2 ಟೊಮೆಟೋ ಮಾರಾಟ!

Follow Us
Web contact
Web contact

TV9 Kannada

Read More
ಸಿದ್ದರಾಮಯ್ಯ ಹಾಗೂ ವಿದೇಶಾಂಗ ಸಚಿವ ಎಸ್ ಜೈಶಂಕರ್ ಆಕಸ್ಮಿಕ ಭೇಟಿ!
ಸಿದ್ದರಾಮಯ್ಯ ಹಾಗೂ ವಿದೇಶಾಂಗ ಸಚಿವ ಎಸ್ ಜೈಶಂಕರ್ ಆಕಸ್ಮಿಕ ಭೇಟಿ!
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್