Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಗಲಕೋಟೆಯಲ್ಲಿ ಸಿದ್ಧವಾಗಿದೆ ವಿಶೇಷ ಎಲೆಕ್ಟ್ರಿಕ್ ಬೈಕ್; ಹೇಗಿದೆ ನೋಡಿ

ಲಾಕ್​ಡೌನ್​ನಲ್ಲಿ ಉದ್ಯೋಗ ಇಲ್ಲದೆ ಸುಮ್ಮನಿದ್ದ ಪ್ರಿಂಟಿಂಗ್ ಪ್ರೆಸ್ ಮಾಲೀಕ ಮಂಜುನಾಥ ಜಲಗೇರಿ ಮತ್ತು ಎಲೆಕ್ಟ್ರಿಷಿಯನ್ ಮಹಮ್ಮದ್ ಇಕ್ಬಾಲ್ ಸೇರಿ ವಿಶೇಷ ಎಲೆಕ್ಟ್ರಿಕ್ ಬೈಕ್ ಸಿದ್ಧಪಡಿಸಿದ್ದಾರೆ.

ಬಾಗಲಕೋಟೆಯಲ್ಲಿ ಸಿದ್ಧವಾಗಿದೆ ವಿಶೇಷ ಎಲೆಕ್ಟ್ರಿಕ್ ಬೈಕ್; ಹೇಗಿದೆ ನೋಡಿ
ಎಲೆಕ್ಟ್ರಿಕ್ ಬೈಕ್
Follow us
TV9 Web
| Updated By: sandhya thejappa

Updated on:Sep 30, 2021 | 10:16 AM

ಬಾಗಲಕೋಟೆ: ಕೊರೊನಾ ಲಾಕ್​ಡೌನ್​ನಿಂದ ಅದೆಷ್ಟೋ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಹೊಟ್ಟೆ ಪಾಡಿಗೆ ಪರ್ಯಾಯ ಕೆಲಸಗಳನ್ನೂ ಹುಡುಕಿಕೊಂಡಿದ್ದಾರೆ. ಈ ನಡುವೆ ಕೆಲಸವಿಲ್ಲದೆ ಹಲವರಿಗೆ ಕಾಲ ಕಳೆಯುವುದು ಕಷ್ಟವಾಗುತ್ತಿತ್ತು. ಅದರಂತೆ ಜಿಲ್ಲೆಯ ಬಾದಾಮಿ ಪಟ್ಟಣದ ಪ್ರಿಂಟಿಂಗ್ ಪ್ರೆಸ್ ಮಾಲೀಕ ಮಂಜುನಾಥ ಜಲಗೇರಿ ಮತ್ತು ಎಲೆಕ್ಟ್ರಿಷಿಯನ್ ಕೆಲಸ ಮಾಡುವ ಮಹಮ್ಮದ್ ಇಕ್ಬಾಲ್​ಗೆ ಕೆಲಸವಿಲ್ಲದೆ ಲಾಕ್​ಡೌನ್​ನಲ್ಲಿ ನಷ್ಟ ಅನುಭವಿಸುತ್ತಿದ್ದರು. ಈ ನಡುವೆ ಅವರಿಗೆ ಏನಾದರೂ ಹೊಸ ಪ್ರಯೋಗ ಮಾಡಬೇಕು ಅಂತ ಅನಿಸಿದೆ. ಆಗ ಅವರ ತಲೆಗೆ ಹೊಳೆದಿದ್ದು ಎಲೆಕ್ಟ್ರಿಕ್ ಬೈಕ್.

ಲಾಕ್​ಡೌನ್​ನಲ್ಲಿ ಉದ್ಯೋಗ ಇಲ್ಲದೆ ಸುಮ್ಮನಿದ್ದ ಪ್ರಿಂಟಿಂಗ್ ಪ್ರೆಸ್ ಮಾಲೀಕ ಮಂಜುನಾಥ ಜಲಗೇರಿ ಮತ್ತು ಎಲೆಕ್ಟ್ರಿಷಿಯನ್ ಮಹಮ್ಮದ್ ಇಕ್ಬಾಲ್ ಸೇರಿ ವಿಶೇಷ ಎಲೆಕ್ಟ್ರಿಕ್ ಬೈಕ್ ಸಿದ್ಧಪಡಿಸಿದ್ದಾರೆ. ಐಟಿಐ ಇಲೆಕ್ಟ್ರಿಷಿಯನ್ ಓದಿರುವ ಮಹಮ್ಮದ್ ಇಕ್ಬಾಲ್ ಸದ್ಯ ಎಲೆಕ್ಟ್ರಾನಿಕ್ಸ್ ಶಾಪ್ ಇಟ್ಟುಕೊಂಡಿದ್ದಾರೆ. ಆದರೆ ಲಾಕ್​ಡೌನ್​ನಲ್ಲಿ ಉದ್ಯೋಗ ಇಲ್ಲದಂತಾಗಿತ್ತು. ಇನ್ನು ಮದುವೆ, ಸಮಾರಂಭಗಳಿಗೆ ಕಡಿವಾಣ ಬಿದ್ದಿದ್ದರಿಂದ ಪತ್ರಿಕೆ ಪ್ರಿಂಟಿಂಗ್​ಗೆ ಹೊಡೆತ ಬಿದ್ದಿತ್ತು.

ಈ ವೇಳೆ ಇಬ್ಬರು ಸೇರಿ ಎಲೆಕ್ಟ್ರಿಕ್ ಬೈಕ್​ನ ಸಿದ್ಧಪಡಿಸಿದ್ದಾರೆ. ಬೈಕ್ ತಯಾರಿಸಲು ಮಂಜುನಾಥ ಜಲಗೇರಿ ಬಂಡವಾಳ ಹಾಕಿದ್ದಾರೆ. 40 ರಿಂದ 50 ಸಾವಿರ ರೂ. ಖರ್ಚು ಮಾಡಿ ಬೈಕ್ ತಯಾರಿಸಿದ್ದಾರೆ. ಮೂರು ಯುನಿಟ್ ವಿದ್ಯುತ್ ಹೊಂದಿರುವ ನಾಲ್ಕು ಬ್ಯಾಟರಿ ಇವೆ. 12 ವೋಲ್ಟ್​ನಂತೆ ನಾಲ್ಕು ಬ್ಯಾಟರಿಗಳನ್ನು ಅಳವಡಿಸಲಾಗಿದೆ. ಹದಿನೈದು ರೂಪಾಯಿ ವಿದ್ಯುತ್​ಗೆ 120 ಕಿಲೋಮೀಟರ್ ಬೈಕ್ ಓಡುತ್ತದೆ ಅಂತ ಹೇಳಲಾಗುತ್ತಿದೆ.

ಎಕ್ಸೆಲ್ ಬೈಕ್ ಹಾಗೂ ಕನ್ವರ್ಟರ್, ಎಲೆಕ್ಟ್ರಿಕ್ ಮೋಟರ್​ನಿಂದ ಈ ಬೈಕ್​ನ ಸಿದ್ಧಪಡಿಸಿದ್ದು, 35 ಕಿಲೋಮೀಟರ್ ವೇಗದಲ್ಲಿ ಓಡುತ್ತದೆ. ರಿವರ್ಸ್ ಬರುವಂತೆ ಬೈಕ್ ತಯಾರಿ ಮಾಡಲಾಗಿದೆ. ಸದ್ಯ ಈ ಬೈಕ್ ನೋಡಲು ಜನರು ಬರುತ್ತಿದ್ದಾರೆ.

ಇದನ್ನೂ ಓದಿ

ಅಂದು ಅಂಕಲ್​ ಅಂತ ಹೀಯಾಳಿಸಿದ್ರು, ಈಗ ಛೋಟಾ ಭೀಮ್​ ಅಂದ್ರು: ಹಿಗ್ಗಾಮುಗ್ಗಾ ಟ್ರೋಲ್ ಆದ ಪ್ರಭಾಸ್

ಭವಾನಿಪುರದಲ್ಲಿ ಮತಯಂತ್ರ ಸ್ಥಗಿತಗೊಳಿಸಿದ ಟಿಎಂಸಿ ಶಾಸಕ; ಬಿಜೆಪಿ ಅಭ್ಯರ್ಥಿಯಿಂದ ಆರೋಪ

(Two have prepared a special electric bike in Bagalkot)

Published On - 9:42 am, Thu, 30 September 21

ಪುನೀತ್ ರಾಜ್​ಕುಮಾರ್ ಬಗ್ಗೆ ಅರ್ಧಗಂಟೆ ಮಾತನಾಡಿದ ರಶ್ಮಿಕಾ ಮಂದಣ್ಣ
ಪುನೀತ್ ರಾಜ್​ಕುಮಾರ್ ಬಗ್ಗೆ ಅರ್ಧಗಂಟೆ ಮಾತನಾಡಿದ ರಶ್ಮಿಕಾ ಮಂದಣ್ಣ
ಪತಿಯೊಂದಿಗೆ ಜಗಳವಾಡಿ ವಿದ್ಯುತ್ ಟವರ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಪತ್ನಿ
ಪತಿಯೊಂದಿಗೆ ಜಗಳವಾಡಿ ವಿದ್ಯುತ್ ಟವರ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಪತ್ನಿ
ಶಿವಪುರಿಯ ಮಾತಟಿಲಾ ಡ್ಯಾಂನಲ್ಲಿ ಮುಳುಗಿದ ದೋಣಿ; 7 ಜನ ಸಾವನ್ನಪ್ಪಿರುವ ಶಂಕೆ
ಶಿವಪುರಿಯ ಮಾತಟಿಲಾ ಡ್ಯಾಂನಲ್ಲಿ ಮುಳುಗಿದ ದೋಣಿ; 7 ಜನ ಸಾವನ್ನಪ್ಪಿರುವ ಶಂಕೆ
ಚಂದನ್ ಶೆಟ್ಟಿ ಜೊತೆ ಮದುವೆ ಗಾಸಿಪ್, ಸ್ಪಷ್ಟನೆ ಕೊಟ್ಟ ಸಂಜನಾ
ಚಂದನ್ ಶೆಟ್ಟಿ ಜೊತೆ ಮದುವೆ ಗಾಸಿಪ್, ಸ್ಪಷ್ಟನೆ ಕೊಟ್ಟ ಸಂಜನಾ
ಕುಮಾರಸ್ವಾಮಿ ನನ್ನನ್ನು ಬಯ್ಯದೆ ಬೇರೆ ಯಾರನ್ನು ಬಯ್ಯಲು ಸಾಧ್ಯ? ಶಿವಕುಮಾರ್
ಕುಮಾರಸ್ವಾಮಿ ನನ್ನನ್ನು ಬಯ್ಯದೆ ಬೇರೆ ಯಾರನ್ನು ಬಯ್ಯಲು ಸಾಧ್ಯ? ಶಿವಕುಮಾರ್
ಜಾರ್ಖಂಡ್‌ನ ದಿಯೋಘರ್‌ನಲ್ಲಿ ಇಂಡಿಯನ್ ಆಯಿಲ್ ಸ್ಥಾವರದಲ್ಲಿ ಬೆಂಕಿ ಅವಘಡ
ಜಾರ್ಖಂಡ್‌ನ ದಿಯೋಘರ್‌ನಲ್ಲಿ ಇಂಡಿಯನ್ ಆಯಿಲ್ ಸ್ಥಾವರದಲ್ಲಿ ಬೆಂಕಿ ಅವಘಡ
ಕರ್ನಾಟಕ ಮೊದಲು ತಮಿಳುನಾಡು ಚರ್ಚೆ ಮಾಡಬೇಕಾದ ಅವಶ್ಯಕತೆ ಸ್ಪಷ್ಟವಾಗುತ್ತಿದೆ
ಕರ್ನಾಟಕ ಮೊದಲು ತಮಿಳುನಾಡು ಚರ್ಚೆ ಮಾಡಬೇಕಾದ ಅವಶ್ಯಕತೆ ಸ್ಪಷ್ಟವಾಗುತ್ತಿದೆ
ಶಿವಲಿಂಗೇಗೌಡರು ಕೋಪದಿಂದ ಕುದಿಯುತ್ತಿದ್ದರೆ ಸಭಾಧ್ಯಕ್ಷರಿಗೆ ನಗು!
ಶಿವಲಿಂಗೇಗೌಡರು ಕೋಪದಿಂದ ಕುದಿಯುತ್ತಿದ್ದರೆ ಸಭಾಧ್ಯಕ್ಷರಿಗೆ ನಗು!
ಕಂದಾಯ ಮತ್ತು ಸರ್ವೇ ಇಲಾಖೆ ಅಧಿಕಾರಿಗಳಿಂದ ಮಾರ್ಕಿಂಗ್ ಕೆಲಸ ಶುರುವಾಗಿದೆ
ಕಂದಾಯ ಮತ್ತು ಸರ್ವೇ ಇಲಾಖೆ ಅಧಿಕಾರಿಗಳಿಂದ ಮಾರ್ಕಿಂಗ್ ಕೆಲಸ ಶುರುವಾಗಿದೆ
ತೆರವು ಕಾರ್ಯಾಚರಣೆ ಆರಂಭಿಸುವ ಮೊದಲು ನೋಟೀಸ್ ನೀಡಿಲ್ಲ: ಕುಮಾರಸ್ವಾಮಿ
ತೆರವು ಕಾರ್ಯಾಚರಣೆ ಆರಂಭಿಸುವ ಮೊದಲು ನೋಟೀಸ್ ನೀಡಿಲ್ಲ: ಕುಮಾರಸ್ವಾಮಿ