AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಳ್ಳಾರಿ: ನಿವೃತ್ತ ಪೊಲೀಸ್​​ ಅಧಿಕಾರಿ ಜಮೀನಿನಲ್ಲಿ ರಾತ್ರೋರಾತ್ರಿ ಜೆಸಿಬಿಯಿಂದ ಬೋರ್​​ವೆಲ್ ನಾಶ ಪಡಿಸಿದ ಕಿರಾತಕರು!

ಹೌದು, ಅದು ಬರಡು ಭೂಮಿ.. ಈ ಭೂಮಿಯಲ್ಲಿ ಬಂಗಾರದ ಬೆಳೆ ಬೆಳೆಯಬೇಕು ಅಂತಾ ಬೋರವೆಲ್ ಕೊರೆಸಿದ್ದ ನಿವೃತ್ತ ASI ಪೋಲಿಸ್ ಅಧಿಕಾರಿ.. ಜಲದೇವನ ಕೃಪೆ ಎನ್ನುವಂತೆ ಬೀರು ಬೇಸಿಗೆಯಲ್ಲಿ ಮೂರು ಇಂಚು ನೀರು ಸಹ ಬಿದಿತ್ತು. ಆದರೆ ಯಾರೋ ಕಿಡಗೇಡಿಗಳು ರಾತ್ರೋರಾತ್ರಿ ಜಮೀನಿಗೆ ನುಗ್ಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೊರೆಸಿದ್ದ ಬೋರವೆಲ್‌ ಅನ್ನು, ಜೆಸಿಬಿ ಮೂಲಕ ನೆಲ ಸಮಮಾಡಿದ್ದಾರೆ!

ವಿನಾಯಕ ಬಡಿಗೇರ್​
| Edited By: |

Updated on:Mar 18, 2024 | 6:10 PM

Share

ಆತ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದವರು. ನಿವೃತ್ತಿ ಜೀವನವನ್ನ ಉತ್ತಮ ಕೃಷಿ (Agriculture) ಮಾಡುತ್ತಾ ಕಳೆಯಬೇಕು ಅಂತಾ ಯೋಚನೆ ಮಾಡಿದ್ದಾತ.. ಅದರಂತೆ ತಮ್ಮ ಜಮೀನಿನಲ್ಲಿ (Bellary) ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೋರವೆಲ್ ಸಹ ಕೊರಸಿದ್ದರು. ಉತ್ತಮ ನೀರು ಸಹ ಬಿದ್ದಿತ್ತು. ಆದರೆ ಯಾರೋ ಕಿಡಗೇಡಿಗಳು ರಾತ್ರೋರಾತ್ರಿ ಅವರ ಜಮೀನಿನಲ್ಲಿನ ಬೋರವೆಲ್ (borewell) ನಾಶ ಮಾಡಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ಹೌದು, ಅದು ಬರಡು ಭೂಮಿ.. ಈ ಭೂಮಿಯಲ್ಲಿ ಬಂಗಾರದ ಬೆಳೆ ಬೆಳೆಯಬೇಕು ಅಂತಾ ಬೋರವೆಲ್ ಕೊರೆಸಿದ್ದ ನಿವೃತ್ತ ASI ಪೋಲಿಸ್ ಅಧಿಕಾರಿ.. ಜಲದೇವನ ಕೃಪೆ ಎನ್ನುವಂತೆ ಬೀರು ಬೇಸಿಗೆಯಲ್ಲಿ ಮೂರು ಇಂಚು ನೀರು ಸಹ ಬಿದಿತ್ತು. ಆದರೆ ಯಾರೋ ಕಿಡಗೇಡಿಗಳು ರಾತ್ರೋರಾತ್ರಿ ಜಮೀನಿಗೆ ನುಗ್ಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೊರೆಸಿದ್ದ ಬೋರವೆಲ್‌ ಅನ್ನು, ಜೆಸಿಬಿ ಮೂಲಕ ನೆಲ ಸಮಮಾಡಿದ್ದಾರೆ!

ಎಸ್ ಈ ದುರಂತ ಘಟನೆ ನಡೆದಿರುವುದು ಬಳ್ಳಾರಿ ನಗರ ಸಮೀಪದ ಬಂಡೆಹಟ್ಟಿಯಲ್ಲಿ… ವೆಂಕಟರಮಣ ಎನ್ನುವ ನಿವೃತ್ತಿ ಪೊಲೀಸ್ ಅಧಿಕಾರಿ ವೈಜ್ಞಾನಿಕ ಪದ್ದತಿಯ ಕೃಷಿ ಮಾಡಿ ಉತ್ತಮ ಜೀವನ ಮಾಡಬೇಕು ಅಂತಾ ಯೋಜನೆ ರೂಪಿಸಿದ್ದರು. ಅದರಂತೆ ಬರಡು ಭೂಮಿಯನ್ನ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೃಷಿ ಯೋಗ್ಯ ಭೂಮಿಯನ್ನಾಗಿ ಮಾಡಿಕೊಂಡಿದ್ದರು. ಜೊತೆಗೆ 50,000 ರೂ ಖರ್ಚು ಮಾಡಿ ಇದೇ ಮಾರ್ಚ್​​​ 12 ನೇ ತಾರೀಕು ಬೋರವೆಲ್ ಸಹ ಕೊರೆಸಿದ್ದರು. ಅದರಲ್ಲಿ ಮೂರು ಇಂಚು ಉತ್ತಮ ನೀರು ಸಹ ಬಿದ್ದಿತ್ತು. ನೀರು ಬಿದ್ದ ಖುಷಿಯಲ್ಲಿ ಗಂಗಾ ಮಾತೆಗೆ ಪೂಜೆ ಮಾಡಿ ಹರಕೆ ಸಹ ನೀಡಿದ್ದರು. ಆದರೆ ಮಾರ್ಚ್ 13 ನೇ ತಾರೀಕು ಅದೇ ಜಮೀನಿಗೆ ಬಂದು ತಾವು ಕೊರೆಸಿದ್ದ ಬೋರವೆಲ್ ಮಂಗಮಾಯವಾಗಿತ್ತು.

ಅಂದ್ಹಾಗೆ ಬಳ್ಳಾರಿ ನಗರ ಸಮೀಪದ ಬಂಡಿಹಟ್ಟಿ ಬಳಿಯ 2 ಎಕರೆ 54 ಸೆಂಟ್ಸ್ ಭೂಮಿಯಲ್ಲಿ ಇದೇ ಮಾರ್ಚ್​​​ 12 ರಂದು 50,000 ರೂ ಖರ್ಚು ಮಾಡಿ ಬೋರವೆಲ್ ಕೊರೆಸಿದ್ದ ನಿವೃತ್ತಿ ಅಧಿಕಾರಿಗೆ.. ಇಂತಹ ಬಿರು ಬೇಸಿಗೆಯಲ್ಲಿ ನೀರು ಬಂದಿದ್ದು ನೋಡಿ ಸಂತಸವಾಗಿತ್ತು. ಜೊತೆಗೆ ಮನೆ ಮಂದಿಗೆಲ್ಲ ಹೇಳಿ ಗಂಗಾ ಮಾತೆಗೆ ಹರಕೆ ಸಹ ತೀರಿಸಿದ್ದರು. ಇನ್ನೇನೂ ಉತ್ತಮ ಸಿಹಿ ನೀರು ಬಂದಿದೆ. ಹಣ್ಣು, ತರಕಾರಿ ಹೀಗೆ ಉತ್ತಮ ಬೆಳೆ ಬೆಳೆದು ನಿವೃತ್ತಿ ಜೀವನವನ್ನ ಭೂ ತಾಯಿ ಸೇವೆ ಮಾಡುತ್ತಾ ಕಳೆಯಬೇಕು ಎಂದುಕೊಂಡಿದ್ದರು.

ಆದರೆ ಮಾರ್ಚ್​​12 ರ ಮರುದಿನ ತನ್ನ ಸ್ನೇಹಿತರಿಗೆ ಬೋರವೆಲ್ ತೋರಿಸಬೇಕು ಅಂತಾ ಜಮೀನಿಗೆ ಬಂದಿದ್ದರು. ಆದರೆ ಅವರಿಗೆ ಶಾಕ್ ಎದುರಾಗಿತ್ತು. ರಾತ್ರೋರಾತ್ರಿ ಯಾರೋ ಕಿಡಗೇಡಿಗಳು ಹೊಸ ಬೋರವೆಲ್ ನಾಶ ಮಾಡಿ ಜಮೀನು ಹಾಳು ಮಾಡಿ ಪೈಪ್‌ಗಳನ್ನ ಕಿತ್ತು ಹಾಕಿ ಕ್ರೌರ್ಯ ಮೆರೆದಿದ್ದಾರೆ. ಆ ಹೀನ ದೃಶ್ಯ ಕಂಡ ನಿವೃತ್ತ ಅಧಿಕಾರಿ ಕಂಗಾಲಾಗಿ ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಇನ್ನು ಇಂತಹ ಘಟನೆ ಮಾಡಿದವರ ವಿರುದ್ಧ ಕಠಿಣ ಕ್ರಮ ಆಗಬೇಕು ಅಂತಾ ಜನ್ರು ಒತ್ತಾಯ ಮಾಡಿದ್ದಾರೆ.

ಒಟ್ಟಿನಲ್ಲಿ ನಿವೃತ್ತಿ ಬಳಿಕ ಪೊಲೀಸ್ ಅಧಿಕಾರಿ ಕೃಷಿ ಮಾಡಬೇಕು ಅಂತಾ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಭೂಮಿ ಸಮ ಮಾಡಿಸಿ ಬೋರವೆಲ್ ಕೊರೆಸಿದ್ದರು. ಆದರೆ ಯಾರೋ ಕಿಡಗೇಡಿಗಳು ಈ ರೀತಿ ಬೋರವೆಲ್ ಕಿತ್ತು ಹಾಕಿ ತಮ್ಮ ಕ್ರೌರ್ಯ ಮೆರೆದಿದ್ದಾರೆ ಅಂತಹವರ ವಿರುದ್ಧ ಕಠಿಣ ಕ್ರಮ ಆಗಬೇಕು ಅಂತಾ ಜನ್ರು ಸಹ ಒತ್ತಾಯ ಮಾಡುತ್ತಿದ್ದಾರೆ. ಇನ್ನು ಪೊಲೀಸ್ ಅಧಿಕಾರಿಗಳು ನಿರ್ಲಕ್ಷ್ಯ ತೋರದೆ ಕಿಡಿಗೇಡಿಗಳನ್ನ ಬಂಧಿಸಬೇಕಿದೆ.

Published On - 6:07 pm, Mon, 18 March 24

ಬೆಳೆಬಾಳುವ ಮರಗಳನ್ನೇ ಕಡಿದು ಮಾರಿಕೊಂಡ್ರಾ ಅಧಿಕಾರಿಗಳು?
ಬೆಳೆಬಾಳುವ ಮರಗಳನ್ನೇ ಕಡಿದು ಮಾರಿಕೊಂಡ್ರಾ ಅಧಿಕಾರಿಗಳು?
ಬಿಜೆಪಿಗೆ ಮತ ಹಾಕಿ, ಅಸ್ಸಾಂನಿಂದ ನುಸುಳುಕೋರರನ್ನು ಓಡಿಸುತ್ತೇವೆ; ಅಮಿತ್ ಶಾ
ಬಿಜೆಪಿಗೆ ಮತ ಹಾಕಿ, ಅಸ್ಸಾಂನಿಂದ ನುಸುಳುಕೋರರನ್ನು ಓಡಿಸುತ್ತೇವೆ; ಅಮಿತ್ ಶಾ
ಆರ್​​ಎಸ್​ಎಸ್​ ಕುರಿತ ದಿಗ್ವಿಜಯ ಸಿಂಗ್ ಹೇಳಿಕೆಗೆ ಶಶಿ ತರೂರ್ ಬೆಂಬಲ
ಆರ್​​ಎಸ್​ಎಸ್​ ಕುರಿತ ದಿಗ್ವಿಜಯ ಸಿಂಗ್ ಹೇಳಿಕೆಗೆ ಶಶಿ ತರೂರ್ ಬೆಂಬಲ
ತನ್ನ ಕ್ಷೇತ್ರದಲ್ಲಿ ಕರೆಂಟ್ ತೆಗೆದಿದ್ದಕ್ಕೆ ವಿದ್ಯುತ್ ಕಂಬ ಹತ್ತಿದ ಶಾಸಕ
ತನ್ನ ಕ್ಷೇತ್ರದಲ್ಲಿ ಕರೆಂಟ್ ತೆಗೆದಿದ್ದಕ್ಕೆ ವಿದ್ಯುತ್ ಕಂಬ ಹತ್ತಿದ ಶಾಸಕ
ನ್ಯೂ ಇಯರ್ ಗಿಫ್ಟ್​: ಮನೆ ಕಳೆದುಕೊಂಡ ಕೋಗಲು ಜನರಿಗೆ ಹೊಸ ಸೂರು
ನ್ಯೂ ಇಯರ್ ಗಿಫ್ಟ್​: ಮನೆ ಕಳೆದುಕೊಂಡ ಕೋಗಲು ಜನರಿಗೆ ಹೊಸ ಸೂರು
ಬಿಗ್ ಬಾಸ್: ಮುಚ್ಚುಮರೆ ಇಲ್ಲದೇ 3 ರಿಲೇಷನ್​ಶಿಪ್ ಬಗ್ಗೆ ನಿಜ ಹೇಳಿದ ಸೂರಜ್
ಬಿಗ್ ಬಾಸ್: ಮುಚ್ಚುಮರೆ ಇಲ್ಲದೇ 3 ರಿಲೇಷನ್​ಶಿಪ್ ಬಗ್ಗೆ ನಿಜ ಹೇಳಿದ ಸೂರಜ್
ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್
ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್
ಮತ್ತೊಂದು ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಮಹಾ ಮೋಸ
ಮತ್ತೊಂದು ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಮಹಾ ಮೋಸ
ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು
ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು